ನೆಪೋಲಿಯನ್ ಮಗನ ಮದುವೆ ದೊಡ್ಡ ಮಟ್ಟದಲ್ಲಿ ಚರ್ಚೆ: ಇಷ್ಟಕ್ಕೂ ಏನಿದು ಕಥೆ..? ವಿವರ ಇಲ್ಲಿದೆ…..

ಆತನ ಹೆಸರು ಧನುಷ್. ಸದ್ಯ ಧನುಷ್ ಮದುವೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಟೀಕೆ ಮಾಡಿದರೆ, ಇನ್ನು ಕೆಲವರು ಈತನನ್ನು ವರಿಸಿದ ವಧುವನ್ನ ಬಾಯಿತುಂಬಾ ಹೊಗಳುತ್ತಿದ್ದಾರೆ. ಇಷ್ಟಕ್ಕೂ ಏನಿದು ಕಥೆ..? ವಿವರ ಇಲ್ಲಿದೆ.

ತಮಿಳು ಸ್ಟಾರ್ ಹೀರೋ, ಮಾಜಿ ಶಾಸಕ, ಮಾಜಿ ಸಂಸದ, ಮಾಜಿ ಕೇಂದ್ರ ಸಚಿವ ಸಾಫ್ಟ್‌ವೇರ್‌ ಉದ್ಯಮಿ ನೆಪೋಲಿಯನ್ ಸುಪುತ್ರ ಧನುಷ್. ಕೋಟಿ ಕೋಟಿ ಆಸ್ತಿ ಒಡೆಯ. ಈತ ಬೆಳೆಯುತ್ತಾ ಹೋದಂತೆ ಈತನಿಗೆ ಅಪರೂಪದ ಕಾಯಿಲೆಯೊಂದು ಒಕ್ಕರಿಸಿದೆ. ಆ ಕಾಯಿಲೆಯ ಹೆಸರು ಸ್ನಾಯು ಕ್ಷಯ(Muscular dystrophy). ಅಂದರೆ ಈತನ ಸ್ನಾಯುಗಳು ವಯಸ್ಸಾಗುತ್ತಾ ಆಗುತ್ತಾ ಹೋದಂತೆ ಕ್ಷಯವಾಗುತ್ತಾ, ಕ್ಷೀಣಿಸುತ್ತಾ, ದುರ್ಬಲವಾಗುತ್ತಾ ಹೋಗುತ್ತವೆ. ಈ ಕಾಯಿಲೆಯ ಸ್ಥಿತಿಯಲ್ಲಿರುವ ಧನುಷ್ ಗೆ ಈಗ ಕೈಕಾಲು ಎತ್ತುವುದಕ್ಕೂ ಆಗದ ಸ್ಥಿತಿ ಪ್ರಸ್ತುತ ಇದೆ.

ಈತನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಿರುವ ನೆಪೋಲಿಯನ್ ದಂಪತಿ, ಇವತ್ತಿಗೂ ಅಲ್ಲಿಯೇ ಇದ್ದು, ಚಿಕಿತ್ಸೆ ಕೊಡಿಸುತ್ತಲೇ ಇದ್ದಾರೆ ಎನ್ನಲಾಗಿದೆ. ಚಿಕಿತ್ಸೆಗಾಗಿ ಕೋಟಿ ಕೋಟಿ ಖರ್ಚಾಗುತ್ತಿದೆ. ಆದರೆ, ಧನುಷ್ ಆರೋಗ್ಯದಲ್ಲಿ ಯಾವ ಚೇತರಿಕೆಯೂ ಆಗುತ್ತಿಲ್ಲ ಎಂಬುದು ನೋವಿನ ಸಂಗತಿ.

