ಬಿಗ್ ಬಾಸ್ ಕನ್ನಡ 12: ‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟನಿಗೆ ಸಿಕ್ಕ ಬಹುಮಾನ ಎಷ್ಟು ?

ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮಕ್ಕೆ ಕಡೆಗೂ ತೆರೆಬಿದ್ದಿದೆ. ಸಾಕಷ್ಟು ಪ್ರೇಕ್ಷಕರ ನಿರೀಕ್ಷೆಯಂತೆ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ.

‘ಬಿಗ್ ಬಾಸ್’ ಮನೆಯೊಳಗೆ ಗಿಲ್ಲಿ ಕಾಲಿಟ್ಟಿದ್ದು ಕಾವ್ಯ ಜೊತೆ ಜಂಟಿಯಾಗಿ. ‘ಬಿಗ್ ಬಾಸ್’ ಮನೆಯೊಳಗೆ ಜಂಟಿಯಾಗಿ ಹೋದರೂ ಸಿಂಗಲ್ ಆಗಿ ಇಡೀ ಸೀಸನ್‌ ಡಾಮಿನೇಷನ್ ಮಾಡಿದವರು ಗಿಲ್ಲಿ ನಟ.

ಗಿಲ್ಲಿ ನಟನ ಕಾಮಿಡಿ ಟೈಮಿಂಗ್, ಸಂದರ್ಭೋಚಿತ ಕಾಮಿಡಿ, ಪಂಚಿಂಗ್ ಲೈನ್ಸ್ ಸಿಕ್ಕಾಪಟ್ಟೆ ವರ್ಕೌಟ್ ಆಗಿತ್ತು. ತಮ್ಮ ಕಾಮಿಡಿಯಲ್ಲಿ ಸಿಲ್ಲಿ ಜೋಕ್ಸ್‌ನ ಗಿಲ್ಲಿ ಎಂದೂ ಮಿಕ್ಸ್ ಮಾಡಲಿಲ್ಲ. ಡಬಲ್ ಮೀನಿಂಗ್ ಅಥವಾ ಅಶ್ಲೀಲತೆಯನ್ನ ಸೋಕಿಸಲೂ ಇಲ್ಲ. ಇಡೀ ಫ್ಯಾಮಿಲಿ ಕೂತು.. ಎಲ್ಲರೂ ಹೊಟ್ಟೆ ತುಂಬಾ ನಗುವಂತೆ ಮಾಡಿದವರು ಗಿಲ್ಲಿ ನಟ. ಇದೇ ಕಾರಣಕ್ಕೆ ‘ಗಿಲ್ಲಿ ಗೆಲ್ಲಬೇಕು’ ಅಂತ ಬಹುತೇಕರು ಬಯಸಿದ್ದರು. ವೀಕ್ಷಕರು ಅಂದುಕೊಂಡಂತೆ ಗಿಲ್ಲಿ ನಟ ವಿಜಯಪತಾಕೆ ಹಾರಿಸಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ”ಬಿಗ್ ಬಾಸ್ ಕನ್ನಡ 12’ ಸ್ವಯಂಘೋಷಿತ ವಿನ್ನರ್‌ ಗಿಲ್ಲಿ” ಅಂತ ಕೆಲವರು ಕಾಲೆಳೆಯುತ್ತಿದ್ದರು. ಅದಕ್ಕೆ ”ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆಲ್ಲೋದು ಪಕ್ಕಾ.. ಟಕರ ಟಕರ ತಮಟೆ ಏಟು.. ಗಿಲ್ಲಿ ನಟ ಅಲ್ಟಿಮೇಟು” ಎಂದು ಗಿಲ್ಲಿ ನಟ ತಿರುಗೇಟು ನೀಡುತ್ತಿದ್ದರು. ಈಗ ವೀಕ್ಷಕರಿಂದ ಅತೀ ಹೆಚ್ಚು ಮತಗಳನ್ನ ಪಡೆದು ಗಿಲ್ಲಿ ನಟ ಜಯಭೇರಿ ಬಾರಿಸಿದ್ದಾರೆ.

