Categories: ಪರಿಸರ

ಚನ್ನಗಿರಿಯಲ್ಲಿ ಕಂಡುಬಂದ ವಿವಿಧ ಬಗೆಯ ಕ್ಯಾಟರ್ ಪಿಲ್ಲರ್ ಗಳು

ದೊಡ್ಡಬಳ್ಳಾಪುರ: ಚಾರಣ ಅನ್ನುವುದು ಬೆಟ್ಟದ ತುದಿಯನ್ನು ಸಾಧ್ಯವಾದಷ್ಟು ಬೇಗೆ ಹೋಗಿ ಮುಟ್ಟುವುದು, ಬೆಟ್ಟದ ತುದಿಯಲ್ಲಿ ನಿಂತು ಸುತ್ತಲಿನ ಪರಿಸರವನ್ನೊಮ್ಮೆ ಸಿಂಹಾವಲೋಕನ ಮಾಡಿ ಖುಷಿ ಪಟ್ಟರೆ ಚಾರಣದ ಉದ್ದೇಶ ಸಾರ್ಥಕ.

ಇದರ ಜೊತೆಗೆ ಈ ಚಾರಣವನ್ನು ಮತ್ತಷ್ಟು ಸಾರ್ಥಕಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವುದೇ ‘ನಿಸರ್ಗನಡಿಗೆ’. ಈ ನಡಿಗೆಯಲ್ಲಿ ಬೆಟ್ಟದ ತುದಿ ಮುಟ್ಟುವುದರ ಜೊತೆಗೆ ನಿಸರ್ಗದ ಹಾದಿಯಲ್ಲಿ ಸಾಗುವಾಗ ಎದುರಾಗುವ ವಿವಿಧ ಜಾತಿಯ ಸಸ್ಯಗಳು, ಗಿಡ, ಮರ, ಕೀಟ,‌ ಪಕ್ಷಿ, ಪುಟ್ಟ ಪ್ರಾಣಿಗಳು ಹೀಗೆ ಕಣ್ಣಿಗೆ ಕಾಣುವ ಜೀವ ವೈದ್ಯದ ಬಗ್ಗೆ ಕ್ರಮಬದ್ದವಾಗಿ ತಿಳಿಯುತ್ತ ಸಾಗುವುದೇ ‘ನಿಸರ್ಗನಡಿಗೆ’ಯ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಯುವ ಸಂಚಲನ ಟ್ರಸ್ಟ್ ಅಧ್ಯಕ್ಷ ಚಿದಾನಂದ ಆರಾಧ್ಯ.

ಈ ವಾರ ತಾಲ್ಲೂಕಿನ ಚನ್ನಗಿರಿಯಲ್ಲಿ ನಡೆದ ನಿಸರ್ಗ ನಡಿಗೆಯಲ್ಲಿ ಎದುರಾದಗಿದ್ದು ವಿವಿಧ ಬಗೆಯ ಕ್ಯಾಟರ್ಪಿಲ್ಲರ್ಗಳು. ಇಷ್ಟು ಬೇಗನೆ ಇವು ನಿಸರ್ಗನಡಿಗೆಯಲ್ಲಿ ಎದುರುಗೊಳ್ಳಲು ಕಾರಣ ಈ ವರ್ಷ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲು ಅನುಭವಕ್ಕೆ ಬರುವ ಮುನ್ನವೇ ಮಳೆ ಪ್ರಾರಂಭವಾಗಿತ್ತು. ಮಾರ್ಚ್ ಅಂತ್ಯದಿಂದಲೇ ಪ್ರಾರಂಭವಾದ ಮಳೆ ಹದವಾಗಿ ಬೀಳುತ್ತಲೇ ಇದೆ. ಕೆರೆ ಕುಂಟೆಗಳಿಗೆ ನೀರು ಬಂದಿಲ್ಲವಾದರು ಬೆಟ್ಟ ಗುಡ್ಡಗಳಲ್ಲಿ, ಅರಣ್ಯ ಪ್ರದೇಶದಲ್ಲಿ ಬೆಳೆದು ನಿಂತಿರುವ ಹಚ್ಚ ಹಸಿರಿನ ಮರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಹಾಗೆಯೇ ಪ್ರಕೃತಿಯಲ್ಲಿನ ಜೀವ ವೈವಿದ್ಯ ಕೀಟ, ಪಕ್ಷಿಗಳು ಮೈ ಕೊಡವಿಕೊಂಡು ಹೊರಬಂದಿವೆ ಎಂದರು.

