ಥೇಟ್ ಅರಳುಮಲ್ಲಿಗೆ ವೃದ್ಧೆ ಬಳಿ ಮಾಂಗಲ್ಯ ಸರ ಕದ್ದ ಹಾಗೇ ರಾಮನಗರದಲ್ಲೂ ಕೈಚಳಕ‌ ತೋರಿಸಿದ್ದ ಖದೀಮರು: ಮಾಂಗಲ್ಯ ಸರ ಜಪ್ತಿ: ವೃದ್ಧೆಗೆ ಮಾಂಗಲ್ಯ ಸರ ಹಸ್ತಾಂತರ

ಥೇಟ್ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅರಳುಮಲ್ಲಿಗೆ ಗ್ರಾಮದಲ್ಲಿ ಅಜ್ಜಿಯ ಚಿನ್ನದ ಮಾಂಗಲ್ಯ ಸರ ಕದ್ದಿದ್ದ ಹಾಗೇ ಇದೇ ಆರೋಪಿಗಳು‌ ರಾಮನಗರದಲ್ಲೂ ಸಹ ಸುಮಾರು 70 ವರ್ಷದ ವೃದ್ಧೆ ಬಳಿ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರ ಕದ್ದಿದ್ದರು.

2024ರ ಡಿ.22ರಂದು ರಾಮನಗರದ ಮುನಿಯಪ್ಪನ ದೊಡ್ಡಿಯ ಪೆಟ್ಟಿ ಅಂಗಡಿಯಲ್ಲಿ ವೃದ್ಧೆ ಮರಗಮ್ಮ(70), ತನ್ನ ಪಾಡಿಗೆ ತಾನು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡು ಇದ್ದಳು. ಹೊಂಚು ಹಾಕಿಕೊಂಡು ಇದ್ದ ಖದೀಮರು ಅಂಗಡಿಗೆ ಬಂದು 10ರೂ. ಕೊಟ್ಟು 5 ರೂಪಾಯಿಯ ಚಾಕೊಲೆಟ್ ಪಡೆಯುತ್ತಾರೆ. ಇನ್ನುಳಿದ 5 ರೂಪಾಯಿ ವಾಪಸ್ ನೀಡಲು ವೃದ್ಧೆ ಮುಂದಾದಗ ಕಳ್ಳರು ವೃದ್ಧೆ ಕೊರಳಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿ ಕಸಿದು ಪರಾರಿಯಾಗುತ್ತಾರೆ.

ರಾಮನಗರದಲ್ಲಿ ಕಳ್ಳತನ ಮಾಡಿಕೊಂಡು ದೊಡ್ಡಬಳ್ಳಾಪುರಕ್ಕೆ ಎಂಟ್ರಿ‌ಕೊಟ್ಟ ಕಳ್ಳರು ಅರಳುಮಲ್ಲಿಗೆ ಗ್ರಾಮದಲ್ಲಿ ಪೆಟ್ಟಿ ಅಂಗಡಿ ವೃದ್ಧೆಯನ್ನೇ ಟಾರ್ಗೆಟ್ ಮಾಡಿ‌ ಥೇಟ್ ರಾಮನಗರದಲ್ಲಿ‌ ಬಳಸಿದ ಪ್ಲ್ಯಾನನ್ನೇ ಅರಳುಮಲ್ಲಿಗೆಯಲ್ಲೂ‌ ಉಪಯೋಗಿಸಿ 2025ರ ಫೆ.21ರಂದು ವೃದ್ಧೆಯ‌ ಮಾಂಗಲ್ಯ ಸರ ಕದ್ದು ಪರಾರಿಯಾಗುತ್ತಾರೆ.

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಜಾಡು‌ಹಿಡಿದು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ, ಸದ್ಯ ಇಬ್ಬರು ಖದೀಮರನ್ನು ಬಂಧಿಸಿ ಕದ್ದ ಚಿನ್ನದ ಸರವನ್ನು ವಶಕ್ಕೆ ಪಡೆದು ಕಳುವಾಗಿದ್ದ ಚಿನ್ನದ ಸರವನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು ಅರಳುಮಲ್ಲಿಗೆ ಗ್ರಾಮದ ಅಜ್ಜಿಗೆ ವಾಪಸ್ ನೀಡಿರುತ್ತಾರೆ.

