ಬ್ಯೂಟಿ ಪಾರ್ಲರ್ ಆಂಟಿಯ ಸ್ಕೆಚ್: ಫೈನಾನ್ಶಿಯರ್ ನಿಂದ ಮುಹೂರ್ತ: ಜಿಮ್ ಟ್ರೈನರ್ ಮರ್ಡರ್: ಮೂವರು ಪರಿಚಿತರ ನಡುವಿನ ಕ್ರೈಂ ಕಹಾನಿ…!

ಬ್ಯೂಟಿ ಪಾರ್ಲರ್ ಆಂಟಿಯ ಮೇಲಿನ ವ್ಯಾಮೋಹಕ್ಕೆ ಬಿದ್ದು ಆಂಟಿಯನ್ನ ಪರಿಚಯ ಮಾಡಿಕೊಟ್ಟ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಅ.25ರ ರಾತ್ರಿ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಕೋಡಿ ಬಳಿ ನಡೆದಿದೆ.

ಕೆ.ಆರ್.ಪುರಂ ನಿವಾಸಿ ಚೇತನ್ ಹತ್ಯೆಗೊಳಗಾದ ವ್ಯಕ್ತಿ, ಗಂಡನನ್ನ ಬಿಟ್ಟು ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಶೋಭಾ ಎಂಬಾಕೆಯ ಜೊತೆ ಚೇತನ್ ಒಡನಾಟ ಇಟ್ಟಿಕೊಂಡಿದ್ದ, ಚೇತನ್ ಹಾಗೂ ಶೋಭಾ ಕೆಲಕಾಲ ಪ್ರೀತಿಸುತ್ತಿದ್ದರು. ಚೇತನ್ ಒಂದು ದಿನ ತನ್ನ ಗೆಳೆಯನಾದ ಸತೀಶ್ ನನ್ನು ಶೋಭಾಳಿಗೆ ಪರಿಚಯ ಮಾಡಿಕೊಟ್ಟ. ಪರಿಚಯ ಮಾಡಿಕೊಟ್ಟ ತಪ್ಪಿಗೆ ಸತೀಶ್ ನಿಂದಲೇ ಚೇತನ್ ಕೊಲೆಯಾಗಿಟ್ಟ.

ಸ್ನೇಹಿತನನ್ನೇ ಸತೀಶ್ ಕೊಲೆ ಮಾಡಿದ್ದೇಕೆ?

ಶೋಭಾಳಿಗೆ ಸತೀಶ್ ಪರಿಚಯವಾದ ನಂತರ ಚೇತನ್ ಜೊತೆ ಒಡನಾಟ ಕಡಿಮೆ ಮಾಡಿದ್ದಾಳೆ. ಚೇತನ್ ನಿಂದಲೇ ಹಣ ತೆಗೆದುಕೊಂಡು ಸತೀಶ್ ಜೊತೆ ಶೋಭಾ ಸುತ್ತಾಡುತ್ತಿದ್ದಳು. ಇದನ್ನ ಗಮನಿಸಿದ ಚೇತನ್ ಶೋಭಾಗೆ ಕ್ಲಾಸ್ ತೆಗೆದುಕೊಂಡಿದ್ದ.ಈ ಕುರಿತು ಶೋಭಾ ಸತೀಶ್ ಗೆ ದೂರು ನೀಡಿದ್ದಳು. ಆಗ ಹೇಗಾದರೂ ಮಾಡಿ ಚೇತನನ್ನ ಮುಗಿಸಲೇಬೇಕು ಎಂದು ಸತೀಶ್ ಹಾಗೂ ಶೋಭಾ ಪ್ಲಾನ್ ಮಾಡಿ, ಬರ್ತಡೇ ನೆಪದಲ್ಲಿ ಚೇತನನ್ನ ಪಾರ್ಟಿಗೆ ಕರೆದು ಹೊಸಕೋಟೆ ಬಾರ್ ನಲ್ಲಿ ಕಂಠಪೂರ್ತಿ ಕುಡಿಸಿ ಎಣ್ಣೆಮತ್ತಲ್ಲಿ ಹೊಸಕೋಟೆಯಿಂದ ಮಧ್ಯರಾತ್ರಿ ವರ್ತೂರು ಕೋಡಿ ಬಳಿ ಚೇತನ್ ನನ್ನ ಕರೆತಂದು ತಲೆಗೆ ಮಚ್ಚು ಬೀಸಲಾಗಿದೆ.

