ಎಡ ಭುಜದ ಮುರಿತಕ್ಕೆ ಒಳಗಾಗಿದ್ದ 57 ವರ್ಷದ ವ್ಯಕ್ತಿಗೆ ಅಪರೂಪದ ಭುಜದ ಕೀಲು ಮರುನಿರ್ಮಣ ಶಸ್ತ್ರಚಿಕಿತ್ಸೆ

ಚನ್ನಪಟ್ಟಣ: ತೀವ್ರವಾದ ಎಡ ಭುಜದ ನೋವಿನಿಂದ ಬಳಲುತ್ತಿದ್ದ 57 ವರ್ಷದ ಚೆನ್ನಪಟ್ಟಣ ಮೂಲದ ವ್ಯಕ್ತಿಗೆ ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯಲ್ಲಿ ಭುಜದ ಕೀಲು ಮರುನಿರ್ಮಣ ಮಾಡಾಗಿದೆ.

ನಾಗರಭಾವಿ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಸಲಹೆಗಾರ ಡಾ. ಡಾ. ಮಂಜುನಾಥ್ ಕೋಡಿಹಳ್ಳಿ ಅವರ ತಂಡ ಈ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ್ದು, ಶಸ್ತ್ರಚಿಕಿತ್ಸೆಯಾದ ಒಂದೇ ದಿನದಲ್ಲಿ ರೋಗಿಯನ್ನು ಬಿಡುಗಡೆ ಮಾಡಲಾಗಿದೆ.
ಈ ಕುರಿತು ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಸಲಹೆಗಾರ ಡಾ. ಮಂಜುನಾಥ್ ಕೋಡಿಹಳ್ಳಿ , ಚೆನ್ನಪಟ್ಟಣ ಮೂಲದ 57 ವರ್ಷದ ಪ್ರಕಾಶ್‌ ಎಂಬ ವ್ಯಕ್ತಿಯು ತನ್ನ ಎಡ ಭುಜದಲ್ಲಿ ಅತೀವಾ ನೋವು ಅನುಭವಿಸುತ್ತಿದ್ದರು. ನೋವು ನಿವಾರಿಸಿಕೊಳ್ಳಲು ಸಾಕಷ್ಟು ಪೇನ್‌ ಕಿಲ್ಲರ್‌ಗಳನ್ನು ಸತತ 10 ದಿನದವರೆಗೂ ದೂಡಿದ್ದಾರೆ. ಆದರೆ, ಅಸಾಧ್ಯವಾದ ನೋವು ಇದ್ದ ಕಾರಣ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಸಂಪೂರ್ಣ ತಪಾಸಣೆಯ ನಂತರ ಅವರ ಎಡ ಭುಜದ ಅಕ್ರೋಮಿಯೊಕ್ಲಾವಿಕ್ಯುಲರ್‌ (ಎಸಿ) ಕೀಲುಗಳಲ್ಲಿ ಮುರಿತವಾಗಿರುವುದು ಕಂಡು ಬಂತು.

ಅಕ್ರೋಮಿಯೊಕ್ಲಾವಿಕ್ಯುಲರ್‌ ಎನ್ನುವುದು ಭುಜದಲ್ಲಿನ ಡಿಸ್ಲೊಕೇಷನ್‌ಗಳಲ್ಲಿ ಒಂದು. ಇಲ್ಲಿ ಮುರಿತವಾಗಿ ೧೦ ದಿನ ಕಳೆದಿದ್ದರೂ ಅವರು ಹಾಗೇ ನಿರ್ಲಕ್ಷಿಸಿದ್ದರಿಂದ ಪರಿಸ್ಥಿತಿ ಸವಾಲಿನದ್ದಾಗಿತ್ತು. ಅವರ ಫಿಟ್‌ನೆಸ್‌ ತಿಳಿದುಕೊಳ್ಳಲು ಹೃದ್ರೋಗತಜ್ಞರ ಅಭಿಪ್ರಾಯದ ಜೊತೆಗೆ, ರೋಗಿಗೆ ಎಡ ಭುಜದ ಆತ್ರೋಸ್ಕೋಪಿಕ್‌ ಎಸಿ ಕೀಲು ಪುನರ್‌ನಿರ್ಮಾಣ ಮಾಡಲು ನಿರ್ಣಯಿಸಲಾಯಿತು ಎಂದರು.

