ಬಾಬಾ ಸಾಹೇಬರ ದಾರಿಯಲ್ಲಿ ನಾವು ಹೊರಟರೆ ನಮ್ಮ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ- ಸಮಾಜ ಸೇವಕ ಜಿ. ರಾಜಗೋಪಾಲ್

ನಿಜವಾದ ಜ್ಞಾನಿಗಳು ಬಾಬಾ ಸಾಹೇಬರ ನಡೆ ಹಾಗೂ ಬುದ್ಧನ ದಾರಿಯಲ್ಲಿ ಅರಿತು ಹೊರಟರೆ ಇಡೀ ಜಗತ್ತೇ ಬುದ್ಧನ ಧಮ್ಮಕ್ಕೆ ಪರಿವರ್ತನೆ ಹೊಂದಿದರೂ ಆಶ್ಚರ್ಯ ವೇನಿಲ್ಲ ಎಂದು ಸಮಾಜ ಸೇವಕ ಜಿ. ರಾಜಗೋಪಾಲ್ ಅಭಿಪ್ರಾಯಪಟ್ಟರು.

ಡಾ. ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆಯೋಜಿಸಿದ್ದ 68ನೇ ಬಾಬಾ ಸಾಹೇಬರ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತಾಡಿದ ಅವರು, ನಿಜವಾಗಿ ಬಾಬಾ ಸಾಹೇಬರ ದಾರಿಯಲ್ಲಿ ನಾವು ಹೊರಟರೆ ನಮ್ಮೆಲ್ಲರ ಬದುಕು ಶಾಂತಿ ಮತ್ತು ನೆಮ್ಮದಿಯಿಂದ ಕೂಡಿರುತ್ತದೆ. ಇಂದಿನ ಜಗತ್ತಿಗೆ ಬಾಬಾ ಸಾಹೇಬರ ಜ್ಞಾನ, ಬುದ್ಧನ ಮೈತ್ರಿ ಹಾಗೂ ಬಸವಣ್ಣನ ಕ್ರಾಂತಿ ಪ್ರಸ್ತುತವಾಗಿವೆ ಎಂದು ವಿದ್ಯಾರ್ಥಿಗಳಿಗೆ ಪರಿನಿರ್ವಾಣದ ಮಹತ್ವವನ್ನು ತಿಳಿಸಿದರು.

ಈ ಕಾರ್ಯಕ್ರಮದ ಪ್ರಸ್ತಾವನೆಯನ್ನು ಮಂಡಿಸಿದ ಡಾ.ಪ್ರಕಾಶ್ ಮಂಟೇದ ಬುದ್ಧನ ಪರಿನಿಬ್ಬಾಣವು ಬಹುಶಹ ಇಂದಿನ ಅನುಭೋಗ ಜಗತ್ತಿನ ರೋಗಗ್ರಸ್ಥ ಜನಕ್ಕೆ ಮದ್ದಾಗಬಲ್ಲದು ಹಾಗೂ ಬಾಬಾ ಸಾಹೇಬರು ಬುದ್ಧನನ್ನು ಕುರಿತು ಚಿಂತಿಸಿದ ಬಗೆ ಸರ್ವರ ಸುಖ ಶಾಂತಿಯ ನೆಮ್ಮದಿ ತತ್ವವನ್ನು ಹೇಳುತ್ತದೆ‌. ಅವರು ಹೇಳಿದಂತೆ, ನಾವು ತ್ಯಾಗ, ತಾಳ್ಮೆ ಮತ್ತೂ ನಿಶ್ವಾರ್ಥತೆಯಿಂದ ನಮ್ಮ ಬಲವನ್ನೆಲ್ಲ ಒಗ್ಗೂಡಿಸಿ ಕಾರ್ಯನಿರ್ವಹಿಸಬೇಕಿದೆ. ಈ ದಿಶೆಯಲ್ಲಿ ಮುಂದೆ ಅಂಬೇಡ್ಕರ್ ಅಧ್ಯಯನ ಕೇಂದ್ರವು ಬಾಬಾ ಸಾಹೇಬರ ಸಮಾಜೋರ್ಥಿಕ ಆಧ್ಯಾತ್ಮಿಕ ವಿಚಾರಗಳನ್ನು ಯುವ ಜನತೆಯ ಜೊತೆ ಹಂಚುವ ಪ್ರಯತ್ನವನ್ನು ಮಾಡುತ್ತದೆ ಎಂದರು..

