ಪಕ್ಷ ಸಂಘಟನೆ ಹಾಗೂ ಸಾಮಾಜಿಕ ಸೇವೆಯೇ ಹರೀಶ್ ಗೌಡರ ಕೊಡುಗೆ: ಹರೀಶ್ ಗೌಡರ ಕೊಡುಗೆ ಪ್ರಶ್ನಿಸಿದವರಿಗೆ ತಿರುಗೇಟು ಕೊಟ್ಟ ಮುಖಂಡರು

ಇತ್ತೀಚೆಗೆ ಬಿಜೆಪಿ ಹಾಗೂ ಜೆಡಿಎಸ್ ನ ಕೆಲ ಮುಖಂಡರಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಹರೀಶ್ ಗೌಡರ ಸ್ಥಾನ ಮತ್ತು ತಾಲೂಕಿಗೆ ನೀಡಿದ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ನಮ್ಮ ಗ್ರಾಮಕ್ಕೆ ಹರೀಶ್ ಗೌಡರನ್ನು ಮೊದಲು ಕರೆತಂದಿದ್ದು ಪ್ರಶ್ನೆ ಮಾಡಿದ್ದ ವಸಂತ್ ರವರು. ಆದರೆ, ಈಗ ಅವರೇ ಹರೀಶ್ ಗೌಡರ ಕೊಡುಗೆ ಏನು ಎಂದು ಪ್ರಶ್ನೆ ಮಾಡುವುದು ಹಾಸ್ಯಸ್ಪದವಾಗಿದೆ. ಸಾರ್ವಜನಿಕ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸುವ ಅವರು ಗ್ರಾಮದ ದೇವಸ್ಥಾನಗಳ ಅಭಿವೃದ್ಧಿ, ಗ್ರಾಮಸ್ಥರ ಆರೋಗ್ಯ ಸಮಸ್ಯೆಗಳಾದಲ್ಲಿ ಹಲವರು ಬಾರಿ ಧನ ಸಹಾಯವನ್ನು ಮಾಡಿದ್ದಾರೆ ಎಂದು ದೊಡ್ಡತುಮಕೂರು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಪ್ರಭಾಕರ್ ಹೇಳಿದರು

ಇಂದು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಹರೀಶ್ ಗೌಡರು ಅಧಿಕಾರ ಸ್ವೀಕರಿಸಿ ತಾಲ್ಲೂಕಿನಲ್ಲಿ ಜೆಡಿಎಸ್ ಬಲವರ್ಧನೆ ಹಾಗೂ ಪಕ್ಷ ಸಂಘಟನೆಗೆ ಹಗಲಿರುಳು ಶ್ರಮಿಸುತ್ತಿರುವುದು ನಮಗೆಲ್ಲ ತಿಳಿದಿದೆ ಎಂದು ಪ್ರಶ್ನೆ ಮಾಡಿದವರಿಗೆ ತಿರುಗೇಟು ಕೊಟ್ಟರು.

ಜೆಡಿಎಸ್ ನಲ್ಲಿ ಇಬ್ಬಾಗವಾಗಿದೆ ಎಂದು ಬಿಜೆಪಿ ಮುಖಂಡ ಮಂಜುನಾಥ್ ಮಾತುಗಳಿಗೆ ಉತ್ತರಿಸುತ್ತಾ… ಜೆಡಿಎಸ್ ಇಬ್ಬಾಗವಾಗಿಲ್ಲ… ಜೆಡಿಎಸ್ ಕಾರ್ಯಕರ್ತರು ಸದಾ ಒಮ್ಮತದ ನಿರ್ಧಾರದಿಂದ ಜೊತೆಯಲ್ಲಿದ್ದೇವೆ ಎಂದರು. ಹರೀಶ್ ಗೌಡರ ಮುಖಕ್ಕೆ ಮಸಿ ಬಳಿಯುತ್ತವೆ ಎಂಬ ಹೇಳಿಕೆ ಸಲ್ಲದು. ಹರೀಶ್ ಗೌಡರ ಮುಖಕ್ಕೆ ಮಸಿ ಬಳಿಯುತ್ತೇವೆ ಎನ್ನುವ ಮನಸ್ಥಿತಿ ಕುರಿತು ಶಾಸಕರು ತಮ್ಮ ಹಿಂಬಾಲಕರಿಗೆ ಬುದ್ದಿ ಹೇಳಬೇಕಿದೆ. ಈ ಕುರಿತು ಹೇಳಿಕೆ ನೀಡಿದವರ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗುತ್ತೆವೆ. ಶಾಸಕರು ತಮ್ಮ ಹಿಂಬಾಲಕರಿಗೆ ಈ ಮನಸ್ಥಿತಿಯನ್ನು ಕೈಬಿಡುವಂತೆ ಬುದ್ದಿ ಹೇಳಬೇಕಿದೆ ಎಂದು ಆಗ್ರಹಿಸಿದರು.