ಇನ್ನೂ ಹೆಚ್ಚಿನ‌ ತನಿಖೆ‌ ಮುಂದುವರಿಸಿದ ದೊಡ್ಡಬಳ್ಳಾಪುರ ಗ್ರಾಮಾಂತರ‌ ಪೊಲೀಸರು, ರಾಮಾನಗರದಲ್ಲೂ ಇದೇರೀತಿ ಕಳ್ಳತನ ಮಾಡಿರುವ ಬಗ್ಗೆ ಕಳ್ಳರಿಂದ‌ ಬಾಯಿಬಿಡಿಸಿದ್ದಾರೆ. ಕೂಡಲೇ ರಾಮನಗರದ ಅಜ್ಜಿ ಬಳಿ‌ ಕದ್ದಿದ್ದ ಸುಮಾರು 39 ಗ್ರಾಂ ತೂಕದ‌ ಮಾಂಗಲ್ಯ ಸರವನ್ನೂ ವಶಕ್ಕೆ ಪಡೆದ ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಅವರು, ರಾಮನಗರದ ಮುನಿಯಪ್ಪನ ದೊಡ್ಡಿಯಿಂದ ಅಜ್ಜಿಯನ್ನು‌ ಠಾಣೆಗೆ‌ ಕರೆಸಿ ಮಾಂಗಲ್ಯ‌ ಸರವನ್ನು ಹಸ್ತಾಂತರ‌ ಮಾಡಿದ್ದಾರೆ.

ಕಳುವಾಗಿದ್ದ‌ ಮಾಂಗಲ್ಯ‌‌ ಸರ ಮತ್ತೆ ಸಿಕ್ಕಿದ್ದಕ್ಕೆ ಭಾವುಕಾರದ ಅಜ್ಜಿ, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ಕಾರ್ಯವೈಖರಿಗೆ ಅಭಿನಂದನೆ‌ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆರೋಪಿಗಳ ಮಾಹಿತಿ

ಕನಕಪುರ ಮೂಲದ ಶಿವರಾಜ್ ಮತ್ತು ಸುಂದರೇಶ್ ಎಂಬ ಇಬ್ಬರು ಕಳ್ಳರನ್ನು ಬಂಧಿಸಲಾಗಿದೆ.

ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಬೇಲ್ ನಲ್ಲಿ ಹೊರ ಬಂದಿರುತ್ತಾರೆ. ಕಳ್ಳತನಕ್ಕಾಗಿಯೇ ಹೊಸ ಬೈಕ್ ಖರೀದಿಯನ್ನು ಮಾಡಿರುತ್ತಾರೆ. ಅರಳುಮಲ್ಲಿಗೆಯಲ್ಲಿ‌ ಕಳ್ಳತನ ಮಾಡಿ ಕನಕಪುರ ತಾಲೂಕಿನ ಮಠವೊಂದರಲ್ಲಿ ವಾಸ ಮಾಡುತ್ತಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.

Ramesh Babu

Journalist

Recent Posts

“ಉತ್ತರ ಕರ್ನಾಟಕದ ಗ್ರಾಮೀಣ ನಾಗರ ಪಂಚಮಿ: ಹೆಣ್ಮಕ್ಕಳ ಜೋಕಾಲಿ ಸಂಭ್ರಮ”

ಭಾರತೀಯರು ಹಬ್ಬ-ಹರಿದಿನಗಳ ಪ್ರಿಯರು ಒಂದೋದು ಹಬ್ಬಕ್ಕೆ ತನ್ನದೇಯಾದ ವೈಶಿಷ್ಟತೆಯನ್ನು ನೀಡುತ್ತಾ, ಭಕ್ತಿ-ಭಾವದಿಂದ ನೂರಾರು ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಅದರಲ್ಲಿ ಉತ್ತರ…

9 minutes ago

ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಕೆಗೆ ಜಿಪಂ ಮುಂದೆ ಪ್ರತಿಭಟನೆ

ಕೋಲಾರ: ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ನೇತೃತ್ವದ ಗ್ರಾಮ…

2 hours ago

RCB ಕಾಲ್ತುಳಿತ ಪ್ರಕರಣ: ಪೊಲಿಸ್ ಅಧಿಕಾರಿಗಳ ಅಮಾನತು ಆದೇಶ ಹಿಂಪಡೆದ ರಾಜ್ಯ ಸರ್ಕಾರ: ಅಚ್ಚರಿ ಹಾಗೂ ಚರ್ಚೆಗೆ ಗ್ರಾಸವಾದ ಸರ್ಕಾರದ ನಡೆ

ಜೂನ್ 4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ…

2 hours ago

ದೇವಸ್ಥಾನದಲ್ಲಿ ಕಳ್ಳನ ಕೈಚಳಕ: ಬೈಕ್ ಸಮೇತ ಕಳ್ಳನ ಬಂಧನ

ಭಟ್ಕಳದ ಹೆಬಳೆ ತೆಂಗಿನಗುಂಡಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ನಾಗದೇವತಾ ಪ್ರಸನ್ನ ದೇವಸ್ಥಾನದಲ್ಲಿ ಭಾನುವಾರ ಹಾಡುಹಗಲೇ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಭಟ್ಕಳ…

5 hours ago

ನೊಂದವರ ನೋವಾ ನೋಯದವರೆತ್ತ ಬಲ್ಲರೋ……

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…

13 hours ago

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

1 day ago