ಬೆಂಗಳೂರು, ವೈಟ್ಫೀಲ್ಡ್: ಮಗಳಿಗೋಸ್ಕರ ಹೆತ್ತ ತಂದೆ ಏನೂ ಮಾಡೋಕೂ ರೆಡಿ ಅನ್ನೋದಕ್ಕೆ ಸಾಕ್ಷಿಯಂತೆ ಗಂಭೀರ ಸ್ಥಿತಿಯಲ್ಲಿದ್ದ ಮಗಳನ್ನು ರಕ್ಷಿಸಲು ತಮ್ಮ ಒಂದು ಕಿಡ್ನಿಯನ್ನು ದಾನ ಮಾಡಿದ್ದಾರೆ. ಮಗಳು ಅನುವಂಶೀಯದಿಂದ ಬರುವ ಬಹು-ಗುಳ್ಳೆ ಮೂತ್ರಪಿಂಡ ರೋಗ ( ADPKD)ದಿಂದ ಬಳಲುತ್ತಾ ಇದ್ದರು .ಇದರಿಂದ ಮೂತ್ರ ಪಿಂಡದ ವೈಫಲ್ಯವಾಗಿತ್ತು .
ಈ ಖಾಯಿಲೆ ಇವರ ಕುಟುಂಬಕ್ಕೆ ಹೊಸದೇನು ಅಲ್ಲ 2013ರಲ್ಲಿ, ಇದೇ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಪತ್ನಿಗೆ ಕಿಡ್ನಿ ದಾನ ಮಾಡಲು ಅವರು ಮುಂದೆ ಬಂದಿದ್ದರು. ಆದರೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಎದುರಿಸಿದ ತಾಂತ್ರಿಕ ಅಡಚಣೆಗಳ ಕಾರಣದಿಂದ ಆ ವೇಳೆ ಕಿಡ್ನಿ ಟ್ರಾನ್ಸ್ ಪ್ಲಾಟ್ ಮಾಡಲು ಸಾಧ್ಯವಾಗಿರಲಿಲ್ಲ.
ಈಗ ಆ ಸಮಸ್ಯೆ ಮತ್ತೆ ಮಗಳಿಗೆ ಸಂಭವಿಸಿದಾಗ, ಅವರ ಮೂತ್ರಪಿಂಡಗಳು ವೈಫಲ್ಯಗೊಂಡಾಗ, ತಂದೆಯವರು ಕ್ಷಣಮಾತ್ರವೂ ಯೋಚಿಸದೇ – ತಮ್ಮ ಏಕೈಕ ಮಗಳನ್ನು ಉಳಿಸಲು ಮತ್ತೆ ಮುಂದೆ ಬಂದರು.
61 ವರ್ಷದ ತಂದೆಗೆ ಮಧುಮೇಹ ಮತ್ತು ರಕ್ತದೊತ್ತಡ ತೊಂದರೆ ಇದ್ದರೂ, ಮೆಡಿಕವರ್ ಆಸ್ಪತ್ರೆಯಲ್ಲಿ ನಡೆದ ಸಮಗ್ರ ಪರೀಕ್ಷೆಯಲ್ಲಿ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಯಾವುದೇ ಅಂಗ ಹಾನಿಯ ಲಕ್ಷಣಗಳು ಕಾಣಿಸಲಿಲ್ಲ. ತಜ್ಞರ ಬಹು ವಿಶಿಷ್ಟ ತಂಡ ನಡೆಸಿದ ವಿಮರ್ಶೆಯ ನಂತರ, ಅವರನ್ನು ಮಾರ್ಜಿನಲ್ ಡೋನರ್ ಎಂದು ಸ್ವೀಕರಿಸಲಾಯಿತು.
