ಕಣ್ಣು ಕಾಣದಿದ್ದರೂ ರುಚಿ ರುಚಿ, ಘಮಘಮಿಸುವ ಅಡುಗೆ ಮಾಡುವ ಯೂಟ್ಯೂಬರ್: ಆ ಮಹಿಳೆ ಯಾರು, ಯೂಟ್ಯೂಬ್ ಚಾನೆಲ್ ಹೆಸರೇನು ಎಂಬ ಮಾಹಿತಿ ಇಲ್ಲಿದೆ…

ಕುಣಿಯೋದಕ್ಕೆ ಕೈಲಾಗದವನು ನೆಲ ಡೊಂಕು‌ ಎಂದು ಹೇಳಿ ನುಣಿಚಿಕೊಳ್ಳುವುದುಂಟು, ಆದರೆ ಸಾಧನೆ ಮಾಡುವ ಛಲ ಇದ್ದವನು ಯಾವ ಕುಂಟು ನೆಪ ಹೇಳದೇ ಸಾಧನೆ ಮಾಡಿ‌ ತೋರಿಸುತ್ತಾನೆ.

ಮನುಷ್ಯನಿಗೆ ಪಂಚೇಂದ್ರಿಯಗಳು ಅತಿ ಮುಖ್ಯ, ದೇಹದಲ್ಲಿ ಯಾವುದಾದರೂ ಒಂದು ಪಂಚೇಂದ್ರಿಯವನ್ನ ಶಾಶ್ವತವಾಗಿ ಕಳೆದುಕೊಂಡರೂ ಜೀವನದಲ್ಲಿ ತುಂಬಾ‌ ಸಮಸ್ಯೆ ಅನುಭವಿಸಬೇಕಾಗುತ್ತದೆ. ಪಂಚೇಂದ್ರಿಯ ಲೋಪಕ್ಕೆ ಒಳಗಾಗಿರುವವರು ಜೀವನದಲ್ಲಿ ಕುಗ್ಗಿ ಹೋಗಿರುತ್ತಾರೆ. ಅದರಲ್ಲಿ ಕೆಲವರು ಕುಗ್ಗದೇ, ಜಗ್ಗದೇ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಹಲವು ಮಹತ್ತರವಾದ ಸಾಧನೆಗಳನ್ನು ಮಾಡಿ ಇತರರಿಗೂ ಸ್ಫೂರ್ತಿಯಾಗಿ ನಿಂತಿರುವ ಹಲವಾರು ಉದಾಹರಣೆ ನಮ್ಮ ಕಣ್ಣು ಮುಂದಿವೆ.

ಎಲ್ಲವನ್ನೂ ಮೆಟ್ಟಿ ನಿಂತು ಸಾಧನೆ ಮಾಡಿರುವವರ ಸಾಲಿಗೆ ಸೇರಿರುವ ದೊಡ್ಡಬಳ್ಳಾಪುರ ನಗರದ ಅಂಧ ಮಹಿಳೆ ಭೂಮಿಕಾ…

ಭೂಮಿಕಾ ಅವರಿಗೆ ಕಣ್ಣು ಕಾಣದಿದ್ದರೂ ರುಚಿ ರುಚಿಯಾದ, ಘಮಘಮಿಸುವ ಅಡುಗೆ ಮಾಡುತ್ತಾರೆ. ಅಡುಗೆ ಮಾಡುವುದನ್ನು ತನ್ನ ಪತಿಯ ಬಳಿ ವಿಡಿಯೋ ಮಾಡಿಸಿ ನಂತರ ಯೂಟ್ಯೂಬ್ ಗೆ ಅಪ್ಲೋಡ್ ಮಾಡುತ್ತಾರೆ. ಇದೂವರೆಗೆ ಸುಮಾರು ಸಾವಿರ ಅಡುಗೆ ಮಾಡಿರುವ ವಿಡಿಯೋಗಳನ್ನು ಭೂಮಿಕಾ ಅವರು ತಮ್ಮ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

ಭೂಮಿಕಾ ಅವರು ದೃಷ್ಟಿ ಕಳೆದುಕೊಂಡಿದ್ದು ಹೇಗೆ?

