ದೊಡ್ಡಬಳ್ಳಾಪುರ: ಪತಂಗ ಮತ್ತು ಚಿಟ್ಟೆಗಳೆರಡು ಒಂದೇ ಗುಂಪಿಗೆ ಸೇರಿದ ಕೀಟಗಳಾದರೂ ಎರಡರ ಉಪಗುಂಪುಗಳು ಬೇರೆ ಬೇರೆ. ಭೂಮಿಯ ಮೇಲೆ ಸುಮಾರು 1,40,000 ಪತಂಗದ ಪ್ರಭೇದಗಳಿದ್ದು,18,000 ಚಿಟ್ಟೆಯ ಪ್ರಭೇದಗಳಿವೆ. ನಮ್ಮ ದೇಶದಲ್ಲಿ 12,000 ಪತಂಗದ ಪ್ರಭೇದಗಳಿದ್ದರೆ, 1,400 ಚಿಟ್ಟೆಯ ಪ್ರಭೇದಗಳಿವೆ. ಭೂಮಿಯ ಮೇಲೆ ಚಿಟ್ಟೆಗಳಿಗಿಂತ ಮೊದಲೇ ಪತಂಗಗಳ ವಿಕಾಸಗೊಂಡವು. ಆದರೂ, ಚಿಟ್ಟೆಗಳಷ್ಟು ಪತಂಗಗಳು ಜನರ ಗಮನ ಸೆಳೆದಿಲ್ಲ. ಇದಕ್ಕೆ ಕಾರಣ ಹೆಚ್ಚಿನ ಪತಂಗ ಪ್ರಭೇದಗಳು ನಿಶಾಚರಿ ಮತ್ತು ಇದರ ಬಣ್ಣ ಮತ್ತು ವಿನ್ಯಾಸಗಳು ಆಕರ್ಷಕವಾಗಿದ್ದರೂ ಪರಿಸರದಲ್ಲಿ ಚಿಟ್ಟೆಗಳಂತೆ ಎದ್ದು ಕಾಣುವುದಿಲ್ಲ. ಈ ಕಾರಣಗಳಿಂದಲೇ ಪತಂಗಗಳ ಮೇಲೆ ಅಧ್ಯಯನಗಳು ಕಡಿಮೆ ಮತ್ತು ಚಿಟ್ಟೆಯ ಛಾಯಾಚಿತ್ರಗಳಷ್ಟು ಪತಂಗಗಳ ಛಾಯಾಚಿತ್ರಗಳ ದಾಖಲೆ ಕಡಿಮೆ ಎನ್ನುತ್ತಾರೆ ಚಿಟ್ಟೆಗಳ ಕುರಿತು ವಿಶೇಷ ಅಧ್ಯಯನ ನಡೆಸುತ್ತಿರುವ ಹಾಗೂ ಛಾಯಾಚಿತ್ರ ಗ್ರಾಹಕ ವೈ.ಟಿ.ಲೋಹಿತ್.
ಪತಂಗ ಮತ್ತು ಚಿಟ್ಟೆಗಳಿಗೆ ಇರುವ ವ್ಯತ್ಯಾಸ:
ಹೆಚ್ಚಿನ ಪಂತಂಗಗಳು(ಮಾತ್,Moth)ನಿಶಾಚರಿಗಳಾಗಿದ್ದು ರಾತ್ರಿ ವೇಳೆ ಮಾತ್ರ ಸಂಚರಿಸುತ್ತವೆ. ಪರಿಸರದಲ್ಲಿ ಮಿಲನಗೊಂಡು ಎದ್ದು ಕಾಣದ ಬಣ್ಣಗಳು, ತೆಳ್ಳಗಿನ ದಾರದಂತಿರುವ ಮತ್ತು ಗರಿಗಳಂತಿರುವ ಆಂಟೆನಗಳು, ಆಹಾರ ಸೇವನೆಗೆ ಕೊಳವೆಯಾಕಾರದ ಪ್ರೊಬೋಸಿಸ್ ಒಳಗೊಂಡಿರುತ್ತವೆ. ಕೆಲವೊಂದು ಪ್ರಭೇದದ ಪತಂಗಗಳಲ್ಲಿ ಮಾತ್ರ ಇರುವುದಿಲ್ಲ. ಹೆಚ್ಚಿನ ಪ್ರಭೇದಗಳಲ್ಲಿ ಕಂಬಳಿ ಹುಳುಗಳ ಕೂದಲುಗಳು ಅಥವಾ ಮುಳ್ಳಿನ ಆಕಾರವನ್ನು ಹೊಂದಿರುತ್ತವೆ. ಕೆಲ ಪ್ರಭೇದಗಳು ಕಂಬಳಿ ಹುಳುಗಳು ಗುಂಪಾಗಿ ಇರುತ್ತವೆ. ರೇಷ್ಮೆಯಂತ ಗೂಡಿನೊಳಗೆ ಕೋಶಾವಸ್ಥೆಯನ್ನು (ಪೊರೆಹುಳು) ಕಳೆಯುತ್ತವೆ.
ಪರಿಸರದ ಉಳುವಿನಲ್ಲಿ ಪತಂಗಳ ಪಾತ್ರವು ಮಹತ್ವದ್ದಾಗಿದೆ. ಇವುಗಳ ಸಂತತಿಯ ಬೆಳವಣಿಗೆಗೆ ಅಗತ್ಯ ವಾತಾವರಣವನ್ನು ಸೃಷ್ಠಿಸುವುದು ಹಾಗೂ ಇವುಗಳ ಮಹತ್ವದ ಅರಿವನ್ನು ಜನರಲ್ಲಿ ಮೂಡಿಸಬೇಕಿದೆ. ಪತಂಗಳು ಸಹ ಪರಿಸರದಲ್ಲಿನ ಇತರೆ ಪ್ರಾಣಿ, ಪಕ್ಷಿ, ಕೀಟಗಳಷ್ಟೆ ಪ್ರಮುಖವಾಗಿವೆ.
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ–648ರಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ…
ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ…
ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…
ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…
ಬಾಶೆಟ್ಟಿಹಳ್ಳಿ ಬಳಿ ಭೀಕರ ಅಪಘಾತವಾಗಿ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಯುವತಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ…
ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಕ್ಕೆ ಹೆಣ್ಣು ಕೊಟ್ಟ ಮಾವನನ್ನೇ ಅಳಿಯ ಕೊಲೆಗೈದ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ನೇರಳೇಘಟ್ಟ…