ದಲಿತ ನಾಯಕರಾದವರೇ ಇಂದು ನಮಗೆ (ಲಂಬಾಣಿ ಜನಕ್ಕೆ) ಅನ್ಯಾಯ ಮಾಡಲು ಹೊರಟಿದ್ದಾರೆ. ನಮ್ಮ ಅಭಿವೃದ್ಧಿಗಾಗಿ ನಾವು ಆಯ್ಕೆ ಮಾಡಿ ಕಳಿಸಿದವರೇ ನಮ್ಮ ಹೊಟ್ಟೆ ಮೇಲೆ ಹೊಡೆಯಲು ಪ್ಲಾನ್ ಮಾಡಿದ್ದಾರೆ. ಒಂದು ಜನಾಂಗದವರನ್ನು ಮೆಚ್ಚಿಸಲು ಮತ್ತೊಂದು ಜನಾಂಗದವರನ್ನು ಸಮಾಧಿ ಮಾಡಲು ಹೊರಟಿದ್ದಾರೆ ಎಂದು ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿಯ ಶಿವಲಿಂಗಪುರ ಜನ ಆರೋಪಿಸಿ ಆಕ್ರೋಶವ್ಯಕ್ತಪಡಿಸಿದ್ದಾರೆ….
ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿಯ ಶಿವಲಿಂಗಪುರದಲ್ಲಿ ಬಚ್ಚಹಳ್ಳಿ ಗ್ರಾಮದ ಸರ್ವೇ ನಂಬರ್ 10 ರಲ್ಲಿ ಸುಮಾರು 50-60 ವರ್ಷಗಳಿಂದ ಸ್ವಾಧೀನದಲ್ಲಿದ್ದೇವೆ. ಇದೀಗ ನಮ್ಮಿಂದ ಈ ಜಮೀನನ್ನು ಕಿತ್ತುಕೊಳ್ಳುವ ಹುನ್ನಾರ ನಡೀತಿದೆ. ಇದು ಸರ್ಕಾರಿ ಗೋಮಾಳ ಕೂಡಲೇ ತೆರವು ಮಾಡಬೇಕು ಎಂದು ಕಂದಾಯ ಇಲಾಖಾ ಅಧಿಕಾರಿಗಳು ಹೇಳುತ್ತಿದ್ದಾರೆ. ದಲಿತರ ಬೊಗಸೆಯಷ್ಟು ಜಾಗ ಕಿತ್ತುಕೊಂಡು ಬದುಕು ನಾಶ ಮಾಡಲು ಹೊರಟಿದ್ದಾರೆ. ನಾವು ಹತ್ತಾರು ಎಕರೆ ಜಗದಲ್ಲಿ ಇಲ್ಲ. ಒಂದು ಗುಂಟೆ ಎರಡು ಗುಂಟೆ ಜಾಗದಲ್ಲಿ ಹಸುಗಳನ್ನು ಕಟ್ಟಿಕೊಂಡು ಅವುಗಳಿಗೆ ಹುಲ್ಲಿನ ಬಣವೆ ಹಾಕಿಕೊಂಡು, ತಿಪ್ಪೆ ಮಾಡಿಕೊಂಡಿದ್ದೇವೆ, ಇದೇ ಜಾಗದಲ್ಲಿ ಸುಮಾರು ವರ್ಷಗಳಿಂದ ವಾಸ ಕೂಡ ಮಾಡ್ತಿದ್ದೇವೆ. ಅಧಿಕಾರಿಗಳು ಈಗ ಈ ಜಾಗವನ್ನು ನಮ್ಮಿಂದ ಕಿತ್ತುಕೊಳ್ಳುವ ನಿರ್ಧಾರ ಮಾಡಿದ್ದಾರೆ. ನಮಗೆ ಈ ಜಾಗ ಬಿಟ್ಟರೆ ಬೇರೆಲ್ಲೂ ಒಂದು ಇಂಚು ಜಾಗ ಇಲ್ಲ ಎಂದು ಹೇಳಿದ್ದಾರೆ..
ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಮೆತ್ತುತ್ತಿದ್ದಾರೆ. ಈ ರೀತಿ ಅನ್ಯಾಯ ಮಾಡಬಾರದು. ಒಂದು ಸಮುದಾಯದವರನ್ನು ಸಮಾಧಿ ಮಾಡಿ ಆ ಸಮಾಧಿ ಮೇಲೆ ಬೇರೊಂದು ಸಮುದಾಯದ ಭವನ ನಿರ್ಮಿಸೋದು ಎಷ್ಟು ಸರಿ. ಉಳ್ಳವರಿಗೆ ಒಂದು ನ್ಯಾಯ ಇಲ್ಲದವರಿಗೆ ಇನ್ನೊಂದು ನ್ಯಾಯ. ಉಳ್ಳವರು ಲಕ್ಷ ಲಕ್ಷ ಹಣ ಕೊಟ್ಟು ಜಮೀನುಗಳನ್ನು ಉಳಿಸಿಕೊಳ್ಳುತ್ತಾರೆ. ಅಧಿಕಾರಿಗಳಿಗೆ ಅಂತವರಿಗೆ ಏನು ಬೇಕಾದರೂ ಮಾಡಿ ಕೊಡುತ್ತಾರೆ. ನಾವು ಎಲ್ಲಿಂದ ಹಣ ತರೋದು, ಕೂಲಿ ಮಾಡೋದು ಜೀವನ ಸಾಗಿಸಲು ಸಾಸಲ್ಲ. ಹೊಟ್ಟೆ ಬಟ್ಟೆ ಕಟ್ಟಿ ನಾಲ್ಕು ಕಾಸು ಉಳಿಸಿ ಇಷ್ಟು ಮನೆ ಕಟ್ಟಿಕೊಂಡು, ಒಂದೆರಡು ಹಸು ಸಾಕಿಕೊಂಡು ಕೂಲಿ ನಾಲಿ ಮಾಡುತ್ತಾ ಬದುಕು ಸಾಗಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹಣ, ಅಧಿಕಾರ ಇರುವವರ ಜಮೀನುಗಳನ್ನು ಬಿಟ್ಟು ನಮ್ಮಂಥ ತಲೆ ಮೇಲೆ ಬಟ್ಟೆ ಇಲ್ಲದವರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಳ್ಳುತ್ತಿದ್ದಾರೆ. ಈ ಜಮೀನು ಕಿತ್ತುಕೊಂಡರೆ ನಾವು ಖಂಡಿತ ಬದುಕುವುದಿಲ್ಲ. ಅಧಿಕಾರಿಗಳ ಮುಂದೆಯೇ ಪ್ರಾಣ ಕಳೆದುಕೊಳ್ಳುತ್ತೇವೆ. ನಮ್ಮ ಬದುಕೇ ಕಿತ್ತುಕೊಂಡಮೇಲೆ ನಾವು ಏಕೆ ಬದುಕಿರಬೇಕು. ಈ ಜಾಗ ಹೊರತುಪಡಿಸಿ ಬೇರೆ ಕಡೆ ಸಾಕಷ್ಟು ಜಮೀನು ಇವೆ. ಅಲ್ಲೆಲ್ಲ ಬಿಟ್ಟು ಪರಿಶಿಷ್ಟ ಜಾತಿಯ ಲಂಬಾಣಿ ಸಮುದಾಯಕ್ಕೆ ಸೇರಿರುವ ನಮ್ಮ ಜಮೀನು ಮೇಲೆ ಕಣ್ಣು ಹಾಕಿದ್ದಾರೆ. ಹಣ ಇರುವವರು ಲಕ್ಷ ಲಕ್ಷ ಕೊಟ್ಟು 2 ಎಕರೆ, 5 ಎಕರೆ, 10 ಎಕರೆ ಜಮೀನು ಮಾಡಿಕೊಳ್ಳುತ್ತಾರೆ. ನಮ್ಮ ಅತ್ರ ಹಣ ಇಲ್ಲ ಕೂಲಿ ಮಾಡಿ ಜೀವನ ಮಾಡೋರು ನಾವೆಲ್ಲಿ ಹಣ ಕೊಟ್ಟು ಜಮೀನು ಮಾಡಿಕೊಳ್ಳಲು ಆಗುತ್ತೆ ಎಂದು ಪ್ರಶ್ನೆ ಮಾಡಿದ್ದಾರೆ.
