ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವೀನ್ ಡೇ ಸಂಭ್ರಮಾಚರಣೆ: ಯಕ್ಷ-ಯಕ್ಷಣಿಯರ ವೇಷ ಧರಿಸಿ ಗಮನ ಸೆಳೆದ ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿ

ಎಲ್ಲಾ ಸಂತರ ಕ್ರಿಶ್ಚಿಯನ್ ಹಬ್ಬದ ಮುನ್ನಾದಿನದಂದು ಹ್ಯಾಲೋವೀನ್ ದಿನವನ್ನು ಆಚರಿಸಲಾಗುತ್ತದೆ. ಚರ್ಚ್‌ನ ಸಂತರನ್ನು ಗೌರವಿಸಲು ಇದನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಆದ್ದರಿಂದ ಪ್ರಪಂಚದಾದ್ಯಂತ ಹ್ಯಾಲೋವೀನ್ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.

ಅದೇರೀತಿ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವಿನ್ ಡೇ ಆಚರಣೆ ಮಾಡಲಾಗಿದ್ದು, ಹಬ್ಬದ ಸಂಪ್ರದಾಯದಂತೆ ಶಾಲಾ ಪುಠಾಣಿಗಳು ವಿಭಿನ್ನವಾದ ಪ್ರೇತಗಳ ವೇಷ ಧರಿಸಿ ಗಮನ ಸೆಳೆದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿದ್ದ “ಹಲೋ ವಿನ್ ಡೇ ಸೆಲೆಬ್ರೇಷನ್” ಈಗ ನಮ್ಮ ಎನ್‌.ಪಿ.ಎಸ್ ನಲ್ಲೂ ಆಚರಿಸಲಾಗಿದೆ. ಇದು ಒಂದು ಕ್ರಿಶ್ಚಿಯನ್ ಸಮುದಾಯದ ಆಚರಣೆಯಾಗಿದೆ. ಪೂರ್ವಿಕರ ಆತ್ಮಗಳನ್ನು ಆರಾಧಿಸುವ ಸಲುವಾಗಿ ಆಚರಣೆಯಲ್ಲಿದ್ದ ಹಾಲೋಯಿಂಗ್ ಡೇ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದೆ. ವಿವಿಧ ರೀತಿಯ ಭಯಾನಕ ನೋಟ, ಯಕ್ಷ-ಯಕ್ಷಣಿಯರು, ಮಾಟಗಾತಿಯರ ಹಾಗೆ ವಿನ್ಯಾಸದ ಉಡುಗೆ ತೊಡುಗೆಗಳನ್ನು ಧರಿಸಿದ್ದರು ಹಾಗೂ ಮಕ್ಕಳ ಜೊತೆ ಶಿಕ್ಷಕರು ಭಾಗಿಯಾಗಿ ಸಂಭ್ರಮಿಸಿದರು ಎಂದು ನ್ಯಾಷನಲ್ ಪ್ರೈಡ್ ಸ್ಕೂಲ್ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೈಡ್ ಸ್ಕೂಲ್ ಅಧ್ಯಕ್ಷರಾದ ಸತೀಶ್ ಕುಮಾರ್ , ಆಡಳಿತಾಧಿಕಾರಿ ಬಿಂದು ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಹ್ಯಾಲೋವೀನ್ ದಿನವನ್ನು ಏಕೆ ಆಚರಿಸಲಾಗುತ್ತದೆ?

ಚರ್ಚ್‌ನ ಸಂತರನ್ನು ಗೌರವಿಸಲು ಹ್ಯಾಲೋವೀನ್ ದಿನವನ್ನು ಆಚರಿಸಲಾಗುತ್ತದೆ.  ಹ್ಯಾಲೋವೀನ್‌ನ ಮೂಲವು 2,000 ವರ್ಷಗಳ ಹಿಂದೆ ಯುನೈಟೆಡ್ ಕಿಂಗ್‌ಡಮ್, ಉತ್ತರ ಫ್ರಾನ್ಸ್ ಮತ್ತು ಐರ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಸೆಲ್ಟಿಕ್ ತಮ್ಮ ಹಬ್ಬವನ್ನು ಸಂಹೈನ್ ಎಂದು ಆಚರಿಸುತ್ತಿದ್ದರು. ಇದು ಬೇಸಿಗೆಯ ಅಂತ್ಯ ಮತ್ತು ಶೀತ ಚಳಿಗಾಲದ ದಿನಗಳ ಆರಂಭವನ್ನು ಗುರುತಿಸಿತು, ಅದು ಆ ಸಮಯದಲ್ಲಿ ಕೊಳೆತ ಮತ್ತು ಸಾವಿನೊಂದಿಗೆ ಸಂಬಂಧ ಹೊಂದಿತ್ತು. ಇದನ್ನು ತಪ್ಪಿಸಲು, ಜನರು ದೀಪೋತ್ಸವದ ಸುತ್ತಲೂ ದುಷ್ಟಶಕ್ತಿಗಳಿಂದ ರಕ್ಷಿಸಲು ಪ್ರಾರ್ಥಿಸುತ್ತಾರೆ.

ಹ್ಯಾಲೋವೀನ್ ದಿನವನ್ನು ಅ. 31 ರಂದೇ ಏಕೆ ಆಚರಿಸಲಾಗುತ್ತದೆ?

ಸೆಲ್ಟಿಕ್ ನಂಬಿಕೆಗಳ ಪ್ರಕಾರ, ಈ ದಿನವು ಬೇಸಿಗೆಯ ಅಂತ್ಯ ಮತ್ತು ಕತ್ತಲೆಯ ಸಮಯದ ಆರಂಭವನ್ನು ಸೂಚಿಸುತ್ತದೆ. ಅಕ್ಟೋಬರ್ 31 ರಂದು ಸತ್ತವರ ಮತ್ತು ಬದುಕಿರುವವರ ಪ್ರಪಂಚದ ನಡುವಿನ ಗಡಿರೇಖೆಯು ಮಸುಕಾಗುತ್ತದೆ. ಸತ್ತವರ ಪ್ರೇತಗಳು ಅಕ್ಟೋಬರ್ 31 ರ ರಾತ್ರಿ ಜಗತ್ತಿಗೆ ಮರಳಿದವು ಎಂಬ ನಂಬಿಕೆ ಇದೆ. ಆದ್ದರಿಂದ ಈ ಆಚರಣೆ ಮಾಡಲಾಗುತ್ತಿದೆ.

Ramesh Babu

Journalist

Recent Posts

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

10 hours ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

1 day ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

1 day ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

1 day ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

2 days ago

ಹೆದ್ದಾರಿ ಸ್ಕೈವಾಕ್‌ಗಳ ಕನಸು ಇನ್ನೂ ಅಪೂರ್ಣ…: ದಾಬಸ್‌ಪೇಟೆ–ಹೊಸಕೋಟೆ ಹೆದ್ದಾರಿಯಲ್ಲಿ ಆಮೆಗತಿಯ ಕಾಮಗಾರಿ: ಜೀವ ಕೈಯಲ್ಲಿ ಹಿಡಿದು ರಸ್ತೆ ದಾಟುವ ಜನರು

ಬೆಂಗಳೂರು ಗ್ರಾಮಾಂತರ: ರಾಜ್ಯದ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿರುವ 84 ಕಿ.ಮೀ. ಉದ್ದದ ದಾಬಸ್‌ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿ-648ರಲ್ಲಿ ಸಾರ್ವಜನಿಕರ ಸುರಕ್ಷಿತ…

2 days ago