Categories: ಆರೋಗ್ಯ

ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ಪತ್ತೆಹಚ್ಚಲು ನಾವೆಲ್‌-ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌ ನನ್ನು ಪರಿಚಯಿಸಿದ ಎಚ್‌ಸಿಜಿ

ಬೆಂಗಳೂರು: ಪ್ರಾಥಮಿಕ ಕ್ಯಾನ್ಸರ್‌ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ಪತ್ತೆ ಹಚ್ಚಲು ಇದೇ ಮೊದಲ ಬಾರಿಗೆ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ಹಾಗೂ ಟ್ರುಕನ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ ಸಹಯೋಗದೊಂದಿಗೆ “ನಾವೆಲ್‌-ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌” ಟೆಸ್ಟ್‌ನನ್ನು ಸಂಶೋಧಿಸಿದೆ.

ಈ ನೂತನ ಸಂಶೋಧನ ಸಹಯೋಗದಿಂದ ಕ್ಯಾನ್ಸರ್‌ ಬರುವ ಮುನ್ನ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ನಿಖರವಾಗಿ ಪತ್ತೆ ಹಚ್ಚುವ ನಾವೆಲ್‌-ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌ ಟೆಸ್ಟ್‌ ಸಹಕಾರಿಯಾಗಲಿದೆ. ಇದಷ್ಟೇ ಅಲ್ಲದೆ, ಯಾವುದೇ ರೀತಿಯ ಕ್ಯಾನ್ಸರ್‌ ಆಗಿದ್ದರೂ ಅದಕ್ಕೆ ನಿಖರವಾದ ಹಾಗೂ ಪರಿಣಾಮಕಾರಿಯ ಚಿಕಿತ್ಸೆಯನ್ನು ಈ ನಾವೆಲ್‌ ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌ ಟೆಸ್ಟ್‌ ಮೌಲ್ಯೀಕರಿಸಲಿದೆ.

ಈ ಸಹಭಾಗಿತ್ವದ ಅಡಿಯಲ್ಲಿ, ಟ್ರುಕನ್ ಅಭಿವೃದ್ಧಿಪಡಿಸಿದ ಹೊಸ ಕ್ಯಾನ್ಸರ್ ರೋಗನಿರ್ಣಯ ಪರೀಕ್ಷೆಗಳ ಮೇಲೆ ಹೆಚ್ಚು ಮೌಲ್ಯಮಾಪನದ ಅಧ್ಯಯನ ನಡೆಸಲು HCG ಮತ್ತು ಟ್ರುಕನ್ ಒಟ್ಟಾಗಿ ಕೆಲಸ ಮಾಡಲಿವೆ. ಈ ಪರೀಕ್ಷೆಗಳು ಮುಂದಿನ-ಪೀಳಿಗೆಗೆ ಹೆಚ್ಚು ಉಪಯುಕ್ತವಾಗಲಿದ್ದು, ನೋವೆಲ್‌ ಬಯೋಮಾರ್ಕರ್-ಚಾಲಿತ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಸುಧಾರಿತ ತಂತ್ರಗಳನ್ನು ಬಳಸಿಕೊಳ್ಳುತ್ತವೆ,
ಪ್ರಾಥಮಿಕ ಮತ್ತು ಮರುಕಳಿಸುವ/ಮೆಟಾಸ್ಟಾಟಿಕ್ ಕ್ಯಾನ್ಸರ್ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸಲು, ಪೂರ್ವ-ಚಿಕಿತ್ಸೆಯ ಮುನ್ಸೂಚನೆ ಮತ್ತು ಕೀಮೋ ಅಥವಾ ಉದ್ದೇಶಿತ ಚಿಕಿತ್ಸೆಗೆ ಒಳಗಾಗುವ ರೋಗಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತವೆ. ಈ ಅಧ್ಯಯನಗಳ ಫಲಿತಾಂಶವು ಈ ಪರೀಕ್ಷೆಯ ಕ್ಲಿನಿಕಲ್ ಉಪಯುಕ್ತತೆಯನ್ನು ದೃಢೀಕರಿಸಲು ಡೇಟಾ ರಚಿಸುತ್ತವೆ, ಇದು ದಿನನಿತ್ಯದ ಕ್ಲಿನಿಕಲ್ ಅಭ್ಯಾಸದಲ್ಲಿ ಸಂಭಾವ್ಯ ಏಕೀಕರಣಕ್ಕೆ ದಾರಿ ಮಾಡಿಕೊಡುತ್ತವೆ.

ಎಚ್‌ಸಿಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್‌ ಅಜಯ್‌ ಕುಮಾರ್, ಎಚ್‌ಸಿಜಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸದಾ ಒಂದಿಲ್ಲೊಂದು ಆವಿಷ್ಕಾರದಲ್ಲಿ ತೊಡಗಿಕೊಂಡಿದೆ, ಇದೀಗ ಟ್ರುಕನ್ ಸಹಯೋಗದೊಂದಿಗೆ “ನಾವೆಲ್‌ ಬಯೋಮಾರ್ಕರ್” ಚಾಲಿತ ಕ್ಯಾನ್ಸರ್ ಪತ್ತೆ ಹಚ್ಚುವ ವಿಧಾನವನ್ನು ಪರಿಚಯಿಸಿದ್ದೇವೆ. ಈ ವಿಧಾನವು ಕ್ಯಾನ್ಸರ್‌ ಪತ್ತೆ ಹಚ್ಚಲು ಪ್ರಸ್ತುತ ಇರುವ ವಿಧಾನಗಳಿಗಿಂತ ನೂರುಪಾಲು ಉತ್ತಮವಾಗಿದೆ. ಚಿಕಿತ್ಸೆಗೆ ರೋಗಿಯ ಪ್ರತಿಕ್ರಿಯೆಯನ್ನು ನಿಖರವಾಗಿ ಊಹಿಸುವ ಮೂಲಕ, ಈ ರೋಗನಿರ್ಣಯದ ಪರೀಕ್ಷೆಗಳು ಚಿಕಿತ್ಸೆಯನ್ನು ವೈಯಕ್ತೀಕರಿಸಲು ಆಂಕೊಲಾಜಿಸ್ಟ್‌ಗಳಿಗೆ ನೆರವಾಗಲಿದೆ. ಅಷ್ಟೆ ಅಲ್ಲದೆ, ಒಟ್ಟಾರೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಜೊತೆಗೆ, ನಿಖರ ಚಿಕಿತ್ಸೆ ಸಿಗಲಿದೆ ಎಂದರು.

