Categories: Crime

ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ: ಇಟ್ಟಿಗೆಯಿಂದ ಪತಿ ತಲೆ ಜಜ್ಜಿ ಕೊಂದ ಪತ್ನಿ: ಸತ್ತ ಗಂಡನ ಎದೆಯ ಮೇಲೆ ಕುಳಿತು ತಲೆಯನ್ನು ಹರಿದು ಮಾಂಸದ ತುಂಡುಗಳನ್ನು ಎಸೆದ ಪತ್ನಿ

ಉತ್ತರಪ್ರದೇಶ ಶಹಜಹಾನ್‌ಪುರ ಜಿಲ್ಲೆಯ ಹಥೋಡಾ ಗ್ರಾಮದಲ್ಲಿ ಗಾಯತ್ರಿ ದೇವಿ ಎಂಬಾಕೆ ತನ್ನ 40 ವರ್ಷದ ಪತಿ ಸತ್ಯಪಾಲ್‌ನ ತಲೆಯನ್ನು ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದಲ್ಲದೇ ಸತ್ತ ಗಂಡನ ಎದೆಯ ಮೇಲೆ ಕುಳಿತು 10 ನಿಮಿಷಗಳ ಕಾಲ ಅವನ ತಲೆಯನ್ನು ಹರಿದು ಮಾಂಸದ ತುಂಡುಗಳನ್ನು ಎಸೆಯುತ್ತಲೇ ಇದ್ದಳು. ಈ‌ ವೇಳೆ ಪೊಲೀಸರು ಅಲ್ಲಿದ್ದರೂ‌ ಸಹ, ನಿರೀಕ್ಷೆಯಂತೆ ಅಬಲಾ ನಾರಿಯ ಮುಂದೆ ಅಸಹಾಯಕರಾಗಿದ್ದರು.

ಈ ಘಟನೆ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ‌ ವೈರಲ್ ಆಗಿದೆ.

ಕೊಲೆಗೆ ಕಾರಣ ಕೌಟುಂಬಿಕ ಕಲಹ ಎನ್ನಲಾಗಿದೆ. ಮೃತ ಸತ್ಯಪಾಲ್ ಮತ್ತು ಪತ್ನಿ ಗಾಯತ್ರಿ ದೇವಿ ಕೊಲೆಗೂ ಮುನ್ನ ತೀವ್ರ ಜಗಳವಾಡಿದ್ದರು. ಮೃತ ಪತಿಯು ಮನೆಯಲ್ಲಿ ನಡೆದ ಜಗಳದಲ್ಲಿ ತನ್ನ ಹೆಂಡತಿಯನ್ನು ತೀವ್ರವಾಗಿ ಹೊಡೆದಿದ್ದನು. ಇದಕ್ಕೆ ಪ್ರತೀಕಾರವಾಗಿ ದೇವಿ ತನ್ನ ಗಂಡನ ತಲೆಗೆ ಇಟ್ಟಿಗೆಯಿಂದ ಹಲವಾರು ಬಾರಿ ಹೊಡೆದಿದ್ದಾಳೆ, ಅದು ಅಂತಿಮವಾಗಿ ಅವನ ಸಾವಿಗೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ನನ್ನ ಪತಿ ಕ್ರೂರಿ ಎಂದು ಪೊಲೀಸ್ ವಿಚಾರಣೆಯಲ್ಲಿ ಕೊಲೆ ಆರೋಪಿ ಗಾಯತ್ರಿ ದೇವಿ ತಿಳಿಸಿದ್ದಾಳೆ.

ಪತ್ನಿ 300 ರೂ.ಕೊಡದಿದ್ದಾಗ ಹೊಡೆಯಲು ಕೋಲು ಕೈಗೆತ್ತಿಕೊಂಡು ಆಕೆಗೆ ಹೊಡೆದಿದ್ದಾನೆ. ನಂತರ ಮನೆಯಲ್ಲಿ ಬಿದ್ದಿದ್ದ ಇಟ್ಟಿಗೆಯನ್ನೂ ಎತ್ತಿಕೊಂಡು ತಲೆ ಬೀಸಿದ್ದಾನೆ. ಇದಾದ ನಂತರ ದೇವಿಯ ಕೋಪ ಹೆಚ್ಚಾಗಿ‌ ಅದೇ ಇಟ್ಟಿಗೆಯಿಂದ ತನ್ನ ಪತಿಯ ತಲೆಗೆ ಹೊಡೆಯುತ್ತಲೇ ಇದ್ದಳು. ಘಟನೆಯ ಸಮಯದಲ್ಲಿ ಕೋಪದಿಂದ ಅವಳು ಪ್ರಜ್ಞೆ ಕಳೆದುಕೊಂಡಿದ್ದಳು ಎನ್ನಲಾಗಿದೆ.

