ಕನ್ನಡ ಚಿತ್ರ ರಂಗಕ್ಕೀಗ ವಸಂತಕಾಲ. ಬ್ಯಾಕ್ ಟು ಬ್ಯಾಕ್ ಹಿಟ್ ಮೇಲೆ ಹಿಟ್ ಕೊಡ್ತಾ ಬಂದಿರೋ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸ ದಾಖಲೆಗೆ “ದೇವರ ಆಟ ಬಲ್ಲವರಾರು” ಸಿನಿಮಾ ಸಜ್ಜಾಗಿದೆ.
‘ಫಿರಂಗಿಪುರ’ ಸಿನಿಮಾ ಖ್ಯಾತಿಯ ಜನಾರ್ಧನ್.ಪಿ ಜಾನಿ ನಿರ್ದೇಶನದ, ಪ್ರಿಸ್ವಸ್ ಸ್ಟುಡಿಯೋಸ್ ಬ್ಯಾನರ್ ಅಡಿ ಮೂಡಿ ಬರ್ತಾ ಇರೋ ಸಿನಿಮಾ ಇದಾಗಿದೆ. ಜೂನ್ 15ಕ್ಕೆ ಭರ್ಜರಿಯಾಗಿ ಟೈಟಲ್ ಲಾಂಚ್ ಮಾಡಿದೆ. ಕುತೂಹಲಕಾರಿ ಸಂಗತಿ ಎಂದರೆ 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆ ಮೇಲೆ ತಂದು ಗಿನ್ನಿಸ್ ದಾಖಲೆ ಬರೆಯಲು ಸಕಲ ಸಿದ್ಧತೆಗೆ ಸಜ್ಜಾಗಿದೆ ಈ ಚಿತ್ರ ತಂಡ.
ದೇವರಿಗೆ ವಿಶೇಷವಾಗಿ ಪೂಜೆಸಲ್ಲಿಸಿ ಗಣ ಹೋಮವನ್ನು ಮಾಡಿ ಭರ್ಜರಿಯಾಗಿ ಟೈಟಲ್ ಲಾಂಚ್ ಮಾಡಲಾಗಿದೆ. ಈ ವೇಳೆ ಮಾತನಾಡಿದ ನಿರ್ದೇಶಕ ಜನಾರ್ದನ್.ಪಿ ಜಾನಿ, ನಾನು ಈ ಹಿಂದೆ “ಫಿರಂಗಿಪುರ” ಚಿತ್ರ ಮಾಡಿ. ಈಗ “ದೇವರ ಆಟ ಬಲ್ಲವರಾರು” ಸಿನಿಮಾ ನಿರ್ದೇಶಿಸುತ್ತಿದ್ದೇನೆ. 1975 ಕಾಲಘಟ್ಟದ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ ರೆಕಾರ್ಡ್ ಮಾಡಲೇಬೇಕು ಅನ್ನೋದು ನನ್ನ ಆಸೆ. ಈ ಸಿನಿಮಾವನ್ನು ಇತಿಹಾಸ ದಾಖಲ ಪುಟಕ್ಕೆ ಸೇರಿಸಲು ನಾನು ಮತ್ತು ನನ್ನ ತಂಡ ಕಳೆದ ಒಂದು ವರ್ಷದಿಂದ ಹಗಲು -ರಾತ್ರಿಯನ್ನದೆ ಶ್ರಮಿಸುತ್ತಿದ್ದೇವೆ ಎಂದರು.
ಗಿನ್ನಿಸ್ ರೆಕಾರ್ಡ್ ಗಾಗಿ 30 ದಿನಗಳಲ್ಲಿ ಚಿತ್ರೀಕರಣ ಮಾಡಿ ತೆರೆ ಮೇಲೆ ತರುವ ಈ ಪ್ರಕ್ರಿಯೆಯನ್ನು ವೀಕ್ಷಿಸಲು ಆರು ಜನ ತೀರ್ಪುಗಾರರು ಸ್ಥಳದಲ್ಲಿ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲ ಪ್ರೋತ್ಸಾಹವಿರಲಿ.
