ಚಳಿಗಾಲದಲ್ಲಿ ಮೌನ ಚರ್ಮ ಹಾನಿ: ವಯಸ್ಕರಿಗಿಂತ ಮಕ್ಕಳಿಗೆ ಹೆಚ್ಚು ಅಪಾಯ – ವೈದ್ಯರ ಎಚ್ಚರಿಕೆ

ಬೆಂಗಳೂರು , ವೈಟ್‌ ಫೀಲ್ದ್‌ – ಚಳಿಗಾಲವನ್ನು ಆರಾಮದಾಯಕ ಋತುವೆಂದು ಭಾವಿಸಿದರೂ, ವೈದ್ಯರ ಪ್ರಕಾರ ಚಳಿಯ ವಾತಾವರಣವು ಯಾವುದೇ ಸ್ಪಷ್ಟ ಲಕ್ಷಣಗಳಿಲ್ಲದೆ ಚರ್ಮಕ್ಕೆ ಮೌನವಾಗಿ ಹಾನಿ ಉಂಟುಮಾಡಬಹುದು. ಈ ಸಮಸ್ಯೆಗಳು ನಿಧಾನವಾಗಿ ಜಾಸ್ತಿಯಾಗುತ್ತಾ, ಗಂಭೀರ ಹಂತಕ್ಕೆ ಬಂದಾದ ಮಾತ್ರ ಗಮನಕ್ಕೆ ಬರುತ್ತವೆ.

ಮೆಡಿಕವರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ರಜಿತಾ ಅಲ್ಲೂರಿ ಅವರ ಪ್ರಕಾರ, ಕಡಿಮೆ ತೇವಾಂಶ , ತಂಪಾದ ಗಾಳಿ, ಹೆಚ್ಚು ಬಿಸಿ ನೀರಿನ ಸ್ನಾನ, ರೂಮ್ ಹೀಟರ್ ಮತ್ತು ಏರ್ ಕಂಡೀಷನರ್ ಬಳಕೆಯಿಂದ ಚರ್ಮದ ಸ್ವಾಭಾವಿಕ ರಕ್ಷಣಾ ಪದರವನ್ನು ದುರ್ಬಲಗೊಳಿಸುತ್ತವೆ. “ಸ್ವಲ್ಪ ಕಡಿತಾ , ಚರ್ಮದ ಬಿಳಿಚಿಕೊಳ್ಳುವುದು ಸಾಮಾನ್ಯವೆಂದು ನಿರ್ಲಕ್ಷಿಸಿದರೆ, ಇದು ಎಕ್ಸಿಮಾ, ಡರ್ಮಟೈಟಿಸ್, ಚರ್ಮದ ಸೋಂಕುಗಳು ಮತ್ತು ಬಿರುಕುಗಳಿಗೆ ಕಾರಣವಾಗಬಹುದು,” ಎಂದು ಅವರು ಎಚ್ಚರಿಸುತ್ತಾರೆ.

ವೈದ್ಯರ ಪ್ರಕಾರ, ಚಳಿಗಾಲದಲ್ಲಿ ವಯಸ್ಕರಿಗಿಂತ ಮಕ್ಕಳ ಚರ್ಮ ಹೆಚ್ಚು ವೇಗವಾಗಿ ಹಾನಿಗೊಳಗಾಗುತ್ತದೆ. ಮಕ್ಕಳ ತಜ್ಞೆ ಡಾ. ಲಿನತಾ ರೆಡ್ಡಿ ಅವರ ಪ್ರಕಾರ, ಮಕ್ಕಳ ಚರ್ಮದ ರಕ್ಷಣಾ ಪದರ ತೆಳುವಾಗಿದ್ದು, ಬೇಗ ತೇವಾಂಶ ಕಳೆದುಕೊಳ್ಳುತ್ತದೆ. “ಮಕ್ಕಳಲ್ಲಿ ಚರ್ಮ ಒಣಗುವುದು ಸಹಜವೆಂದು ಪೋಷಕರು ತಡ ಮಾಡುತ್ತಾರೆ. ಆದರೆ ಚಿಕಿತ್ಸೆ ಇಲ್ಲದೆ ಬಿಟ್ಟರೆ ಇದು ಸೋಂಕುಗಳು, ತುಟಿಗಳ ಬಿರುಕುಗಳು ಮತ್ತು ಅಲರ್ಜಿಕ್ ಸಮಸ್ಯೆಗಳ ತೀವ್ರತೆಗೆ ಕಾರಣವಾಗಬಹುದು,” ಎಂದು ಅವರು ತಿಳಿಸಿದ್ದಾರೆ.

ಶಾಲೆಗೆ ಹೋಗುವ ಮಕ್ಕಳು ತಂಪಾದ ವಾತಾವರಣ, ಡ್ರೈ ತರಗತಿಗಳು, ಪದೇಪದೇ ಕೈ ತೊಳೆಯುವುದು ಹಾಗೂ ತೀವ್ರ ಸಾಬೂನು-ಸ್ಯಾನಿಟೈಸರ್ ಬಳಕೆ ಕಾರಣದಿಂದ ಹೆಚ್ಚಿನ ಅಪಾಯದಲ್ಲಿರುತ್ತಾರೆ. ಶಿಶುಗಳು ಮತ್ತು ಪುಟ್ಟ ಮಕ್ಕಳು ಇನ್ನಷ್ಟು ಸಂವೇದನಾಶೀಲರಾಗಿರುತ್ತಾರೆ.

ವೈದ್ಯರು ನಿಯಮಿತ ಮಾಯಿಶ್ಚರೈಸರ್ ಬಳಕೆ, ಬಿಸಿ ನೀರಿನ ಸ್ನಾನವನ್ನು ನಿಯಂತ್ರಿಸುವುದು, ಮೃದುವಾದ ಕ್ಲೆನ್ಸರ್, ಸಾಕಷ್ಟು ನೀರು ಸೇವನೆ ಮತ್ತು ಆರಂಭದಲ್ಲೇ ವೈದ್ಯರ ಸಲಹೆ ಪಡೆಯುವುದು ಅಗತ್ಯವೆಂದು ಸಲಹೆ ನೀಡುತ್ತಾರೆ.

Ramesh Babu

Journalist

Recent Posts

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

2 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

9 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

10 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

23 hours ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

23 hours ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…

23 hours ago