ಭೂಮಿಕಾ ಅವರು ಹುಟ್ಟಿನಿಂದಲೇ ಅಂಧತ್ವ ಹೊಂದಿದವರಲ್ಲ. ಮದುವೆಯಾಗಿ 10 ವರ್ಷಗಳ ನಂತರ ತಮ್ಮ ದೃಷ್ಟಿ ಕಳೆದುಕೊಂಡವರು. 5ಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಬರುವ ಅಪರೂಪದ ಕಣ್ಣಿನ ಕಾಯಿಲೆ ‘ಆಪ್ಟಿಕಲ್ ನೂರೈಟಿಸ್’ ಇವರ ಅಂಧತ್ವಕ್ಕೆ ಕಾರಣವಾಗಿದೆ.

2010ರಲ್ಲಿ ಸಣ್ಣದಾಗಿ ತಲೆನೋವು ಬಂದಿರುತ್ತದೆ. ತಲೆನೋವಿಗೆ ಚಿಕಿತ್ಸೆ ಪಡೆಯಲು ಹೋದಾಗ ಕಣ್ಣಿನ ಸಮಸ್ಯೆ ಇರುವ ಬಗ್ಗೆ ವೈದ್ಯರು ಕುಟುಂಬದವರಿಗೆ ತಿಳಿಸುತ್ತಾರೆ. ನಂತರ ನಾನಾ ಕಡೆ, ವಿವಿಧ ಕಣ್ಣಿನ ಪರೀಕ್ಷೆ, ಆರ್ಯುವೇದ ಪರೀಕ್ಷೆಗಳನ್ನು ತಜ್ಞ ವೈದ್ಯರಿಂದ ಮಾಡಿಸಿಕೊಂಡರು ಸರಿಹೋಗದ ಕಾಯಿಲೆ.

ಹಂತಹಂತವಾಗಿ 2018ರಲ್ಲಿ ಸಂಪೂರ್ಣವಾಗಿ ತಮ್ಮ ದೃಷ್ಟಿಯನ್ನು ಕಳೆದುಕೊಂಡು ಶಾಶ್ವತ ಕತ್ತಲ ಲೋಕಕ್ಕೆ ಬರುತ್ತಾರೆ. ಕಣ್ಣು ಕಳೆದುಕೊಂಡ ಭೂಮಿಕಾ ಅವರು ಮಾನಸಿಕವಾಗಿ ವ್ಯಥೆಗೊಳಗಾಗಿ ಜೀವನ ಸಾಕೆನಿಸುವ ಮಟ್ಟಕ್ಕೆ ಚಿಂತನೆ ಮಾಡುತ್ತಾರೆ. ಆಗ ಭೂಮಿಕಾ ಕುಟುಂಬ ಕುಗ್ಗಿ ಹೋಗಿದ್ದ ಜೀವಕ್ಕೆ ಆತ್ಮಸ್ಥೈರ್ಯ ತುಂಬಿ ಖಿನ್ನತೆಯಿಂದ ಹೊರತಂದು ಖುಷಿಯಾಗಿಡುತ್ತಾರೆ.

ಆಗ ಪತಿ ಸುದರ್ಶನ್ ಹಾಗೂ ಅತ್ತೆ, ಮಾವ ಸಹಕಾರದಿಂದ ಅಂಧತ್ವ ನಡುವೆಯೂ ಚಟುವಟಿಕೆಯಿಂದ ಇರುವ ತರಬೇತಿಯನ್ನು ಪಡೆದುಕೊಂಡರು. ನಂತರ ಕುಟುಂಬಸ್ಥರ ಸಲಹೆ ಮೇರೆಗೆ ಕುಕ್ಕಿಂಗ್ ಯೂಟ್ಯೂಬ್ ಚಾನೆಲ್ ಪ್ರಾರಂಭ ಮಾಡಿ ಒಂದಷ್ಟು ವೀಕ್ಷಕರನ್ನ ಪಡೆದು ಅದರಿಂದ ಆದಾಯ ಗಳಿಸುವ ಮಟ್ಟಕ್ಕೆ ಬಂದಿದ್ದಾರೆ.

