ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವೀನ್ ಡೇ ಸಂಭ್ರಮಾಚರಣೆ: ಯಕ್ಷ-ಯಕ್ಷಣಿಯರ ವೇಷ ಧರಿಸಿ ಗಮನ ಸೆಳೆದ ಮಕ್ಕಳು ಹಾಗೂ ಶಿಕ್ಷಕ ಸಿಬ್ಬಂದಿ

ಎಲ್ಲಾ ಸಂತರ ಕ್ರಿಶ್ಚಿಯನ್ ಹಬ್ಬದ ಮುನ್ನಾದಿನದಂದು ಹ್ಯಾಲೋವೀನ್ ದಿನವನ್ನು ಆಚರಿಸಲಾಗುತ್ತದೆ. ಚರ್ಚ್‌ನ ಸಂತರನ್ನು ಗೌರವಿಸಲು ಇದನ್ನು ಪ್ರತಿ ವರ್ಷ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಆದ್ದರಿಂದ ಪ್ರಪಂಚದಾದ್ಯಂತ ಹ್ಯಾಲೋವೀನ್ ದಿನವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ.

ಅದೇರೀತಿ ನಗರದ ನ್ಯಾಷನಲ್ ಪ್ರೈಡ್ ಸ್ಕೂಲ್ ನಲ್ಲಿ ಹ್ಯಾಲೋವಿನ್ ಡೇ ಆಚರಣೆ ಮಾಡಲಾಗಿದ್ದು, ಹಬ್ಬದ ಸಂಪ್ರದಾಯದಂತೆ ಶಾಲಾ ಪುಠಾಣಿಗಳು ವಿಭಿನ್ನವಾದ ಪ್ರೇತಗಳ ವೇಷ ಧರಿಸಿ ಗಮನ ಸೆಳೆದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಚಾಲ್ತಿಯಲ್ಲಿದ್ದ “ಹಲೋ ವಿನ್ ಡೇ ಸೆಲೆಬ್ರೇಷನ್” ಈಗ ನಮ್ಮ ಎನ್‌.ಪಿ.ಎಸ್ ನಲ್ಲೂ ಆಚರಿಸಲಾಗಿದೆ. ಇದು ಒಂದು ಕ್ರಿಶ್ಚಿಯನ್ ಸಮುದಾಯದ ಆಚರಣೆಯಾಗಿದೆ. ಪೂರ್ವಿಕರ ಆತ್ಮಗಳನ್ನು ಆರಾಧಿಸುವ ಸಲುವಾಗಿ ಆಚರಣೆಯಲ್ಲಿದ್ದ ಹಾಲೋಯಿಂಗ್ ಡೇ ಈಗ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದೆ. ವಿವಿಧ ರೀತಿಯ ಭಯಾನಕ ನೋಟ, ಯಕ್ಷ-ಯಕ್ಷಣಿಯರು, ಮಾಟಗಾತಿಯರ ಹಾಗೆ ವಿನ್ಯಾಸದ ಉಡುಗೆ ತೊಡುಗೆಗಳನ್ನು ಧರಿಸಿದ್ದರು ಹಾಗೂ ಮಕ್ಕಳ ಜೊತೆ ಶಿಕ್ಷಕರು ಭಾಗಿಯಾಗಿ ಸಂಭ್ರಮಿಸಿದರು ಎಂದು ನ್ಯಾಷನಲ್ ಪ್ರೈಡ್ ಸ್ಕೂಲ್ ಅಧ್ಯಕ್ಷ ಸತೀಶ್ ಕುಮಾರ್ ಹೇಳಿದರು.

ಕಾರ್ಯಕ್ರಮದಲ್ಲಿ ನ್ಯಾಷನಲ್ ಪ್ರೈಡ್ ಸ್ಕೂಲ್ ಅಧ್ಯಕ್ಷರಾದ ಸತೀಶ್ ಕುಮಾರ್ , ಆಡಳಿತಾಧಿಕಾರಿ ಬಿಂದು ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಹ್ಯಾಲೋವೀನ್ ದಿನವನ್ನು ಏಕೆ ಆಚರಿಸಲಾಗುತ್ತದೆ?

ಚರ್ಚ್‌ನ ಸಂತರನ್ನು ಗೌರವಿಸಲು ಹ್ಯಾಲೋವೀನ್ ದಿನವನ್ನು ಆಚರಿಸಲಾಗುತ್ತದೆ.  ಹ್ಯಾಲೋವೀನ್‌ನ ಮೂಲವು 2,000 ವರ್ಷಗಳ ಹಿಂದೆ ಯುನೈಟೆಡ್ ಕಿಂಗ್‌ಡಮ್, ಉತ್ತರ ಫ್ರಾನ್ಸ್ ಮತ್ತು ಐರ್ಲೆಂಡ್‌ನಲ್ಲಿ ವಾಸಿಸುತ್ತಿದ್ದ ಸೆಲ್ಟಿಕ್ ತಮ್ಮ ಹಬ್ಬವನ್ನು ಸಂಹೈನ್ ಎಂದು ಆಚರಿಸುತ್ತಿದ್ದರು. ಇದು ಬೇಸಿಗೆಯ ಅಂತ್ಯ ಮತ್ತು ಶೀತ ಚಳಿಗಾಲದ ದಿನಗಳ ಆರಂಭವನ್ನು ಗುರುತಿಸಿತು, ಅದು ಆ ಸಮಯದಲ್ಲಿ ಕೊಳೆತ ಮತ್ತು ಸಾವಿನೊಂದಿಗೆ ಸಂಬಂಧ ಹೊಂದಿತ್ತು. ಇದನ್ನು ತಪ್ಪಿಸಲು, ಜನರು ದೀಪೋತ್ಸವದ ಸುತ್ತಲೂ ದುಷ್ಟಶಕ್ತಿಗಳಿಂದ ರಕ್ಷಿಸಲು ಪ್ರಾರ್ಥಿಸುತ್ತಾರೆ.

ಹ್ಯಾಲೋವೀನ್ ದಿನವನ್ನು ಅ. 31 ರಂದೇ ಏಕೆ ಆಚರಿಸಲಾಗುತ್ತದೆ?

ಸೆಲ್ಟಿಕ್ ನಂಬಿಕೆಗಳ ಪ್ರಕಾರ, ಈ ದಿನವು ಬೇಸಿಗೆಯ ಅಂತ್ಯ ಮತ್ತು ಕತ್ತಲೆಯ ಸಮಯದ ಆರಂಭವನ್ನು ಸೂಚಿಸುತ್ತದೆ. ಅಕ್ಟೋಬರ್ 31 ರಂದು ಸತ್ತವರ ಮತ್ತು ಬದುಕಿರುವವರ ಪ್ರಪಂಚದ ನಡುವಿನ ಗಡಿರೇಖೆಯು ಮಸುಕಾಗುತ್ತದೆ. ಸತ್ತವರ ಪ್ರೇತಗಳು ಅಕ್ಟೋಬರ್ 31 ರ ರಾತ್ರಿ ಜಗತ್ತಿಗೆ ಮರಳಿದವು ಎಂಬ ನಂಬಿಕೆ ಇದೆ. ಆದ್ದರಿಂದ ಈ ಆಚರಣೆ ಮಾಡಲಾಗುತ್ತಿದೆ.

Ramesh Babu

Journalist

Recent Posts

ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ- ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…

4 hours ago

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್…

5 hours ago

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

10 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

22 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

23 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

23 hours ago