Categories: ಲೇಖನ

ಬೆಳಗಿನ ಶುಭೋದಯ ಸಂದೇಶಗಳ ಪ್ರಸ್ತುತತೆ ಮತ್ತು ಅಳವಡಿಕೆ……..

ಸಾಮಾಜಿಕ ಜಾಲತಾಣಗಳಲ್ಲಿ, ಹೆಚ್ಚಾಗಿ ಬೆಳಗಿನ ಹೊತ್ತು ನಮಗೆ ಬರುವ ಬಹುತೇಕ Good Morning Message ಗಳು ಮಹಾನ್ ವ್ಯಕ್ತಿಗಳು ಹೇಳಿರುವ Quotation ಗಳನ್ನು ಒಳಗೊಂಡಿರುತ್ತದೆ.

ಬುದ್ದ, ಬಸವ, ಯೇಸು, ಪೈಗಂಬರ್, ಮಹಾವೀರ, ಅಂಬೇಡ್ಕರ್, ಗಾಂಧಿ, ರೂಮಿ, ಚಾಣಕ್ಯ, ಗಿಬ್ರಾನ್, ಕಾರ್ಲ್ ಮಾರ್ಕ್ಸ್, ಗಾಲಿಬ್, ಸ್ವಾಮಿ ವಿವೇಕಾನಂದ, ಪರಮಹಂಸ, ಸರ್ವಜ್ಞ, ಭಗವದ್ಗೀತೆ, ಆಚಾರ್ಯತ್ರಯರು, ಖುರಾನ್, ಬೈಬಲ್, ಶರಣರು, ದಾಸರು, ಸೂಫಿ ಸಂತರು ಹೀಗೆ ಅನೇಕರ ವಾಣಿಗಳು ನಮಗಿಷ್ಟವಾಗಿವೆ ಎಂದು ಹಾಕುತ್ತೇವೆ.

ಒಂದು ಹಂತಕ್ಕೆ ಇದೆಲ್ಲಾ ಒಳ್ಳೆಯದೆ. ಆದರೆ ಈ ಸಂದೇಶಗಳನ್ನು ಮತ್ತು ಅದನ್ನು ಹೇಳಿರುವವರನ್ನು ನಾವು ಹೇಗೆ ಅರ್ಥಮಾಡಿಕೊಂಡಿದ್ದೇವೆ, ಅದನ್ನು ಹೇಗೆ ಅಳವಡಿಸಿಕೊಂಡಿದ್ದೇವೆ, ಅದರ ಸಾಮಾಜಿಕ ಪ್ರಸ್ತುತತೆ ಏನು ಎಂಬುದನ್ನು ಅದರೊಂದಿಗೆ ಹೇಳಬೇಕಾಗುತ್ತದೆ. ಇಲ್ಲದಿದ್ದರೆ ಅದೊಂದು ಕಾಟಾಚಾರದ ಒಣ ಸಂದೇಶವಾಗುತ್ತದೆ.

ಏಕೆಂದರೆ ಕಾಲದ ನಿರಂತರತೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿರುತ್ತವೆ. ಕೆಲವು ಈಗಲೂ ಪ್ರಸ್ತುತವಾದರೆ, ಕೆಲವು ಸವಕಲು ನಾಣ್ಯಗಳು.
ಮತ್ತೆ ಕೆಲವು ಬದಲಾವಣೆಯಾಗಬೇಕಿದ್ದರೆ, ಇನ್ನೊಂದಿಷ್ಟು ಅಪಾಯಕಾರಿಯೂ ಹೌದು.

ಈ ಎಲ್ಲಾ ವ್ಯಕ್ತಿಗಳು ತಾವು ಜೀವಿಸಿದ್ದ ಕಾಲದ ಸ್ಥಿತಿಗತಿಗೆ ಅನುಗುಣವಾಗಿ ಒಂದಷ್ಟು ದೂರದೃಷಿಯಿಂದ ತಮ್ಮ ಚಿಂತನೆಗಳನ್ನು ದಾಖಲಿಸಿರುತ್ತಾರೆ. ಅದು ಈಗ ಎಷ್ಟರ ಮಟ್ಟಿಗೆ ಅಳವಡಿಕೆಗೆ ಯೋಗ್ಯ ಎಂದು ಯೋಚಿಸಬೇಕಾಗುತ್ತದೆ.

