ಗೋಮಯ ಗಣೇಶ: ಸಂಪೂರ್ಣ ಗೋವಿನ(ಹಸು) ಸಗಣಿಯಿಂದಲೇ ಗಣಪತಿ ತಯಾರಿ: ಅದು ಎಲ್ಲಿ ತಯಾರಿ ಆಗುತ್ತೆ, ಇದರ ಉಪಯೋಗ ಏನು ಅಂತೀರಾ….? ಇಲ್ಲಿದೆ ಮಾಹಿತಿ‌ ಓದಿ……

ಗೌರಿ ಗಣೇಶ ಹಬ್ಬಕ್ಕೆ‌ ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಮನೆಯಲ್ಲಿ ಗಣೇಶ ಕೂರಿಸಲು ಈಗಾಗಲೇ ಎಲ್ಲಾ‌ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಅದರಲ್ಲೂ ಪಿಓಪಿ ಗಣೇಶ ಹೊರತುಪಡಿಸಿ ಮಣ್ಣಿನ ಗಣೇಶ ಸೇರಿ ಪರಿಸರ ಸ್ನೇಹಿ ಗಣಪತಿ ಕಡೆಗೆ ಜನ ಮನಸ್ಸು ಮಾಡುತ್ತಿದ್ದಾರೆ.

ಈ ಹಿನ್ನೆಲೆ ಮಾರುಕಟ್ಟೆಗೆ ಸಗಣಿ ಗಣಪ ಎಂಟ್ರಿ ಕೊಟ್ಟಿದ್ದು, ಜನ ಈ ಗಣೇಶ ಕೊಳ್ಳಲು ಈಗಾಗಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಿದ್ದಾರೆ. ಏನಿದು ಸಗಣಿ ಗಣಪ, ಇದು ಸಿಗುವುದು ಎಲ್ಲಿ ಅಂತಿರಾ ಈ ಸ್ಟೋರಿ ಓದಿ……………

ಹಸುವಿನ ಸಗಣಿಯಿಂದ ಮಾಡಿದ ಗಣೇಶನ ವಿಗ್ರಹವೇ ಗೋಮಯ ಗಣೇಶ. ಸಂಪೂರ್ಣವಾಗಿ ನೈಸರ್ಗಿಕ ವಸ್ತುಗಳಿಂದ ಮಾಡಲ್ಪಟ್ಟಿರುತ್ತದೆ ಮತ್ತು ಯಾವುದೇ ರಾಸಾಯನಿಕ ಬಣ್ಣಗಳನ್ನು ಅಥವಾ ವಸ್ತುಗಳನ್ನು ಬಳಸುವುದಿಲ್ಲ. ಇದು ಪರಿಸರ ಸ್ನೇಹಿ ಮತ್ತು ನೈಸರ್ಗಿಕ ವಸ್ತುವಿನಿಂದ ತಯಾರಿಸಲ್ಪಟ್ಟಿರುವುದರಿಂದ ಪೂಜೆಯ ನಂತರ ಸುಲಭವಾಗಿ ಮಣ್ಣಿನಲ್ಲಿ ಕರಗಿ ಹೋಗುತ್ತದೆ. ನಂತರ ಗೊಬ್ಬರವಾಗಿ ಬಳಸಬಹುದು. ಇದು ಪರಿಸರಕ್ಕೆ ಹಾನಿಕಾರಕವಲ್ಲ ಮತ್ತು ಪೂಜೆಗೆ ಸೂಕ್ತವಾದ ವಸ್ತುವಾಗಿದೆ.

ಕೆಲವರು ಗೋಮಯ ಗಣೇಶನ ವಿಗ್ರಹವು ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬುತ್ತಾರೆ.

ಹಸುವಿನ ಸಗಣಿಯಲ್ಲಿ ಲಕ್ಷ್ಮಿ ದೇವಿಯ ವಾಸವಿರುತ್ತದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ, ಗೋಮಯ ಗಣೇಶನನ್ನು ಪೂಜಿಸುವುದರಿಂದ ಮನೆಯಲ್ಲಿ ಸಮೃದ್ಧಿ ಮತ್ತು ಸಂತೋಷ ನೆಲೆಸುತ್ತದೆ ಎಂಬ ನಂಬಿಕೆಯಿದೆ. ಇತ್ತೀಚಿನ ದಿನಗಳಲ್ಲಿ, ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡುತ್ತಿರುವ ಹಿನ್ನೆಲೆಯಲ್ಲಿ ಗೋಮಯ ಗಣೇಶನ ವಿಗ್ರಹಗಳು ಹೆಚ್ಚು ಜನಪ್ರಿಯವಾಗುತ್ತಿವೆ.