ಪೊಲೀಸರಿಂದ ತನಿಖೆ ಮುಂದುವರಿದಿದೆ.

Ramesh Babu

Journalist

Recent Posts

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿಯಿರುವ 56…

11 hours ago

ಮಹತ್ವಾಕಾಂಕ್ಷಿ ಕ್ವಿನ್ ಸಿಟಿಗೆ ಮೊದಲ ಬೃಹತ್ ಹೂಡಿಕೆ ಒಪ್ಪಂದ

ಬೆಂಗಳೂರು ಗ್ರಾಮಾಂತರ: ಡಾಬಸಪೇಟೆ-ದೊಡ್ಡಬಳ್ಳಾಪುರ ನಡುವೆ ರಾಜ್ಯ ಸರ್ಕಾರ ಅಭಿವೃದ್ಧಿಪಡಿಸುತ್ತಿರುವ ಮಹತ್ವಾಕಾಂಕ್ಷಿ ‘ಕ್ವಿನ್ ಸಿಟಿ’ (KWINCity) ಯೋಜನೆಗೆ ಮೊದಲ ಬೃಹತ್ ಹೂಡಿಕೆ…

22 hours ago

108 ಅರೋಗ್ಯ ಕವಚ ಕೇಂದ್ರೀಕೃತ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರ ಉದ್ಘಾಟನೆ

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಆ್ಯಂಬುಲೆನ್ಸ್ ಸೇವೆ ಲಭ್ಯವಾಗಲಿದ್ದು, ಈ ಸೇವೆ ಪರಿಣಾಮಕಾರಿಯಾಗಿ ಜನರಿಗೆ ತಲುಪಬೇಕು ಎನ್ನುವುದು ನನ್ನ…

22 hours ago

SIR ಜಾಗೃತಿ ಹಾಗೂ ಮತದಾರರ ಪಟ್ಟಿಯ ಸಂರಕ್ಷಣೆ ಕಾರ್ಯಕ್ಕೆ ಆದ್ಯತೆ: ಡಿಸಿಎಂ ಡಿ.ಕೆ. ಶಿವಕುಮಾರ್

ದೇವನಹಳ್ಳಿ: ಮತದಾರರ ವಿಶೇಷ ತೀವ್ರ ಪಟ್ಟಿ ಪರಿಷ್ಕರಣೆ (SIR) ಹಾಗೂ ಜಿಬಿಎ ಚುನಾವಣೆ ಸಂಬಂಧ ಪಕ್ಷದ ಎಲ್ಲಾ ಮುಖಂಡರು ಮತ್ತು…

1 day ago

ಸಚಿವ ಸ್ಥಾನ ತ್ಯಾಗ ಮಾಡುವ ವಿಚಾರ “ಹೈಕಮಾಂಡ್ ತೀರ್ಮಾನಕ್ಕೆ ಬದ್ದ”- ಸಚಿವ ಕೆ.ಎಚ್ ಮುನಿಯಪ್ಪ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಕೆ.ಎಚ್ ಮುನಿಯಪ್ಪ ಮಹತ್ವದ ರಾಜಕೀಯ ಹಾಗೂ ಅನ್ನಭಾಗ್ಯ ಯೋಜನೆ…

1 day ago

ಬಿಜೆಪಿ – ಕಾಂಗ್ರೆಸ್ ನಡುವೆ SIR ಫೈಟ್: ಕಾಂಗ್ರೆಸ್ ನಾಯಕರ ವಿರುದ್ಧ ಸಂಸದ ಡಾ.ಕೆ.ಸುಧಾಕರ್ ಕಿಡಿ

ಬೆಂಗಳೂರು ಗ್ರಾಮಾಂತರ: ಮತದಾರರ ವಿಶೇಷ ತೀವ್ರ ಪಟ್ಟಿ ಪರಿಷ್ಕರಣೆ (SIR) ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ರಾಜಕೀಯ…

1 day ago