ಅಡುಗೆ ಕೋಣೆಯಲ್ಲಿ ಯಾವ ಪದಾರ್ಥ, ಯಾವ ವಸ್ತು ಎಲ್ಲಿರುತ್ತೆ ಎಂಬುದು ಚೆನ್ನಾಗಿ ಗೊತ್ತು, ಚಕಚಕ ಅಂತಾ ತರಕಾರಿ ಕಟ್ ಮಾಡುತ್ತಾರೆ, ಲವಲವಿಕೆಯಿಂದ ಅಡುಗೆ ಮನೆಯಲ್ಲಿ ಓಡಾಡುತ್ತಾರೆ. ತರಕಾರಿ, ಹಣ್ಣುಗಳನ್ನು ಕೈಗಳಿಂದ ಸ್ಪರ್ಶಿಸಿ ಹಾಗೂ ವಾಸನೆ ನೋಡಿ ಕೊಳೆತು ಹೋಗಿದಿಯೋ, ಅಥವಾ ಚೆನ್ನಾಗಿದಿಯೋ ಎಂಬುದು ತಿಳಿದುಕೊಳ್ಳುತ್ತಾರೆ. ಚೆನ್ನಾಗಿದ್ದರೆ ಮಾತ್ರ ಅಡುಗೆಗೆ ಬಳಸುತ್ತಾರೆ.

ಅಡುಗೆ ಕೋಣೆಯನ್ನು ಶುಚಿಯಾಗಿ ಇಟ್ಟಿಕೊಳ್ಳುವದರಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ, ಅಡುಗೆ ಮಾಡುವುದಕ್ಕೂ ಮುನ್ನ ಅಡುಗೆ ಮಾಡುವ ಗೌನ್ ಧರಿಸುವ ಇವರ ವಿಶೇಷತೆ. ಬಹಳ ಸುಲಭವಾಗಿ ಮತ್ತು ಕಡಿಮೆ ಪದಾರ್ಥಗಳಿಂದ ಆಡುಗೆ ಮಾಡುತ್ತಾರೆ.

ಬ್ಯಾಚುಲರ್ಸ್ ಯುವಕ ಯುವತಿಯರು ಸುಲಭವಾಗಿ ಸ್ವತಃ ತಾವೇ ಅಡುಗೆ ಮಾಡಿಕೊಳ್ಳುಲು ಅನುಕೂಲವಾಗುಂತೆ ಅಡುಗೆ ಮಾಡುವ ಮೂಲಕ‌ ಸಲಹೆ ನೀಡುತ್ತಾರೆ.

ಭೂಮಿಕಾ ಅವರು ಮಾಡಿದಂತಹ ಅಡುಗೆ, ವಿಧ ವಿಧ ಅಡುಗೆಗಳನ್ನು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ‘ಭೂಮಿಕಾ ಕಿಚನ್’ ಯೂಟ್ಯೂಬ್ ಚಾನೆಲ್ ನ್ನು ವೀಕ್ಷಿಸಿ, ಸಬ್ ಸ್ಕ್ರೈಬ್ ಆಗಿ ಭೂಮಿಕಾ ಅವರನ್ನು ಪ್ರೋತ್ಸಾಹಿಸಬೇಕಾಗಿದೆ.

ಒಟ್ಟಾರೆ ಇವರ ಸಾಧನೆಗೆ ನಾವೆಲ್ಲರೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕಾಗಿದೆ. ಕೆಲವರು ಅಡುಗೆ ಮನೆಗೆ ಹೋಗೋದೆ ಕಷ್ಟ. ಅಂತಹವರು ಭೂಮಿಕಾ ಕಿಚನ್ ನೋಡಿದರೆ ಖಂಡಿತ ಅಡುಗೆ ಮಾಡಲು ಮುಂದಾಗುತ್ತಾರೆ ಆದ್ದರಿಂದ ಭೂಮಿಕಾ ಅವರು ಎಲ್ಲರಿಗೂ ಸ್ಫೂರ್ತಿದಾಯಕ ಮಹಿಳೆಯಾಗಿದ್ದಾರೆ.

Ramesh Babu

Journalist

Recent Posts

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

7 hours ago

ಗೊತ್ತಿರದ ವಿಷಯ ಕಲಿಯುವ ಕಡೆ ಗಮನ ಕೇಂದ್ರೀಕರಿಸಿ- ಡಾ. ಸೀಮಾ ಚೋಪ್ರಾ

"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…

8 hours ago

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

16 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

1 day ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 days ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

2 days ago