ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆ: ಮತದಾನ ಕೇಂದ್ರಗಳ ವಿವರ ಇಲ್ಲಿದೆ..

ಬೆಂಗಳೂರು ಪದವೀಧರರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆ 2024ರ ಪ್ರಯುಕ್ತ ಜೂನ್ 03 ರಂದು ನಡೆಯಲಿರುವ ಮತದಾನ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮತದಾನ ಕೇಂದ್ರಗಳ ಅಂತಿಮ ಪಟ್ಟಿ ಪ್ರಕಟಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಸಬಾ ಮತ್ತು ದೊಡ್ಡಬಳ್ಳಾಪುರ ಟೌನ್ ನಲ್ಲಿರುವ ಮತದಾನ ಕೇಂದ್ರ..

1) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಕೊಠಡಿ ಸಂಖ್ಯೆ. 02, 2) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಕೊಠಡಿ ಸಂಖ್ಯೆ. 03,

3) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಕೊಠಡಿ ಸಂಖ್ಯೆ. 04,

4) ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ಗ್ರಂಥಾಲಯ(ದಕ್ಷಿಣ ವಿಭಾಗ) ಕೊಠಡಿ ಸಂಖ್ಯೆ. 05 ರಲ್ಲಿ ದೊಡ್ಡಬಳ್ಳಾಪುರ ಟೌನ್ ಮತ್ತು ಕಸಬಾ ವ್ಯಾಪ್ತಿಯ ಪದವೀಧರ ಮತದಾರರು ಮತ ಚಲಾಯಿಸಬಹುದಾಗಿದೆ.

5) ದೊಡ್ಡ ಬೆಳವಂಗಲ ಮತಗಟ್ಟೆ-2 ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ. 02 (ದೊಡ್ಡಬೆಳವಂಗಲ) ದೊಡ್ಡ ಬೆಳವಂಗಲ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

6) ಮಧುರೆ ಹೋಬಳಿಯ ಕನಸವಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಮಧುರೆ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

7) ಸಾಸಲು ಮತಗಟ್ಟೆ-4 ಉನ್ನತ್ತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಠಡಿ ಸಂಖ್ಯೆ. 01ರಲ್ಲಿ ಸಾಸಲು ಹೋಬಳಿಯ ಪದವೀಧರ ಮತದಾನರರು ಮತ ಚಲಾಯಿಸಬಹುದು.

8) ತುಬಗೇರೆ ಮತಗಟ್ಟೆ-5 ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ತುಬಗೇರೆ ಹೋಬಳಿಯ ಪದವೀಧರ ಮತದಾರರು ಮತ. ಚಲಾಯಿಸಬಹುದು.

ದೇವನಹಳ್ಳಿ ತಾಲೂಕಿನಲ್ಲಿರುವ ಮತದಾನ ಕೇಂದ್ರಗಳು…

1) ಕಸಬಾ ಹೋಬಳಿ ಮತ್ತು ದೇವನಹಳ್ಳಿ ಟೌನ್ ಮತಗಟ್ಟೆ-6 ಟೌನ್ ಹಾಲ್ ಕೊಠಡಿ ಸಂಖ್ಯೆ. 01 (ದೇವನಹಳ್ಳಿ ಪುರಸಭೆ),

2) ಕಸಾಬ ಹೋಬಳಿ ಮತ್ತು ದೇವನಹಳ್ಳಿ-6ಎ ಪುರಸಭೆ ಕಾರ್ಯಾಲಯದ ಕೊಠಡಿ ಸಂಖ್ಯೆ. 02 ನಲ್ಲಿ ದೇವನಹಳ್ಳಿ ಟೌನ್ ಮತ್ತು ಕಸಾಬ ಹೋಬಳಿ ಪದವೀಧರ ಮತದಾರರು ಮತ ಚಲಾಯಿಸಬಹುದು.

3) ಚನ್ನರಾಯಪಟ್ಟಣ ಮತಗಟ್ಟೆ-7 ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಚನ್ನರಾಯಪಟ್ಟಣ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

4) ಕುಂದಾಣ ಮತಗಟ್ಟೆ-8 ಗ್ರಾಮ ಪಂಚಾಯತ ಕಾರ್ಯಾಲಯ ಕುಂದಾಣದಲ್ಲಿ ಕುಂದಾಣ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

5) ವಿಜಯಪುರ ಮತಗಟ್ಟೆ-9 ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೊಠಡಿ ಸಂಖ್ಯೆ. 1 ವಿಜಯಪುರ ಟೌನ್

6) ವಿಜಯಪುರ ಮತಗಟ್ಟೆ-9ಎ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಕೊಠಡಿ ಸಂಖ್ಯೆ. 02 ವಿಜಯಪುರ ಟೌನ್ ನಲ್ಲಿ ವಿಜಯಪುರ ಹೋಬಳಿ ಮತ್ತು ವಿಜಯಪುರ ನಗರದ ಪದವೀಧರ ಮತದಾರರು ಮತ ಚಲಾಯಿಸಬಹುದು.

ಹೊಸಕೋಟೆ  ತಾಲೂಕಿನಲ್ಲಿರುವ ಮತದಾನ ಕೇಂದ್ರಗಳು..

