ಬೆಂಗಳೂರು, ವೈಟ್ ಫೀಲ್ದ್ : ಶ್ವಾಸನಾಳದಲ್ಲಿ ಸಿಲುಕಿಕೊಂಡಿದ್ದ ಅಡಿಕೆ ತುಂಡುಗಳನ್ನು ಕ್ರಯೋ ಪ್ರೋಬ್ ಎಂಬ ಅತ್ಯಾಧುನಿಕ ಉಪಕರಣ ಬಳಸಿ ಕೇವಲ 7 ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಹೊರತೆಗೆಯಲಾಗಿದೆ.
ಕ್ರಯೋ ಪ್ರೋಬ್ ಬಳಕೆ ಮಾಡದೇ ಇದ್ದಿದ್ದರೆ ಈ ಚಿಕಿತ್ಸೆಗೆ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ತಗಲುತ್ತಿತ್ತು.
81 ವರ್ಷದ ವೃದ್ದನಿಗೆ ಕಳೆದ ಮೂರು ದಿನಗಳಿಂದ ನಿರಂತರ ಕೆಮ್ಮು ಹಾಗೂ ಎದೆ ಭಾಗದಲ್ಲಿ ನೋವು ಕಾಣಿಸಿಕೊಂಡಿದ್ದ ಕಾರಣ ಮಧ್ಯ ರಾತ್ರಿ ಬೇರೆ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗಿತ್ತು. ಆದ್ರೆ ಅಲ್ಲಿ ಹೃದಯಕ್ಕೆ ಸಂಭಂಧಿಸಿದ ಪರೀಕ್ಷೆಗಳನ್ನು ನಡೆಸಿ ಯಾವುದೇ ಸಮಸ್ಯೆ ಇಲ್ಲ ಎಂದು ವರದಿ ನೀಡಿ ವಾಫಸ್ ಮನೆಗೆ ಕಳುಹಿಸಿಕೊಡಲಾಗಿತ್ತು. ಆದ್ರೆ ವೃದ್ದನಿಗೆ ನೋವು ಮಾತ್ರ ಕಮ್ಮಿಯಾಗಿರಲಿಲ್ಲ. ಬಳಿಕ ವೈಟ್ ಪೀಲ್ಡ್ ನಲ್ಲಿರುವ ಮೆಡಿಕವರ್ ಆಸ್ಪತ್ರೆಯ ಇಂಟರ್ವೆನ್ಷನಲ್ ಶ್ವಾಸಕೋಶಶಾಸ್ತ್ರಜ್ಞ ಡಾ . ಮಂಜುನಾಥ್ ಬಿ ಜಿ ರವರನ್ನು ಭೇಟಿ ಮಾಡಿ, ವೃದ್ದ ತನ್ನ ನೋವಿಗೆ ನಿಜವಾದ ಕಾರಣವೇನೆಂದು ತಿಳಿದುಕೊಂಡಿದ್ದಾರೆ.
ವೃದ್ದನಿಗೆ ಪ್ರತಿ ದಿನ ಮಲಗುವಾಗ ಬಾಯಿಯಲ್ಲಿ ಅಡಿಕೆಯನ್ನು ಇಟ್ಟುಕೊಂಡು ಮಲಗುವ ಅಭ್ಯಾಸವಿತ್ತು. ನಿದ್ದೆ ವೇಳೆ ಅಡಿಕೆಯ ತುಂಡುಗಳು ಶ್ವಾಸಕೋಶದೊಳಗಡೆ ಹೋಗಿತ್ತು. ಇದರಿಂದ ಅವರಿಗೆ ಉಸಿರಾಟಕ್ಕೆ ತೊಂದರೆ ಶುರುವಾಗಿತ್ತು. ತಕ್ಷಣ ಅವರಿಗೆ ಆಕ್ಸಿಜನ್ ನೀಡಿ ಎಕ್ಸ್ ರೇ ತೆಗೆದಾಗ ಶ್ವಾಸಕೋಶದ ಕೆಳಗಿಳ ಪದರ ಸಂಪೂರ್ಣವಾಗಿ ಹದಗೆಟ್ಟಿರೋದು ತಿಳಿದು ಬಂದಿತ್ತು.ಕೂಡಲೇ ಅವರನ್ನು ಅಪರೇಷನ್ ಥಿಯೇಟರ್ ಕರೆದೊಯ್ದು, ಲಾರಿಂಜಿಯಲ್ ಮಾಸ್ಕ್ ಏರ್ವೇ ಬಳಸಿ ಶಸ್ತ್ರ ಚಿಕಿತ್ಸೆ ಶುರು ಮಾಡಲಾಯಿತು. ಶಸ್ತ್ರ ಚಿಕಿತ್ಸೆ ವೇಳೆ ಎಡ ಮುಖ್ಯ ಶ್ವಾಸನಾಳ ಸಂಪೂರ್ಣವಾಗಿ ಬ್ಲಾಕ್ ಆಗಿರೋದು ಗೊತ್ತಾಗಿದೆ. 1.7 mm ಸೈಜ್ ನ ಕ್ರಯೋ ಪ್ರೋಬ್ ಉಪಕರಣದ ಸಹಾಯದಿಂದ ಅಡಿಕೆ ತುಂಡುಗಳನ್ನು ಕೇವಲ ೭ ನಿಮಿಷದಲ್ಲಿ ಸಂಪೂರ್ಣವಾಗಿ ಹೊರತೆಗೆಯವಲ್ಲಿಶ್ವಾಸಕೋಶಶಾಸ್ತ್ರಜ್ಞ ಡಾ . ಮಂಜುನಾಥ್ ಬಿ ಜಿ ಯಶಸ್ವಿಯಾಗಿದ್ದಾರೆ .
ಅತ್ಯಾಧುನಿಕ ಉಪಕರಣ ಬಳಕೆಯಿಂದ ರೋಗಿಗೆ ಅನಗತ್ಯವಾಗಿ ಸಿಟಿ ಸ್ಕ್ಯಾನ್ ಮಾಡುವ ಅವಶ್ಯಕತೆ ಇರೋದಿಲ್ಲ ಹಾಗೂ ಗಂಟೆಗಟ್ಟಲೆ ರೋಗಿಗೆ ಅಪರೇಷನ್ ಮಾಡುವ ಅಗತ್ಯನೇ ಇರೋದಿಲ್ಲ ಎಂದು ಡಾ ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ .
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…
ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…
ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…
ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…
ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…