Categories: ಕೊಡಗು

ಒಣ ಮೀನು ಕದ್ದ ಕಳ್ಳನಿಗೆ ವರ್ತಕರಿಂದ ಧರ್ಮದೇಟು

ಮಾರುಕಟ್ಟೆಯಲ್ಲಿ ನಿರಂತರವಾಗಿ ಕಳ್ಳತನ ‌ಮಾಡುತಿದ್ದ ಚಾಲಕಿ ಕಳ್ಳನನ್ನು ಮಾಲು ಸಮೇತ ವಶಕ್ಕೆ ಪಡೆದು ಧರ್ಮದೇಟು ನೀಡಿದ ಘಟನೆ ವಿರಾಜಪೇಟೆ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.

ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಮರ (ತೋರ) ಗ್ರಾಮದ ನಿವಾಸಿಯಾದ ಸುರೇಶ್ (51) ಕಳ್ಳತನ ವೆಸಗಿ ವರ್ತಕರಿಂದ ಧರ್ಮದೇಟು ತಿಂದ ವ್ಯಕ್ತಿ.

*ಘಟನೆಯ ಸಾರ*…..

ಹಲವು ತಿಂಗಳುಗಳಿಂದ ವಿರಾಜಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ದವಾಗಿದ್ದ ಮಳಿಗೆ ಮಾಲೀಕರ ತರಕಾರಿ ಚೀಲಗಳು ಮಂಗಮಾಯವಾಗುತಿತ್ತು. ಅವು ಕಳ್ಳತನವಾಗಿದ್ದವು. 15 ದಿನಗಳ ಹಿಂದೆ 50 ಕೆ.ಜಿ. ಬೀಟ್ರೂಟ್ ಚೀಲ, ತಿಂಗಳ ಹಿಂದೆ 20 ಕೆ.ಜಿ.ತೂಕದ ಬೀನ್ಸ್ ಚೀಲ, 10 ದಿನಗಳ ಹಿಂದೆ. 10 ಕೆ.ಜಿ. ತೂಕದ ಹಾಗಲಕಾಯಿ ಚೀಲ ಕಳ್ಳತನವಾಗಿತ್ತು.

ನಿರಂತರ ಕಳ್ಳತನದಿಂದ ಮಾರುಕಟ್ಟೆಯ ವರ್ತಕರು ಕಂಗಾಲಾಗಿದ್ದರು. ತರಕಾರಿ ಮಾರುಕಟ್ಟೆಯ ಒಂದು ಅಂಚಿನಲ್ಲಿ ಒಣ ಮೀನು ಮಾರುಕಟ್ಟೆ ಇದೆ. ಈ ಬಾರಿ ತರಕಾರಿ ಬದಲು ಒಣ ಮೀನಿಗೆ ಕೈ ಹಾಕಿ ಸಿಲುಕಿ ಹಾಕಿಕೊಂಡಿದ್ದಾನೆ.

ಚಾಲಕಿ ಕಳ್ಳ ಸಂತೆಗೆ ಬಂದು ಮೀನು ಕಳ್ಳತನ ಮಾಡಲು ಹೊಂಚು ಹಾಕಿದ್ದಾನೆ. ಯಾರು ಇಲ್ಲದಿರುವುದನ್ನು ಗಮನಿಸಿ ಪ್ಲಾಸ್ಟಿಕ್ ಚೀಲ ಒಂದರಲ್ಲಿ ಬೆಲೆಬಾಳುವ ತೆರೆಂಡಿ ಮೀನುಗಳನ್ನು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಮುಂಜಾನೆ ಮಸೀದಿಗೆ ತೆರಳುವ ವ್ಯಕ್ತಿಯೊರ್ವರು ಮಾರುಕಟ್ಟೆಯಿಂದ ಅನಾಮಧೇಯ ವ್ಯಕ್ತಿ ಸಂಶಯಾಸ್ಪದವಾಗಿ ತೆರಳುತಿರುವುದನ್ನು ನೋಡಿದ್ದಾರೆ. ಮಾಹಿತಿ ಸ್ನೇಹಿತರಿಗೆ ತಿಳಿಸಿದ್ದಾರೆ. ವ್ಯಕ್ತಿಯನ್ನು ಹಿಂಬಾಲಿಸಿ ಮೂರ್ನಾಡು ರಸ್ತೆಯ ತಿರುವಿನಲ್ಲಿ ವ್ಯಕ್ತಿಯನ್ನು ಮಾಲು ಸಮೇತವಾಗಿ ಹಿಡಿದಿದ್ದಾರೆ.

ವ್ಯಕ್ತಿಯನ್ನು ಮಾರುಕಟ್ಟೆ ಎಳೆ ತಂದು ವಿಚಾರಣೆ ಮಾಡಿದ್ದಾರೆ. ಏಟು ತಿಂದ ವ್ಯಕ್ತಿ ಸಮೀರ್ ಎಂಬುವವರ ಒಣ ಮೀನು ಮಳಿಗೆಯಿಂದ ತೆರಂಡಿ ಮೀನು ಕಳ್ಳತನ ಮಾಡಿರಯವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.

ತೆರಂಡಿ ಮೀನು ಕೆ.ಜಿ. ಒಂದಕ್ಕೆ 450 ರೂ. ಬೆಲೆಯಾಗಿದ್ದು. ಸುಮಾರು 10 ಕೆ.ಜಿ. ಮೀನು ಕಳ್ಳತನ ಮಾಡಿ ಮಾರಾಟಕ್ಕೆ ತೆರಳುತಿದ್ದ ಎನ್ನಲಾಗಿದೆ.

ಇಂತಹ ಘಟನೆಗಳು ಹಲವು ಬಾರಿ ನಡೆದಿದೆ. ಇದೇ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದಲ್ಲಿ ಗಂಟೆಗಳು ಕಳೆದ ನಂತರ ಮನೆಗೆ ಸೇರುತ್ತಾನೆ. ಆದುದರಿಂದ ನಾವೇ ಅಲ್ಪ ಮಟ್ಟದ ಶಿಕ್ಷೆ ನೀಡಿ ಕಳಿಸಿದ್ದೇವೆ. ಇತನೀಗೆ ಕುಡಿತದ ಚಟವಿದ್ದು ಕುಡಿಯಲು ಹಣವಿಲ್ಲದಾಗ ಮಳಿಗೆಗೆ ಕನ್ನ ಹಾಕಿ ಮಾಲು ಮಾರಾಟ ಮಾಡಿ ಅಂದಿನ ಜೀವನ ಸಾಗಿಸುತ್ತಾನೆ ಎಂದು ವರ್ತಕರೋಬ್ಬರು ಹೇಳಿದ್ದಾರೆ.

Ramesh Babu

Journalist

Recent Posts

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

6 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

6 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

7 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

8 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

15 hours ago

ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ…

2 days ago