ಪಿತ್ರಾರ್ಜಿತವಾಗಿ ಬಂದ ಎರಡು ಎಕರೆ ಸಾಗುವಳಿ ಭೂಮಿಗೆ ಬೆಂಗಳೂರಿನ ಬಲಾಢ್ಯ ವ್ಯಕ್ತಿಯೊಬ್ಬರು ಪೊಲೀಸ್ ರಕ್ಷಣೆಯಲ್ಲಿ ಕಾಂಪೌಂಡ್ ನಿರ್ಮಿಸಿ ಕಬಳಿಸುವ ಯತ್ನ ನಡೆಸಿದ್ದಾರೆ ಎಂದು ಆರೋಪಿಸಿ ದಲಿತ ಕುಟುಂಬವೊಂದು ಜಮೀನಿನಲ್ಲೇ ಪ್ರತಿಭಟನೆ ನಡೆಸಿತು.
ತಾಲೂಕಿನ ಕಸಬಾ ಹೋಬಳಿಯ ಮಜರಾಹೊಸಹಳ್ಳಿ ಗ್ರಾಮದ ಸರ್ವೇ ನಂಬರ್ 58ರಲ್ಲಿ ನರಸಿಂಹಯ್ಯ ಎಂಬುವವರು 1970-71 ರಲ್ಲಿ ಬಹಿರಂಗ ಹರಾಜು ಮೂಲಕ ಸರ್ಕಾರಕ್ಕೆ ಕಿಮ್ಮತ್ತು ಕಟ್ಟಿ 2 ಎಕರೆ ಜಮೀನು ಕ್ರಯ ಮಾಡಿಕೊಂಡಿದ್ದರು. ತಾಲೂಕು ಆಡಳಿತ ಸಾಗುವಳಿ ಚೀಟಿ, ಕೈ ಬರಹದ ಪಹಣಿ, ಮ್ಯುಟೇಷನ್ ಕೂಡ ನೀಡಿತ್ತು. ಅಂದಿನಿಂದ ನರಸಿಂಹಯ್ಯನವರ ಮಕ್ಕಳು ಜಮೀನಿನಲ್ಲಿ ಕೃಷಿ ಕೆಲಸ ಮಾಡಿಕೊಂಡು ಬರುತ್ತಿದ್ದರು.
ಕಾಲಕಳೆದಂತೆ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶ ವಿಸ್ತರಣೆಯಾಗಿ ಮಜರಾ ಹೊಸಹಳ್ಳಿಯಲ್ಲೂ ಕೈಗಾರಿಕೆಗಳು ತಲೆ ಎತ್ತಿದವು. ನರಸಿಂಹಯ್ಯನವರ ಕುಟುಂಬ ತಮ್ಮ ಪಾಲಿನ ಜಮೀನಿನಲ್ಲಿ ರಾಗಿ, ಜೋಳ, ತೊಗರಿ ಬೆಳೆ ಬೆಳೆದು ಜೀವನ ಸಾಗಿಸುತ್ತಿತ್ತು. ಕಂಪ್ಯೂಟರ್ ಪಹಣಿ ಬಂದಾಗ ನರಸಿಂಹಯ್ಯ ಅವರ ಸರ್ವೇ ನಂಬರ್ ಅಪ್ ಡೇಟ್ ಆಗಿಲ್ಲ. ಈಗ ಕಂಪ್ಯೂಟರ್ ಪಹಣಿಯಲ್ಲಿ ನರಸಿಂಹಯ್ಯ ಅವರ ಜಮೀನನ್ನು ಗೋಮಾಳ ಎಂದು ತೋರಿಸಲಾಗಿದೆ.
