ನಗರಸಭೆ ಸದಸ್ಯರಾದ ರಜನಿ, ನಾಗರತ್ನಮ್ಮ ನಡುವೆ ತಿಕ್ಕಾಟ: ಮೂಲಭೂತ ಸೌಕರ್ಯಗಳಿಂದ ವಂಚಿತರಾದ ರೋಜಿಪುರದ ಒಂದನೇ ಮುಖ್ಯರಸ್ತೆ ನಿವಾಸಿಗಳು

ದೊಡ್ಡಬಳ್ಳಾಪುರ ನಗರಸಭೆ ವ್ಯಾಪ್ತಿಯ ರೋಜಿಪುರ ಬಡಾವಣೆ ಹಾಗೂ ಕೋರ್ಟ್ ಮುಂಭಾಗದ ನಾಲ್ಕನೇ ವಾರ್ಡ್ ವಿನಾಯಕ ನಗರ ಗಡಿ ಭಾಗದಲ್ಲಿರುವ 1ನೇ ಮುಖ್ಯರಸ್ತೆಯಲ್ಲಿ ಕಾಲಕ್ಕೆ ತಕ್ಕಂತೆ ರಸ್ತೆ ದುರಸ್ತಿ, ಚರಂಡಿ‌ ದುರಸ್ತಿಯಾಗುತ್ತಿಲ್ಲ, ವಿದ್ಯುತ್ ಬಲ್ಬ್, ಚರಂಡಿ ಸ್ವಚ್ಛತೆ, ಕುಡಿಯುವ ನೀರಿನ ಸಮಸ್ಯೆ, ಕಸದ ಸಮಸ್ಯೆ ತಾಂಡವಾಡುತ್ತಿದೆ. ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದೆ ಎಂದು ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ.

ರೋಜಿಪುರ ಬಡಾವಣೆ ಹಾಗೂ ಕೋರ್ಟ್ ಮುಂಭಾಗದ ನಾಲ್ಕನೇ ವಾರ್ಡ್ ವಿನಾಯಕ ನಗರ ಗಡಿ ಭಾಗದಲ್ಲಿರುವ 1ನೇ ಮುಖ್ಯರಸ್ತೆಯು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ರೋಜಿಪುರ ಕೌನ್ಸಿಲರ್ ರಜನಿ ಸುಬ್ರಮಣಿ, ವಿನಾಯಕನಗರ ಕೌನ್ಸಿಲರ್ ನಾಗರತ್ನಮ್ಮ ಕೃಷ್ಣಮೂರ್ತಿ ಹೇಳುತ್ತಿದ್ದಾರೆ. ಇವರಿಬ್ಬರ ಗೊಂದಲ, ಕಿತ್ತಾಟ, ತಿಕ್ಕಾಟದಲ್ಲಿ ಈ ರಸ್ತೆಯಲ್ಲಿ ವಾಸ ಮಾಡುವ ನಮಗೆ ಯಾವುದೇ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ಮತಕ್ಕಾಗಿ ರೋಜಿಪುರ ಹಾಗೂ ವಿನಾಯಕನಗರ ವಾರ್ಡ್ ನವರು ಬರುತ್ತಾರೆ. ಗೆದ್ದ ನಂತರ ಈ ರಸ್ತೆ ನಮಗೆ ಬರೋದಿಲ್ಲ ಎಂದು ಹೇಳಿ ಮೂಲಭೂತ ಸೌಕರ್ಯಗಳನ್ನು ಒದಗಿಸದೇ ಕಣ್ಮುಚ್ಚಿ ಕುಳಿತುಕೊಳ್ಳುತ್ತಾರೆ ಎಂದು ಪ್ರದೀಪ್ ಆರೋಪಿಸಿದರು‌.

ರಸ್ತೆಯು ಚರಂಡಿಗಿಂತ ಮೇಲ್ಮಟದಲ್ಲಿದೆ. ಚರಂಡಿಯಲ್ಲಿ ಗಿಡಗಂಟಿಗಳು, ಮಣ್ಣು ಸೇರಿದಂತೆ ಕಸಕಡ್ಡಿ‌ ತುಂಬಿಕೊಂಡು ಚರಂಡಿ ಇರೋದು ಕಾಣೋದೇ ಇಲ್ಲ. ಈ‌ ಕಾರಣ ಮಳೆ‌ ನೀರು ಸಾರಾಗವಾಗಿ ಹರಿಯದೇ ಅಕ್ಕಪಕ್ಕದ ಮನೆಗಳಿಗೆ ನುಗ್ಗುತ್ತದೆ‌. ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತದೆ ಎಂದರು.

ಮನೆಗಳ ಮೇಲೆ ದೊಡ್ಡ ರೆಂಬೆಕೊಂಬೆಗಳು ಹಾದುಹೊಗಿವೆ ಅವುಗಳನ್ನು ವಿಲೇವಾರಿ ಮಾಡಲು ಯಾರೂ ಇಲ್ಲ. ಕಳ್ಳರ ಕಾಟ ಹೆಚ್ಚಾಗಿದೆ. ಹಾವುಗಳು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಕಸ ಸೂಕ್ತ ರೀತಿಯಲ್ಲಿ ವಿಲೇವಾರಿಯಾಗದ ಕಾರಣ ದುರ್ವಾಸನೆ ಹೆಚ್ಚಾಗಿದೆ. ಕಸ ತಿನ್ನಲು ನಾಯಿಗಳ ಹಾವಳಿ ಹೆಚ್ಚಾಗಿದೆ. ನಾಯಿಗಳ ಕಾಟಕ್ಕೆ ಮಕ್ಕಳು ಓಡಾಡಲು ಭಯಪಡುತ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳುವುದು. ನಾವು ಕಂದಾಯ ಕಟ್ಟಲ್ವಾ…? ನೀರಿನ ಬಿಲ್ ಕಟ್ಟಲ್ವಾ…? ವಿದ್ಯುತ್ ಬಿಲ್ ಕಟ್ಟಲ್ವಾ…? ಮತ್ತೆ ನಮಗೇಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ ಎಂದು ಪ್ರಶ್ನೆ ಮಾಡಿದರು.