ಕೊಲೆಯಾದ ನಂತರ ಮೃತದೇಹವನ್ನ ಬಿಸಾಡಿ ಕಾರಲ್ಲಿ ಸತೀಶ್, ಶೋಭಾ ಹಾಗೂ ಮತ್ತಿಬ್ಬರು ಎಸ್ಕೇಪ್ ಆಗಿದ್ದಾರೆ. ಮೃತ ಚೇತನ್ ಕುಟುಂಬಸ್ಥರು ಅಕ್ಟೋಬರ್ 24 ರಂದು ಕೆ.ಆರ್.ಪುರಂ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಮಾಡಿದ್ದಾರೆ.

ಮೃತ ಚೇತನ್ ನ ಕಾಲ್ ಡೀಟೆಲ್ಸ್ ಪರಿಶೀಲಿಸಿದಾಗ ರೆಕಾರ್ಡ್ಸ್ ನಲ್ಲಿ ಸತೀಶ್ ಹಾಗೂ ಶೋಭಾ ನಡುವಿನ ಫೋನ್ ಕಾಲ್ ವಿವರ ಪತ್ತೆಯಾಗಿದೆ. ಸತೀಶನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಆಂಟಿಯ ಪ್ರೇಮಪ್ರಸಂಗ ಬೆಳಕಿಗೆ ಬಂದಿದೆ.

ಗಂಡನ ಮನೆಯಲ್ಲೂ ಶೋಭಾ ಕಿರಿಕ್

ಕಳೆದ ಎರಡು ವರ್ಷಗಳ ಹಿಂದೆ ಅತ್ತಿಬೆಲೆ ವ್ಯಾಪ್ತಿಯ ಯಡುವನಹಳ್ಳಿಯಲ್ಲಿ ತನ್ನ ಗಂಡ ಹಾಗೂ ಅತ್ತೆಯನ್ನ ಕೊಲೆ ಮಾಡಲು ಇದೇ ಶೋಭಾ ಯತ್ನಿಸಿದ್ದಳು ಎಂಬ ಆರೋಪ ಕೂಡ ಶೋಭಾ ಮೇಲ‌ಎ ಇದೆ. ಗ್ಯಾಸ್ ಸಿಲಿಂಡರ್ ಆನ್ ಮಾಡಿ ಗಂಡ ಅತ್ತೆ ನಿದ್ದೆ ಮಾಡುವ ವೇಳೆ ಮನೆ ಬಾಗಿಲು ಲಾಕ್ ಮಾಡಿ ಹೊರಗೆ ಕೂತಿದ್ದಳಂತೆ. ಅಕ್ಕಪಕ್ಕದವರು ಗ್ಯಾಸ್ ಸ್ಮೆಲ್ ಬರ್ತಿದೆಯೆಂದು ಬಂದು ಮನೆ ಡೋರ್ ಒಪನ್ ಮಾಡಿದ್ದರು‌. ಕಡೆಗೆ ಪೊಲೀಸರ ವಿಚಾರಣೆ ವೇಳೆ ಶೋಭಾ ಕೊಲೆಗೆ ಯತ್ನಿಸಿರೋದು ಗೊತ್ತಾಗಿ ಈ ಹಿಂದೆ ಜೈಲು ಸೇರಿದ್ದಳಂತೆ. ಜೈಲು ಸೇರಿ ಹೊರಬಂದ ನಂತರ ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿಪಾರ್ಲರ್  ಮಾಡಿದ್ದಳು.