ಅರ್ಜುನ್ ರಮೇಶ್(ಶನಿ ಧಾರವಾಹಿ ಖ್ಯಾತಿಯ), ಸಿಂಧು ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್ ಅರ್ಜುನ್, ಮೇದಿನಿ ಕೆಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಿಕ ಜನಾರ್ಧನ್ ತಿಳಿಸಿದರು.
ಇದೇ ವೇಳೆ ಮಾತನಾಡಿದ ನಾಯಕನಟ ಅರ್ಜುನ್ ರಮೇಶ್ ಈ ಸಿನಿಮಾದಲ್ಲಿ ಸೂರಿ ಅನ್ನೋ ಪಾತ್ರ ಅಭಿನಯಿಸುತ್ತಿದ್ದೇನೆ. ನಿರ್ದೇಶಕರ ಕಾರ್ಯವೈಕರಿ ಕಂಡು ಆಶ್ಚರ್ಯವಾಯಿತು. ಈ ಸಿನಿಮಾಕ್ಕಾಗಿ ಎರಡು ತಿಂಗಳಲ್ಲಿ 14 ಕೆಜಿ ತೂಕ ಇಳಿಸಿದ್ದೇನೆ. ನೋಡಿದರೆ ಕಂಡು ಹಿಡಿಯಲಾಗದಷ್ಟು, ಸಣ್ಣದಾಗಿದ್ದೇನೆ ಎಂದರು.
ಮುಖ್ಯವಾಗಿ ಈ ಸಿನಿಮಾದ ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್ ಉಪಸ್ಥಿತರಿದ್ದರು.
ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೇ ಇರುತ್ತದೆ, ಎಂಬ ಅಡಿವಹದೊಂದಿಗೆ ಶುರುವಾಗು ಈ ಚಿತ್ರ ಪ್ರೇಕ್ಷಕರ ಎದುರು ಎಂತಹ ಮ್ಯಾಜಿಕ್ ಮಾಡಬಹುದು ಕಾದು ನೋಡಬೇಕಿದೆ.
ಈಗಾಗಲೇ ಚಿತ್ರತಂಡ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದು, ಸೆಟ್ವರ್ಕ್, ಕಲಾವಿದರ ತಾಲೀಮು ಬರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ “ದೇವರ ಆಟ ಬಲ್ಲವರ” ಕನ್ನಡ ಸಿನಿಮಾ ಒಂದು, ವಿಶ್ವಮಟ್ಟದಲ್ಲಿ ರಾರಾಜಿಸಲಿದೆ.
ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಎರಡನೇ ಪಟ್ಟಿಯಲ್ಲಿ ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ…
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆಧಾರ್ ಕಾರ್ಡ್ ದೊಡ್ಡ…
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ (ಎಂ.ಪಿ.ಆರ್.ಎ.ಸಿ.ಎಸ್.)ದ 2026–2031ನೇ ಅವಧಿಯ ಆಡಳಿತ ಮಂಡಳಿ…
ದೊಡ್ಡಬಳ್ಳಾಪುರ: ಆಷಾಢ ಮಾಸದಲ್ಲಿ ಗಾಳಿಪಟ ಹಾರಿಸುವುದು ನಮ್ಮ ಭಾಗದ ಸಾಂಪ್ರದಾಯಿಕ ಆಚರಣೆಯಾಗಿದ್ದು, ಗಾಳಿಪಟವು ಒಂದು ಕಲೆಯಷ್ಟೇ ಅಲ್ಲ ಸಾಹಸದ ಪ್ರವೃತ್ತಿಯೂ…
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕರ್ನಾಟಕ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಲಿಖಿತ ಪರೀಕ್ಷೆ ಭಾನುವಾರ ಯಾವುದೇ ಅಡಚಣೆ ಅಥವಾ…
ಇತ್ತೀಚೆಗೆ ಹೊಸದಾಗಿ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾದ, ಡಾಕ್ಟರ್ ರಾಮ್ ಮನೋಹರ್ ಲೋಹಿಯಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಮಳವಳ್ಳಿ ಶಿವಣ್ಣ…