ಕಾಲವಾದ ಕಲಾವಿದ ಗುರುಗಳಿಗೆ ಕೃತಜ್ಞತೆಯ ನುಡಿನಮನಗಳು

ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ ಹೆಸರಾಂತ ಕಲಾವಿದ ಸೂರ್ಯಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ
ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಕಕ್ಷ ಗುರುರಾಜ್ ಕೃಷ್ಣಪ್ಪ, ಹಿರಿಯ ಕಲಾವಿದರು ಸಂಘಟನೆಯ ಮಾರ್ಗದರ್ಶಕರು ಆದ ಸೂರ್ಯಕುಮಾರ್ ರವರ ಸಾವು ನಮ್ಮ ಸಂಘಟನೆ ತುಂಬಲಾರದ ನಷ್ಟ, ಸಂಘಟನೆ ಪ್ರಾರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಹಿರಿಯರು ಮತ್ತು ಕಾಲಾವಿಧರ ಶ್ರೇಯೋಭಿಲಾಷಿಗಳು ನಮ್ಮಿಂದ ಭೌತಿಕವಾಗಿ ದೂರವಾದರೂ ಕಲಾವಿದರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೇಯೋದ್ದೇಶಗಳು ಮಾತ್ರ ಜೀವಂತ ಅವರ ದೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್.ಡಿ.ಉಪ್ಪಾಮಾತನಾಡಿ, ತಾಲ್ಲೂಕಿನಲ್ಲಿ ದಶಕಗಳಿಂದ ನಾಮಪಲಕ ಗಳನ್ನು ಬರೆಯುತ್ತಾ,ತನ್ನ ಹೆಸರಿನ “ಎಸ್ ಕೆ ಆರ್ಟ್ಸ್,” ಎಂಬ ಅಂಗಡಿ ತೆರೆದು ವೃತ್ತಿಯನ್ನೇ ನಂಬಿ ಬಂದ ಕಾಯಕ ಯೋಗಿ ಇವರು, ಬಸವಣ್ಣ ನವರು ಜಗತ್ತಿಗೆ ಸಾರಿದಂತಹ “ಕಾಯವೇ ಕೈಲಾಸ’ ಎಂಬ ತತ್ವಸಿದ್ದಾಂತವನ್ನೇ ನಂಬಿ ಸಾರ್ಥಕತೆ ಕಂಡ ಕುಂಚ ಕಲಾವಿದ.ತಾನು ನಂಬಿದ ಕುಂಚ ಮತ್ತು ಬಣ್ಣ ದಿಂದಲ್ಲೇ ಬದುಕು ಕಟ್ಟಿಕೊಂಡು ತಾನೂ ಬೆಳೆಯತ್ತಾ ಹತ್ತಾರು ಮಂದಿ ಯುವ ಕಲಾವಿದರನ್ನೂ ಬೆಳೆಸುತ್ತಾ ಕಲಾಸೇವೆ ಮಾಡಿದ,ಹಲವರಿಗೆ ಮಾರ್ಗದರ್ಶಕ ರಾಗಿ, ಗುರುಗಳಾಗಿ ತಮ್ಮ ಬದುಕಿನಲ್ಲಿ ಸಾಕಷ್ಟು ಜನ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟ ಮಹಾನ್‌ ಮಾನವತಾವಾದಿ,ತಮ್ಮ ಜೀವನದಲ್ಲಿ ಸಾಕಷ್ಡ ಏರಿಳಿತಗಳನ್ನು ಕಂಡ ಕಲಾವಿದ ಸೂರ್ಯ ಕುಮಾರ್ ರವರು ಇತ್ತೀಚೆಗಷ್ಟೆ ಸ್ವರ್ಗಸ್ಥರಾಗಿದ್ದು ದೊಡ್ಡಬಳ್ಳಾಪುರ ದ ಜನತೆಗೆ ನಂಬಲಾಗದ ಸತ್ಯವಾದರೂ ನಂಬಲೇ ಬೇಕಿದೆ.ತನ್ನ ಜೀವಿತಾವಧಿಯಲ್ಲಿ , ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಧೃತಿಗೆಡದೆ ಸಾರ್ಥಕ ಜೀವನ ನಡೆಸಿಸಿದಂತಹ ಕಲಾವಿದರು ಎಂದರೆ ತಪ್ಪಾಗಲಾರದು ಎಂದರು.