ನಾವು ಗುಡಿಸಲಿನಲ್ಲಿ ವಾಸ ಮಾಡಿಕೊಂಡು ಬಂದವರು. 2-3 ಬಾರಿ ಗುಡಿಸಲಿಗೆ ಬೆಂಕಿ ಕೂಡ ಬಿದ್ದಿತ್ತು. ನಾವು ತಾಲ್ಲೂಕು ಕಚೇರಿಯಿಂದ ಪಡೆದಿದ್ದ ಸಾಗುವಳಿ ಚೀಟಿ ದಾಖಲೆಗಳು ಸುಟ್ಟುಹೋಗಿವೆ. ನಾವು ಓದು ಬರಹ ಕಲಿತವರಲ್ಲ. ನಮಗೆ ಏನು ಮಾಡಬೇಕೆಂದು ತಿಳಿದಿಲ್ಲ. ಈಗ ನೋಡಿದ್ರೆ ನಮಗೆ ತಿಳಿಸದೇ ಬೇರೆಯವರಿಗೆ ನೀಡಲು ಹೊರಟಿದ್ದಾರೆ. ಈ ಜಮೀನು ಕಿತ್ತುಕೊಂಡರೆ ನಾವೆಲ್ಲಿ ಹೋಗಬೇಕು? ಒಬ್ಬೊಬ್ಬರಿಗೆ 3 ಜನ, 6 ಜನ ಮಕ್ಕಳಿದ್ದಾರೆ. 100 ಕುಟುಂಬ ಇವೆ ಅವರು ಹೇಗೆ ಬದುಕುತ್ತಾರೆ. ಇಲ್ಲಿ ಬಿಟ್ಟು ಕಾಡಿಗೆ ಹೋಗೋಣ ಅಂದ್ರೆ ಅಲ್ಲೂ ಅವಕಾಶ ಇಲ್ಲ. ಇಲ್ಲಿನ ಶಾಸಕರು ಪ್ರಭಾವ ಬಳಸಿ ಲಂಬಾಣಿ ಜನಾಂಗದ ಜಾಗವನ್ನು ಕಿತ್ತುಕೊಂಡು ಬೇರೊಂದು ಜನಾಂಗಕ್ಕೆ ಕೊಡಲು ಹೊರಟಿದ್ದಾರೆ ಎಂದು ಕಿಡಿಕಾರಿದ್ದಾರೆ…
ಈಗೇನಾದರೂ ನಮ್ಮ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡರೆ ನಾವು ಪ್ರಾಣ ಬಿಡುತ್ತೇವೆ ಹೊರೆತು ಜಾಗ ಬಿಡಲ್ಲ. ಚುನಾವಣೆ ಬಹಿಷ್ಕಾಂರ ಹಾಕ್ತೇವೆ, ರಸ್ತೆ ತಡೆದು ಪ್ರತಿಭಟನೆ ಮಾಡ್ತೀವಿ. ನಮಗೆ ನ್ಯಾಯ ಕೊಡಿ ನಮ್ಮ ಜಮೀನು ನಮಗೆ ಉಳಿಸಿ ಕೊಡಿ ನಿಮಗೆ ಕೈ ಮುಗಿದು ಕೇಳಿಕೊಳ್ಳುವುದರ ಜೊತೆಗೆ ಎಚ್ಚರಿಕೆ ನೀಡಿದ್ದಾರೆ.
ದೊಡ್ಡಬಳ್ಳಾಪುರದ ತೇರಿನ ಬೀದಿಯಲ್ಲಿ ಪ್ರಸನ್ನ ಲಕ್ಷ್ಮಿವೆಂಕಟರಮಣ ರಥೋತ್ಸವ ಫೆ.3ರ ಮಂಗಳವಾರ ಅದ್ಧೂರಿಯಾಗಿ ನಡೆಯಿತು. ರಥೋತ್ಸವ ಅಂಗವಾಗಿ ಸಹ್ಯಾದ್ರಿ ಆಸ್ಪತ್ರೆ ವತಿಯಿಂದ…
ರೈತರಿಗೆ ಗುಡ್ ನ್ಯೂಸ್: 'ಪಿ' ನಂಬರ್ ಜಮೀನುಗಳಿಗೆ ಪೋಡಿ ಭಾಗ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಲಾಗಿದೆ. ಬೆಂಗಳೂರು…
ಇಲ್ಲಿದೆ ನೋಡಿ ಕೆಲವು ಕುತೂಹಲಕರ ಅಂಕಿಅಂಶಗಳು ಮತ್ತು ನಮ್ಮ ದೇಶದ ರಿಪೋರ್ಟ್ ಕಾರ್ಡ್..... ಇದು ಪಕ್ಷಾತೀವಾಗಿ ದೇಶದ ವಾಸ್ತವ ಪರಿಸ್ಥಿತಿ...............…
ಯುವ ಕಾಂಗ್ರೆಸ್ ಸಮಿತಿಯ ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಆರ್.ವಿ ಅವರ ಜನ್ಮದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ನಾಯಕರು, ಯುವ ಕಾಂಗ್ರೆಸ್,…
ವಕೀಲರು, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುನಿರಾಜು ಎಸ್.ಡಿ ಅವರ ಜನ್ಮದಿನಾಚರಣೆ ಹಿನ್ನೆಲೆ ಕಾಂಗ್ರೆಸ್ ನಾಯಕರು, ಯುವ ಕಾಂಗ್ರೆಸ್, ಮುಖಂಡರು, ಕಾರ್ಯಕರ್ತರು,…
ಬೆಂಗಳೂರು , ವೈಟ್ಫೀಲ್ದ್ - 48 ವರ್ಷದ ಉನ್ನಿಕೃಷ್ಣನ್ ಅವರ ಜೀವನ ಹಲವು ವರ್ಷಗಳಿಂದ ಡಯಾಲಿಸಿಸ್, ಔಷಧ ಮತ್ತುಬದುಕುವ ನಿರೀಕ್ಷೆಯಲ್ಲೇ…