ಗೆದ್ಮೇಲೆ ”ನಿಜವಾಗಿಯೂ ಸಖತ್ ಖುಷಿಯಾಗುತ್ತಿದೆ. ಗೆದ್ದಿದ್ದೇನೆ.. ಗೆದ್ದಾಗ ಹಿಗ್ಗಲ್ಲ, ಸೋತಾಗ ಕುಗ್ಗಲ್ಲ. ನಿಮ್ಮ ಆಶೀರ್ವಾದ ಯಾವಾಗಲೂ ಹೀಗೇ ಇರಲಿ” ಎಂದಿದ್ದಾರೆ ಗಿಲ್ಲಿ ನಟ. ಜೊತೆಗೆ, ”ನನಗೆ ಒಳಗೆ ರಜತ್, ಕಾವ್ಯ, ರಕ್ಷಿತಾ, ರಘು ತುಂಬಾ ಸಪೋರ್ಟ್ ಮಾಡಿದರು. ಇದನ್ನ ನಾನು ನನ್ನ ಜೀವನದಲ್ಲಿ ಮರೆಯೋದಿಲ್ಲ” ಎಂದು ಗಿಲ್ಲಿ ನಟ ನೆನೆದರು.

ಹಾಗ್ನೋಡಿದ್ರೆ, ಈ ಹಿಂದೆ 5 ರಿಯಾಲಿಟಿ ಶೋಗಳಲ್ಲಿ ಗಿಲ್ಲಿ ನಟ ಸ್ಪರ್ಧಿಸಿದ್ದರು. ಕೆಲವು ಶೋಗಳಲ್ಲಿ ಫೈನಲಿಸ್ಟ್ ಆಗಿದ್ದರೆ, ಕೆಲವೊಂದರಲ್ಲಿ ರನ್ನರ್‌ ಅಪ್ ಆಗಿದ್ದರು. ಈವರೆಗೂ ಯಾವ ಶೋನಲ್ಲೂ ಗಿಲ್ಲಿ ನಟ ಗೆದ್ದಿರಲಿಲ್ಲ. ಗಿಲ್ಲಿ ನಟನಿಗೆ ಗೆಲುವಿನ ಸಿಹಿ ನೀಡಿರೋದು ‘ಬಿಗ್ ಬಾಸ್‌’. ಈ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ”5 ರಿಯಾಲಿಟಿ ಶೋ ನಂತರ ಫೈನಲಿ.. ‘ಬಿಗ್ ಬಾಸ್’ ಎಂಬ ದೊಡ್ಡ ರಿಯಾಲಿಟಿ ಶೋಗೆ ಬಂದು ದೊಡ್ಡ ಮಟ್ಟದಲ್ಲಿ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ” ಎಂದರು. ಹಾಗೇ, ”ಇದು ವೆಲ್ ಡಿಸರ್ವ್ಡ್ ಗೆಲುವು” ಎಂದು ಗಿಲ್ಲಿ ನಟನ ಬೆನ್ನು ತಟ್ಟಿದರು ಕಿಚ್ಚ ಸುದೀಪ್.

‘ಬಿಗ್ ಬಾಸ್ ಕನ್ನಡ 12’ ವಿನ್ನರ್ ಗಿಲ್ಲಿ ನಟನಿಗೆ ಪ್ರಾಯೋಜಕರ ಕಡೆಯಿಂದ 50 ಲಕ್ಷ ರೂಪಾಯಿ ಬಹುಮಾನ ಹಣ ಲಭಿಸಿದೆ. ಬಿಗ್ ಬಾಸ್ ಅರಮನೆ ಥೀಮ್‌ನಲ್ಲಿಯೇ ಸಿದ್ಧಗೊಂಡಿರುವ ‘ಬಿಗ್ ಬಾಸ್ ಕನ್ನಡ 12 ವಿನ್ನರ್ ಟ್ರೋಫಿ’ಗೆ ಗಿಲ್ಲಿ ನಟ ಮುತ್ತಿಟ್ಟಿದ್ದಾರೆ. ಇದರ ಜೊತೆಗೆ ಮಾರುತಿ ಸುಜುಕಿ ಕಡೆಯಿಂದ ವಿಕ್ಟೋರಿಸ್ ಕಾರು ಗಿಲ್ಲಿ ನಟನ ಕೈಸೇರಿದೆ.