ಎಷ್ಟೇ ಕಷ್ಟ ನಷ್ಟಗಳು ಬಂದರು ತನ್ನ ಬಳಿ ಕೆಲಸ ಮಾಡುತಿದ್ದ ಕೆಲಸ ಮತ್ತು ಕಲಿಯುತಿದ್ದ ಕಲಾವಿದರನ್ನೂ ತನ್ನ ಇಬ್ಬರು ಮಕ್ಕಳಂತೆ ಅವರನ್ನೂ ಸಲುಹಿ, ಬೆಳೆಸಿದ ಸಾಹುಕಾರ ಈ ಸೂರ್ಯಕುಮಾರ್ ಕರ್ನಾಟಕ ನಾಮಫಲಕ ಕಲಾವಿದರ ಸಂಘದ ದೊಡ್ಡ ಬಳ್ಳಾಪುರ ತಾಲ್ಲೂಕಿನ ಅಧ್ಯಕ್ಷರಾಗಿ ಐದು ವರ್ಷಗಳಕಾಲ ಸೇವೆದಲ್ಲಿಸಿದ್ದರು.ತಮ್ಮ ಸೇವೆ ಯಿಂದ ಇಡೀ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಸರು ಪಡೆದಿದ್ದರು ಎಂದು ಹೇಳಿದರು.

ಒಟ್ಟಾರೆ ಒಬ್ಬಕಲಾವಿದರಾಗಿ ವೃತ್ತಿಯೊಂದಿಗೆ ಸಾಮಾಜಿಕ ಕಾಲಜಿಯನ್ನು ಹೊಂದಿದ್ದ ಗುರುಗಳು ನಮ್ಮಿಂದ ದೂರ ವಾದರೂ ಅವರ ಕನಸುಗಳು ನಮ್ಮೊಂದಿಗಿವೆ ಅವುಗಳನ್ನು ಖಂಡಿತವಾಗಿ ನೆರವೇರಿಸಲು ಶಕ್ತಿ ಮೀರಿ ಶ್ಮಿಸುವುದಾಗಿ ಹೇಳುತ್ತಾ ಅವರಿಗೆ ನನ್ನ ನುಡಿನಮಗಳನ್ನು ಅರ್ಪಿಸಿತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ನಾಟಕ ರಾಜ್ಯ ನಾಮ ಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಚರಾದ ಗುರುರಾಜ್ ಕೃಷ್ಣಪ್ಪ , ಕಾರ್ಯಾಧ್ಯಕ್ಷ ರಂಗನಾಥ ಬಾಬು, ಉಪಾಧ್ಯಕ್ಷ ಚಂದ್ರಶೇಖರ್.ಡಿ. ಉಪ್ಪಾರ್, ನಿರ್ಧೇಶಕರ ಕೆ.ಜೆ.ವೆಂಕಟೇಶ್, ನಾಗಪ್ರದೀಪ್, ವಿನೋದ್ ಆಚಾರ್ಯ, ತಾಲ್ಲೂಕು ನೂತನ ಅಧ್ಯಕ್ಷ ಎಸ್.ಕೆ.ಸತೀಶ್, ಕಾರ್ಯಾಧ್ಯಕ್ಷ ವರದರಾಜ್, ಪ್ರದಾನ ಕಾರ್ಯದರ್ಶಿ ಉಮಾಶಂಕರ್, ಕಾರ್ಯದರ್ಶಿ ಸುಬ್ರಮಣಿ,ಖಂಜಾಂಚಿ ನಿಥಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

15 ನೇ ಸೆಪ್ಟೆಂಬರ್ 2026, ವಿಶ್ವ ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ…

