ಮೊಬೈಲ್ ಚಾರ್ಜ್ ಆಗುತ್ತಿರುವಾಗ ಶಾರ್ಟ್ ಸರ್ಕಿಟ್ ಆಗಿ ಮನೆಯಲ್ಲಿ ದಟ್ಟಹೊಗೆ ಆವರಿಸಿಕೊಂಡು ಕೆಲಕಾಲ ಎಲ್ಲರಲ್ಲಿ ಆತಂಕ ಮೂಡಿಸಿದ್ದ ಘಟನೆ ದೊಡ್ಡಬಳ್ಳಾಪುರ ನಗರದ ರಾಜೀವ್ ಗಾಂಧಿ ಬಡಾವಣೆ(ಗಂಗಾಧರಪುರ ಬಡಾವಣೆ)ಯಲ್ಲಿ ನಡೆದಿದೆ…
ಮನೆಯಲ್ಲಿ ಹೊಗೆ ಕಾಣಿಸಿಕೊಂಡ ಕೂಡಲೇ ಮನೆಯವರು ನೀರನ್ನು ಎರಚಿ ಆಗುವ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ನಂತರ ಅಗ್ನಿ ಶಾಮಕ ದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಕ್ಷಣಾರ್ಧದಲ್ಲಿ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಸಂಪೂರ್ಣವಾಗಿ ಹೊಗೆ ಬರುವುದನ್ನು ನಿಂಯತ್ರಣ ಮಾಡಿದ್ದಾರೆ.
ಕೆಲಕಾಲ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು…
ಮೊಬೈಲ್ ಚಾರ್ಜಿಂಗ್ ಶಾರ್ಟ್ ಸರ್ಕಿಟ್ ಆಗುವುದನ್ನು ತಡೆಯುವುದು ಹೇಗೆ
ಮೊಬೈಲ್ ಚಾರ್ಜ್ ಮಾಡುವಾಗ ಶಾರ್ಟ್ ಸರ್ಕಿಟ್ ಆಗುವುದನ್ನು ತಡೆಯಲು, ಗುಣಮಟ್ಟದ ಚಾರ್ಜರ್ ಬಳಸಿ ಮತ್ತು ಚಾರ್ಜಿಂಗ್ ಪೋರ್ಟ್ನಲ್ಲಿ ಧೂಳು ಅಥವಾ ತೇವಾಂಶವಿಲ್ಲದಂತೆ ನೋಡಿಕೊಳ್ಳಿ. ಹಾನಿಗೊಳಗಾದ ಕೇಬಲ್ಗಳನ್ನು ಬಳಸಬೇಡಿ. ಶಾರ್ಟ್ ಸರ್ಕಿಟ್ ಸಂಭವಿಸಿದರೆ, ತಕ್ಷಣ ಪವರ್ ಆಫ್ ಮಾಡಿ, ಬ್ಯಾಟರಿಯನ್ನು ಪರೀಕ್ಷಿಸಿ ಮತ್ತು ಅಗತ್ಯವಿದ್ದರೆ ವೃತ್ತಿಪರರ ಸಹಾಯ ಪಡೆಯಿರಿ.
ಕಾರಣಗಳು: ಕಳಪೆ ಗುಣಮಟ್ಟದ ಚಾರ್ಜರ್/ಕೇಬಲ್, ಹಾನಿಗೊಳಗಾದ ಚಾರ್ಜಿಂಗ್ ಪೋರ್ಟ್, ನೀರಿನ ತೇವಾಂಶ, ಅಥವಾ ಮದರ್ಬೋರ್ಡ್ನಲ್ಲಿನ ದೋಷಗಳು.
ಪರಿಹಾರ:ಪವರ್ ಆಫ್ ಮಾಡಿ: ಶಾರ್ಟ್ ಸರ್ಕಿಟ್ ಅನುಮಾನವಿದ್ದರೆ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿ.
ಪೋರ್ಟ್ ಪರೀಕ್ಷಿಸಿ: ಚಾರ್ಜಿಂಗ್ ಪೋರ್ಟ್ನಲ್ಲಿ ಧೂಳು, ಕಸ ಅಥವಾ ನೀರಿನ ಅಂಶವಿದ್ದರೆ ಸ್ವಚ್ಛಗೊಳಿಸಿ.
ಬ್ಯಾಟರಿ ಪರಿಶೀಲನೆ: ಬ್ಯಾಟರಿ ತೆಗೆಯಬಹುದಾದರೆ, ಅದು ಉಬ್ಬಿದೆಯೇ ಅಥವಾ ಹಾನಿಗೊಳಗಾಗಿದೆಯೇ ಎಂದು ನೋಡಿ.
ಪರಿಣಿತರ ಸಹಾಯ: ಸಮಸ್ಯೆ ಮುಂದುವರಿದರೆ, ಮದರ್ಬೋರ್ಡ್ನಲ್ಲಿ ಶಾರ್ಟ್ ಸರ್ಕಿಟ್ ಇರಬಹುದು, ತಕ್ಷಣ ರಿಪೇರಿ ಅಂಗಡಿಗೆ ಕರೆದೊಯ್ಯಿರಿ.
ಮುನ್ನೆಚ್ಚರಿಕೆಗಳು:ಮೊಬೈಲ್ ಚಾರ್ಜ್ ಆಗುವಾಗ ಫೋನ್ ಬಳಕೆಯನ್ನು ತಪ್ಪಿಸಿ.
ಫೋನ್ ಅನ್ನು ದಿಂಬಿನ ಅಡಿಯಲ್ಲಿ ಇಟ್ಟು ಚಾರ್ಜ್ ಮಾಡಬೇಡಿ.
ಕಡಿಮೆ ಬೆಲೆಯ ನಕಲಿ ಚಾರ್ಜರ್ಗಳನ್ನು ಬಳಸಬೇಡಿ.
ಗಮನಿಸಿ: ಶಾರ್ಟ್ ಸರ್ಕಿಟ್ ಆದಾಗ ಕಿಡಿಗಳು ಬಂದರೆ ಅಥವಾ ಹೊಗೆ ಬಂದರೆ, ತಕ್ಷಣ ಮುಖ್ಯ ಪವರ್ ಸ್ವಿಚ್ ಆಫ್ ಮಾಡಿ ಮತ್ತು ಫೋನ್ ಅನ್ನು ಸುರಕ್ಷಿತವಾಗಿ ದೂರವಿಡಿ.
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್ಸ್ಟರ್ಗಳೊಂದಿಗೆ ಇನ್ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…