ನಿಸರ್ಗ ನಡಿಗೆಯಲ್ಲಿ ಎದುರಾಗುವ ಸಸ್ಯ,ಕೀಟಗಳ ಬಗ್ಗೆ ಸಸ್ಯವಿಜ್ಞಾನಿ ಡಾ.ಆರ್.ಗಣೇಶನ್ ಅವರ ವಿವರಣೆ ಕೇಳುತ್ತಲೇ ಬೆಟ್ಟದ ತುದಿ ಮುಟ್ಟಿ ಮತ್ತೆ ಕೆಳಗೆ ಇಳಿಯುವಷ್ಟರಲ್ಲಿ ನಿಸರ್ಗ ನಡಿಗೆ ಸಾರ್ಥಕವಾಗುತ್ತದೆ ಎಂದು ನೆನಪಿಸಿಕೊಂಡರು ನಡಿಗೆಯಲ್ಲಿ ಭಾಗವಹಿಸಿದ್ದವರು.

Ramesh Babu

Journalist

Recent Posts

ಅನ್ನದಾಸೋಹ ಮಾಡುವ ಮೂಲಕ ಸಂದೀಪ್ ಹುಟ್ಟುಹಬ್ಬ ಆಚರಿಸಿದ ಅಭಿಮಾನಿಗಳು

ದೊಡ್ಡಬಳ್ಳಾಪುರ : ಉದ್ಯಮಿಗಳು ಮತ್ತು ಸಮಾಜ ಸೇವಕರಾದ ಗಂಟಿಗಾನಹಳ್ಳಿ ಸಂದೀಪ್ ರವರ ಹುಟ್ಟುಹಬ್ಬವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಸಿಹಿ,…

27 minutes ago

ರೈಲ್ವೆ ನಿಲ್ದಾಣದ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ; ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ

ದೊಡ್ಡಬಳ್ಳಾಪುರ: ನಗರದ ರೈಲ್ವೆ ನಿಲ್ದಾಣದ ಸಮೀಪದ ಆಂಜನೇಯ ದೇವಾಲಯದ ಪಕ್ಕದಲ್ಲಿ ಹೂತುಹಾಕಲಾಗಿದ್ದ ನವಜಾತ ಶಿಶುವಿನ ಮೃತದೇಹ ಶುಕ್ರವಾರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ…

1 hour ago

ರಾಹುಲ್ ಗಾಂಧಿ ಕುರಿತು ಅವಹೇಳನಕಾರಿ ಹೇಳಿಕೆ ಖಂಡನೆ: ಶಾಸಕ ಯಶ್ ಪಾಲ್ ಆನಂದ್ ಸುವರ್ಣ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಶಾಸಕ ಯಶ್ಪಾಲ್…

6 hours ago

ಮಳೆ ಕೈಕೊಟ್ಟು ಮುಂಗಾರು ಬಿತ್ತನೆ ಕುಂಠಿತ: ಶೇ.66ರಷ್ಟು ಮಳೆ ಕೊರತೆ; ಗುರಿಯ ಶೇ.3ರಷ್ಟು ಮಾತ್ರ ಬಿತ್ತನೆ ಪೂರ್ಣ

ಮುಂಗಾರು ಮಳೆ ಕೈಕೊಟ್ಟಿರುವ ಪರಿಣಾಮ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೃಷಿ ಚಟುವಟಿಕೆಗಳು ಈ ಬಾರಿ ತೀವ್ರ ಹಿನ್ನಡೆ ಅನುಭವಿಸಿವೆ. ಸಾಮಾನ್ಯಕ್ಕಿಂತ…

9 hours ago

ಇರುವುದೊಂದೇ ಬದುಕು, ಅದನ್ನು ಅರ್ಥಪೂರ್ಣವಾಗಿ ಸಾರ್ಥಕ ಪಡಿಸಿಕೊಳ್ಳಿ…….

ಸ್ಪರ್ಧೆ ಇರಲಿ, ಆದರೆ ಬದುಕೇ ಸ್ಪರ್ಧೆಯಾಗುವುದು ಬೇಡ..... ಎಲ್ಲಿ ಜೀವನ ನಡೆವುದೋ ಅದೇ ನನ್ನೂರು, ಯಾರು ಸ್ನೇಹದಿ ಬರುವರೋ ಅವರೇ…

11 hours ago

ಜಿಂಕೆಗೆ ವಾಹನ ಡಿಕ್ಕಿ; ಸ್ಥಳದಲ್ಲೇ ಸಾವು

ರಾಜಾನುಕುಂಟೆ: ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯ ರಾಜಾನುಕುಂಟೆ ಸಮೀಪ ಶುಕ್ರವಾರ ಮುಂಜಾನೆ ವೇಗವಾಗಿ ಬಂದ ವಾಹನವೊಂದು ಜಿಂಕೆಗೆ ಡಿಕ್ಕಿ ಹೊಡೆದ ಪರಿಣಾಮ…

11 hours ago