ತಂದೆಯ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನ ಮದುವೆಯಾದ ಯುವತಿ: ಕುಪಿತಗೊಂಡ ತಂದೆ: ಮಗಳು ಮರಣ ಹೊಂದಿದ್ದಾಳೆಂದು ಶ್ರದ್ಧಾಂಜಲಿ ಫೋಟೋ‌ ಬಿಡುಗಡೆ

ತನ್ನ ತಂದೆ ವಿರೋಧದ ನಡುವೆಯೂ ತಾನು ಪ್ರೀತಿಸಿದ ಪ್ರಿಯಕನನ್ನು ಯುವತಿ ಮದುವೆಯಾಗಿದ್ದು, ಇದನ್ನ ಸಹಿಸದ ತಂದೆ, ನನ್ನ ಮಗಳು ಸತ್ತುಹೋಗಿದ್ದಾಳೆಂದು ಶ್ರದ್ಧಾಂಜಲಿ ಫೋಟೋ ಹಾಕಿ ಆಕ್ರೋಶವ್ಯಕ್ತಪಡಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರಿಸಿಲ್ಲಾ ಜಿಲ್ಲೆಯಲ್ಲಿ ನಡೆದಿದೆ.

ಸಿರಿಸಿಲ್ಲದ ಚಿಲುವೇರಿ ಮುರಳಿ ಎಂಬುವವರ ಮಗಳು 18 ವರ್ಷದ ಚಿಲುವೇರಿ ಅನುಷಾ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ತಾನು ಪ್ರೀತಿಸಿದ ವ್ಯಕ್ತಿಯನ್ನು ತಂದೆಗೆ ತಿಳಿಸದೇ ಮದುವೆಯಾಗಿದ್ದಾಳೆ.

ಈ ವಿಷಯ ತಿಳಿದ ತಂದೆ ಮುರಳಿ, ಮಗಳು ಸತ್ತಿದ್ದಾಳೆ ಎಂದು ಶ್ರದ್ಧಾಂಜಲಿ ಪೋಸ್ಟರ್ ನ್ನು ಮನೆಯ ಹೊರಗೆ ಹಾಕಿದ್ದಾರೆ.

ಯುವತಿ ಚಿಲುವೇರಿ ಅನುಷಾ ಪ್ರಥಮ ವರ್ಷದ ಬಿ ಟೆಕ್ ಓದುತ್ತಿದ್ದಳು, ಯುವಕನ ಪ್ರೀತಿಯ ಬಲೆಗೆ ಬಿದ್ದು, ಆತನನ್ನೆ ಮದುವೆಯಾಗಲು ನಿರ್ಧರಿಸಿ ತಂದೆಗೆ ತಿಳಿಸಿದಾಗ ತಂದೆ ಮಗಳ ನಿರ್ಧಾರವನ್ನ ನಿರಾಕರಿಸಿ, ಪ್ರಿಯಕರನನ್ನ ಮದುವೆಯಾಗಿದ್ದಾಳೆ.

ನನ್ನ ಮಗಳ ತಲೆ ಕಡೆಸಿ ನನ್ನಿಂದ ದೂರ ಮಾಡಿದ್ದಾರೆ. ಕಷ್ಟಪಟ್ಟು ದುಡಿದು ಕಾಲೇಜಿಗೆ ಫೀಸ್ ಕಟ್ಟಿ ಓದಲು ಕಳುಹಿಸಿದರೆ ಪ್ರೀತಿಯ ಬಲೆಗೆ ಬಿದ್ದು ನನಗೆ ಮೋಸ ಮಾಡಿ ಹೋಗಿದ್ದಾಳೆ. ಯಾರೂ ತಂದೆ-ತಾಯಿಗೆ ಮೋಸ ಮಾಡಬೇಡಿ. ನನಗೆ ಆಗಿರುವ ಅನ್ಯಾಯ ಯಾವ ಪೋಷಕರಿಗೂ ಆಗಬಾರದು ಎಂದು ಯುವತಿ ತಂದೆ ಮುರಳಿ ಅವರು ತನ್ನ ಅಳಲನ್ನು ತೋಡಿಕೊಂಡಿದ್ದಾರೆ.

Ramesh Babu

Journalist

Recent Posts

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

11 hours ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

12 hours ago

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ…?

ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಎಲೆಕ್ಷನ್: ಗೆದ್ದ ಅಭ್ಯರ್ಥಿ ಪಡೆದ ಮತ ಎಷ್ಟು ಗೊತ್ತಾ...? ವಾರ್ಡ್ ನಂ.: 1 ಹೆಸರು: ಶ್ವೇತಾ…

15 hours ago

ಮರ್ಯಾದಾ ಹತ್ಯೆ……..

  ಮರ್ಯಾದಾ ಹತ್ಯೆ........ ಕ್ಷಮಿಸಿ ಬಿಡು ಮಾನ್ಯ ಎಂಬ ಹುಬ್ಬಳ್ಳಿ ಹತ್ತಿರದ ನನ್ನ ಗರ್ಭಿಣಿ ತಂಗಿಯೇ..... ನಮ್ಮದೇ ದೇಶದ, ನಮ್ಮದೇ…

1 day ago

ಅಪಘಾತದಲ್ಲಿ ಪ್ರಜ್ಞೆ ತಪ್ಪಿಬಿದ್ದ ವ್ಯಕ್ತಿ: ಆಸ್ಪತ್ರೆಗೆ ದಾಖಲಿಸುವುದಾಗಿ ನಂಬಿಸಿ ಫೋನ್ ಪೇ ಮೂಲಕ 80 ಸಾವಿರ ವಸೂಲಿ: ಆಸ್ಪತ್ರೆಗೆ ದಾಖಲಿಸದೇ ಪರಾರಿಯಾಗಿದ್ದ ಐನಾತಿಗಳ ಬಂಧನ

ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…

1 day ago