ಬ್ಯೂಟಿ ಪಾರ್ಲರ್ ಆಂಟಿಯ ಸ್ಕೆಚ್: ಫೈನಾನ್ಶಿಯರ್ ನಿಂದ ಮುಹೂರ್ತ: ಜಿಮ್ ಟ್ರೈನರ್ ಮರ್ಡರ್: ಮೂವರು ಪರಿಚಿತರ ನಡುವಿನ ಕ್ರೈಂ ಕಹಾನಿ…!

ಬ್ಯೂಟಿ ಪಾರ್ಲರ್ ಆಂಟಿಯ ಮೇಲಿನ ವ್ಯಾಮೋಹಕ್ಕೆ ಬಿದ್ದು ಆಂಟಿಯನ್ನ ಪರಿಚಯ ಮಾಡಿಕೊಟ್ಟ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಅ.25ರ ರಾತ್ರಿ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಕೋಡಿ ಬಳಿ ನಡೆದಿದೆ.

ಕೆ.ಆರ್.ಪುರಂ ನಿವಾಸಿ ಚೇತನ್ ಹತ್ಯೆಗೊಳಗಾದ ವ್ಯಕ್ತಿ, ಗಂಡನನ್ನ ಬಿಟ್ಟು ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಶೋಭಾ ಎಂಬಾಕೆಯ ಜೊತೆ ಚೇತನ್ ಒಡನಾಟ ಇಟ್ಟಿಕೊಂಡಿದ್ದ, ಚೇತನ್ ಹಾಗೂ ಶೋಭಾ ಕೆಲಕಾಲ ಪ್ರೀತಿಸುತ್ತಿದ್ದರು. ಚೇತನ್ ಒಂದು ದಿನ ತನ್ನ ಗೆಳೆಯನಾದ ಸತೀಶ್ ನನ್ನು ಶೋಭಾಳಿಗೆ ಪರಿಚಯ ಮಾಡಿಕೊಟ್ಟ. ಪರಿಚಯ ಮಾಡಿಕೊಟ್ಟ ತಪ್ಪಿಗೆ ಸತೀಶ್ ನಿಂದಲೇ ಚೇತನ್ ಕೊಲೆಯಾಗಿಟ್ಟ.

ಸ್ನೇಹಿತನನ್ನೇ ಸತೀಶ್ ಕೊಲೆ ಮಾಡಿದ್ದೇಕೆ?

ಶೋಭಾಳಿಗೆ ಸತೀಶ್ ಪರಿಚಯವಾದ ನಂತರ ಚೇತನ್ ಜೊತೆ ಒಡನಾಟ ಕಡಿಮೆ ಮಾಡಿದ್ದಾಳೆ. ಚೇತನ್ ನಿಂದಲೇ ಹಣ ತೆಗೆದುಕೊಂಡು ಸತೀಶ್ ಜೊತೆ ಶೋಭಾ ಸುತ್ತಾಡುತ್ತಿದ್ದಳು. ಇದನ್ನ ಗಮನಿಸಿದ ಚೇತನ್ ಶೋಭಾಗೆ ಕ್ಲಾಸ್ ತೆಗೆದುಕೊಂಡಿದ್ದ.ಈ ಕುರಿತು ಶೋಭಾ ಸತೀಶ್ ಗೆ ದೂರು ನೀಡಿದ್ದಳು. ಆಗ ಹೇಗಾದರೂ ಮಾಡಿ ಚೇತನನ್ನ ಮುಗಿಸಲೇಬೇಕು ಎಂದು ಸತೀಶ್ ಹಾಗೂ ಶೋಭಾ ಪ್ಲಾನ್ ಮಾಡಿ, ಬರ್ತಡೇ ನೆಪದಲ್ಲಿ ಚೇತನನ್ನ ಪಾರ್ಟಿಗೆ ಕರೆದು ಹೊಸಕೋಟೆ ಬಾರ್ ನಲ್ಲಿ ಕಂಠಪೂರ್ತಿ ಕುಡಿಸಿ ಎಣ್ಣೆಮತ್ತಲ್ಲಿ ಹೊಸಕೋಟೆಯಿಂದ ಮಧ್ಯರಾತ್ರಿ ವರ್ತೂರು ಕೋಡಿ ಬಳಿ ಚೇತನ್ ನನ್ನ ಕರೆತಂದು ತಲೆಗೆ ಮಚ್ಚು ಬೀಸಲಾಗಿದೆ.

