16 ವರ್ಷದ ಹುಡುಗನಿಗೆ ನಿಗೆ ಹೊಟ್ಟೆನೋವು ಮತ್ತು ವಾಂತಿಯಿಂದ ನರಳುತ್ತಿದ್ದಕ್ಕೆ ಮೆಡಿಕವರ್ ಆಸ್ಪತ್ರೆಗೆ ದಾಖಲಾಗಿತ್ತು. ಹೊಟ್ಟೆ ಊದಿಕೊಂಡಿದ್ದ ಕಾರಣ ತಕ್ಷಣ ಮಾಡಲಾದ ಸಿಟಿ ಸ್ಕ್ಯಾನ್ನಲ್ಲಿ ಆತನಿಗೆ ಒಂದು ಅಪರೂಪದ ಖಾಯಿಲೆ ಇರೋದು ಪತ್ತೆಯಾಯಿತು.
ಸಾಮಾನ್ಯವಾಗಿ ಮಗು ಗರ್ಭಾವಸ್ಥೆಯಲ್ಲಿರುವ ಕರುಳುಗಳು ಸರಿಯಾದ ಹಂತದಲ್ಲಿ ತಿರುಗುತ್ತವೆ. ಆದರೆ ಈ ಹುಡುಗನ ತನ್ನ ತಾಯಿ ಗರ್ಭದಲ್ಲಿರುವಾಗ ತಪ್ಪಾದ ಪ್ರಮಾಣದಲ್ಲಿಕರುಳುಗಳು ತಿರುಗಿದ ಕಾರಣ ಅಸಾಮಾನ್ಯವಾಗಿ ಬೆಳವಣಿಗೆಯಾಗಿದ್ದಾರೆ . ಇಂತಹ ಪ್ರಕರಣಗಳು ಸಾಮಾನ್ಯವಾಗಿ ಸಣ್ಣ ಮಕ್ಕಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಆದರೆ 14 ವರ್ಷಕ್ಕೂ ಹೆಚ್ಚಿನವರಿಗೆ ಕಾಣಿಸಿಕೊಳ್ಳುವುದು ಬಹಳ ಅಪರೂಪ.
ಡಾ. ವಂಶಿ ಕೃಷ್ಣ, ಜನರಲ್ ಸರ್ಜನ್, ಮೆಡಿಕವರ್ ಆಸ್ಪತ್ರೆ ವೈಟ್ಫೀಲ್ಡ್, ತಕ್ಷಣ ಎಕ್ಸ್ಪ್ಲೋರೇಟರಿ ಲ್ಯಾಪರೋಟಮಿ ವಿತ್ ಲ್ಯಾಡ್ಸ್ ಪ್ರೊಸೀಜರ್ ಶಸ್ತ್ರಚಿಕಿತ್ಸೆ ಮಾಡಿ ಕರುಳಿಮ ಅಂತರದಲ್ಲಿದ್ದ ಅಸಾಮಾನ್ಯ ತಿರುಗಾಟವನ್ನು ಸರಿಪಡಿಸಿದರು.
“ಈ ಕೇಸ್ ಬಹಳ ಅಪರೂಪದದು. ಮಿಡ್ಗಟ್ ಮ್ಯಾಲರೋಟೇಶನ್ ಸಾಮಾನ್ಯವಾಗಿ ಶಿಶುಗಳಲ್ಲಿ ಕಂಡುಬರುತ್ತದೆ. ಈ ಪ್ರಕರಣದಲ್ಲಿ ಅದು 16ನೇ ವಯಸ್ಸಿನಲ್ಲಿ ಕಾಣಿಸಿಕೊಂಡಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದೇ ಇದ್ದರೆ ಅಂತರಗಳು ಗ್ರಾಂಗ್ರೈನ್ ಆಗಿ ಪ್ರಾಣಾಪಾಯ ಉಂಟಾಗುತ್ತಿತ್ತು. ತಕ್ಷಣದ ನಿರ್ಣಯ ಮತ್ತು ಶಸ್ತ್ರಚಿಕಿತ್ಸೆಯಿಂದ ರೋಗಿಯ ಜೀವ ಉಳಿಯಿತು,” ಎಂದು ಡಾ. ವಂಶಿ ಕೃಷ್ಣ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ಷಯರೋಗ (ಟಿಬಿ) ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಹಂತಗಳಲ್ಲಿ ತಪಾಸಣೆ ಹಾಗೂ ಚಿಕಿತ್ಸಾ ಕ್ರಮಗಳನ್ನು ಕೈಗೊಂಡಿದ್ದರೂ,…
ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…
ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…
ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…
ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…