  ಸಂವಿಧಾನದ ಆಶಯಗಳು ಇರುವುದು ಕೇವಲ ಓದುವುದಕ್ಕಾಗಿಯಲ್ಲ, ಅದನ್ನು ಕಾಯಾ ವಾಚಾ ಮನಸಾ ಅನುಸರಿಸಲಿಕ್ಕಾಗಿ.‌ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮ…

2 hours ago

ಗಣೇಶ ಹಬ್ಬದ ಸಂಭ್ರಮದ ನಡುವೆ ಮಸಣವಾದ ಮನೆ: ಅಗ್ನಿ ದುರಂತಕ್ಕೆ ಒಂದೇ ಕುಟುಂಬದ ನಾಲ್ವರು ಬಲಿ

ಬೆಳಗಾವಿ: ಗಣೇಶ ಚತುರ್ಥಿ ದಿನವೇ ಬೆಳಗಾವಿ ನಗರದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ನಾಲ್ವರು ಸಜೀವ ದಹನಗೊಂಡಿರುವ…

4 hours ago

ಗುಂಡಿ ರಸ್ತೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳೇ ಬಲಿಪಶು: ಹದಗೆಟ್ಟ ರಸ್ತೆ–ನಿರ್ವಹಣೆ ಕೊರತೆ; ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುವ ಬಸ್‌ಗಳಿಂದ ಪ್ರಯಾಣಿಕರ ಪರದಾಟ

ದೊಡ್ಡಬಳ್ಳಾಪುರ: ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಹದಗೆಟ್ಟಿರುವ ರಸ್ತೆಗಳು ಹಾಗೂ ಸಮರ್ಪಕ ನಿರ್ವಹಣೆ ಇಲ್ಲದ ಕೆಎಸ್‌ಆರ್‌ಟಿಸಿ ಬಸ್‌ಗಳಿಂದಾಗಿ ಸಾರ್ವಜನಿಕರು ನಿತ್ಯವೂ ಪರದಾಡುವಂತಾಗಿದೆ.…

16 hours ago

ಗಜಮುಖನ ಆರಾಧನೆಯಲ್ಲಿ ಮಿಂದೆದ್ದ ದೊಡ್ಡಬಳ್ಳಾಪುರ: ಬೆಸ್ತರಪೇಟೆಯಲ್ಲಿ 14 ಅಡಿ ಎತ್ತರದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ: 7ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ಮೆರುಗು

ದೊಡ್ಡಬಳ್ಳಾಪುರ: ಗೌರಿ ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ದೊಡ್ಡಬಳ್ಳಾಪುರ ನಗರದಲ್ಲೂ ಗಣೇಶೋತ್ಸವದ ಕಳೆ ಹೆಚ್ಚಾಗಿದೆ. ನಗರದ ವಿವಿಧೆಡೆ ಗಣೇಶ…

16 hours ago

ಗಣೇಶ ವಿಸರ್ಜನೆಗೆ ಗುಂಡಮಗೆರೆ ಕೆರೆ ಬಳಿ ವಿಶೇಷ ವ್ಯವಸ್ಥೆ

ದೊಡ್ಡಬಳ್ಳಾಪುರ: ಗಣೇಶೋತ್ಸವದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಕೂಲವಾಗುವಂತೆ ಹೊಸಹಳ್ಳಿ ಪೊಲೀಸ್ ಠಾಣೆ ವತಿಯಿಂದ ಗುಂಡಮಗೆರೆ ಕೆರೆಯಲ್ಲಿ ವಿಶೇಷ ವ್ಯವಸ್ಥೆ…

17 hours ago

ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ: ತೂಬಗೆರೆಯಲ್ಲೂ ಕಳೆಗಟ್ಟಿದ ಗೌರಿ ಗಣೇಶ ಹಬ್ಬದ ಆಚರಣೆ: 20 ಅಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ

ದೊಡ್ಡಬಳ್ಳಾಪುರ: ನಾಡಿನಾದ್ಯಂತ ಗೌರಿ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯಲ್ಲೂ ಹಬ್ಬದ ವಾತಾವರಣ ಕಳೆಗಟ್ಟಿದೆ. ವಿವಿಧೆಡೆ…

22 hours ago