Categories: ಕೊಡಗು

ಒಣ ಮೀನು ಕದ್ದ ಕಳ್ಳನಿಗೆ ವರ್ತಕರಿಂದ ಧರ್ಮದೇಟು

ಮಾರುಕಟ್ಟೆಯಲ್ಲಿ ನಿರಂತರವಾಗಿ ಕಳ್ಳತನ ‌ಮಾಡುತಿದ್ದ ಚಾಲಕಿ ಕಳ್ಳನನ್ನು ಮಾಲು ಸಮೇತ ವಶಕ್ಕೆ ಪಡೆದು ಧರ್ಮದೇಟು ನೀಡಿದ ಘಟನೆ ವಿರಾಜಪೇಟೆ ತರಕಾರಿ ಮಾರುಕಟ್ಟೆಯಲ್ಲಿ ನಡೆದಿದೆ.

ವಿರಾಜಪೇಟೆ ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಮರ (ತೋರ) ಗ್ರಾಮದ ನಿವಾಸಿಯಾದ ಸುರೇಶ್ (51) ಕಳ್ಳತನ ವೆಸಗಿ ವರ್ತಕರಿಂದ ಧರ್ಮದೇಟು ತಿಂದ ವ್ಯಕ್ತಿ.

*ಘಟನೆಯ ಸಾರ*…..

ಹಲವು ತಿಂಗಳುಗಳಿಂದ ವಿರಾಜಪೇಟೆ ತರಕಾರಿ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಸಿದ್ದವಾಗಿದ್ದ ಮಳಿಗೆ ಮಾಲೀಕರ ತರಕಾರಿ ಚೀಲಗಳು ಮಂಗಮಾಯವಾಗುತಿತ್ತು. ಅವು ಕಳ್ಳತನವಾಗಿದ್ದವು. 15 ದಿನಗಳ ಹಿಂದೆ 50 ಕೆ.ಜಿ. ಬೀಟ್ರೂಟ್ ಚೀಲ, ತಿಂಗಳ ಹಿಂದೆ 20 ಕೆ.ಜಿ.ತೂಕದ ಬೀನ್ಸ್ ಚೀಲ, 10 ದಿನಗಳ ಹಿಂದೆ. 10 ಕೆ.ಜಿ. ತೂಕದ ಹಾಗಲಕಾಯಿ ಚೀಲ ಕಳ್ಳತನವಾಗಿತ್ತು.

ನಿರಂತರ ಕಳ್ಳತನದಿಂದ ಮಾರುಕಟ್ಟೆಯ ವರ್ತಕರು ಕಂಗಾಲಾಗಿದ್ದರು. ತರಕಾರಿ ಮಾರುಕಟ್ಟೆಯ ಒಂದು ಅಂಚಿನಲ್ಲಿ ಒಣ ಮೀನು ಮಾರುಕಟ್ಟೆ ಇದೆ. ಈ ಬಾರಿ ತರಕಾರಿ ಬದಲು ಒಣ ಮೀನಿಗೆ ಕೈ ಹಾಕಿ ಸಿಲುಕಿ ಹಾಕಿಕೊಂಡಿದ್ದಾನೆ.

ಚಾಲಕಿ ಕಳ್ಳ ಸಂತೆಗೆ ಬಂದು ಮೀನು ಕಳ್ಳತನ ಮಾಡಲು ಹೊಂಚು ಹಾಕಿದ್ದಾನೆ. ಯಾರು ಇಲ್ಲದಿರುವುದನ್ನು ಗಮನಿಸಿ ಪ್ಲಾಸ್ಟಿಕ್ ಚೀಲ ಒಂದರಲ್ಲಿ ಬೆಲೆಬಾಳುವ ತೆರೆಂಡಿ ಮೀನುಗಳನ್ನು ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ.

ಮುಂಜಾನೆ ಮಸೀದಿಗೆ ತೆರಳುವ ವ್ಯಕ್ತಿಯೊರ್ವರು ಮಾರುಕಟ್ಟೆಯಿಂದ ಅನಾಮಧೇಯ ವ್ಯಕ್ತಿ ಸಂಶಯಾಸ್ಪದವಾಗಿ ತೆರಳುತಿರುವುದನ್ನು ನೋಡಿದ್ದಾರೆ. ಮಾಹಿತಿ ಸ್ನೇಹಿತರಿಗೆ ತಿಳಿಸಿದ್ದಾರೆ. ವ್ಯಕ್ತಿಯನ್ನು ಹಿಂಬಾಲಿಸಿ ಮೂರ್ನಾಡು ರಸ್ತೆಯ ತಿರುವಿನಲ್ಲಿ ವ್ಯಕ್ತಿಯನ್ನು ಮಾಲು ಸಮೇತವಾಗಿ ಹಿಡಿದಿದ್ದಾರೆ.

