Categories: ಪರಿಸರ

ಚನ್ನಗಿರಿಯಲ್ಲಿ ಕಂಡುಬಂದ ವಿವಿಧ ಬಗೆಯ ಕ್ಯಾಟರ್ ಪಿಲ್ಲರ್ ಗಳು

ದೊಡ್ಡಬಳ್ಳಾಪುರ: ಚಾರಣ ಅನ್ನುವುದು ಬೆಟ್ಟದ ತುದಿಯನ್ನು ಸಾಧ್ಯವಾದಷ್ಟು ಬೇಗೆ ಹೋಗಿ ಮುಟ್ಟುವುದು, ಬೆಟ್ಟದ ತುದಿಯಲ್ಲಿ ನಿಂತು ಸುತ್ತಲಿನ ಪರಿಸರವನ್ನೊಮ್ಮೆ ಸಿಂಹಾವಲೋಕನ ಮಾಡಿ ಖುಷಿ ಪಟ್ಟರೆ ಚಾರಣದ ಉದ್ದೇಶ ಸಾರ್ಥಕ.

ಇದರ ಜೊತೆಗೆ ಈ ಚಾರಣವನ್ನು ಮತ್ತಷ್ಟು ಸಾರ್ಥಕಗೊಳಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿರುವುದೇ ‘ನಿಸರ್ಗನಡಿಗೆ’. ಈ ನಡಿಗೆಯಲ್ಲಿ ಬೆಟ್ಟದ ತುದಿ ಮುಟ್ಟುವುದರ ಜೊತೆಗೆ ನಿಸರ್ಗದ ಹಾದಿಯಲ್ಲಿ ಸಾಗುವಾಗ ಎದುರಾಗುವ ವಿವಿಧ ಜಾತಿಯ ಸಸ್ಯಗಳು, ಗಿಡ, ಮರ, ಕೀಟ,‌ ಪಕ್ಷಿ, ಪುಟ್ಟ ಪ್ರಾಣಿಗಳು ಹೀಗೆ ಕಣ್ಣಿಗೆ ಕಾಣುವ ಜೀವ ವೈದ್ಯದ ಬಗ್ಗೆ ಕ್ರಮಬದ್ದವಾಗಿ ತಿಳಿಯುತ್ತ ಸಾಗುವುದೇ ‘ನಿಸರ್ಗನಡಿಗೆ’ಯ ಮುಖ್ಯ ಉದ್ದೇಶವಾಗಿದೆ ಎನ್ನುತ್ತಾರೆ ಯುವ ಸಂಚಲನ ಟ್ರಸ್ಟ್ ಅಧ್ಯಕ್ಷ ಚಿದಾನಂದ ಆರಾಧ್ಯ.

ಈ ವಾರ ತಾಲ್ಲೂಕಿನ ಚನ್ನಗಿರಿಯಲ್ಲಿ ನಡೆದ ನಿಸರ್ಗ ನಡಿಗೆಯಲ್ಲಿ ಎದುರಾದಗಿದ್ದು ವಿವಿಧ ಬಗೆಯ ಕ್ಯಾಟರ್ಪಿಲ್ಲರ್ಗಳು. ಇಷ್ಟು ಬೇಗನೆ ಇವು ನಿಸರ್ಗನಡಿಗೆಯಲ್ಲಿ ಎದುರುಗೊಳ್ಳಲು ಕಾರಣ ಈ ವರ್ಷ ತಾಲ್ಲೂಕಿನಲ್ಲಿ ಬೇಸಿಗೆಯ ಬಿಸಿಲು ಅನುಭವಕ್ಕೆ ಬರುವ ಮುನ್ನವೇ ಮಳೆ ಪ್ರಾರಂಭವಾಗಿತ್ತು. ಮಾರ್ಚ್ ಅಂತ್ಯದಿಂದಲೇ ಪ್ರಾರಂಭವಾದ ಮಳೆ ಹದವಾಗಿ ಬೀಳುತ್ತಲೇ ಇದೆ. ಕೆರೆ ಕುಂಟೆಗಳಿಗೆ ನೀರು ಬಂದಿಲ್ಲವಾದರು ಬೆಟ್ಟ ಗುಡ್ಡಗಳಲ್ಲಿ, ಅರಣ್ಯ ಪ್ರದೇಶದಲ್ಲಿ ಬೆಳೆದು ನಿಂತಿರುವ ಹಚ್ಚ ಹಸಿರಿನ ಮರಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ. ಹಾಗೆಯೇ ಪ್ರಕೃತಿಯಲ್ಲಿನ ಜೀವ ವೈವಿದ್ಯ ಕೀಟ, ಪಕ್ಷಿಗಳು ಮೈ ಕೊಡವಿಕೊಂಡು ಹೊರಬಂದಿವೆ ಎಂದರು.

ನಿಸರ್ಗ ನಡಿಗೆಯಲ್ಲಿ ಎದುರಾಗುವ ಸಸ್ಯ,ಕೀಟಗಳ ಬಗ್ಗೆ ಸಸ್ಯವಿಜ್ಞಾನಿ ಡಾ.ಆರ್.ಗಣೇಶನ್ ಅವರ ವಿವರಣೆ ಕೇಳುತ್ತಲೇ ಬೆಟ್ಟದ ತುದಿ ಮುಟ್ಟಿ ಮತ್ತೆ ಕೆಳಗೆ ಇಳಿಯುವಷ್ಟರಲ್ಲಿ ನಿಸರ್ಗ ನಡಿಗೆ ಸಾರ್ಥಕವಾಗುತ್ತದೆ ಎಂದು ನೆನಪಿಸಿಕೊಂಡರು ನಡಿಗೆಯಲ್ಲಿ ಭಾಗವಹಿಸಿದ್ದವರು.

Ramesh Babu

Journalist

Recent Posts

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

19 minutes ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

1 hour ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

14 hours ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

14 hours ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…

14 hours ago

ಬಾಶೆಟ್ಟಿಹಳ್ಳಿ ಪಪಂಗೆ ಮೂವರು ನಾಮನಿರ್ದೇಶಿತ ಸದಸ್ಯರ ನೇಮಕ

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಸರ್ಕಾರವು ಮೂವರು ನಾಮನಿರ್ದೇಶಿತ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಪೌರಸಭೆಗಳ…

15 hours ago