ಈ ಜೀವ ರಕ್ಷಕ ಶಸ್ತ್ರಚಿಕಿತ್ಸೆಯನ್ನುಡಾ. ಹರೀಶ ಬಾಬು ಕೆ – ಹಿರಿಯ ನೇಫ್ರಾಲಜಿಸ್ಟ್ ಮತ್ತು ಟ್ರಾನ್ಸ್ಪ್ಲಾಂಟ್ ತಜ್ಞ, ಡಾ. ಪ್ರಮೊದ್ – ಯೂರಾಲಜಿಸ್ಟ್ ಮತ್ತು ಕಿಡ್ನಿ ಟ್ರಾನ್ಸ್ಪ್ಲಾಂಟ್ ತಜ್ಞ, ಡಾ. ದಿಲೀಪ್ – ಕಿಡ್ನಿ ಟ್ರಾನ್ಸ್ಪ್ಲಾಂಟ್ ಶಸ್ತ್ರಚಿಕಿತ್ಸಕ ಇವರ ತಂಡ ಯಶಸ್ವಿಯಾಗಿ ನೆರವೇರಿಸಿದರು.ದಾನ ಮಾಡಿದ ಕಿಡ್ನಿ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
“ಸಮಗ್ರ ಮತ್ತು ನಿಖರವಾದ ವೈದ್ಯಕೀಯ ಮೌಲ್ಯಮಾಪನದ ಮೂಲಕ, ನಿಯಂತ್ರಣದಲ್ಲಿರುವ ಮಧುಮೇಹ ಮತ್ತು ರಕ್ತದೊತ್ತಡವಿದ್ದರೂ ಸಹ ಹಿರಿಯ ದಾನಿಗಳನ್ನುಸುರಕ್ಷಿತವಾಗಿ ಕಿಡ್ನಿ ದಾನಕ್ಕಾಗಿ ಪರಿಗಣಿಸಬಹುದು. ಇದು ಸೂಕ್ತ ದಾನಿಗಳ ಕೊರತೆಯಿಂದ ಬಳಲುವ ಅನೇಕ ಕುಟುಂಬಗಳಿಗೆ ಹೊಸ ಆಶಾಕಿರಣವಾಗಿದೆ,” ಎಂದು ಡಾ. ಹರೀಶ ಬಾಬು ಕೆ ತಿಳಿಸಿದ್ದಾರೆ.
ನಿಂತಿದ್ದ ಟಾಟಾ ಏಸ್ ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ದುರ್ಮರಣ ಹೊಂದಿರುವ ಘಟನೆ ಇಂದು ಬೆಳಗ್ಗೆ…
ಏ.25ರ ರಾತ್ರಿ ಕೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದರು. ರಸ್ತೆ ಇಕ್ಕೆಲಗಳಲ್ಲಿ ಬೀದಿ ದೀಪಗಳು ಬೆಳಗದ…
ದೇಶಭಕ್ತಿ ಮತ್ತು ದೇಶದ್ರೋಹ...... ಇದು ಬ್ರಿಟಿಷರ ಕಾಲದ್ದೇ ಅಥವಾ ಈ ಕಾಲಕ್ಕೂ ಅನ್ವಯಿಸುತ್ತದೆಯೇ..... ರಾಷ್ಟ್ರೀಯತೆ ಎಂಬ ಪರಿಕಲ್ಪನೆಯ ಸುತ್ತಾ....... ರಾಷ್ಟ್ರ…
ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಓರ್ವ ಬೈಕ್ ಸಾವನ್ನಪ್ಪಿದರೆ, ಮತ್ತೋರ್ವ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ…
ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕಗಳಿಸಿದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ…
2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರ ಫಲಿತಾಂಶ ಪ್ರಕಟಗೊಂಡಿದ್ದು, ದೊಡ್ಡಬಳ್ಳಾಪುರ ತಾಲೂಕಿನ ಕಂಟನಕುಂಟೆ ಗ್ರಾಮದ ಲಿಟ್ಲ್ ಮಾಸ್ಟರ್ ಪಬ್ಲಿಕ್ ಶಾಲೆಯು…