Categories: ಆರೋಗ್ಯ

ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ಪತ್ತೆಹಚ್ಚಲು ನಾವೆಲ್‌-ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌ ನನ್ನು ಪರಿಚಯಿಸಿದ ಎಚ್‌ಸಿಜಿ

ಬೆಂಗಳೂರು: ಪ್ರಾಥಮಿಕ ಕ್ಯಾನ್ಸರ್‌ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ಪತ್ತೆ ಹಚ್ಚಲು ಇದೇ ಮೊದಲ ಬಾರಿಗೆ ಎಚ್‌ಸಿಜಿ ಕ್ಯಾನ್ಸರ್‌ ಸೆಂಟರ್‌ ಹಾಗೂ ಟ್ರುಕನ್ ಡಯಾಗ್ನೋಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್‌ ಸಹಯೋಗದೊಂದಿಗೆ “ನಾವೆಲ್‌-ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌” ಟೆಸ್ಟ್‌ನನ್ನು ಸಂಶೋಧಿಸಿದೆ.

ಈ ನೂತನ ಸಂಶೋಧನ ಸಹಯೋಗದಿಂದ ಕ್ಯಾನ್ಸರ್‌ ಬರುವ ಮುನ್ನ ಹಾಗೂ ಮರುಕಳಿಸುವ ಕ್ಯಾನ್ಸರ್‌ನನ್ನು ಪೂರ್ವದಲ್ಲಿಯೇ ನಿಖರವಾಗಿ ಪತ್ತೆ ಹಚ್ಚುವ ನಾವೆಲ್‌-ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌ ಟೆಸ್ಟ್‌ ಸಹಕಾರಿಯಾಗಲಿದೆ. ಇದಷ್ಟೇ ಅಲ್ಲದೆ, ಯಾವುದೇ ರೀತಿಯ ಕ್ಯಾನ್ಸರ್‌ ಆಗಿದ್ದರೂ ಅದಕ್ಕೆ ನಿಖರವಾದ ಹಾಗೂ ಪರಿಣಾಮಕಾರಿಯ ಚಿಕಿತ್ಸೆಯನ್ನು ಈ ನಾವೆಲ್‌ ಬಯೋಮಾರ್ಕರ್‌ ಡಯಾಗ್ನಾಸ್ಟಿಕ್‌ ಟೆಸ್ಟ್‌ ಮೌಲ್ಯೀಕರಿಸಲಿದೆ.

ಈ ಸಹಭಾಗಿತ್ವದ ಅಡಿಯಲ್ಲಿ, ಟ್ರುಕನ್ ಅಭಿವೃದ್ಧಿಪಡಿಸಿದ ಹೊಸ ಕ್ಯಾನ್ಸರ್ ರೋಗನಿರ್ಣಯ ಪರೀಕ್ಷೆಗಳ ಮೇಲೆ ಹೆಚ್ಚು ಮೌಲ್ಯಮಾಪನದ ಅಧ್ಯಯನ ನಡೆಸಲು HCG ಮತ್ತು ಟ್ರುಕನ್ ಒಟ್ಟಾಗಿ ಕೆಲಸ ಮಾಡಲಿವೆ. ಈ ಪರೀಕ್ಷೆಗಳು ಮುಂದಿನ-ಪೀಳಿಗೆಗೆ ಹೆಚ್ಚು ಉಪಯುಕ್ತವಾಗಲಿದ್ದು, ನೋವೆಲ್‌ ಬಯೋಮಾರ್ಕರ್-ಚಾಲಿತ ಡಯಾಗ್ನೋಸ್ಟಿಕ್ಸ್ ಸೇರಿದಂತೆ ಸುಧಾರಿತ ತಂತ್ರಗಳನ್ನು ಬಳಸಿಕೊಳ್ಳುತ್ತವೆ,
ಪ್ರಾಥಮಿಕ ಮತ್ತು ಮರುಕಳಿಸುವ/ಮೆಟಾಸ್ಟಾಟಿಕ್ ಕ್ಯಾನ್ಸರ್ ಪತ್ತೆಹಚ್ಚುವಿಕೆಯನ್ನು ಸಕ್ರಿಯಗೊಳಿಸಲು, ಪೂರ್ವ-ಚಿಕಿತ್ಸೆಯ ಮುನ್ಸೂಚನೆ ಮತ್ತು ಕೀಮೋ ಅಥವಾ ಉದ್ದೇಶಿತ ಚಿಕಿತ್ಸೆಗೆ ಒಳಗಾಗುವ ರೋಗಿಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತವೆ. ಈ ಅಧ್ಯಯನಗಳ ಫಲಿತಾಂಶವು ಈ ಪರೀಕ್ಷೆಯ ಕ್ಲಿನಿಕಲ್ ಉಪಯುಕ್ತತೆಯನ್ನು ದೃಢೀಕರಿಸಲು ಡೇಟಾ ರಚಿಸುತ್ತವೆ, ಇದು ದಿನನಿತ್ಯದ ಕ್ಲಿನಿಕಲ್ ಅಭ್ಯಾಸದಲ್ಲಿ ಸಂಭಾವ್ಯ ಏಕೀಕರಣಕ್ಕೆ ದಾರಿ ಮಾಡಿಕೊಡುತ್ತವೆ.

ಎಚ್‌ಸಿಜಿ ಕಾರ್ಯನಿರ್ವಾಹಕ ಅಧ್ಯಕ್ಷ ಡಾ. ಬಿ.ಎಸ್‌ ಅಜಯ್‌ ಕುಮಾರ್, ಎಚ್‌ಸಿಜಿ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸದಾ ಒಂದಿಲ್ಲೊಂದು ಆವಿಷ್ಕಾರದಲ್ಲಿ ತೊಡಗಿಕೊಂಡಿದೆ, ಇದೀಗ ಟ್ರುಕನ್ ಸಹಯೋಗದೊಂದಿಗೆ “ನಾವೆಲ್‌ ಬಯೋಮಾರ್ಕರ್” ಚಾಲಿತ ಕ್ಯಾನ್ಸರ್ ಪತ್ತೆ ಹಚ್ಚುವ ವಿಧಾನವನ್ನು ಪರಿಚಯಿಸಿದ್ದೇವೆ. ಈ ವಿಧಾನವು ಕ್ಯಾನ್ಸರ್‌ ಪತ್ತೆ ಹಚ್ಚಲು ಪ್ರಸ್ತುತ ಇರುವ ವಿಧಾನಗಳಿಗಿಂತ ನೂರುಪಾಲು ಉತ್ತಮವಾಗಿದೆ. ಚಿಕಿತ್ಸೆಗೆ ರೋಗಿಯ ಪ್ರತಿಕ್ರಿಯೆಯನ್ನು ನಿಖರವಾಗಿ ಊಹಿಸುವ ಮೂಲಕ, ಈ ರೋಗನಿರ್ಣಯದ ಪರೀಕ್ಷೆಗಳು ಚಿಕಿತ್ಸೆಯನ್ನು ವೈಯಕ್ತೀಕರಿಸಲು ಆಂಕೊಲಾಜಿಸ್ಟ್‌ಗಳಿಗೆ ನೆರವಾಗಲಿದೆ. ಅಷ್ಟೆ ಅಲ್ಲದೆ, ಒಟ್ಟಾರೆ ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಜೊತೆಗೆ, ನಿಖರ ಚಿಕಿತ್ಸೆ ಸಿಗಲಿದೆ ಎಂದರು.

Ramesh Babu

Journalist

Recent Posts

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

3 hours ago

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

5 hours ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

6 hours ago

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

12 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

13 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

16 hours ago