ಹೌದು, ಸಗಣಿ ಮುದ್ದೆಯಿಂದ ಗಣೇಶನ ಪ್ರತಿಮೆ ಮಾಡುತ್ತಿರುವ ಮಹಿಳೆಯರು, ಗಣಪನಿಗೆ ಹಸುವಿನ ಗಂಜಲದಿಂದ ಲೇಪನ ಮಾಡುತ್ತಿರುವ ವ್ಯಕ್ತಿ, ಉಜ್ಜುವ ವಸ್ತುವಿನಿಂದ ಗಣಪನಿಗೆ ಫೈನಲ್ ಟಚ್ ಕೊಡುತ್ತಿರುವ ಕೆಲಸಗಾರ,. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಪ್ರಸಿದ್ಧ ಘಾಟಿ ಸುಬ್ರಮಣ್ಯ ದೇವಾಲಯದ ಪಕ್ಕದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ.

ಗೋಶಾಲೆಯಲ್ಲಿರುವ ನೂರಾರು ಗೋವುಗಳ(ಹಸುಗಳ) ಸಗಣಿಯನ್ನು ಒಣಗಿಸಿ ಪುಡಿ ಮಾಡಿದ ನಂತರ, ಗಮ್ ರೀತಿಯ ವಸ್ತುವನ್ನ ಬಳಸಿ, ಒಂದು ರೀತಿಯ ಮುದ್ದೆ ಆಕಾರದಲ್ಲಿ ಅದನ್ನ ತಯಾರಿಸಿ, ಗಣೇಶ ಆಕೃತಿಯ ಅಚ್ಚುಗಳಿಗೆ ಸಗಣಿ ಹಾಕಲಾಗುತ್ತದೆ. ನಂತರ ಕೈಯಿಂದ ಸಂಪೂರ್ಣವಾಗಿ ಅವುಗಳನ್ನು ಆಕಾರ ಮಾಡಿ, ನಂತರ ಗಂಜಲದಿಂದ ಲೇಪನ ಮಾಡುತ್ತಾರೆ. ಎರಡು ಮೂರು ದಿನ ಒಣಗಿ ನಂತರ ಪರಿಸರಕ್ಕೆ ಹೊಂದಿಕೊಳ್ಳುವ ಬಣ್ಣವನ್ನ ಮಾಡುತ್ತಾರೆ.

ಹೀಗೆ ಸಂಪೂರ್ಣ ವಾಗಿ ಸಗಣಿಯಿಂದ ಮಾಡುವ ಗಣಪನಿಗೆ ಬಾರಿ ಬೇಡಿಕೆ ಇದೆ. ಇವುಗಳು ಮನೆಯಲ್ಲಿ ಇಡಲು ತುಂಬಾ ಅನುಕೂಲ. ಅರ್ಧ ಅಡಿಯಿಂದ ಹಿಡಿದು ಒಂದು ಅಡಿಯವರೆಗೆ ಸಗಣಿ ಗಣಪತಿ ಸಿಗುತ್ತವೆ. ಹಣದಲ್ಲೂ ಕೂಡ ಕಡಿಮೆ ಬೆಲೆಗೆ ಸಿಗುತ್ತದೆ. ಒಂದು ಗಣಪನ ಬೆಲೆ 300 ರಿಂದ 1 ಸಾವಿರ ಅಂತಿಮ‌. ಹಾಗಾಗಿ ಅತೀ ದುಬಾರಿಯೂ ಅಲ್ಲ, ಜೊತೆಗೆ ಸಾಗಣೆ ಮಾಡಲು ಬಹಳ ಕಡಿಮೆ ತೂಕ.

ಗಣೇಶ ಹಬ್ಬದ ನಂತರ ವಿಸರ್ಜನೆ ಮಾಡಲು ಕೂಡ ತುಂಬಾ ಸುಲಭ. ಅಲ್ಲದೆ ಯಾವುದೇ ರೀತಿ ಪರಿಸರಕ್ಕೆ ಹಾನಿ ಮಾಡುವುದಿಲ್ಲ. ಇದು ನೀರಿಗೆ ಹಾಕಿದ ಕೂಡಲೇ ಕರಿಗೆ ಹೋಗುತ್ತದೆ. ನಂತರ ಗೊಬ್ಬರವಾಗಿ ಕೂಡ ಪರಿವರ್ತನೆ ಆಗುತ್ತದೆ.

ಹಾಗಾಗಿ ಘಾಟಿ ಸುಬ್ರಮಣ್ಯ ದೇವಾಲಯಕ್ಕೆ ಬರುವವರು ಈಗಾಗಲೇ ಗಣಪತಿಯನ್ನ ಬುಕ್ ಮಾಡಿಕೊಂಡು ಹೋಗಿದ್ದಾರೆ. ಪ್ರಮುಖವಾಗಿ ಯಾವುದೇ ಗಣಪತಿ ಕೊಂಡರೂ, ಅದರ ಪಕ್ಕದಲ್ಲಿ ಸಗಣಿಯಿಂದ ಮಾಡಿದ ಬೆನಕ ಇಡುವುದು ವಾಡಿಕೆ. ಹಾಗಾಗಿ ಸಗಣಿ ಗಣಪನನ್ನೇ ತೆಗೆದುಕೊಂಡು ಹೋದರೆ ಇನ್ನೂ ಅನುಕೂಲ ಎಂಬುದು ಜನರ ನಂಬಿಕೆ.