1) ಕಸಾಬ ಹೋಬಳಿ ಮತ್ತು ಹೊಸಕೋಟೆ ಟೌನ್ ಮತಗಟ್ಟೆ-10 ತಾಲೂಕು ಪಂಚಾಯತ ಕಾರ್ಯಾಲಯದ ಕೊಠಡಿ ಸಂಖ್ಯೆ. 01

2) ಮತಗಟ್ಟೆ-10ಎ ತಾಲೂಕು ಪಂಚಾಯತ ಕಾರ್ಯಾಲಯದ ಕೊಠಡಿ ಸಂಖ್ಯೆ. 02 ರಲ್ಲಿ ಹೊಸಕೋಟೆ ಟೌನ್ ಮತ್ತು ಕಸಾಬ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

3) ಆನುಗುಂದನಹಳ್ಳಿ ಮತಗಟ್ಟೆ-11ಗ್ರಾಮ ಪಂಚಾಯತ ಕಾರ್ಯಾಲಯ ಆನುಗುಂದನಹಳ್ಳಿ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

4) ಜಡಗೇನಹಳ್ಳಿ ಮತಗಟ್ಟೆ-12 ಗ್ರಾಮ ಪಂಚಾಯತ ಕಾರ್ಯಾಲಯ ಜಡಗೇನಹಳ್ಳಿ ಹೋಬಳಿಯ ಪದವೀಧರ ಮತದಾರರರು ಮತ ಚಲಾಯಿಸಬಹುದು.

5) ನಂದಗುಡಿ ಮತಗಟ್ಟೆ-13 ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ನಂದಗುಡಿ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು.

6) ಸುಲಿಬೇಲೆ ಮತಗಟ್ಟೆ-14 ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಸುಲಿಬೆಲೆ ಹೋಬಳಿ ಪದವೀಧರ ಮತದಾರರು ಮತ ಚಲಾಯಿಸಬಹುದು.

ನೆಲಮಂಗಲ ತಾಲೂಕಿನಲ್ಲಿರುವ ಮತದಾನ ಕೇಂದ್ರಗಳು..

1.ಕಸಬಾ ಮತ್ತು ನೆಲಮಂಗಲ ಟೌನ್-15 ಎಸ್.ಜೆ.ಎಮ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ. 01, ಕಸಬಾ ಮತ್ತು ನೆಲಮಂಗಲ ಟೌನ್-15ಎ ಎಸ್.ಜೆ.ಎಮ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ. 02, ಕಸಬಾ ಮತ್ತು ನೆಲಮಂಗಲ ಟೌನ್-15ಬಿ ಎಸ್.ಜೆ.ಎಮ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕೊಠಡಿ ಸಂಖ್ಯೆ. 03 ರಲ್ಲಿ ನೆಲಮಂಗಲ ಟೌನ್ ಮತ್ತು ಕಸಬಾ ಹೋಬಳಿಯ ಪದವೀಧರ ಮತದಾರರು ಮತ ಚಲಾಯಿಸಬಹುದು. ಸೊಂಪುರ ಮತಗಟ್ಟೆ-16 ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊರಟಗೆರೆ ರೋಡ್ ಸೊಂಪುರಲ್ಲಿ ಸೊಂಪುರ ಹೋಬಳಿ ಪದವೀಧರ ಮತದಾರರು ಮತ ಚಲಾಯಿಸಬಹುದು. ತ್ಯಾಮಗೊಂಡಲು ಮತಗಟ್ಟೆ-17 ಕರ್ನಾಟಕ ಪಬ್ಲಿಕ್ ಶಾಲೆ ಕೊಠಡಿ ಸಂಖ್ಯೆ. 01 ತ್ಯಾಮಗೊಂಡಲು ಹೋಬಳಿ ವ್ಯಾಪ್ತಿಯ ಪದವೀಧರ ಮತದಾರರು ಮತ ಚಲಾಯಿಸಬಹುದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 25 ಮತಗಟ್ಟೆಗಳಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್ ಶಿವಶಂಕರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ramesh Babu

Journalist

Recent Posts

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ?…

7 hours ago

ಅರಸೇಶ್ವರಿ ದೇವಿಯ ಜಾಗ ಖಾಸಗಿ ವ್ಯಕ್ತಿಗೆ ಖಾತೆ:ಸರ್ಕಾರಿ ಜಮೀನು ಒತ್ತುವರಿ ತೆರವು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟ‌ನೆ

ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಅರಸೇಶ್ವರಿ ದೇಗುಲದ ಇನಾಮ್ತಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ…

8 hours ago

ಕೇಬಲ್ ಕಾರ್ಖಾನೆಗೆ ಬೆಂಕಿ: ಧಗಧಗ ಉರಿಯುತ್ತಿರುವ ಕಾರ್ಖಾನೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇಬಲ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಧಗಧಗನೆ ಕಾರ್ಖಾನೆ ಉರಿಯುತ್ತಿದೆ. ಈ ಘಟನೆ ಇಂದು ಸಂಜೆ ಸುಮಾರು…

19 hours ago

ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟ ಕದ್ದೊಯ್ದ ಐನಾತಿಗಳು

ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…

23 hours ago

ಮಾರಮ್ಮ ದೇವಿಯ ಮೂರು ಚಿನ್ನದ ತಾಳಿ, ನಾಲ್ಕು ಗುಂಡುಗಳನ್ನ ಕದ್ದ ಖದೀಮರು

ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ‌ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…

24 hours ago