ಕಾಲವಾದ ಕಲಾವಿದ ಗುರುಗಳಿಗೆ ಕೃತಜ್ಞತೆಯ ನುಡಿನಮನಗಳು

ದೊಡ್ಡಬಳ್ಳಾಪುರ: ಇತ್ತೀಚೆಗಷ್ಟೇ ಹೃದಯಾಘಾತದಿಂದ ಸಾವನ್ನಪ್ಪಿದ ಹೆಸರಾಂತ ಕಲಾವಿದ ಸೂರ್ಯಕುಮಾರ್ ರವರಿಗೆ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ
ಕರ್ನಾಟಕ ರಾಜ್ಯ ನಾಮಫಲಕ ಕಲಾವಿದರ ಸಂಘದ ರಾಜ್ಯಾಧ್ಕಕ್ಷ ಗುರುರಾಜ್ ಕೃಷ್ಣಪ್ಪ, ಹಿರಿಯ ಕಲಾವಿದರು ಸಂಘಟನೆಯ ಮಾರ್ಗದರ್ಶಕರು ಆದ ಸೂರ್ಯಕುಮಾರ್ ರವರ ಸಾವು ನಮ್ಮ ಸಂಘಟನೆ ತುಂಬಲಾರದ ನಷ್ಟ, ಸಂಘಟನೆ ಪ್ರಾರಂಭದ ದಿನಗಳಿಂದಲೂ ಸಕ್ರಿಯರಾಗಿದ್ದ ಹಿರಿಯರು ಮತ್ತು ಕಾಲಾವಿಧರ ಶ್ರೇಯೋಭಿಲಾಷಿಗಳು ನಮ್ಮಿಂದ ಭೌತಿಕವಾಗಿ ದೂರವಾದರೂ ಕಲಾವಿದರ ಬಗ್ಗೆ ಅವರಿಗಿದ್ದ ಕಾಳಜಿ ಮತ್ತು ದೇಯೋದ್ದೇಶಗಳು ಮಾತ್ರ ಜೀವಂತ ಅವರ ದೇಯೋದ್ದೇಶಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ರಾಜ್ಯ ಉಪಾಧ್ಯಕ್ಷ ಚಂದ್ರಶೇಖರ್.ಡಿ.ಉಪ್ಪಾಮಾತನಾಡಿ, ತಾಲ್ಲೂಕಿನಲ್ಲಿ ದಶಕಗಳಿಂದ ನಾಮಪಲಕ ಗಳನ್ನು ಬರೆಯುತ್ತಾ,ತನ್ನ ಹೆಸರಿನ “ಎಸ್ ಕೆ ಆರ್ಟ್ಸ್,” ಎಂಬ ಅಂಗಡಿ ತೆರೆದು ವೃತ್ತಿಯನ್ನೇ ನಂಬಿ ಬಂದ ಕಾಯಕ ಯೋಗಿ ಇವರು, ಬಸವಣ್ಣ ನವರು ಜಗತ್ತಿಗೆ ಸಾರಿದಂತಹ “ಕಾಯವೇ ಕೈಲಾಸ’ ಎಂಬ ತತ್ವಸಿದ್ದಾಂತವನ್ನೇ ನಂಬಿ ಸಾರ್ಥಕತೆ ಕಂಡ ಕುಂಚ ಕಲಾವಿದ.ತಾನು ನಂಬಿದ ಕುಂಚ ಮತ್ತು ಬಣ್ಣ ದಿಂದಲ್ಲೇ ಬದುಕು ಕಟ್ಟಿಕೊಂಡು ತಾನೂ ಬೆಳೆಯತ್ತಾ ಹತ್ತಾರು ಮಂದಿ ಯುವ ಕಲಾವಿದರನ್ನೂ ಬೆಳೆಸುತ್ತಾ ಕಲಾಸೇವೆ ಮಾಡಿದ,ಹಲವರಿಗೆ ಮಾರ್ಗದರ್ಶಕ ರಾಗಿ, ಗುರುಗಳಾಗಿ ತಮ್ಮ ಬದುಕಿನಲ್ಲಿ ಸಾಕಷ್ಟು ಜನ ಕಲಾವಿದರಿಗೆ ಬದುಕು ಕಟ್ಟಿ ಕೊಟ್ಟ ಮಹಾನ್‌ ಮಾನವತಾವಾದಿ,ತಮ್ಮ ಜೀವನದಲ್ಲಿ ಸಾಕಷ್ಡ ಏರಿಳಿತಗಳನ್ನು ಕಂಡ ಕಲಾವಿದ ಸೂರ್ಯ ಕುಮಾರ್ ರವರು ಇತ್ತೀಚೆಗಷ್ಟೆ ಸ್ವರ್ಗಸ್ಥರಾಗಿದ್ದು ದೊಡ್ಡಬಳ್ಳಾಪುರ ದ ಜನತೆಗೆ ನಂಬಲಾಗದ ಸತ್ಯವಾದರೂ ನಂಬಲೇ ಬೇಕಿದೆ.ತನ್ನ ಜೀವಿತಾವಧಿಯಲ್ಲಿ , ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸಿದರೂ ಧೃತಿಗೆಡದೆ ಸಾರ್ಥಕ ಜೀವನ ನಡೆಸಿಸಿದಂತಹ ಕಲಾವಿದರು ಎಂದರೆ ತಪ್ಪಾಗಲಾರದು ಎಂದರು.

