ಬರಿಗೈಯಲ್ಲಿ ಬಂದ ಯುವಕನಿಗೆ ಬರೋಬ್ಬರಿ 94 ಲಕ್ಷ ಹಣ ಸಿಕ್ಕಿದ್ದೆ ತಡ ಕೇವಲ ಹತ್ತೇ ಹತ್ತು ಸೆಕೆಂಡ್ನಲ್ಲಿ ಯಾವ ಪರಿಶ್ರಮವೂ ಇಲ್ಲದೆ ಲಕ್ಷಾಧಿಪತಿಯಾಗಿಬಿಟ್ಟಿದ್ದ. ಅಷ್ಟೋಂದು ಹಣ ನೋಡಿದ ಬಳಿಕ ಏನು ಮಾಡಬೇಕು ಅನ್ನೋ ಗೊಂದಲದಲ್ಲೇ ಆ ಯುವಕ 6 ದಿನ ಕಳೆದಿದ್ದ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಸದ್ಯ ಪೊಲೀಸರ ಅತಿಥಿಯಾಗಬೇಕಾದ ಪರಿಸ್ಥಿತಿ ಒದಗಿಬಂದಿದೆ.
94ಲಕ್ಷ ಹಣ ಸಿಕ್ಕಿದ್ದು ಹೇಗೆ?
ಬೆಂಗಳೂರು ನಗರದ ಚಂದ್ರ ಲೇಔಟ್ ನಿವಾಸಿಯಾಗಿರುವ ಪ್ರಮೋದ್ ಎಂಬಾತ ಸೈಟ್ ಖರೀದಿಸಲು 94 ಲಕ್ಷ ರೂ. ಹಣ ಶೇಖರಿಸಿಟ್ಟಿದ್ದ. ಅದನ್ನ ತನ್ನ ಸ್ನೇಹಿತನ ಅಂಗಡಿಯಲ್ಲಿ ಲೆಕ್ಕಾ ಮಾಡಿ ನಂತರ ವಕೀಲರ ಕಚೇರಿಗೆ ಹೋಗಿ ಸೈಟ್ ಖರೀದಿಸಲು ಬೇಕಾದ ಏರ್ಪಾಟು ಮಾಡಿಕೊಳ್ಳೋಣ ಎಂದು ಬ್ಯಾಗ್ನಲ್ಲಿ ಡಾಕ್ಯುಮೆಂಟ್ಸ್ ಇಟ್ಟು, ಬಾಕ್ಸ್ನಲ್ಲಿ ಎಲ್ಲಾ ಹಣವನ್ನು ತುಂಬಿಸಿ ಹಣದ ಬಾಕ್ಸ್ ಅನ್ನು ತಂದು ಕಾರಿನಲ್ಲಿ ಇಡಲು ಮುಂದಾಗಿದ್ದ. ಇನ್ನೇನು ಮನೆ ಕೆಳಗೆ ಬರ್ತಿದ್ದಂತೆ ಕಾರಿನ ಡೋರ್ ಓಪನ್ ಮಾಡಬೇಕಿತ್ತು. ಹಾಗಾಗಿ ಕೈನಲ್ಲಿದ್ದ ಹಣವನ್ನು ಅಪರಿಚಿತ ಆ್ಯಕ್ಟಿವಾ ಬೈಕ್ ಮೇಲಿಟ್ಟಿದ್ದಾರೆ. ಬಳಿಕ ಕಾರ್ ಡೋರ್ ಓಪನ್ ಮಾಡಿ ಸೈಟ್ ಖರೀದಿಗೆ ಬೇಕಿದ್ದ ದಾಖಲಾತಿ ಇದ್ದ ಬ್ಯಾಗನ್ನು ಕಾರಿನಲ್ಲಿ ಹಾಕಿಕೊಂಡು ಪ್ರಮೋದ್ ತಮ್ಮ ಸ್ನೇಹಿತನ ಅಂಗಡಿಗೆ ಹೊರಟಿದ್ದಾರೆ.