ಉದಾಹರಣೆಗೆ ಆಗ ರಾಜಪ್ರಭುತ್ವ ಈಗ ಪ್ರಜಾಪ್ರಭುತ್ವ, ಆಗ ಕಾಲ್ನಡಿಗೆ ಅಥವಾ ಕುದುರೆ.
ಈಗ ವಿಮಾನ, ಆಗ ಪಾರಿವಾಳ ಇಲ್ಲ ಧೂತ ಸಂದೇಶ ವಾಹಕ, ಈಗ ಇಂಟರ್ ನೆಟ್ – ಮೊಬೈಲ್ ( ಸ್ವಲ್ಪ Techniques ಗೊತ್ತಾದರೆ Fake Photoshop! !??). ಆಗ ಜಾತಿಗಳ ಶ್ರೇಷ್ಠತೆ ಈಗ ಸ್ವಲ್ಪ ಶಿಥಿಲತೆ, ಆಗ ಪ್ರಾಮಾಣಿಕತೆ ಈಗ ಭ್ರಷ್ಟತೆ, ಆಗ ಹೆಣ್ಣು ಎರಡನೇ ದರ್ಜೆ ಈಗ ಆಕೆಯೇ ಎಲ್ಲದರಲ್ಲೂ First Class ( ? ), ಆಗ ದೇವರು ದೊಡ್ಡವನು ಈಗ ಹಣ ಅಧಿಕಾರ ಇದ್ದವನೇ ದೇವರು ………….ಹೀಗೆ ನಾನಾ ರೀತಿಯ ಬದಲಾವಣೆಗಳಾಗಿವೆ.

ಆದ್ದರಿಂದ ಅಪ್ಪ ಹಾಕಿದ ಆಲದ ಮರವೆಂದು ನೇಣು ಹಾಕಿಕೊಳ್ಳದೆ, ಚಿನ್ನದ ಸೂಜಿಯೆಂದು ಕಣ್ಣಿಗೆ ಚುಚ್ಚಿಕೊಳ್ಳದೆ ಈಗಿರುವ ನಿಮ್ಮ ಜ್ಞಾನದ ಮಿತಿಯಲ್ಲಿ ಒಂದಷ್ಟು ವಿವೇಚನೆಯಿಂದ ನಿಮಗೆ ಸರಿ ಎಂಬುದನ್ನು ಸ್ವೀಕರಿಸಿ. ಕೆಲವನ್ನು ಬದಲಾವಣೆ ಮಾಡಿಕೊಳ್ಳಿ ಇಷ್ಟವಿಲ್ಲದಿದ್ದರೆ ತಿರಸ್ಕರಿಸಿ.

ಅನುಭವದ ಆಧಾರದ ಮೇಲೆ ಎಲ್ಲಾ ಉತ್ತಮ ಅಂಶಗಳನ್ನು ಸೇರಿಸಿ ಹೊಸ ಸಾಮಾಜಿಕ ಮನೋಸ್ಥಿತಿ ನಿರ್ಮಿಸಿಕೊಳ್ಳೋಣ. ಆ ಕಾರಣಕ್ಕಾಗಿ ಮಹಾತ್ಮರ Quote ಗಳಿಗೆ ನಿಮ್ಮ ಆಂತರಿಕ ಮತ್ತು ಬಾಹ್ಯ ಪ್ರತಿಕ್ರಿಯೆ ಮುಖ್ಯವಾಗುತ್ತದೆ. ಏಕೆಂದರೆ ಈ ಕ್ಷಣದಲ್ಲಿ ನಾವು ಜೀವಿಸುತ್ತಿರುವುದು ನಿಮ್ಮೊಂದಿಗೆ ಹೊರತು ಮಹಾತ್ಮರ ಒಡನಾಟದಲ್ಲಿ ಅಲ್ಲ ಆದರೆ ಅವರ ನೆನಪುಗಳೊದಿಗೆ ……..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಗರಿಗೆದರಿದ “TEAM MSS” ಚಟುವಟಿಕೆ: ಯಾರದ್ದು, ಏನಿದು ‘ಟೀಂ ಎಂಎಸ್ ಎಸ್’….? ಸಂಪೂರ್ಣ ಮಾಹಿತಿಗಾಗಿ ಈ ಸುದ್ದಿಯನ್ನು ಓದಿ….

