ಬ್ಯೂಟಿ ಪಾರ್ಲರ್ ಆಂಟಿಯ ಮೇಲಿನ ವ್ಯಾಮೋಹಕ್ಕೆ ಬಿದ್ದು ಆಂಟಿಯನ್ನ ಪರಿಚಯ ಮಾಡಿಕೊಟ್ಟ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಅ.25ರ ರಾತ್ರಿ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರು ಕೋಡಿ ಬಳಿ ನಡೆದಿದೆ.
ಕೆ.ಆರ್.ಪುರಂ ನಿವಾಸಿ ಚೇತನ್ ಹತ್ಯೆಗೊಳಗಾದ ವ್ಯಕ್ತಿ, ಗಂಡನನ್ನ ಬಿಟ್ಟು ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಶೋಭಾ ಎಂಬಾಕೆಯ ಜೊತೆ ಚೇತನ್ ಒಡನಾಟ ಇಟ್ಟಿಕೊಂಡಿದ್ದ, ಚೇತನ್ ಹಾಗೂ ಶೋಭಾ ಕೆಲಕಾಲ ಪ್ರೀತಿಸುತ್ತಿದ್ದರು. ಚೇತನ್ ಒಂದು ದಿನ ತನ್ನ ಗೆಳೆಯನಾದ ಸತೀಶ್ ನನ್ನು ಶೋಭಾಳಿಗೆ ಪರಿಚಯ ಮಾಡಿಕೊಟ್ಟ. ಪರಿಚಯ ಮಾಡಿಕೊಟ್ಟ ತಪ್ಪಿಗೆ ಸತೀಶ್ ನಿಂದಲೇ ಚೇತನ್ ಕೊಲೆಯಾಗಿಟ್ಟ.
ಸ್ನೇಹಿತನನ್ನೇ ಸತೀಶ್ ಕೊಲೆ ಮಾಡಿದ್ದೇಕೆ?
ಶೋಭಾಳಿಗೆ ಸತೀಶ್ ಪರಿಚಯವಾದ ನಂತರ ಚೇತನ್ ಜೊತೆ ಒಡನಾಟ ಕಡಿಮೆ ಮಾಡಿದ್ದಾಳೆ. ಚೇತನ್ ನಿಂದಲೇ ಹಣ ತೆಗೆದುಕೊಂಡು ಸತೀಶ್ ಜೊತೆ ಶೋಭಾ ಸುತ್ತಾಡುತ್ತಿದ್ದಳು. ಇದನ್ನ ಗಮನಿಸಿದ ಚೇತನ್ ಶೋಭಾಗೆ ಕ್ಲಾಸ್ ತೆಗೆದುಕೊಂಡಿದ್ದ.ಈ ಕುರಿತು ಶೋಭಾ ಸತೀಶ್ ಗೆ ದೂರು ನೀಡಿದ್ದಳು. ಆಗ ಹೇಗಾದರೂ ಮಾಡಿ ಚೇತನನ್ನ ಮುಗಿಸಲೇಬೇಕು ಎಂದು ಸತೀಶ್ ಹಾಗೂ ಶೋಭಾ ಪ್ಲಾನ್ ಮಾಡಿ, ಬರ್ತಡೇ ನೆಪದಲ್ಲಿ ಚೇತನನ್ನ ಪಾರ್ಟಿಗೆ ಕರೆದು ಹೊಸಕೋಟೆ ಬಾರ್ ನಲ್ಲಿ ಕಂಠಪೂರ್ತಿ ಕುಡಿಸಿ ಎಣ್ಣೆಮತ್ತಲ್ಲಿ ಹೊಸಕೋಟೆಯಿಂದ ಮಧ್ಯರಾತ್ರಿ ವರ್ತೂರು ಕೋಡಿ ಬಳಿ ಚೇತನ್ ನನ್ನ ಕರೆತಂದು ತಲೆಗೆ ಮಚ್ಚು ಬೀಸಲಾಗಿದೆ.
ಕೊಲೆಯಾದ ನಂತರ ಮೃತದೇಹವನ್ನ ಬಿಸಾಡಿ ಕಾರಲ್ಲಿ ಸತೀಶ್, ಶೋಭಾ ಹಾಗೂ ಮತ್ತಿಬ್ಬರು ಎಸ್ಕೇಪ್ ಆಗಿದ್ದಾರೆ. ಮೃತ ಚೇತನ್ ಕುಟುಂಬಸ್ಥರು ಅಕ್ಟೋಬರ್ 24 ರಂದು ಕೆ.ಆರ್.ಪುರಂ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ರಿಜಿಸ್ಟರ್ ಮಾಡಿದ್ದಾರೆ.
ಗಂಡನ ಮನೆಯಲ್ಲೂ ಶೋಭಾ ಕಿರಿಕ್
ಕಳೆದ ಎರಡು ವರ್ಷಗಳ ಹಿಂದೆ ಅತ್ತಿಬೆಲೆ ವ್ಯಾಪ್ತಿಯ ಯಡುವನಹಳ್ಳಿಯಲ್ಲಿ ತನ್ನ ಗಂಡ ಹಾಗೂ ಅತ್ತೆಯನ್ನ ಕೊಲೆ ಮಾಡಲು ಇದೇ ಶೋಭಾ ಯತ್ನಿಸಿದ್ದಳು ಎಂಬ ಆರೋಪ ಕೂಡ ಶೋಭಾ ಮೇಲಎ ಇದೆ. ಗ್ಯಾಸ್ ಸಿಲಿಂಡರ್ ಆನ್ ಮಾಡಿ ಗಂಡ ಅತ್ತೆ ನಿದ್ದೆ ಮಾಡುವ ವೇಳೆ ಮನೆ ಬಾಗಿಲು ಲಾಕ್ ಮಾಡಿ ಹೊರಗೆ ಕೂತಿದ್ದಳಂತೆ. ಅಕ್ಕಪಕ್ಕದವರು ಗ್ಯಾಸ್ ಸ್ಮೆಲ್ ಬರ್ತಿದೆಯೆಂದು ಬಂದು ಮನೆ ಡೋರ್ ಒಪನ್ ಮಾಡಿದ್ದರು. ಕಡೆಗೆ ಪೊಲೀಸರ ವಿಚಾರಣೆ ವೇಳೆ ಶೋಭಾ ಕೊಲೆಗೆ ಯತ್ನಿಸಿರೋದು ಗೊತ್ತಾಗಿ ಈ ಹಿಂದೆ ಜೈಲು ಸೇರಿದ್ದಳಂತೆ. ಜೈಲು ಸೇರಿ ಹೊರಬಂದ ನಂತರ ಕೆ.ಆರ್.ಪುರಂ ಟಿಸಿಪಾಳ್ಯದಲ್ಲಿ ಬ್ಯೂಟಿಪಾರ್ಲರ್ ಮಾಡಿದ್ದಳು.
ಸದ್ಯ ಸರ್ಜಾಪುರ ಪೊಲೀಸರಿಂದ ಆರೋಪಿಗಳಾದ ಶೋಭ, ಸತೀಶ್ ಹಾಗೂ ಆತನ ಗೆಳೆಯ ಶಶಿ ಬಂಧನವಾಗಿದೆ.
ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…
ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…
ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…