ಮೊಬೈಲ್ ಚಾರ್ಜಿಂಗ್ ಶಾರ್ಟ್ ಸರ್ಕಿಟ್: ಮನೆಯಲ್ಲಿ ದಟ್ಟ ಹೊಗೆ: ಭಯಭೀತರಾದ ಜನ: ತಪ್ಪಿದ ಭಾರೀ ಅನಾಹುತ

ಮೊಬೈಲ್ ಚಾರ್ಜ್ ಆಗುತ್ತಿರುವಾಗ ಶಾರ್ಟ್ ಸರ್ಕಿಟ್ ಆಗಿ ಮನೆಯಲ್ಲಿ ದಟ್ಟಹೊಗೆ ಆವರಿಸಿಕೊಂಡು ಕೆಲಕಾಲ ಎಲ್ಲರಲ್ಲಿ ಆತಂಕ ಮೂಡಿಸಿದ್ದ ಘಟನೆ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆ(ಗಂಗಾಧರಪುರ ಬಡಾವಣೆ)ಯಲ್ಲಿ ನಡೆದಿದೆ…

ಮನೆಯಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಮನೆಯವರು ನೀರನ್ನು ಎರಚಿ ಆಗುವ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಕ್ಷಣಾರ್ಧದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಸಂಪೂರ್ಣವಾಗಿ ಹೊಗೆ ಬರುವುದನ್ನು ನಿಂಯತ್ರಣ ಮಾಡಿದ್ದಾರೆ.

ಕೆಲಕಾಲ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು…

ಮೊಬೈಲ್ ಚಾರ್ಜಿಂಗ್ ಶಾರ್ಟ್ ಸರ್ಕಿಟ್ ಆಗುವುದನ್ನು ತಡೆಯುವುದು ಹೇಗೆ

ಮೊಬೈಲ್ ಚಾರ್ಜ್ ಮಾಡುವಾಗ ಶಾರ್ಟ್ ಸರ್ಕಿಟ್ ಆಗುವುದನ್ನು ತಡೆಯಲು, ಗುಣಮಟ್ಟದ ಚಾರ್ಜರ್ ಬಳಸಿ ಮತ್ತು ಚಾರ್ಜಿಂಗ್ ಪೋರ್ಟ್‌ನಲ್ಲಿ ಧೂಳು ಅಥವಾ ತೇವಾಂಶವಿಲ್ಲದಂತೆ ನೋಡಿಕೊಳ್ಳಿ. ಹಾನಿಗೊಳಗಾದ ಕೇಬಲ್‌ಗಳನ್ನು ಬಳಸಬೇಡಿ. ಶಾರ್ಟ್ ಸರ್ಕಿಟ್ ಸಂಭವಿಸಿದರೆ, ತಕ್ಷಣ ಪವರ್ ಆಫ್ ಮಾಡಿ, ಬ್ಯಾಟರಿಯನ್ನು ಪರೀಕ್ಷಿಸಿ ಮತ್ತು ಅಗತ್ಯವಿದ್ದರೆ ವೃತ್ತಿಪರರ ಸಹಾಯ ಪಡೆಯಿರಿ.

ಕಾರಣಗಳು: ಕಳಪೆ ಗುಣಮಟ್ಟದ ಚಾರ್ಜರ್/ಕೇಬಲ್, ಹಾನಿಗೊಳಗಾದ ಚಾರ್ಜಿಂಗ್ ಪೋರ್ಟ್, ನೀರಿನ ತೇವಾಂಶ, ಅಥವಾ ಮದರ್‌ಬೋರ್ಡ್‌ನಲ್ಲಿನ ದೋಷಗಳು.

ಪರಿಹಾರ:ಪವರ್ ಆಫ್ ಮಾಡಿ: ಶಾರ್ಟ್ ಸರ್ಕಿಟ್ ಅನುಮಾನವಿದ್ದರೆ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ.

ಪೋರ್ಟ್ ಪರೀಕ್ಷಿಸಿ: ಚಾರ್ಜಿಂಗ್ ಪೋರ್ಟ್‌ನಲ್ಲಿ ಧೂಳು, ಕಸ ಅಥವಾ ನೀರಿನ ಅಂಶವಿದ್ದರೆ ಸ್ವಚ್ಛಗೊಳಿಸಿ.

ಬ್ಯಾಟರಿ ಪರಿಶೀಲನೆ: ಬ್ಯಾಟರಿ ತೆಗೆಯಬಹುದಾದರೆ, ಅದು ಉಬ್ಬಿದೆಯೇ ಅಥವಾ ಹಾನಿಗೊಳಗಾಗಿದೆಯೇ ಎಂದು ನೋಡಿ.

ಪರಿಣಿತರ ಸಹಾಯ: ಸಮಸ್ಯೆ ಮುಂದುವರಿದರೆ, ಮದರ್‌ಬೋರ್ಡ್‌ನಲ್ಲಿ ಶಾರ್ಟ್ ಸರ್ಕಿಟ್ ಇರಬಹುದು, ತಕ್ಷಣ ರಿಪೇರಿ ಅಂಗಡಿಗೆ ಕರೆದೊಯ್ಯಿರಿ.

ಮುನ್ನೆಚ್ಚರಿಕೆಗಳು:ಮೊಬೈಲ್ ಚಾರ್ಜ್ ಆಗುವಾಗ ಫೋನ್ ಬಳಕೆಯನ್ನು ತಪ್ಪಿಸಿ.

ಫೋನ್ ಅನ್ನು ದಿಂಬಿನ ಅಡಿಯಲ್ಲಿ ಇಟ್ಟು ಚಾರ್ಜ್ ಮಾಡಬೇಡಿ.

ಕಡಿಮೆ ಬೆಲೆಯ ನಕಲಿ ಚಾರ್ಜರ್‌ಗಳನ್ನು ಬಳಸಬೇಡಿ.

ಗಮನಿಸಿ: ಶಾರ್ಟ್ ಸರ್ಕಿಟ್ ಆದಾಗ ಕಿಡಿಗಳು ಬಂದರೆ ಅಥವಾ ಹೊಗೆ ಬಂದರೆ, ತಕ್ಷಣ ಮುಖ್ಯ ಪವರ್ ಸ್ವಿಚ್ ಆಫ್ ಮಾಡಿ ಮತ್ತು ಫೋನ್ ಅನ್ನು ಸುರಕ್ಷಿತವಾಗಿ ದೂರವಿಡಿ.

Ramesh Babu

Journalist

Recent Posts

ಜನರನ್ನು ತಾಲೂಕು ಕಚೇರಿಗೆ ಅಲೆದಾಟ ತಪ್ಪಿಸಿ ಸ್ಥಳದಲ್ಲೇ ಸಮಸ್ಯೆ ಪರಿಹರಿಸಿ- ಶಾಸಕ ಕೊತ್ತೂರು ಮಂಜುನಾಥ್

ಕೋಲಾರ: ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ, ಸ್ಥಳದಲ್ಲಿಯೇ ಸೇವೆ ಒದಗಿಸುವ ನಿಟ್ಟಿನಲ್ಲಿ ಪ್ರಜಾ ಸೇವಾ…

12 hours ago

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

16 hours ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

23 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

1 day ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

2 days ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

2 days ago