ಎಷ್ಟೇ ಕಷ್ಟ ನಷ್ಟಗಳು ಬಂದರು ತನ್ನ ಬಳಿ ಕೆಲಸ ಮಾಡುತಿದ್ದ ಕೆಲಸ ಮತ್ತು ಕಲಿಯುತಿದ್ದ ಕಲಾವಿದರನ್ನೂ ತನ್ನ ಇಬ್ಬರು ಮಕ್ಕಳಂತೆ ಅವರನ್ನೂ ಸಲುಹಿ, ಬೆಳೆಸಿದ ಸಾಹುಕಾರ ಈ ಸೂರ್ಯಕುಮಾರ್ ಕರ್ನಾಟಕ ನಾಮಫಲಕ ಕಲಾವಿದರ ಸಂಘದ ದೊಡ್ಡ ಬಳ್ಳಾಪುರ ತಾಲ್ಲೂಕಿನ ಅಧ್ಯಕ್ಷರಾಗಿ ಐದು ವರ್ಷಗಳಕಾಲ ಸೇವೆದಲ್ಲಿಸಿದ್ದರು.ತಮ್ಮ ಸೇವೆ ಯಿಂದ ಇಡೀ ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಸರು ಪಡೆದಿದ್ದರು ಎಂದು ಹೇಳಿದರು.

ಒಟ್ಟಾರೆ ಒಬ್ಬಕಲಾವಿದರಾಗಿ ವೃತ್ತಿಯೊಂದಿಗೆ ಸಾಮಾಜಿಕ ಕಾಲಜಿಯನ್ನು ಹೊಂದಿದ್ದ ಗುರುಗಳು ನಮ್ಮಿಂದ ದೂರ ವಾದರೂ ಅವರ ಕನಸುಗಳು ನಮ್ಮೊಂದಿಗಿವೆ ಅವುಗಳನ್ನು ಖಂಡಿತವಾಗಿ ನೆರವೇರಿಸಲು ಶಕ್ತಿ ಮೀರಿ ಶ್ಮಿಸುವುದಾಗಿ ಹೇಳುತ್ತಾ ಅವರಿಗೆ ನನ್ನ ನುಡಿನಮಗಳನ್ನು ಅರ್ಪಿಸಿತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಕಾರ್ನಾಟಕ ರಾಜ್ಯ ನಾಮ ಫಲಕ ಕಲಾವಿದರ ಸಂಘದ ರಾಜ್ಯಾಧ್ಯಕ್ಚರಾದ ಗುರುರಾಜ್ ಕೃಷ್ಣಪ್ಪ , ಕಾರ್ಯಾಧ್ಯಕ್ಷ ರಂಗನಾಥ ಬಾಬು, ಉಪಾಧ್ಯಕ್ಷ ಚಂದ್ರಶೇಖರ್.ಡಿ. ಉಪ್ಪಾರ್, ನಿರ್ಧೇಶಕರ ಕೆ.ಜೆ.ವೆಂಕಟೇಶ್, ನಾಗಪ್ರದೀಪ್, ವಿನೋದ್ ಆಚಾರ್ಯ, ತಾಲ್ಲೂಕು ನೂತನ ಅಧ್ಯಕ್ಷ ಎಸ್.ಕೆ.ಸತೀಶ್, ಕಾರ್ಯಾಧ್ಯಕ್ಷ ವರದರಾಜ್, ಪ್ರದಾನ ಕಾರ್ಯದರ್ಶಿ ಉಮಾಶಂಕರ್, ಕಾರ್ಯದರ್ಶಿ ಸುಬ್ರಮಣಿ,ಖಂಜಾಂಚಿ ನಿಥಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ramesh Babu

Journalist

Recent Posts

ಮಳೆಗಾಗಿ ಆಚರಣೆಗಳ ಮೊರೆ: ಬರದ ನಡುವೆ ಭರವಸೆಯ ಸಂಪ್ರದಾಯಗಳು

ಮಳೆ ಎನ್ನುವುದು ರೈತನ ಬದುಕಿನ ಜೀವನಾಡಿ. ಮುಂಗಾರು ವಿಳಂಬವಾದಾಗ ಅಥವಾ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿದ್ದರೆ ರೈತರು ಮಾತ್ರವಲ್ಲ, ಗ್ರಾಮೀಣ ಜೀವನವೇ…

6 hours ago

ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಾರು–ಅಶೋಕ್ ಲೇಲ್ಯಾಂಡ್ ನಡುವೆ ಅಪಘಾತ

ದೊಡ್ಡಬಳ್ಳಾಪುರ–ನೆಲಮಂಗಲ ಮುಖ್ಯ ರಸ್ತೆಯ ಅರಳುಮಲ್ಲಿಗೆ ಕೆರೆ ಏರಿ ಮೇಲೆ ಕಳೆದರಾತ್ರಿ ಕಾರು ಹಾಗೂ ಅಶೋಕ್ ಲೇಲ್ಯಾಂಡ್ ಸರಕು ವಾಹನದ ನಡುವೆ…

1 day ago

ರಾಷ್ಟ್ರೀಯ ಸಾಹಿತ್ಯ ಸೌರಭದಲ್ಲಿ ಕವಿ ರವಿಕುಮಾರ್ ಅವರ ‘ಅಂಚಿನ ತೊರೆ’ ಕವನ ಸಂಕಲನ ಲೋಕಾರ್ಪಣೆ

ಉಡುಪಿ: ಉಡುಪಿ ಜಿಲ್ಲೆಯ ಕೋಟದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಜ್ಞಾನಗಂಗಾ ಸಾಹಿತ್ಯ…

2 days ago

ನಾಡಕಚೇರಿ ಸರ್ವರ್ ಪದೇ ಪದೇ ಡೌನ್: ರಾಜ್ಯಾದ್ಯಂತ ಜನರಿಗೆ ಸಂಕಷ್ಟ – ತುರ್ತು ಪರಿಹಾರಕ್ಕೆ ಸರ್ಕಾರ ಮುಂದಾಗಬೇಕಿದೆ

ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು…

2 days ago

ಮಧುರನಹೊಸಹಳ್ಳಿಯಲ್ಲಿ ವಿಜೃಂಭಣೆಯಿಂದ ಆಷಾಡ ಏಕಾದಶಿ ಆಚರಣೆ

ದೊಡ್ಡಬಳ್ಳಾಪುರ: ತಾಲೂಕಿನ ಮಧುರನಹೊಸಹಳ್ಳಿ ಗ್ರಾಮದಲ್ಲಿ ವರ್ಷದ ಮೊದಲ ಹಬ್ಬವೆಂದು ಪರಿಗಣಿಸಲ್ಪಡುವ ಆಷಾಡ ಏಕಾದಶಿಯನ್ನು ಭಕ್ತಿ, ಸಂಭ್ರಮ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ…

2 days ago

ಬಾಶೆಟ್ಟಿಹಳ್ಳಿ ಯೂ-ಟರ್ನ್‌ನಲ್ಲಿ ಕೆಟ್ಟು ನಿಂತ ಟ್ರಕ್: ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಭಾರೀ ಟ್ರಾಫಿಕ್ ಜಾಮ್

ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಯೂ-ಟರ್ನ್ ಪಡೆಯುವ ವೇಳೆ ಟ್ರಕ್ ಏಕಾಏಕಿ ಕೆಟ್ಟು ನಿಂತ ಪರಿಣಾಮ ಕೆಲಕಾಲ…

3 days ago