ಒಂದು ಉಪಚುನಾವಣೆ ಒಳಗೊಂಡಂತೆ ನಾಲ್ಕು ವಿಧಾನಸಭೆ ಚುನಾವಣೆಗಳನ್ನು ಎದುರಿಸಿದ ಬಿ.ಮುನೇಗೌಡ ತಾಲೂಕಿಗೆ ನೀರು, ಕಲ್ಲು ಮುನೇಗೌಡ ಎಂದೇ ಚಿರಪರಿಚಿತರಾಗಿದ್ದಾರೆ...ಇತ್ತೀಚೆಗೆ ನಡೆದ…

2 hours ago

ಇಂದಿನಿಂದ (ಮಾ.18) ಎಸ್.ಎಸ್.ಎಲ್.ಸಿ ಪರೀಕ್ಷೆ -01 ಆರಂಭ: ಪರೀಕ್ಷೆಗೆ ಬಂದ ವಿದ್ಯಾರ್ಥಿಗಳಿಗೆ ಗುಲಾಬಿ ನೀಡಿ ಸ್ವಾಗತಿಸಿದ ಬಿಇಒ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು  ಮಾರ್ಚ್ 18 ಬುಧವಾರದಿಂದ ಏಪ್ರಿಲ್ 02 ಗುರುವಾರದ ವರೆಗೆ ಬೆಳಿಗ್ಗೆ 10:15 ಗಂಟೆಯಿಂದ ಮಧ್ಯಾಹ್ನ…

5 hours ago

ಯುಗಾದಿ…..

ವಿಶ್ವ ಮಹಾಯುದ್ಧದ ಕಾರ್ಮೋಡಗಳ ನಡುವೆ, ಅತ್ಯಂತ ಅಗತ್ಯದ ಗ್ಯಾಸ್ ಸಿಲಿಂಡರ್ಗಳ ಅಭಾವದ ನಡುವೆ, ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ, ಸಂಭ್ರಮದ ಹೊಸ…

8 hours ago

ಯುವ ಆಪದ್ ಮಿತ್ರ ಯೋಜನೆ: ವಿಪತ್ತು ನಿರ್ವಹಣೆ ಕುರಿತು ಒಂದು ವಾರ ತರಬೇತಿ ಶಿಬಿರ

ಯುವ ಆಪದ್ ಮಿತ್ರ ಯೋಜನೆಯ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳು ದೊಡ್ಡಬಳ್ಳಾಪುರದ ಅನಿಬೆಸೆಂಟ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಮತ್ತು…

18 hours ago

ಮಹಿಳೆಯರನ್ನು ಮಂಚಕ್ಕೆ ಕರೆದ ಆರೋಪ: ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ಅಮಾನತು

ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಮೇರೆಗೆ ಮೂಡುಬಿದಿರೆ…

18 hours ago

ಮುಂಗಾರು ಪೂರ್ವ ಮಳೆ: ಮಳೆಯಲ್ಲಿ ಸಾಲುಗಟ್ಟಿ ನಿಂತ ರಾಗಿ‌ ಮಾರಾಟ ಮಾಡಲು ಬಂದ ಟ್ರ್ಯಾಕ್ಟರ್ ಗಳು

ಇಂದು ಸಂಜೆ ಸುಮಾರು 4:30ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಪ್ರಾರಂಭವಾದ ಮಳೆಯು ಸತತವಾಗಿ 7ಗಂಟೆಯವರೆಗೆ ಬಿದ್ದಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿತು. ಅದೇರೀತಿ…

20 hours ago