
ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಗೂಡ್ಸ್ ವಾಹನ ಪಲ್ಟಿಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಕ್ರಾಸ್ ಬಳಿ ನಡೆದಿದೆ…
ನೆಲಮಂಗಲದಿಂದ ಬಂದಂತಹ ಟಾಟಾ ಇಂಟ್ರಾ ದೊಡ್ಡಬೆಳವಂಗಲದ ರಸ್ತೆಗೆ ತಿರುವು ಪಡೆಯಬೇಕಾದರೆ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ.. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ರಸ್ತೆ ತಿರುವುಗಳಲ್ಲಿ, ಬಸ್ ನಿಲ್ದಾಣಗಳ ಸಮೀಪ ಹಾಗೂ ಅಪಘಾತ ಸಂಭವಿಸುವ ಸ್ಥಳಗಳಲ್ಲಿ ಯಾವುದೇ ಸಂಚಾರಿ ನಿಯಮಗಳ ನಾಮಫಲಗಳನ್ನು ಅಳವಡಿಸಿಲ್ಲ. ಹಂಪ್ ಗಳನ್ನು ಹಾಕಿಲ್ಲ. ಕೆಲವೊಂದು ಕಡೆ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಗಳನ್ನು ನಡೆಸಲಾಗಿದೆ. ಇದರಿಂದ ಪದೇ ಪದೇ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಅಪಘಾತಗಳಿಂದ ಅನೇಕ ಸಾವು ನೋವುಗಳು ಆಗಿವೆ ಎಂದು ಜನ ಕಿಡಿಕಾರಿದ್ದಾರೆ.
ಕೂಡಲೇ ರಸ್ತೆ ಅಪಘಾತಗಳನ್ನು ತಡೆಯಲು ಸಂಬಂಧಪಟ್ಟವರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ…