ಚಳಿಗಾಲದಲ್ಲಿ ಮೌನ ಚರ್ಮ ಹಾನಿ: ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ಅಪಾಯ – ವೈದ್ಯರ ಎಚ್ಚರಿಕೆ

ಬೆಂಗಳೂರು , ವೈಟ್‌ ಫೀಲ್ದ್‌ – ಚಳಿಗಾಲವನ್ನು ಆರಾಮದಾಯಕ ಋತುವೆಂದು ಭಾವಿಸಿದರೂ, ವೈದ್ಯರ ಪ್ರಕಾರ ಚಳಿಯ ವಾತಾವರಣವು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಚರ್ಮಕ್ಕೆ ಮೌನವಾಗಿ ಹಾನಿ ಉಂಟುಮಾಡಬಹುದು. ಈ ಸಮಸ್ಯೆಗಳು ನಿಧಾನವಾಗಿ ಜಾಸ್ತಿಯಾಗುತ್ತಾ, ಗಂಭೀರ ಹಂತಕ್ಕೆ ಬಂದಾದ ಮಾತ್ರ ಗಮನಕ್ಕೆ ಬರುತ್ತವೆ.

ಮೆಡಿಕವರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ರಜಿತಾ ಅಲ್ಲೂರಿ ಅವರ ಪ್ರಕಾರ, ಕಡಿಮೆ ತೇವಾಂಶ , ತಂಪಾದ ಗಾಳಿ, ಹೆಚ್ಚು ಬಿಸಿ ನೀರಿನ ಸ್ನಾನ, ರೂಮ್ ಹೀಟರ್ ಮತ್ತು ಏರ್ ಕಂಡೀಷನರ್ ಬಳಕೆಯಿಂದ ಚರ್ಮದ ಸ್ವಾಭಾವಿಕ ರಕ್ಷಣಾ ಪದರವನ್ನು ದುರ್ಬಲಗೊಳಿಸುತ್ತವೆ. “ಸ್ವಲ್ಪ ಕಡಿತಾ , ಚರ್ಮದ ಬಿಳಿಚಿಕೊಳ್ಳುವುದು ಸಾಮಾನ್ಯವೆಂದು ನಿರ್ಲಕ್ಷಿಸಿದರೆ, ಇದು ಎಕ್ಸಿಮಾ, ಡರ್ಮಟೈಟಿಸ್, ಚರ್ಮದ ಸೋಂಕುಗಳು ಮತ್ತು ಬಿರುಕುಗಳಿಗೆ ಕಾರಣವಾಗಬಹುದು,” ಎಂದು ಅವರು ಎಚ್ಚರಿಸುತ್ತಾರೆ.

ವೈದ್ಯರ ಪ್ರಕಾರ, ಚಳಿಗಾಲದಲ್ಲಿ ವಯಸ್ಕರಿಗಿಂತ ಮಕ್ಕಳ ಚರ್ಮ ಹೆಚ್ಚು ವೇಗವಾಗಿ ಹಾನಿಗೊಳಗಾಗುತ್ತದೆ. ಮಕ್ಕಳ ತಜ್ಞೆ ಡಾ. ಲಿನತಾ ರೆಡ್ಡಿ ಅವರ ಪ್ರಕಾರ, ಮಕ್ಕಳ ಚರ್ಮದ ರಕ್ಷಣಾ ಪದರ ತೆಳುವಾಗಿದ್ದು, ಬೇಗ ತೇವಾಂಶ ಕಳೆದುಕೊಳ್ಳುತ್ತದೆ. “ಮಕ್ಕಳಲ್ಲಿ ಚರ್ಮ ಒಣಗುವುದು ಸಹಜವೆಂದು ಪೋಷಕರು ತಡ ಮಾಡುತ್ತಾರೆ. ಆದರೆ ಚಿಕಿತ್ಸೆ ಇಲ್ಲದೆ ಬಿಟ್ಟರೆ ಇದು ಸೋಂಕುಗಳು, ತುಟಿಗಳ ಬಿರುಕುಗಳು ಮತ್ತು ಅಲರ್ಜಿಕ್ ಸಮಸ್ಯೆಗಳ ತೀವ್ರತೆಗೆ ಕಾರಣವಾಗಬಹುದು,” ಎಂದು ಅವರು ತಿಳಿಸಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು ತಂಪಾದ ವಾತಾವರಣ, ಡ್ರೈ ತರಗತಿಗಳು, ಪದೇಪದೇ ಕೈ ತೊಳೆಯುವುದು ಹಾಗೂ ತೀವ್ರ ಸಾಬೂನು-ಸ್ಯಾನಿಟೈಸರ್ ಬಳಕೆ ಕಾರಣದಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಶಿಶುಗಳು ಮತ್ತು ಪುಟ್ಟ ಮಕ್ಕಳು ಇನ್ನಷ್ಟು ಸಂವೇದನಾಶೀಲರಾಗಿರುತ್ತಾರೆ.

ವೈದ್ಯರು ನಿಯಮಿತ ಮಾಯಿಶ್ಚರೈಸರ್ ಬಳಕೆ, ಬಿಸಿ ನೀರಿನ ಸ್ನಾನವನ್ನು ನಿಯಂತ್ರಿಸುವುದು, ಮೃದುವಾದ ಕ್ಲೆನ್ಸರ್, ಸಾಕಷ್ಟು ನೀರು ಸೇವನೆ ಮತ್ತು ಆರಂಭದಲ್ಲೇ ವೈದ್ಯರ ಸಲಹೆ ಪಡೆಯುವುದು ಅಗತ್ಯವೆಂದು ಸಲಹೆ ನೀಡುತ್ತಾರೆ.

Ramesh Babu

Journalist

Recent Posts

ಪ್ರಸ್ತುತ ಒಂದು ಮಲೇರಿಯಾ, 6 ಡೆಂಗ್ಯೂ ದಾಖಲು: ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ:- ಡಿಸಿ ಡಾ.ಕೆ ಎನ್ ಅನುರಾಧ

ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ…

6 hours ago

ಗ್ರಾಮಾಂತರ ಪೊಲೀಸ್ ಠಾಣೆಗೆ ಬೊಲೆರೋ ವಾಹನ ಹಸ್ತಾಂತರ

ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಪೊಲೀಸ್ ಠಾಣೆಯ ಜೀಪ್ ಗೂ ಶಾಸಕರ…

7 hours ago

ಲಕ್ಕೇನಹಳ್ಳಿಯಲ್ಲಿ ಎತ್ತಿನಹೊಳೆ ಡ್ಯಾಂ ನಿರ್ಮಾಣ ಬೇಡ- ತಹಶೀಲ್ದಾರ್ ಮಲ್ಲಪ್ಪಗೆ ರೈತರ ಮನವಿ

ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹಣೆಗೆ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಲಕ್ಕೇನಹಳ್ಳಿ…

8 hours ago

ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ: ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸಿ ಕೆಐಎಡಿಬಿ ಹಾಗೂ…

11 hours ago

ದಿಢೀರ್ ಸಾವುಗಳ ಸುತ್ತಾ…..

ನನ್ನ ಸಾವಿನೊಂದಿಗೆ ಈ ಜಗತ್ತೂ ಇಲ್ಲವಾಗುತ್ತದೆ.......... ದಿಢೀರ್ ಸಾವುಗಳ ಸುತ್ತಾ..... ಇತ್ತೀಚಿನ ಕೆಲವು ಮಾಧ್ಯಮ ವರದಿಗಳನ್ನು ನೋಡುತ್ತಿದ್ದರೆ ಅನೇಕ ಯುವಕ…

16 hours ago

ಜನರ ಸಮಸ್ಯೆಗೆ ಸ್ಪಂದಿಸದ ರೈಲ್ವೆ ಅಧಿಕಾರಿಗಳ ವಿರುದ್ಧ ಗುಡುಗಿದ ಇಂಧನ ಸಚಿವ ಕೆ.ಜೆ ಜಾರ್ಜ್

ಬಾಣಸವಾಡಿ ರೈಲ್ವೆ ನಿಲ್ದಾಣದ ಸಮೀಪ ಒಳಚರಂಡಿ ಕಾಮಗಾರಿ ಕೈಗೊಳ್ಳಲು ಸಹಕರಿಸಿ, ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಕೇಂದ್ರ ಸರ್ಕಾರದ…

1 day ago