ಮೊದಲು ನಮ್ಮ ರಸ್ತೆಯನ್ನು ಯಾವುದಾದರು ಒ‍ಂದು ವಾರ್ಡ್ ಗೆ ಸೇರಿಸಬೇಕು. ನಮಗೆ ಕೌನ್ಸಿಲರ್ ಯಾರೆಂದು ತಿಳಿಸಬೇಕು. ತದನಂತರ ನಮಗೆ ಬೇಕಾಗುವ ಸವಲತ್ತುಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು….

ಈ ಕುರಿತು ವಿನಾಯಕ ನಗರ ಕೌನ್ಸಿಲರ್ ನಾಗರತ್ನಮ್ಮ ಕೃಷ್ಣಮೂರ್ತಿ ಮಾತನಾಡಿ, ಚೆಕ್ ಬಂದಿ ಪ್ರಕಾರ ಈ ರಸ್ತೆ ವಿನಾಯಕನಗರ ವಾರ್ಡ್ ಗೆ ಬರೋದಿಲ್ಲ.‌ ಒಂದು ವೇಳೆ ನಾವು ಆ ವಾರ್ಡ್ ನಸಮಸ್ಯೆ ಬಗೆಹರಿಸಲು ಹೋದಾಗ ಅಲ್ಲಿನ‌ ಸದಸ್ಯೆರು ಆಕ್ಷೇಪಣೆ ವ್ಯಕ್ತಪಡಿಸುತ್ತಾರೆ. ಆದ್ದರಿಂದ ನಾವು ಈ ರಸ್ತೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.

ರೋಜಿಪುರ ವಾರ್ಡ್ ಸದಸ್ಯೆ ರಜನಿ ಸುಬ್ರಮಣಿ ಮಾತನಾಡಿ, ಈ ರಸ್ತೆಯಲ್ಲಿನ ನಿವಾಸಿಗಳು ವಿನಾಯಕ ನಗರ ವಾರ್ಡ್ ಮತಗಟ್ಟೆಗೆ ಸೇರುತ್ತಾರೆ. ಮತದಾನವನ್ನು ಸಹ ಆ ವಾರ್ಡ್ ಸದಸ್ಯರಿಗೆ ಹಾಕಿರುತ್ತಾರೆ. ಆದ್ದರಿಂದ ವಿನಾಯಕ ನಗರದ ಸದಸ್ಯರೇ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಬೇಕು ಎಂದು ಹೇಳಿದರು….

ಒಟ್ಟಿನಲ್ಲಿ ರೋಜಿಪುರ ವಾರ್ಡ್, ವಿನಾಯಕ ನಗರ ವಾರ್ಡ್ ಕೌನ್ಸಿಲರ್ ಗಳ ಗೊಂದಲ, ತಿಕ್ಕಾಟ, ಕಿತ್ತಾಟದಿಂದ ಇಲ್ಲಿನ ನಿವಾಸಿಗಳು ಮೂಲಭೂತ ಸವಲತ್ತುಗಳು ಇಲ್ಲದೇ ತೀವ್ರ ತೊಂದರೆಗೆ ಸಿಲುಕಿದ್ದಾರೆ….

Ramesh Babu

Journalist

Recent Posts

ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ: ಇಬ್ಬರು ಸಾವು

ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…

5 hours ago

ಕೆಯುಡಬ್ಲ್ಯೂಜೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…

8 hours ago

Instant Play Casino

Instant play casinos allow you to play casino games online without installing any software. These…

23 hours ago

ಎಸ್ಸೆಸ್ಸೆಲ್ಸಿ ಪರೀಕ್ಷೆ-01 ಫಲಿತಾಂಶ ಪ್ರಕಟ: ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆ ವಿದ್ಯಾರ್ಥಿನಿಗೆ 625ಕ್ಕೆ 622 ಅಂಕ: ನಮ್ಮ ತಪಸ್ಸಿಗೆ ಸಿಕ್ಕ ಯಶಸ್ಸು- ಶಾಲಾ ಸಂಸ್ಥಾಪಕ ಶ್ರೀನಿವಾಸ್ ಮೂರ್ತಿ

2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು…

1 day ago

ಬಡಪಾಯಿ ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಆರೋಪ

ಟೀ ಅಂಗಡಿ ಹುಡುಗನ ಮೇಲೆ ಪೊಲೀಸ್ ಇನ್ಸ್ ಪೆಕ್ಟರ್ ದರ್ಪ ಮೆರೆದಿರುವ ಘಟನೆ ದೇವನಹಳ್ಳಿಯ ಕನ್ನಮಂಗಲ ಗ್ರಾಮದಲ್ಲಿ ಹಾದುಹೋಗುವ ರಾಷ್ಟ್ರೀಯ…

1 day ago

Facharbeit Schreiben_ Ein Leitfaden für Schüler und Studenten(2)

Das Schreiben einer Facharbeit ist ein wichtiger Bestandteil des akademischen Lebens und erfordert sowohl Planung…

1 day ago