ತಂದೆಯ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನ ಮದುವೆಯಾದ ಯುವತಿ: ಕುಪಿತಗೊಂಡ ತಂದೆ: ಮಗಳು ಮರಣ ಹೊಂದಿದ್ದಾಳೆಂದು ಶ್ರದ್ಧಾಂಜಲಿ ಫೋಟೋ‌ ಬಿಡುಗಡೆ

ತನ್ನ ತಂದೆ ವಿರೋಧದ ನಡುವೆಯೂ ತಾನು ಪ್ರೀತಿಸಿದ ಪ್ರಿಯಕನನ್ನು ಯುವತಿ ಮದುವೆಯಾಗಿದ್ದು, ಇದನ್ನ ಸಹಿಸದ ತಂದೆ, ನನ್ನ ಮಗಳು ಸತ್ತುಹೋಗಿದ್ದಾಳೆಂದು ಶ್ರದ್ಧಾಂಜಲಿ ಫೋಟೋ ಹಾಕಿ ಆಕ್ರೋಶವ್ಯಕ್ತಪಡಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ಸಿರಿಸಿಲ್ಲದ ಚಿಲುವೇರಿ ಮುರಳಿ ಎಂಬುವವರ ಮಗಳು 18 ವರ್ಷದ ಚಿಲುವೇರಿ ಅನುಷಾ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ತಾನು ಪ್ರೀತಿಸಿದ ವ್ಯಕ್ತಿಯನ್ನು ತಂದೆಗೆ ತಿಳಿಸದೇ ಮದುವೆಯಾಗಿದ್ದಾಳೆ.

ಈ ವಿಷಯ ತಿಳಿದ ತಂದೆ ಮುರಳಿ, ಮಗಳು ಸತ್ತಿದ್ದಾಳೆ ಎಂದು ಶ್ರದ್ಧಾಂಜಲಿ ಪೋಸ್ಟರ್ ನ್ನು ಮನೆಯ ಹೊರಗೆ ಹಾಕಿದ್ದಾರೆ.

ಯುವತಿ ಚಿಲುವೇರಿ ಅನುಷಾ ಪ್ರಥಮ ವರ್ಷದ ಬಿ ಟೆಕ್ ಓದುತ್ತಿದ್ದಳು, ಯುವಕನ ಪ್ರೀತಿಯ ಬಲೆಗೆ ಬಿದ್ದು, ಆತನನ್ನೆ ಮದುವೆಯಾಗಲು ನಿರ್ಧರಿಸಿ ತಂದೆಗೆ ತಿಳಿಸಿದಾಗ ತಂದೆ ಮಗಳ ನಿರ್ಧಾರವನ್ನ ನಿರಾಕರಿಸಿ, ಪ್ರಿಯಕರನನ್ನ ಮದುವೆಯಾಗಿದ್ದಾಳೆ.

ನನ್ನ ಮಗಳ ತಲೆ ಕಡೆಸಿ ನನ್ನಿಂದ ದೂರ ಮಾಡಿದ್ದಾರೆ. ಕಷ್ಟಪಟ್ಟು ದುಡಿದು ಕಾಲೇಜಿಗೆ ಫೀಸ್ ಕಟ್ಟಿ ಓದಲು ಕಳುಹಿಸಿದರೆ ಪ್ರೀತಿಯ ಬಲೆಗೆ ಬಿದ್ದು ನನಗೆ ಮೋಸ ಮಾಡಿ ಹೋಗಿದ್ದಾಳೆ. ಯಾರೂ ತಂದೆ-ತಾಯಿಗೆ ಮೋಸ ಮಾಡಬೇಡಿ. ನನಗೆ ಆಗಿರುವ ಅನ್ಯಾಯ ಯಾವ ಪೋಷಕರಿಗೂ ಆಗಬಾರದು ಎಂದು ಯುವತಿ ತಂದೆ ಮುರಳಿ ಅವರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

Ramesh Babu

Journalist

Recent Posts

ರಾಜ್ಯದ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ರಾಜ್ಯದ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ಸಂವಿಧಾನದ ಪುಸ್ತಕ ಹಿಡಿದು, ವೀರ ಗಂಗಾಧರನ ಅಜ್ಜನ ಹೆಸರಿನಲ್ಲಿ…

2 hours ago

ರಾಜ್ಯದ 25ನೇ ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ: ವೀರ ಗಂಗಾಧರ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ

ರಾಜ್ಯದ 25 ಸಿಎಂ ಆಗಿ ಡಿ.ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಿಸಿದ್ದಾರೆ. ವೀರ ಗಂಗಾಧರನ ಅಜ್ಜನ ಹೆಸರಿನಲ್ಲಿ ಪ್ರಮಾಣ ವಚನ…

2 hours ago

ಅಧಿಕಾರಕ್ಕೇರುವ ಮುನ್ನವೇ ಟ್ರಬಲ್ ಶೂಟರ್ ಚಾಣಾಕ್ಷ ನಡೆ: ದೇವೇಗೌಡ-ಯಡಿಯೂರಪ್ಪ ಆಶೀರ್ವಾದ ಪಡೆದ ಡಿಕೆಶಿ

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನಕ್ಕೂ ಮುನ್ನವೇ ತಮ್ಮ…

4 hours ago

ಡಿ.ಕೆ.ಶಿವಕುಮಾರ್ ಪದಗ್ರಹಣ: ಡಿಕೆಶಿ ಜೊತೆ ಓರ್ವ ಡಿಸಿಎಂ ಸೇರಿ 12 ಮಂದಿ ಸಚಿವರಾಗಿ ಪ್ರಮಾಣ ವಚನ….

ಇಂದು ಸಂಜೆ 4:05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಪ್ರಮಾಣ ವಚನ…

5 hours ago

ಬಿಜೆಪಿಗೆ ಅಧಿಕಾರ ಸಿಕ್ಕಾಗ ಒಬಿಸಿ, ದಲಿತರ ರಾಜಕೀಯ ಪ್ರಾತಿನಿಧ್ಯ ಏಕೆ ನೆನಪಾಗಲಿಲ್ಲ?- ಪ್ರಿಯಾಂಕ್ ಖರ್ಗೆ ಪ್ರಶ್ನೆ

ಬಿಜೆಪಿ ನಾಯಕರಿಗೆ ಈಗ ಏಕಾಏಕಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಕಾಳಜಿ ಬಂದುಬಿಟ್ಟಿದೆ. ಕಾಲ, ಸಂದರ್ಭ…

6 hours ago

ಡಾ.ಜಿ.ಪರಮೇಶ್ವರ್ ಗೆ ಉಪಮುಖ್ಯಮಂತ್ರಿ ಸ್ಥಾನ.?: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ ಸಿದ್ದರಾಮಯ್ಯ ಸುಳಿವು

ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ, ನಿಯೋಜಿತ ಸಿಎಂ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸದಸ್ಯ…

6 hours ago