ಕೆಪಿಸಿಸಿ ಎಸ್ ಸಿ ಘಟಕದ ರಾಜ್ಯ ಸಂಚಾಲಕ ಸಿ.ರಾಮಕೃಷ್ಣಪ್ಪ ಮಾತನಾಡಿ, ದೊಡ್ಡತುಮಕೂರು ವ್ಯವಸಾಯ ಸೇವಾ ಸಹಕಾರಿ ಸಂಘ (ವಿಎಸ್ಎಸ್ಎನ್) ಮೂರು ಲಕ್ಷ ನಷ್ಟದಲ್ಲಿದೆ. ಇದರ ನಡುವೆ ರಾಜಕೀಯ ಕಿತ್ತಾಟದಿಂದ ಸಂಘ ಹಳ್ಳ ಹಿಡಿಯುತ್ತಿದೆ. ಸಹಕಾರಿ ಸಂಘ ಕನಿಷ್ಠ 10 ಸಾವಿರ ಲಾಭ ಗಳಿಸದಿದ್ದಲ್ಲಿ ಸಂಘವು ಸೂಪರ್ ಸೀಡ್ ಆಗುವ ಆತಂಕ ಸಹ ಇದೆ. ಮತ್ತೆ ಸಂಘವನ್ನ ಕಟ್ಟುವುದು ಅಸಾಧ್ಯವಾದ ಮಾತು. ರಾಜಕೀಯ ಕಿತ್ತಾಟ ಬಿಟ್ಟು ಗ್ರಾಮದ ಅಭಿವೃದ್ಧಿಗಾಗಿ ದುಡಿಯೋಣ ಎಂದು ಹೇಳಿದರು.

ಸಂಘ ಪ್ರಾರಂಭವಾದ ಸಮಯದಲ್ಲಿ ಸರ್ವ ಪಕ್ಷಗಳಿಗೆ ಸಮಪಾಲು ನೀಡಿ ಪ್ರಾರಂಭಿಸಿದೆವು, ಆದರೆ, ಈ ಒಪ್ಪಂದವನ್ನು ಬಿಜೆಪಿ ಪರಿಪಾಲನೆ ಮಾಡದ ಕಾರಣ ಚುನಾವಣೆಗೆ ಮುಂದಾಗಬೇಕಾಯಿತು. ಚುನಾವಣೆ ಫಲಿತಾಂಶ ವೇಳೆ ಗಲಾಟೆಯಾದಾಗ ಸ್ಥಳಕ್ಕೆ ಬಂದ ಶಾಸಕರು, ಷೇರುದಾರರ ಅಹವಾಲುಗಳನ್ನು ಅಲಿಸದೇ ಬಿಜೆಪಿ ಪಕ್ಷದ ಪರ ನಿಂತು ಪ್ರತಿಭಟನೆಗೆ ಮುಂದಾಗುತ್ತಾರೆ. ಶಾಸಕರು ಕೇವಲ ಒಂದು ಪಕ್ಷದ ಶಾಸಕರಲ್ಲ, ತಾಲ್ಲೂಕಿನ ಪ್ರಥಮ ಪ್ರಜೆ, ಸರ್ವರಿಗೂ ಹಿತ ಕಾಯುವ ಕಾರ್ಯ ಕೆಲಸ ಮಾಡುವುದನ್ನ ಅವರು ಅರಿಯಬೇಕಿದೆ ಎಂದರು.

ಜೆಡಿಎಸ್ ಮುಖಂಡ ದೀಪು ಮಾತನಾಡಿ, ಇದು ನಮ್ಮ ದೊಡ್ಡತುಮಕೂರಿನ ಮೊದಲ ಚುನಾವಣೆ. ಈ ಚುನಾವಣೆಯಲ್ಲಿ ಸತತವಾಗಿ ಮೈತ್ರಿಗೆ ಪ್ರಯತ್ನ ಮಾಡಿದ್ದೇವು. ಆದರೆ, ಬಿಜೆಪಿ ಒಪ್ಪದ ಕಾರಣ ಈ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆಗೆ ವೆಚ್ಚ ಮಾಡಿದ ಹಣವನ್ನು ಗ್ರಾಮದ ಅಭಿವೃದ್ಧಿಗೆ ಬಳಸಿದ್ದರೆ ಅದೆಷ್ಟೋ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದಿತ್ತು. ಚುನಾವಣೆ ನಡೆಸಲು ಇದ್ದ ಬದ್ಧತೆ ಗ್ರಾಮದ ಅಭಿವೃದ್ಧಿಗೆ ಬಳಸಿ ಎಂದರು.

ಸುದ್ದಿಗೊಷ್ಟಿಯಲ್ಲಿ ಮುಖಂಡರಾದ ಚೈತ್ರ ಭಾಸ್ಕರ್, ವಿರೇಗೌಡ, ಅಜಯ್, ಮಂಜುನಾಥ್, ಚೈತ್ರ ಶ್ರೀಧರ್, ಪ್ರವೀಣ್ ಶಾಂತಿನಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಅಕ್ಷರ ಜ್ಞಾನದ ಬೆಳಕಿನಲ್ಲಿ ಗ್ರಾಮಾಂತರ; ಸಂಪೂರ್ಣ ಸಾಕ್ಷರತೆಯತ್ತ ದಾಪುಗಾಲು!

ಬೆಂಗಳೂರು ಗ್ರಾಮಾಂತರ: ಶಿಕ್ಷಣದ ಮಹತ್ವದ ಅರಿವು, ಶಾಲಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ವಯಸ್ಕರ ಶಿಕ್ಷಣ ಹಾಗೂ ನಿರಂತರ ಸಾಕ್ಷರತಾ ಕಾರ್ಯಕ್ರಮಗಳ…

2 hours ago

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

15 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

17 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

17 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

18 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

22 hours ago