ಕಂಪ್ಯೂಟರ್ ಪಹಣಿಯಲ್ಲಿ ಸರ್ಕಾರಿ ಗೋಮಾಳ ಎಂದು ತೋರಿಸುತ್ತಿರುವುದನ್ನು ಗಮನಿಸಿದ ಕೆಲ ಭೂಮಾಫಿಯಾದವರು ಹಾಗೂ ಬೆಂಗಳೂರಿನ ಕುಶಾಲ್ ಕುಮಾರ್ ಜೈನ್ ಎಂಬುವರು ರಾತ್ರೋರಾತ್ರಿ ಜಮೀನಿನಲ್ಲಿ ನಿರ್ಮಿಸಿದ್ದ ಶೆಡ್ ತೆರವುಮಾಡಿ ಮಣ್ಣು ಹೊಡೆಸುತ್ತಿದ್ದಾರೆ. ಪ್ರಶ್ನಿಸಲು ಹೋದ ಭೂಮಾಲೀಕರಿಗೆ ಪೊಲೀಸರನ್ನು ಕಳುಹಿಸಿ ಬೆದರಿಕೆ ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಕುಶಾಲ್ ಕುಮಾರ್ ಜೈನ್ ಎಂಬುವರು ಕೈಗಾರಿಕಾ ಉದ್ದೇಶಕ್ಕಾಗಿ ನಮ್ಮ ಜಮೀನು ಸುತ್ತಲಿನ ಭೂಮಿ ಖರೀದಿಸಿ, ಕಾಂಪೌಂಡ್ ನಿರ್ಮಿಸುತ್ತಿದ್ದರು. ಅವರ ಜಾಗದಲ್ಲಿ ಅವರ ಕಾಂಪೌಂಡ್ ಹಾಕಿಕೊಳ್ಳುತ್ತಿದ್ದಾರೆ ಎಂದು ನಾವು ಸುಮ್ಮನಿದ್ದೆವು. ಆದರೆ, ಕಳೆದ ಮೂರು ದಿನಗಳ ಹಿಂದೆ ಏಕಾಏಕಿ ಪೊಲೀಸರನ್ನು ಕರೆಸಿ, ಜೆಸಿಬಿಗಳ ಮೂಲಕ ಸರ್ವೇ ನಂಬರ್ ಜಾಗವನ್ನು ಸಮತಟ್ಟು ಮಾಡಲು ಬಂದರು. ಇದು ನಮಗೆ ಸೇರಿದ ಜಾಗ ಎಂದು ದಾಖಲೆ ತೋರಿಸಿದರೂ ಕ್ಯಾರೆ ಎನ್ನುತ್ತಿಲ್ಲ. ಜೆಸಿಬಿಗಳನ್ನು ತಡೆಯಲು ಮುಂದಾದಾಗ ಪೊಲೀಸರನ್ನು ಕರೆಸಿ ದೌರ್ಜನ್ಯದಿಂದ, ಬಲವಂತವಾಗಿ ಕಾಂಪೌಂಡ್ ನಿರ್ಮಿಸಲು ಯತ್ನಿಸಿದ್ದಾರೆ ಎಂದು ನರಸಿಂಹಯ್ಯ ಅವರ ಪುತ್ರ ಮಂಜುನಾಥ್ ದೂರಿದರು.
ಜಮೀನಿನಲ್ಲೇ ಧರಣಿ- ಆಕ್ರೋಶ
ಬೆಂಗಳೂರಿನ ಬಲಾಢ್ಯ ವ್ಯಕ್ತಿಗೆ ಸ್ಥಳೀಯರಾದ ಅಶೋಕ್ ಎಂಬುವರು ಕುಮ್ಮಕ್ಕು ನೀಡುತ್ತಿದ್ದು, ಎಷ್ಟೇ ವಿರೋಧಿಸಿದರೂ ಕಾಂಪೌಂಡ್ ನಿರ್ಮಿಸುತ್ತಿದ್ದಾರೆ. ನಮ್ಮನ್ನು ಜೆಸಿಬಿಯಲ್ಲೇ ಹೂತು ಹಾಕಿದರೂ ಜಾಗ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಇಡೀ ಕುಟುಂಬ ಸ್ಥಳದಲ್ಲೇ ಧರಣಿ ನಡೆಸಿತು.
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…
ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…
ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…
ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…
ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್…
18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…