ನಗರಸಭೆ ಸದಸ್ಯರಾದ ರಜನಿ, ನಾಗರತ್ನಮ್ಮ ನಡುವೆ ತಿಕ್ಕಾಟ: ಮೂಲಭೂತ ಸೌಕರ್ಯಗಳಿಂದ ವಂಚಿತರಾದ ರೋಜಿಪುರದ ಒಂದನೇ ಮುಖ್ಯರಸ್ತೆ ನಿವಾಸಿಗಳು

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರೋಜಿಪುರ ಬಡಾವಣೆ ಹಾಗೂ ಕೋರ್ಟ್ ಮುಂಭಾಗದ ನಾಲ್ಕನೇ ವಾರ್ಡ್ ವಿನಾಯಕ ನಗರ ಗಡಿ ಭಾಗದಲ್ಲಿರುವ 1ನೇ ಮುಖ್ಯರಸ್ತೆಯಲ್ಲಿ ಕಾಲಕ್ಕೆ ತಕ್ಕಂತೆ ರಸ್ತೆ ದುರಸ್ತಿ, ಚರಂಡಿ‌ ದುರಸ್ತಿಯಾಗುತ್ತಿಲ್ಲ, ವಿದ್ಯುತ್ ಬಲ್ಬ್, ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ ತಾಂಡವಾಡುತ್ತಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ರೋಜಿಪುರ ಬಡಾವಣೆ ಹಾಗೂ ಕೋರ್ಟ್ ಮುಂಭಾಗದ ನಾಲ್ಕನೇ ವಾರ್ಡ್ ವಿನಾಯಕ ನಗರ ಗಡಿ ಭಾಗದಲ್ಲಿರುವ 1ನೇ ಮುಖ್ಯರಸ್ತೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ರೋಜಿಪುರ ಕೌನ್ಸಿಲರ್ ರಜನಿ ಸುಬ್ರಮಣಿ, ವಿನಾಯಕನಗರ ಕೌನ್ಸಿಲರ್ ನಾಗರತ್ನಮ್ಮ ಕೃಷ್ಣಮೂರ್ತಿ ಹೇಳುತ್ತಿದ್ದಾರೆ. ಇವರಿಬ್ಬರ ಗೊಂದಲ, ಕಿತ್ತಾಟ, ತಿಕ್ಕಾಟದಲ್ಲಿ ಈ ರಸ್ತೆಯಲ್ಲಿ ವಾಸ ಮಾಡುವ ನಮಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ರೋಜಿಪುರ ಹಾಗೂ ವಿನಾಯಕನಗರ ವಾರ್ಡ್ ನವರು ಬರುತ್ತಾರೆ. ಗೆದ್ದ ನಂತರ ಈ ರಸ್ತೆ ನಮಗೆ ಬರೋದಿಲ್ಲ ಎಂದು ಹೇಳಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಕಣ್ಮುಚ್ಚಿ ಕುಳಿತುಕೊಳ್ಳುತ್ತಾರೆ ಎಂದು ಪ್ರದೀಪ್ ಆರೋಪಿಸಿದರು‌.

ರಸ್ತೆಯು ಚರಂಡಿಗಿಂತ ಮೇಲ್ಮಟದಲ್ಲಿದೆ. ಚರಂಡಿಯಲ್ಲಿ ಗಿಡಗಂಟಿಗಳು, ಮಣ್ಣು ಸೇರಿದಂತೆ ಕಸಕಡ್ಡಿ‌ ತುಂಬಿಕೊಂಡು ಚರಂಡಿ ಇರೋದು ಕಾಣೋದೇ ಇಲ್ಲ. ಈ‌ ಕಾರಣ ಮಳೆ‌ ನೀರು ಸಾರಾಗವಾಗಿ ಹರಿಯದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ‌. ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತದೆ ಎಂದರು.

ಮನೆಗಳ ಮೇಲೆ ದೊಡ್ಡ ರೆಂಬೆಕೊಂಬೆಗಳು ಹಾದುಹೊಗಿವೆ ಅವುಗಳನ್ನು ವಿಲೇವಾರಿ ಮಾಡಲು ಯಾರೂ ಇಲ್ಲ. ಕಳ್ಳರ ಕಾಟ ಹೆಚ್ಚಾಗಿದೆ. ಹಾವುಗಳು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕಸ ಸೂಕ್ತ ರೀತಿಯಲ್ಲಿ ವಿಲೇವಾರಿಯಾಗದ ಕಾರಣ ದುರ್ವಾಸನೆ ಹೆಚ್ಚಾಗಿದೆ. ಕಸ ತಿನ್ನಲು ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಕಾಟಕ್ಕೆ ಮಕ್ಕಳು ಓಡಾಡಲು ಭಯಪಡುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು. ನಾವು ಕಂದಾಯ ಕಟ್ಟಲ್ವಾ…? ನೀರಿನ ಬಿಲ್ ಕಟ್ಟಲ್ವಾ…? ವಿದ್ಯುತ್ ಬಿಲ್ ಕಟ್ಟಲ್ವಾ…? ಮತ್ತೆ ನಮಗೇಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಮೊದಲು ನಮ್ಮ ರಸ್ತೆಯನ್ನು ಯಾವುದಾದರು ಒ‍ಂದು ವಾರ್ಡ್ ಗೆ ಸೇರಿಸಬೇಕು. ನಮಗೆ ಕೌನ್ಸಿಲರ್ ಯಾರೆಂದು ತಿಳಿಸಬೇಕು. ತದನಂತರ ನಮಗೆ ಬೇಕಾಗುವ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು….

ಈ ಕುರಿತು ವಿನಾಯಕ ನಗರ ಕೌನ್ಸಿಲರ್ ನಾಗರತ್ನಮ್ಮ ಕೃಷ್ಣಮೂರ್ತಿ ಮಾತನಾಡಿ, ಚೆಕ್ ಬಂದಿ ಪ್ರಕಾರ ಈ ರಸ್ತೆ ವಿನಾಯಕನಗರ ವಾರ್ಡ್ ಗೆ ಬರೋದಿಲ್ಲ.‌ ಒಂದು ವೇಳೆ ನಾವು ಆ ವಾರ್ಡ್ ನಸಮಸ್ಯೆ ಬಗೆಹರಿಸಲು ಹೋದಾಗ ಅಲ್ಲಿನ‌ ಸದಸ್ಯೆರು ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ನಾವು ಈ ರಸ್ತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.

ರೋಜಿಪುರ ವಾರ್ಡ್ ಸದಸ್ಯೆ ರಜನಿ ಸುಬ್ರಮಣಿ ಮಾತನಾಡಿ, ಈ ರಸ್ತೆಯಲ್ಲಿನ ನಿವಾಸಿಗಳು ವಿನಾಯಕ ನಗರ ವಾರ್ಡ್ ಮತಗಟ್ಟೆಗೆ ಸೇರುತ್ತಾರೆ. ಮತದಾನವನ್ನು ಸಹ ಆ ವಾರ್ಡ್ ಸದಸ್ಯರಿಗೆ ಹಾಕಿರುತ್ತಾರೆ. ಆದ್ದರಿಂದ ವಿನಾಯಕ ನಗರದ ಸದಸ್ಯರೇ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಹೇಳಿದರು….

ಒಟ್ಟಿನಲ್ಲಿ ರೋಜಿಪುರ ವಾರ್ಡ್, ವಿನಾಯಕ ನಗರ ವಾರ್ಡ್ ಕೌನ್ಸಿಲರ್ ಗಳ ಗೊಂದಲ, ತಿಕ್ಕಾಟ, ಕಿತ್ತಾಟದಿಂದ ಇಲ್ಲಿನ ನಿವಾಸಿಗಳು ಮೂಲಭೂತ ಸವಲತ್ತುಗಳು ಇಲ್ಲದೇ ತೀವ್ರ ತೊಂದರೆಗೆ ಸಿಲುಕಿದ್ದಾರೆ….

Ramesh Babu

Journalist

Recent Posts

ಅನ್ನದಾಸೋಹ ಮಾಡುವ ಮೂಲಕ ಸಂದೀಪ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಸಿಹಿ,…

2 hours ago

ರೈಲ್ವೆ ನಿಲ್ದಾಣದ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ; ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…

3 hours ago

ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ಖಂಡನೆ: ಶಾಸಕ ಯಶ್ ಪಾಲ್ ಆನಂದ್ ಸುವರ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…

8 hours ago

ಮಳೆ ಕೈಕೊಟ್ಟು ಮುಂಗಾರು ಬಿತ್ತನೆ ಕುಂಠಿತ: ಶೇ.66ರಷ್ಟು ಮಳೆ ಕೊರತೆ; ಗುರಿಯ ಶೇ.3ರಷ್ಟು ಮಾತ್ರ ಬಿತ್ತನೆ ಪೂರ್ಣ

ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…

11 hours ago

ಇರುವುದೊಂದೇ ಬದುಕು, ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಿ…….

ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ..... ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ…

13 hours ago

ಜಿಂಕೆಗೆ ವಾಹನ ಡಿಕ್ಕಿ; ಸ್ಥಳದಲ್ಲೇ ಸಾವು

ರಾಜಾನುಕುಂಟೆ: ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯ ರಾಜಾನುಕುಂಟೆ ಸಮೀಪ ಶುಕ್ರವಾರ ಮುಂಜಾನೆ ವೇಗವಾಗಿ ಬಂದ ವಾಹನವೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ…

13 hours ago