ವ್ಯಕ್ತಿಯನ್ನು ಮಾರುಕಟ್ಟೆ ಎಳೆ ತಂದು ವಿಚಾರಣೆ ಮಾಡಿದ್ದಾರೆ. ಏಟು ತಿಂದ ವ್ಯಕ್ತಿ ಸಮೀರ್ ಎಂಬುವವರ ಒಣ ಮೀನು ಮಳಿಗೆಯಿಂದ ತೆರಂಡಿ ಮೀನು ಕಳ್ಳತನ ಮಾಡಿರಯವುದಾಗಿ ತಪ್ಪು ಒಪ್ಪಿಕೊಂಡಿದ್ದಾನೆ.

ತೆರಂಡಿ ಮೀನು ಕೆ.ಜಿ. ಒಂದಕ್ಕೆ 450 ರೂ. ಬೆಲೆಯಾಗಿದ್ದು. ಸುಮಾರು 10 ಕೆ.ಜಿ. ಮೀನು ಕಳ್ಳತನ ಮಾಡಿ ಮಾರಾಟಕ್ಕೆ ತೆರಳುತಿದ್ದ ಎನ್ನಲಾಗಿದೆ.

ಇಂತಹ ಘಟನೆಗಳು ಹಲವು ಬಾರಿ ನಡೆದಿದೆ. ಇದೇ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿದಲ್ಲಿ ಗಂಟೆಗಳು ಕಳೆದ ನಂತರ ಮನೆಗೆ ಸೇರುತ್ತಾನೆ. ಆದುದರಿಂದ ನಾವೇ ಅಲ್ಪ ಮಟ್ಟದ ಶಿಕ್ಷೆ ನೀಡಿ ಕಳಿಸಿದ್ದೇವೆ. ಇತನೀಗೆ ಕುಡಿತದ ಚಟವಿದ್ದು ಕುಡಿಯಲು ಹಣವಿಲ್ಲದಾಗ ಮಳಿಗೆಗೆ ಕನ್ನ ಹಾಕಿ ಮಾಲು ಮಾರಾಟ ಮಾಡಿ ಅಂದಿನ ಜೀವನ ಸಾಗಿಸುತ್ತಾನೆ ಎಂದು ವರ್ತಕರೋಬ್ಬರು ಹೇಳಿದ್ದಾರೆ.

Ramesh Babu

Journalist

Recent Posts

ಕುಸುಮ್ (ಸೌರ ವಿದ್ಯುತ್) ಯೋಜನೆ ಹೆಸರಲ್ಲಿ ದೇಶ ಕಾಯೋ ಯೋಧರ ಭೂಮಿಗೆ ಬೇಲಿ: ತಬ್ಬಿಬ್ಬಾದ ಯೋಧರ ಕುಟುಂಬ

ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…

5 hours ago

ಟೋಲ್ ರಸ್ತೆಯಲ್ಲಿ ಮಿತಿಮೀರಿದ ಅಪಘಾತ: ರಸ್ತೆ ಸುರಕ್ಷತೆ ಕಾಪಾಡದ ಸುಂಕವಸೂಲಿ(ಟೋಲ್) ಗುತ್ತಿಗೆದಾರರು: ಹೆದ್ದಾರಿಯಲ್ಲಿ ಕುಳಿತು ಟೋಲ್ ವಿರುದ್ಧ ಧಿಕ್ಕಾರ ಕೂಗಿದ ರೈತರು, ಸಂಘಟನೆಗಾರರು…

ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…

6 hours ago

ವಿಜಯಪುರದ ಬಸವ ಕಲ್ಯಾಣ ಮಠದಲ್ಲಿ 38ನೇ ವರ್ಷದ ಕಡ್ಲೆಕಾಯಿ ಪರಿಷೆ

ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…

7 hours ago

ಸಾಸಲು ಹೋಬಳಿಯಲ್ಲಿ ಮಿತಿಮೀರಿದ ಕೃಷಿ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿ: ಒಂದೇ ದಿನ ಹಲವು ಕಡೆ ಕೇಬಲ್ ಕಟ್

ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…

9 hours ago

ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ: ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ

ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…

12 hours ago

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ: ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ ಗ್ರಾಪಂ ವಿಫಲ: ಸಿಡಿದ್ದೆದ್ದ ದಲಿತರು

ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…

14 hours ago