ಸದ್ಯ ಸರ್ಜಾಪುರ ಪೊಲೀಸರಿಂದ ಆರೋಪಿಗಳಾದ ಶೋಭ, ಸತೀಶ್ ಹಾಗೂ ಆತನ ಗೆಳೆಯ ಶಶಿ ಬಂಧನವಾಗಿದೆ.

Ramesh Babu

Journalist

Recent Posts

ಬೈಕ್ ಗೆ ಟಿಟಿ ವಾಹನ ಡಿಕ್ಕಿ: ಮಹಿಳೆ ಸಾವು: ಮತ್ತೋರ್ವ ಯುವತಿಗೆ ಗಂಭೀರ ಗಾಯ

ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ‌ ಬಾಶೆಟ್ಟಿಹಳ್ಳಿ ಕೈಗಾರಿಕಾ…

3 hours ago

ಹೆಣ್ಣು ಕೊಟ್ಟ ಮಾವನನ್ನೇ ಕೊಲೆಗೈದ ಅಳಿಯ

ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…

5 hours ago

ಕರ್ನಾಟಕದ ಮುಖ್ಯಮಂತ್ರಿ  ಡಿಕೆ ಶಿವಕುಮಾರ್ ಅವರಿಗೊಂದು ಬಹಿರಂಗ ಪತ್ರ..

ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರೇ, ಪ್ರಜಾಪ್ರಭುತ್ವ ಎಂಬ ಪರಿಕಲ್ಪನೆಯ ಅತ್ಯದ್ಭುತ ಫಲಿತಾಂಶವೆಂದರೆ ಯಾವುದೋ ಹಳ್ಳಿಯಲ್ಲಿ, ಎಲ್ಲಿಯೋ ಹುಟ್ಟಿದ…

8 hours ago

ಕರ್ನಾಟಕ ಹೆಚ್ಚು ತೆರಿಗೆ ನೀಡುತ್ತಿದ್ದು, ಇಲ್ಲಿಗೆ ಹೆಚ್ಚು ಅನುದಾನ ಬರಬೇಕೆಂಬ ತತ್ವ- ಚಿಂತನೆ ಸರಿಯಲ್ಲ. ಇದೆಲ್ಲವನ್ನು ಹಣಕಾಸು ಆಯೋಗ ನಿರ್ಧರಿಸುತ್ತದೆ- ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ದೇವನಹಳ್ಳಿ: ಭಾರತಮಾಲಾ ಪರಿಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ನಿರ್ಮಾಣಗೊಳ್ಳುತ್ತಿರುವ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ದೇಶದ ಎರಡು ಪ್ರಮುಖ ಆರ್ಥಿಕ ಶಕ್ತಿ ಕೇಂದ್ರಗಳಾದ ಬೆಂಗಳೂರು…

22 hours ago

ಕೃಷಿ ಹೊಂಡಗಳಲ್ಲಿ ಅನಾಹುತ ತಡೆಗೆ ಜಾಗೃತಿ ಸಭೆ: ಸುರಕ್ಷತೆಗೆ ಕಟ್ಟುನಿಟ್ಟಿನ ಸೂಚನೆ

ದೊಡ್ಡಬಳ್ಳಾಪುರ: ಜೂ.13ರಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ತೊಗರಿಘಟ್ಟ ಗ್ರಾಮದಲ್ಲಿ ಕೃಷಿ ಹೊಂಡದಲ್ಲಿ ಆಟವಾಡಲು ಹೋಗಿದ್ದ ಇಬ್ಬರು ಮಕ್ಕಳು…

1 day ago

0% ಭ್ರಷ್ಟಾಚಾರ: ಯಾರು ಕೂಡ ಸರ್ಕಾರಿ ಕಚೇರಿಗಳಲ್ಲಿ 10 ರೂಪಾಯಿ ಕೂಡಾ ಲಂಚ ನೀಡಬಾರದು- ಸಿಎಂ‌ ಡಿಕೆಶಿ

ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ…

1 day ago