ಯಲಹಂಕ ತಾಲ್ಲೂಕಿನ ಚಲ್ಲಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನ ಸನ್ನಿಧಿಯಿಂದ ಜನವರಿ 29ರ ಸೋಮವಾರದಂದು ಒಂದು ವಾರಗಳ ಕಾಲ ತಿರುಮಲ ತಿರುಪತಿ ದೇವಸ್ಥಾನಕ್ಕೆ 13ನೇ ವರ್ಷದ ಪಾದಯಾತ್ರೆ ಮೂಲಕ ಹರಿಸೇವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಹೆಸರಘಟ್ಟ ಹೋಬಳಿಯ ಚಲ್ಲಹಳ್ಳಿಯ ವೇಣುಗೋಪಾಲಸ್ವಾಮಿ ತಿರುಪತಿ ತಿರುಮಲ ಪಾದಯಾತ್ರಾ ಸೇವಾ ಸಮಿತಿ ವತಿಯಿಂದ 30ಕ್ಕೂ ಹೆಚ್ಚು ಭಕ್ತರು, 270ಕಿ.ಮೀ ನ್ನು 6ದಿನಗಳ ಕಾಲ ಪಾದಯಾತ್ರೆ ಮೂಲಕ ನಡೆದು, 7ನೇ ದಿನ ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯಲಾಗುತ್ತದೆ.
ಕಳೆದ 12 ವರ್ಷದಿಂದ ಈ ಪಾದಯಾತ್ರೆ ಸೇವೆ ನಡೆಯುತ್ತಿದ್ದು, ಬೆಳಗ್ಗೆ 5ಗಂಟೆಯಿಂದ ಸಂಜೆ 6ಗಂಟೆಯವರೆಗೂ ಸೇವಾಕರ್ತರು ಪಾದಯಾತ್ರೆ ನಡೆಸಲಿದ್ದಾರೆ. ಪ್ರತಿದಿನ 30ರಿಂದ 40ಕಿ.ಮೀ. ಪಾದಸೇವೆ ನಡೆಯಲಿದೆ. ರಾತ್ರಿ ಯಾತ್ರೆ ಇರುವುದಿಲ್ಲ. ಮಾರ್ಗಮಧ್ಯೆ ಸಿಗುವ ಶಾಲೆಯ ಆವರಣ, ಮಠಗಳು ಸುಮುದಾಯಭವನ, ದೇವಾಲಯ ಆವರಣದಲ್ಲಿ ರಾತ್ರಿ ಉಳಿದುಕೊಂಡು ಬೆಳಗ್ಗೆ ಪ್ರಯಾಣ ಬೆಳೆಸಲಾಗುತ್ತದೆ ಎಂದು ಸೇವಾ ಸಮಿತಿಯ ಹಿರಿಯ ಯಾತ್ರಿ ಚೇತನ್ ಗೌಡ ಹೇಳಿದರು.
ದಾರಿಯಲ್ಲಿ ನಡೆಯುವಾಗ ಆಯಾಸವಾಗುತ್ತದೆ, ಕೆಲವರಿಗೆ ಕಾಲು ಬೊಬ್ಬೆ ಬರುತ್ತದೆ. ಆದರೆ ದಾರಿಯುದ್ದಕ್ಕೂ ಹಾಡು ಭಕ್ತಿಗೀತೆಗಳ ಮೂಲಕ ಗೋವಿಂದ ಗೋವಿಂದ ಎಂದು ನಾಮಸ್ಮರಣೆ ಮಾಡುವುದರಿಂದ ನೋವುಗಳನ್ನು ಮರೆಸುತ್ತದೆ. ಮಾರ್ಗದುದ್ದಕ್ಕೂ ಯಾತ್ರಿಗಳಿಗೆ ತಿಮ್ಮಪ್ಪನ ಭಕ್ತರು ನೀರು, ಹಾಲು ಕೋಸಂಬರಿ, ಚಹ ಬಿಸ್ಕೆಟ್ ನೀಡಿ ನಮಸ್ಕರಿಸಿ ಹೋಗುತ್ತಿರುವುದು ನಮಗೆ ಇನ್ನಷ್ಟು ಪ್ರೇರಣೆ ನೀಡುತ್ತದೆ ಎಂದು ಕಿರಿಯ ಪಾದಯಾತ್ರಿ ರಾಹುಲ್ ಅನುಭವವನ್ನು ತಿಳಿಸಿದರು.
ಒಳ್ಳೆಯ ಮಳೆಯಾಗಿ ಬೆಳೆಯಾಗಲಿ ಎಂದು ಪಾದಯಾತ್ರೆಯಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸುತ್ತಿದ್ದೇನೆ ದೇಹ ಮತ್ತು ಮನಸ್ಸಿನ ಮೇಲೆ ಉತ್ತಮ ಪರಿಣಾಮ ಬಿರಿದೆ. ರಕ್ತ ಶುದ್ಧಿಯಾಗುತ್ತದೆ. ದೇಹ ಹಗುರವಾಗಿರುತ್ತದೆ ಎಂದು ನಂಜುಂಡಪ್ಪ ಹೇಳುತ್ತಾರೆ.
ಕೋವಿಡ್ ನಂತರದ ವಿಶ್ವದಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ ಜಗತ್ತು ಬದಲಾವಣೆಯ ಹಾದಿಯಲ್ಲಿರುವಂತೆ ಕಾಣುತ್ತಿದೆ. ಕೆಲವು ಆಕ್ರಮಣಕಾರಿ ಯುದ್ಧಗಳು, ಮುಂದುವರಿದ ಭಯೋತ್ಪಾದನಾ…
22 ವರ್ಷದ ಯುವಕ ಮನೆಯಲ್ಲೇ ನೇಣಿಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ನಾರಸಿಂಹನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…