ಕಿಚ್ಚ ಸುದೀಪ್ ಕಡೆಯಿಂದಲೂ ಪ್ರೀತಿಯ ಬಹುಮಾನ
ಪ್ರಾಯೋಜಕರ ಕಡೆಯಿಂದ ಮಾತ್ರವಲ್ಲ.. ಕಿಚ್ಚ ಸುದೀಪ್ ಕಡೆಯಿಂದಲೂ ಗಿಲ್ಲಿ ನಟನಿಗೆ ಬಹುಮಾನ ಹಣ ಲಭಿಸಿದೆ. ಕಿಚ್ಚ ಸುದೀಪ್ ಮನಗೆದ್ದಿರುವ ಗಿಲ್ಲಿ ನಟನಿಗೆ ಬಹುಮಾನ ಹಣ ಘೋಷಿಸಿದ್ದಾರೆ. ”ಗಿಲ್ಲಿ ಅದ್ಭುತವಾಗಿ ಆಡಿದ್ದಾರೆ. ಈ ವೇದಿಕೆಯಲ್ಲಿ ನನ್ನ ಕಡೆಯಿಂದ ಗಿಲ್ಲಿಗೆ ನಾನು ಪ್ರೀತಿಯಿಂದ 10 ಲಕ್ಷ ರೂಪಾಯಿ ಕೊಡುತ್ತಿದ್ದೇನೆ” ಎಂದು ಕಿಚ್ಚ ಸುದೀಪ್‌ ಅನೌನ್ಸ್ ಮಾಡಿದರು

Ramesh Babu

Journalist

Recent Posts

ರೈತರು ಒಂದು ವರ್ಷದಲ್ಲಿ 5 ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ- ಪಿಡಿಒ ರಮೇಶ್

ಚಿಕ್ಕನಾಯಕನಹಳ್ಳಿ: ರೈತರು ಒಂದು ವರ್ಷದಲ್ಲಿ 5 ಲಕ್ಷದವರೆಗೆ ಸೌಲಭ್ಯಗಳನ್ನು ಪಡೆದುಕೊಳ್ಳಿ,  ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ದೊರಕುವ ವಿಕಸಿತ ಭಾರತ ಗ್ಯಾರಂಟಿ…

2 hours ago

ಹಣದ ಹರಿವು

ಹೊರಹೋಗುವ ಸುಲಭ ದಾರಿಗಳು, ಒಳಬರುವ ಕಠಿಣ ಹಾದಿಗಳು....... ಖರ್ಚು ಮಾಡುವ ಸುಲಭ ಮಾರ್ಗಗಳು, ಸಂಪಾದನೆ ಮಾಡಲು ಕಠಿಣ ಹಾದಿಗಳು...... ಆಧುನಿಕತೆ…

3 hours ago

ಸೆ.6ರಂದು ದೊಡ್ಡಬಳ್ಳಾಪುರದ ಹಲವೆಡೆ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 220/66/11 ಕೆ.ವಿ. ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಲ್ಲಿ ವಿದ್ಯುತ್ ಕಾಮಗಾರಿ ಕೈಗೊಳ್ಳಲಾಗುತ್ತಿರುವ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 6ರಂದು ದೊಡ್ಡಬಳ್ಳಾಪುರ…

20 hours ago

ದೌರ್ಬಲ್ಯ – ಶೋಷಣೆ – ಸ್ವಾಭಿಮಾನ……

ಈ ಸಮಾಜ ಯಾವಾಗಲೂ ಬಹುತೇಕ ದುರ್ಬಲರ ಮೇಲೆ ಸವಾರಿ ಮಾಡುತ್ತದೆ. ಅದರಲ್ಲೂ ಈ ಹಣ ಕೇಂದ್ರೀಕೃತ ಆಧುನಿಕ ಸಮಾಜದಲ್ಲಿ ದುರ್ಬಲರೇ…

1 day ago

ಕನ್ನಡದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಗೌರವ

ದೊಡ್ಡಬಳ್ಳಾಪುರ: ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಮತ್ತು ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು…

3 days ago

ಕ್ಷಯ ಮುಕ್ತ ಭಾರತ ಅಭಿಯಾನ: ಜಾಗೃತಿ ಜಾಥಾ, ಬೀದಿ ನಾಟಕದ ಮೂಲಕ ಅರಿವು

ದೊಡ್ಡಬಳ್ಳಾಪುರ: ಕ್ಷಯರೋಗ ಮುಕ್ತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ‘ಟಿಬಿ ಮುಕ್ತ ಭಾರತ್ ಅಭಿಯಾನ’ದ…

3 days ago