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸದಾಶಿವ ರಾಮಚಂದ್ರಗೌಡ, ಬಾಬಾ ಸಾಹೇಬರ ಜ್ಞಾನ ಮೇಧಾಶಕ್ತಿ ಎಲ್ಲವೂ ನಮ್ಮ ನಡೆ ನುಡಿ ಒಳಗೆ ಪ್ರಕಟವಾಗಬೇಕೆಂದು ಆಗ್ರಹಪಡಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಬಿ. ಆರ್ ಗಂಗಾಧರಯ್ಯ, ಪ್ರೊ.ಡೊರೀನ್ ಸ್ನೇಹಲತಾ, ಪ್ರೊ. ಲಲಿತಮ್ಮ ಹಾಗೂ ಡಾ. ಸತೀಶ್ ಇಟಗಿ, ಪ್ರೊ. ನೀರಜಾ ದೇವಿ, ಡಾ. ಶೋಭಾ ಮಲ್ಹಾರಿ, ವಿನೋದ್ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Ramesh Babu

Journalist

Recent Posts

ಏ.12ರಂದು ದೊಡ್ಡಬಳ್ಳಾಪುರ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ ನಗರದಲ್ಲಿ ಏ.12 ರಂದು 220/66/11ಕೆವಿ ಕೆಐಎಡಿಬಿ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F02-Birla Super ಫೀಡರ್‌ನಲ್ಲಿ ವಿದ್ಯುತ್ ಕಾಮಗಾರಿಗಳು…

2 hours ago

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರ ಸಾವು

ಪಿಯುಸಿ ರಿಸಲ್ಟ್ ದಿನವೇ ವಿದ್ಯಾರ್ಥಿನಿ ಘೋರವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿಯ ಮನೋರಾಯನಪಾಳ್ಯದಲ್ಲಿ ನಡೆದಿದೆ.. 17 ವರ್ಷದ…

6 hours ago

ಲೋಕಾಯುಕ್ತ ಬಲೆಗೆ ಬಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

ರಾಯಚೂರು ಸಿರವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಸುರೇಶ್ ಶೆಟ್ಟಿ ಲೋಕಾಯುಕ್ತರ ಬಲೆಗೆ ಬಿದ್ದ ಮುಖ್ಯಾಧಿಕಾರಿ. ರಾಘವೇಂದ್ರ…

7 hours ago

ಹುಚ್ಚನೊಬ್ಬನ ಕನಸು….

ದೇಶದ ಎಲ್ಲಾ ದಲಿತ ಕೇರಿಗಳನ್ನು ನಾಶ ಮಾಡಬೇಕು. ಅಲ್ಲಿನ ಎಲ್ಲರಿಗೂ ಊರ ಒಳಗಿನ ಸ್ಥಳದಲ್ಲಿ ವಾಸಕ್ಕೆ ಅವಕಾಶ ಕಲ್ಪಿಸಬೇಕು. ಬ್ರಾಹ್ಮಣರ…

11 hours ago

PUC Result: ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ….ಈ ಕಥೆ ಕೇಳಿದರೆ ಎಂಥವರ ಕಣ್ಣಲ್ಲೂ ನೀರು ಬರುವುದು ಗ್ಯಾರಂಟಿ

600ಕ್ಕೆ 600 ಅಂಕ ತೆಗೆದು ರಾಜ್ಯಕ್ಕೆ ಟಾಪರ್ ಆದ ದಿಶಾಳ ಸಾಧನೆಯ ಹಿಂದೆ ಎದೆ ನಡುಗಿಸುವ ಕಣ್ಣೀರಿನ ಕಥೆಯಿದೆ. ಮೂರು…

23 hours ago

ತೂಬಗೆರೆ ಸರ್ಕಾರಿ ಪಿಯು ಕಾಲೇಜಿಗೆ ಮತ್ತೊಮ್ಮೆ ಮೆರುಗು: ಶೇ.95.45 ಫಲಿತಾಂಶ

ದೊಡ್ಡಬಳ್ಳಾಪುರ (ತೂಬಗೆರೆ): ಗ್ರಾಮಾಂತರ ಭಾಗದಲ್ಲಿದ್ದರೂ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತೂಬಗೆರೆ ಸರ್ಕಾರಿ ಪದವಿ ಪೂರ್ವ ಕಾಲೇಜು…

24 hours ago