ಒಟ್ಟಾರೆ ಮಾರುಕಟ್ಟೆಗೆ ಈಗಾಗಲೇ ಪಿಓಪಿ, ಮಣ್ಣಿನ ಗಣಪ ಎಂಟ್ರಿ ಆಗಿದ್ದು, ಜನ ಸಗಣಿ ಗಣಪನನ್ನ ನೋಡಿ ಆಶ್ಚರ್ಯ ಪಡುವುದಂತೂ ಸತ್ಯ.  ಸಗಣಿ ಗಣಪನ್ನ ಕೂರಿಸುವ ಮೂಲಕ ಪರಿಸರ ಸ್ನೇಹಿ ಆಗಲಿ ಎಂಬುದು ನಮ್ಮ ಆಶಯ…

Ramesh Babu

Journalist

Recent Posts

ನಗರಸಭೆ ಉಪಾಧ್ಯಕ್ಷರಾಗಿ ವೆಂಕಟೇಶ್(ಬಂತಿ) ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷರಾಗಿ ವೆಂಕಟೇಶ್(ಬಂತಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೊಡ್ಡಬಳ್ಳಾಪುರ ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಮಲ್ಲೇಶ್ ರಾಜೀನಾಮೆ ನೀಡಿದ್ದು, ತೆರವಾದ ಸ್ಥಾನಕ್ಕೆ…

2 hours ago

ಸ್ಪರ್ಶ್ ಆಸ್ಪತ್ರೆ ಹೆಣ್ಣೂರು ಒಂದು ವರ್ಷ ಪೂರ್ಣಗೊಳಿಸಿದೆ .ಉತ್ತರ ಬೆಂಗಳೂರಿನಲ್ಲಿ ಸಮಗ್ರ ಮಲ್ಟಿಸ್ಪೆಷಾಲಿಟಿ ಆರೈಕೆಯ ಹೆಚ್ಚುತ್ತಿರುವ ಅಗತ್ಯವನ್ನು ಪ್ರತಿಬಿಂಬಿಸುತ್ತದೆ

ಸ್ಪರ್ಶ್ ಆಸ್ಪತ್ರೆ, ಹೆಣ್ಣೂರು ತನ್ನ ಕಾರ್ಯಾಚರಣೆಯ ಒಂದು ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಆಸ್ಪತ್ರೆಯ ಮೊದಲ ವರ್ಷದ ಕ್ಲಿನಿಕಲ್ ಅಂಕಿಅಂಶಗಳು ಉತ್ತರ…

4 hours ago

ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ: ದರ‌‌ ಪಟ್ಟಿ‌ ಇಲ್ಲಿದೆ ನೋಡಿ

ನವದೆಹಲಿ: ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಮತ್ತೆ ಏರಿಕೆಯಾಗಿದ್ದು, ವಾಹನ ಸವಾರರಿಗೆ ಮತ್ತೊಂದು ಹೊರೆ ಬಿದ್ದಿದೆ. ಕೇಂದ್ರ ಸರ್ಕಾರ…

7 hours ago

“ಕಾಂಗ್ರೆಸ್ ನಡೆ – ಮತ ರಕ್ಷಣೆಯ ಕಡೆ”: ಕೆಪಿಸಿಸಿ ವತಿಯಿಂದ ಮಹತ್ವದ ಕಾರ್ಯಾಗಾರ: ಸಿಎಂ, ಡಿಸಿಎಂ‌ ಭಾಗಿ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಚಿಕ್ಕಬಳ್ಳಾಪುರದ ನಂದಿಬೆಟ್ಟ ರಸ್ತೆಯ ಖಾಸಗಿ ಹೋಟೆಲ್‌ನಲ್ಲಿ‌ ಆಯೋಜಿಸಿದ್ದ "ಕಾಂಗ್ರೆಸ್ ನಡೆ-ಮತ ರಕ್ಷಣೆಯ ಕಡೆ" ಜಾಗೃತ…

10 hours ago

1 ವರ್ಷ 4 ತಿಂಗಳ ಮಗುವಿನ ಕಣ್ಣು ದಾನ: ಸಾವಿನಲ್ಲೂ ಮಾನವೀಯತೆ ಮೆರೆದ ಕುಟುಂಬ

ದೊಡ್ಡಬಳ್ಳಾಪುರ: ನಗರದ ದೇವರಾಜನಗರ ನಿವಾಸಿಗಳಾದ ಭರತ್ ಅವರ 1 ವರ್ಷ 4 ತಿಂಗಳ ಮಗ ಪೋಷಕ್ ಆರೋಗ್ಯದ ವ್ಯತ್ಯಯದಿಂದ ವಿಧಿವಶರಾದ…

2 days ago

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣಕ್ಕೆ ‌ಪೂರಕ- ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ ರಾಜ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯು ಶಿಕ್ಷಣಕ್ಕೆ ‌ಪೂರಕವಾಗಿದೆ. ಇದನ್ನು ‌ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್‌ನ…

2 days ago