ಈತನ ಮಲಮೂತ್ರ ವಿಸರ್ಜನೆಯನ್ನೂ ಬೇರೊಬ್ಬರು ಮಾಡಿಸಬೇಕು. ಬಟ್ಟೆಯನ್ನು ತೊಡಿಸಬೇಕು. ಈತನಿಗೆ ಲೈಂಗಿಕ ಶಕ್ತಿಯೂ ಇಲ್ಲ ಎನ್ನಲಾಗುತ್ತಿದೆ. ಹೀಗಿದ್ದರೂ, ತಮ್ಮ ಮಗನಿಗೆ ಮದುವೆ ಮಾಡಬೇಕು ಎಂದು ತಂದೆ ಆಸೆಪಟ್ಟು ಮದುವೆ ಮಾಡಿದ್ದಾರೆ.

ನೆಪೋಲಿಯನ್ ದಂಪತಿಯ ಈ ಆಸೆಯನ್ನು ಈಡೇರಿಸಲು ಧನುಷ್ ನನ್ನು ಮದುವೆಯಾಗಲು ಅಕ್ಷಯ ಎಂಬ ಹುಡುಗಿ ಮುಂದೆ ಬಂದಳು. ಈಗ ಆಕೆಯ ಜೊತೆ ಧನುಷ್ ಮದುವೆಯಾಗಿದೆ. ಜಪಾನ್ ಟೋಕಿಯೋದಲ್ಲಿ ನಡೆದ ಅದ್ಧೂರಿ ಮದುವೆಯಲ್ಲಿ ಧನುಷ್-ಅಕ್ಷಯ ಸತಿಪತಿಗಳಾಗಿದ್ದಾರೆ.

ಈಗ ಟೀಕೆ ಆಗುತ್ತಿರುವುದು ಇದಕ್ಕೆ. ದೈಹಿಕವಾಗಿ ಯಾವ ಶಕ್ತಿಯೂ ಇಲ್ಲದವನನ್ನು ಈ ಹುಡುಗಿ ಮದುವೆಯಾಗುವುದಕ್ಕೆ ಆತನ ಹೆಸರಲ್ಲಿದ್ದ ಕೋಟಿ ಕೋಟಿ ಆಸ್ತಿಯೇ ಕಾರಣ, ದುಡ್ಡಿದ್ದರೆ ಹುಡುಗಿಯರು ಎಂಥವನನ್ನು ಬೇಕಾದರೂ ಮದುವೆ ಆಗ್ತಾರೆ.. ಎಂದೆಲ್ಲ ಟೀಕೆ ಮಾಡ್ತಿದ್ದಾರೆ.

ಹಾಗಂತ ಎಲ್ಲರದ್ದೂ ಟೀಕೆ, ಲೇವಡಿ ಅಲ್ಲ. ಕೆಲವರು ಹೊಗಳಿಯೂ ಇದ್ದಾರೆ. ಎಲ್ಲರೂ ದೈಹಿಕವಾಗಿ ಸರಿ ಇರುವ ವ್ಯಕ್ತಿಯನ್ನಷ್ಟೇ ಮದುವೆ ಆಗುವುದಾಗಿದ್ದರೆ, ಜಗತ್ತಿನ ಕೋಟ್ಯಂತರ ವಿಕಲಚೇತನರು ಮದುವೆಯೇ ಆಗುತ್ತಿರಲಿಲ್ಲ. ಆಕೆಯನ್ನು ಟೀಕೆ ಮಾಡಬೇಡಿ ಎಂದು ಹೇಳುವವರೂ ಇದ್ದಾರೆ.

ಹಾಗಂತ ಅಕ್ಷಯ, ಅವಿದ್ಯಾವಂತೆಯೇನಲ್ಲ. ತೀರಾ ಬಡಕುಟುಂಬದವಳೂ ಅಲ್ಲ. ನರ್ಸಿಂಗ್ ಓದಿರುವ ಈಕೆ, ಈಗ ಧನುಷ್ ಅವರನ್ನು ವಿವಾಹವಾಗಿದ್ದಾರೆ.

Ramesh Babu

Journalist

Recent Posts

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

48 minutes ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

4 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

6 hours ago

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

18 hours ago

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

20 hours ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

21 hours ago