Ramesh Babu

Journalist

Recent Posts

ಚಿಕ್ಕಮಧುರೆ ಶನಿಮಹಾತ್ಮ ದೇವಾಲಯ ಬಳಿ ಕ್ಯಾಂಟರ್ ಪಲ್ಟಿ: ರಸ್ತೆಬದಿಯ ಅಂಗಡಿಗಳು ಜಖಂ

ದೊಡ್ಡಬಳ್ಳಾಪುರ: ತಾಲೂಕಿನ ಚಿಕ್ಕಮಧುರೆ ಗ್ರಾಮದ ಶನಿಮಹಾತ್ಮ ದೇವಾಲಯದ ಬಳಿ ಕಳೆದ ರಾತ್ರಿ ಸಂಭವಿಸಿದ ಕ್ಯಾಂಟರ್ ಅಪಘಾತದಲ್ಲಿ ರಸ್ತೆಬದಿಯ ಮೂರು-ನಾಲ್ಕು ಅಂಗಡಿಗಳು…

5 minutes ago

ಹಾಲಿನ ಖರೀದಿ ದರ ಹೆಚ್ಚಳಕ್ಕೆ ರೈತರ ಬೃಹತ್ ಪ್ರತಿಭಟನೆ

ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ರೂ. 10 ಹೆಚ್ಚಿಸಬೇಕು ಹಾಗೂ ಹಾಲು ಉತ್ಪಾದಕರಿಗೆ ನೀಡುತ್ತಿರುವ ಪ್ರೋತ್ಸಾಹಧನವನ್ನು ಹೆಚ್ಚಿಸಬೇಕು ಎಂದು…

11 hours ago

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರ ಉನ್ನತೀಕರಣಕ್ಕೆ ಗುದ್ದಲಿ ಪೂಜೆ

ದೊಡ್ಡಬಳ್ಳಾಪುರ: ತಾಲೂಕಿನ ಅನಿಬೆಸೆಂಟ್ ಪಾರ್ಕ್‌ನಲ್ಲಿರುವ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಕೇಂದ್ರವನ್ನು ಉನ್ನತೀಕರಿಸುವ ಕಾಮಗಾರಿಗೆ ಶಾಸಕ ಧೀರಜ್ ಮುನಿರಾಜ್…

12 hours ago

ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್‌ನಲ್ಲಿ ಕರಡಿಗಳ ಪ್ರತ್ಯಕ್ಷ: ನಂದಿಬೆಟ್ಟ ಸಮೀಪ ವನ್ಯಜೀವಿಗಳ ಓಡಾಟದಿಂದ ಆತಂಕ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕೋಡಗುರ್ಕಿ ಗ್ರಾಮದ ಸಮೀಪದ ಪ್ರಖ್ಯಾತ ಪ್ರೆಸ್ಟೀಜ್ ಗಾಲ್ಫ್‌ಶೈರ್ ರೆಸಾರ್ಟ್ ವಿಲ್ಲಾಸ್ ಆವರಣದಲ್ಲಿ…

12 hours ago

ಪೆಟ್ರೋಲ್ ಟ್ಯಾಂಕರ್-ಹಾಲಿನ ಟ್ಯಾಂಕರ್ ನಡುವೆ ಅಪಘಾತ: ಬೆಂಕಿಗಾಹುತಿಯಾದ ಎರಡು ಟ್ಯಾಂಕರ್ ಗಳು

ದೊಡ್ಡಬಳ್ಳಾಪುರ: ತಾಲೂಕಿನ ಮಧುರೆ ಹೋಬಳಿಯ 11ನೇ ಮೈಲಿ (ಮಲ್ಲೋಹಳ್ಳಿ ಸಮೀಪ) ಪೆಟ್ರೋಲ್ ಟ್ಯಾಂಕರ್ ಹಾಗೂ ಹಾಲಿನ ಟ್ಯಾಂಕರ್ ನಡುವೆ ಸಂಭವಿಸಿದ…

20 hours ago

ಲಾರಿ-ಕ್ರೂಸರ್ ನಡುವೆ ಭೀಕರ ಅಪಘಾತ; ಗೋಕರ್ಣಕ್ಕೆ ತೆರಳುತ್ತಿದ್ದ 6 ಮಂದಿ ಸಾವು: ಹಲವರಿಗೆ ಗಾಯ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲು ಗ್ರಾಮದ ಬಳಗಾರ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ–52ರಲ್ಲಿ ಗುರುವಾರ (ಜುಲೈ…

22 hours ago