ಥೇಟ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳುಮಲ್ಲಿಗೆ ಗ್ರಾಮದಲ್ಲಿ ಅಜ್ಜಿಯ ಚಿನ್ನದ ಮಾಂಗಲ್ಯ ಸರ ಕದ್ದಿದ್ದ ಹಾಗೇ ಇದೇ ಆರೋಪಿಗಳು ರಾಮನಗರದಲ್ಲೂ ಸಹ ಸುಮಾರು 70 ವರ್ಷದ ವೃದ್ಧೆ ಬಳಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಕದ್ದಿದ್ದರು.
2024ರ ಡಿ.22ರಂದು ರಾಮನಗರದ ಮುನಿಯಪ್ಪನ ದೊಡ್ಡಿಯ ಪೆಟ್ಟಿ ಅಂಗಡಿಯಲ್ಲಿ ವೃದ್ಧೆ ಮರಗಮ್ಮ(70), ತನ್ನ ಪಾಡಿಗೆ ತಾನು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದಳು. ಹೊಂಚು ಹಾಕಿಕೊಂಡು ಇದ್ದ ಖದೀಮರು ಅಂಗಡಿಗೆ ಬಂದು 10ರೂ. ಕೊಟ್ಟು 5 ರೂಪಾಯಿಯ ಚಾಕೊಲೆಟ್ ಪಡೆಯುತ್ತಾರೆ. ಇನ್ನುಳಿದ 5 ರೂಪಾಯಿ ವಾಪಸ್ ನೀಡಲು ವೃದ್ಧೆ ಮುಂದಾದಗ ಕಳ್ಳರು ವೃದ್ಧೆ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿ ಕಸಿದು ಪರಾರಿಯಾಗುತ್ತಾರೆ.
ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಜಾಡುಹಿಡಿದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ, ಸದ್ಯ ಇಬ್ಬರು ಖದೀಮರನ್ನು ಬಂಧಿಸಿ ಕದ್ದ ಚಿನ್ನದ ಸರವನ್ನು ವಶಕ್ಕೆ ಪಡೆದು ಕಳುವಾಗಿದ್ದ ಚಿನ್ನದ ಸರವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಅರಳುಮಲ್ಲಿಗೆ ಗ್ರಾಮದ ಅಜ್ಜಿಗೆ ವಾಪಸ್ ನೀಡಿರುತ್ತಾರೆ.
ಇನ್ನೂ ಹೆಚ್ಚಿನ ತನಿಖೆ ಮುಂದುವರಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು, ರಾಮಾನಗರದಲ್ಲೂ ಇದೇರೀತಿ ಕಳ್ಳತನ ಮಾಡಿರುವ ಬಗ್ಗೆ ಕಳ್ಳರಿಂದ ಬಾಯಿಬಿಡಿಸಿದ್ದಾರೆ. ಕೂಡಲೇ ರಾಮನಗರದ ಅಜ್ಜಿ ಬಳಿ ಕದ್ದಿದ್ದ ಸುಮಾರು 39 ಗ್ರಾಂ ತೂಕದ ಮಾಂಗಲ್ಯ ಸರವನ್ನೂ ವಶಕ್ಕೆ ಪಡೆದ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು, ರಾಮನಗರದ ಮುನಿಯಪ್ಪನ ದೊಡ್ಡಿಯಿಂದ ಅಜ್ಜಿಯನ್ನು ಠಾಣೆಗೆ ಕರೆಸಿ ಮಾಂಗಲ್ಯ ಸರವನ್ನು ಹಸ್ತಾಂತರ ಮಾಡಿದ್ದಾರೆ.
ಕಳುವಾಗಿದ್ದ ಮಾಂಗಲ್ಯ ಸರ ಮತ್ತೆ ಸಿಕ್ಕಿದ್ದಕ್ಕೆ ಭಾವುಕಾರದ ಅಜ್ಜಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಕಾರ್ಯವೈಖರಿಗೆ ಅಭಿನಂದನೆ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆರೋಪಿಗಳ ಮಾಹಿತಿ
ಕನಕಪುರ ಮೂಲದ ಶಿವರಾಜ್ ಮತ್ತು ಸುಂದರೇಶ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.
ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೇಲ್ ನಲ್ಲಿ ಹೊರ ಬಂದಿರುತ್ತಾರೆ. ಕಳ್ಳತನಕ್ಕಾಗಿಯೇ ಹೊಸ ಬೈಕ್ ಖರೀದಿಯನ್ನು ಮಾಡಿರುತ್ತಾರೆ. ಅರಳುಮಲ್ಲಿಗೆಯಲ್ಲಿ ಕಳ್ಳತನ ಮಾಡಿ ಕನಕಪುರ ತಾಲೂಕಿನ ಮಠವೊಂದರಲ್ಲಿ ವಾಸ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…
ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…
ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…
ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರದಲ್ಲಿ ಸ್ವಸ್ತಿಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ವರ್ಷಂಗಳು 1946ಕ್ಕೆ ಸರಿಯಾದ…
ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…
ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…