ಪ್ರಮೋದ್ ಕಾರು ಹೊರಡುತ್ತಿದ್ದಂತೆ ಅದೇ ರಸ್ತೆಯಲ್ಲಿ ಬಂದ ವರುಣ್ ಎಂಬ ಯುವಕ ಪಾರ್ಕ್ ಮಾಡಿದ್ದ ತನ್ನ ಬೈಕ್ ಹತ್ತಿರ ಬರುತ್ತಾನೆ. ಈ ವೇಳೆ ಬೈಕ್ ಮೇಲೆ ಒಂದು ಬಾಕ್ಸ್ ಸಿಕಿದ್ದು ಅದನ್ನು ತೆರೆದು ನೋಡಿದಾಗ ಕಂತೆ ಕಂತೆ ಹಣ ಸಿಕ್ಕಿದೆ. ಹಣ ಸಿಕ್ಕಿದ್ದೇ ತಡ ವರುಣ್ ಹಣದ ಸಮೇತ ಆ ಸ್ಥಳದಿಂದ ಎಸ್ಕೇಪ್ ಆಗುತ್ತಾನೆ. ಖಾಸಗಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಡಿಪಾರ್ಟ್ ಮೆಂಟ್ನಲ್ಲಿ ಕೆಲಸ ಮಾಡುವ ವರುಣ್ ತನ್ನ ಶ್ರೀನಗರ ಮನೆಯಲ್ಲಿ ಹಣವನ್ನ ಬಚ್ಚಿಟ್ಟಿರುತ್ತಾನೆ. 94 ಲಕ್ಷ ರೂ. ಹಣ ಏನು ಮಾಡಬೇಕು ಎನ್ನುವ ಗೊಂದಲದಲ್ಲೇ ಐದು ದಿನ ಕಳೆದಿದ್ದಾನೆ. ಜೊತೆಗೆ ಸೆಕೆಂಡ್ ಹ್ಯಾಂಡ್ ಇನ್ನೋವಾ ಕಾರು ಖರೀದಿಸಲು ಪ್ಲಾನ್ ಮಾಡ್ಕೊಂಡಿದ್ದಾನೆ. ಆದರೆ ಎಲ್ಲಿಯೂ ಹಣ ಖರ್ಚು ಮಾಡದೇ ಮನೆಯಲ್ಲಿ ಬಚ್ಚಿಟ್ಟಿರುತ್ತಾನೆ.
ಬೈಕ್ ಹೊರಟ ಜಾಡು ಹಿಡಿಯಲು 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ
ಇನ್ನು ಸ್ನೇಹಿತನ ಅಂಗಡಿಗೆ ಹೋಗಿ ಕಾರು ಪರಿಶೀಲಿಸಿದ ಪ್ರಮೋದ್ಗೆ ಶಾಕ್ ಆಗಿದೆ. ತಕ್ಷಣ ಪ್ರಮೋದ್ ವಾಪಸ್ಸು ಬಂದು ನೋಡಿದಾಗ ಬೈಕ್ ಹಾಗೂ ಹಣ ಎರಡೂ ಇರಲಿಲ್ಲ. ಕೂಡಲೇ ಪ್ರಮೋದ್ ಚಂದ್ರ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಬೈಕ್ ಹೊರಟ ಜಾಡು ಕಂಡುಹಿಡಿಯಲು ಒಟ್ಟು 300ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.
ಸದ್ಯ ಹಣ ಎಸ್ಕೇಪ್ ಮಾಡಿದ್ದ ವರುಣ್ ನನ್ನು ವಶಕ್ಕೆ ಪಡೆದು 94 ಲಕ್ಷ ಹಣವನ್ನು ವಾಪಸ್ ಪಡೆಯಲಾಗಿದೆ.
ಹಣ ಸಿಕ್ತು ಅಂತಾ ಮನೆಗೆ ತೆಗೆದುಕೊಂಡು ಹೋಗಿ ಆರೋಪಿಯಾದ, ಮನೆಗೆ ಅಲ್ಲದೇ ನೇರವಾಗಿ ಆ ಹಣವನ್ನ ಪೊಲೀಸರಿಗೆ ಒಪ್ಪಿಸಿದ್ದರೆ ಹೀರೋ ಆಗುತ್ತಿದ್ದ. ಆದ್ದರಿಂದ ಪರರ ವಸ್ತು ಯಾವತ್ತಿದ್ದರೂ ಅದು ಪಾಶಾಣಕ್ಕೆ ಸಮ, ತಮ್ಮಲ್ಲದ ವಸ್ತುಗಳಿಗೆ ಯಾವ ಕಾರಣಕ್ಕೂ ಆಸೆ ಪಡಬಾರದು.
ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ…
ಇಂದು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, 'ಪ್ರಸಾದ್ 2.0' (PRASHAD…
ದೊಡ್ಡಬಳ್ಳಾಪುರ: ಮಹಿಳಾ ದಿನ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತ ಎಂದು…
ಕೇಂದ್ರ ಮೀಸಲು ಪೊಲೀಸ್ ಪಡೆ (CRPF) 87ನೇ ಸ್ಥಾಪನಾ ದಿನಾಚರಣೆ ಹಿನ್ನೆಲೆ ಕರ್ನಾಟಕ ಮತ್ತು ಕೇರಳ ವಲಯದ CRPF ಬೆಂಗಳೂರು…
ಮದ್ಯಪ್ರಾಚ್ಯಗಳ ದೇಶಗಳಲ್ಲಿ ನಡೆಯುತ್ತಿರುವ ಯುದ್ದಗಳಿಂದಾಗಿ ಎಲ್.ಪಿ.ಜಿ ಕೊರತೆ ದೇಶಕ್ಕೆ ಎದುರಾಗಿದೆ. ಹೋಟೆಲ್ ಗಳಲ್ಲಿ ವಾಣಿಜ್ಯ ಸಿಲಿಂಡರ್ ಗಳ ಅಭಾವ ಸೃಷ್ಟಿಯಾಗಿ…
ಮಧ್ಯಪ್ರಾಚ್ಯದಲ್ಲಿ ಯುದ್ಧದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ಅಭಾವದ ಪರಿಸ್ಥಿತಿ ಸೃಷ್ಟಿಯಾಗಿರುವ ವರದಿಗಳ ನಡುವೆ ಗೃಹ ಬಳಕೆಯ…