ಕೊಲೆಯಾದ ನಂತರ ಮೃತದೇಹವನ್ನ ಬಿಸಾಡಿ ಕಾರಲ್ಲಿ ಸತೀಶ್, ಶೋಭಾ ಹಾಗೂ ಮತ್ತಿಬ್ಬರು ಎಸ್ಕೇಪ್ ಆಗಿದ್ದಾರೆ. ಮೃತ ಚೇತನ್ ಕುಟುಂಬಸ್ಥರು ಅಕ್ಟೋಬರ್ 24 ರಂದು ಕೆ.ಆರ್.ಪುರಂ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಮಾಡಿದ್ದಾರೆ.

ಮೃತ ಚೇತನ್ ನ ಕಾಲ್ ಡೀಟೆಲ್ಸ್ ಪರಿಶೀಲಿಸಿದಾಗ ರೆಕಾರ್ಡ್ಸ್ ನಲ್ಲಿ ಸತೀಶ್ ಹಾಗೂ ಶೋಭಾ ನಡುವಿನ ಫೋನ್ ಕಾಲ್ ವಿವರ ಪತ್ತೆಯಾಗಿದೆ. ಸತೀಶನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಆಂಟಿಯ ಪ್ರೇಮಪ್ರಸಂಗ ಬೆಳಕಿಗೆ ಬಂದಿದೆ.

ಗಂಡನ ಮನೆಯಲ್ಲೂ ಶೋಭಾ ಕಿರಿಕ್

ಕಳೆದ ಎರಡು ವರ್ಷಗಳ ಹಿಂದೆ ಅತ್ತಿಬೆಲೆ ವ್ಯಾಪ್ತಿಯ ಯಡುವನಹಳ್ಳಿಯಲ್ಲಿ ತನ್ನ ಗಂಡ ಹಾಗೂ ಅತ್ತೆಯನ್ನ ಕೊಲೆ ಮಾಡಲು ಇದೇ ಶೋಭಾ ಯತ್ನಿಸಿದ್ದಳು ಎಂಬ ಆರೋಪ ಕೂಡ ಶೋಭಾ ಮೇಲ‌ಎ ಇದೆ. ಗ್ಯಾಸ್ ಸಿಲಿಂಡರ್ ಆನ್ ಮಾಡಿ ಗಂಡ ಅತ್ತೆ ನಿದ್ದೆ ಮಾಡುವ ವೇಳೆ ಮನೆ ಬಾಗಿಲು ಲಾಕ್ ಮಾಡಿ ಹೊರಗೆ ಕೂತಿದ್ದಳಂತೆ. ಅಕ್ಕಪಕ್ಕದವರು ಗ್ಯಾಸ್ ಸ್ಮೆಲ್ ಬರ್ತಿದೆಯೆಂದು ಬಂದು ಮನೆ ಡೋರ್ ಒಪನ್ ಮಾಡಿದ್ದರು‌. ಕಡೆಗೆ ಪೊಲೀಸರ ವಿಚಾರಣೆ ವೇಳೆ ಶೋಭಾ ಕೊಲೆಗೆ ಯತ್ನಿಸಿರೋದು ಗೊತ್ತಾಗಿ ಈ ಹಿಂದೆ ಜೈಲು ಸೇರಿದ್ದಳಂತೆ. ಜೈಲು ಸೇರಿ ಹೊರಬಂದ ನಂತರ ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿಪಾರ್ಲರ್  ಮಾಡಿದ್ದಳು.

ಸದ್ಯ ಸರ್ಜಾಪುರ ಪೊಲೀಸರಿಂದ ಆರೋಪಿಗಳಾದ ಶೋಭ, ಸತೀಶ್ ಹಾಗೂ ಆತನ ಗೆಳೆಯ ಶಶಿ ಬಂಧನವಾಗಿದೆ.

Ramesh Babu

Journalist

Recent Posts

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

4 hours ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

5 hours ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

20 hours ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

1 day ago

ಬೆಂಗಳೂರು ಗ್ರಾಮಾಂತರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಬಿರುಸು: 15,721 ಮೃತರ ಹೆಸರು ಪತ್ತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026ರ (ಎಸ್ಐಆರ್) ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದ್ದು, ಜಿಲ್ಲೆಯಾದ್ಯಂತ ಒಟ್ಟು 15,721 ಮೃತರ…

2 days ago

ದೇವಾಲಯಗಳ ಹುಂಡಿ ಭದ್ರತೆಗೆ ಸಿಸಿಟಿವಿ ಕಣ್ಗಾವಲು- ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ

ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರವರ್ಗ ಎ ಮತ್ತು ಬಿ ದೇವಾಲಯಗಳ ಹುಂಡಿ ಭದ್ರತೆ ಸೇರಿದಂತೆ ಎಣಿಕೆ ಕಾರ್ಯ,…

2 days ago