ಸಾಕಷ್ಟು ಜನರು ಭುಜದ ನೋವಿದ್ದರೂ ಅದನ್ನು ನಿರ್ಲಕ್ಷಿಸಿ ಬಿಡುತ್ತಾರೆ, ಕೆಲವೊಮ್ಮೆ ಭುಜದ ಮೂಳೆ ಮುರಿತ ಅಥವಾ ಡಿಸ್ಲೊಕೇಷನ್‌ಗಳಿಂದ ಮುಂದಿನ ದಿನಗಳಲ್ಲಿ ಗಂಭೀರ ಸಮಸ್ಯೆ ಆಗಬಹುದು. ಹೀಗಾಗಿ ಯಾವುದೇ ಕಾರಣಕ್ಕೂ ಭುಜದ ನೋವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ ಎಂದು ಹೇಳಿದರು.

ಫೋರ್ಟಿಸ್ ಆಸ್ಪತ್ರೆ ಫೆಸಿಲಿಟಿಸ್‌ ನಿರ್ದೇಶಕ ತೇಜಸ್ವಿನಿ ಪಾರ್ಥಸಾರಥಿ ಮಾತನಾಡಿ, “ನಮ್ಮಲ್ಲಿರುವ ಅತ್ಯಾಧುನಿಕ ತಂತ್ರಜ್ಞಾನಗಳು ಹಾಗೂ ರೋಬೋಟಿಕ್‌ ಶಸ್ತ್ರಚಿಕಿತ್ಸೆಗಳು ಹೆಚ್ಚು ಪ್ರಚಲಿದಲ್ಲಿದ್ದು, ವಿಶ್ವ ದರ್ಜೆಯ ಮೂಳೆಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಹೇಳಿದರು.

Ramesh Babu

Journalist

Recent Posts

ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದ ಘಾಟಿ ಸುಬ್ರಹ್ಮಣ್ಯ ಸ್ವಾಮಿ ಬ್ರಹ್ಮರಥೋತ್ಸವ

ದಕ್ಷಿಣ ಭಾರತದಲ್ಲಿ ನಾಗರಾಧನೆಗೆ ಸುಪ್ರಸಿದ್ಧಿ ಪಡೆದಿರುವ ಘಾಟಿ ಸುಬ್ರಹ್ಮಣ್ಯ ಸ್ವಾಮಿಯ ಬ್ರಹ್ಮರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿಂದು ಅದ್ಧೂರಿಯಾಗಿ ನೆರವೇರಿತು. ತಾಲೂಕಿನ…

7 hours ago

ಜಗತ್ತಿನ ಬೆಳಕಿನ ಹಬ್ಬ – ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ…..

ಕ್ರಿಸ್ಮಸ್ ಮತ್ತು ಜೀಸಸ್, ಪ್ರೀತಿ ಮತ್ತು ಸೇವೆ.......... ಜಗತ್ತಿನ ಬೆಳಕಿನ ಹಬ್ಬ - ಶಾಂತಿಯ ಸಂದೇಶ ಎಲ್ಲೆಡೆಯೂ ರವಾನೆಯಾಗಲಿ..... ಯೇಸುಕ್ರಿಸ್ತನ…

9 hours ago

ಖಾಸಗಿ ಬಸ್ ಲಾರಿಗೆ ಡಿಕ್ಕಿ: ಹೊತ್ತಿ ಉರಿದ ಬಸ್: 9 ಮಂದಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಬಸ್ ಒಳಗಡೆಯೇ ಸಜೀವ ದಹನ

ಎಲ್ಲರನ್ನು ಬೆಚ್ಚಿಬೀಳಿಸುವಂತಹ ಭೀಕರ ರಸ್ತೆ ಅಪಘಾತವೊಂದು ಚಿತ್ರದುರ್ಗದ ಬಳಿ ನಡೆದಿದ್ದು, ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ 'ಸೀ ಬರ್ಡ್' ಖಾಸಗಿ ಬಸ್…

10 hours ago

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು ಇಲ್ಲಿವೆ ನೋಡಿ…

ಡಿ.28ರಂದು ದೊಡ್ಡಬಳ್ಳಾಪುರ ನಗರ ಮತ್ತು ತಾಲ್ಲೂಕಿನ ಹಲವೆಡೆ ವಿದ್ಯುತ್​ ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ದೊಡ್ಡಬಳ್ಳಾಪು ಉಪವಿಭಾಗದ ಬೆಸ್ಕಾಂ ಅಧಿಕಾರಿಗಳು ಪತ್ರಿಕಾ…

23 hours ago

ನಾಳೆ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಬ್ರಹ್ಮ ರಥೋತ್ಸವಕ್ಕೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ: ಇಂದು ಕ್ಷೇತ್ರಕ್ಕೆ ಜಿಲ್ಲಾಧಿಕಾರಿ ಎ.ಬಿ ಬಸವರಾಜು ಭೇಟಿ, ಪರಿಶೀಲನೆ

ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ನಾಳೆ(ಡಿಸೆಂಬರ್ 25) ಬ್ರಹ್ಮರಥೋತ್ಸವ ನಡೆಯಲಿದ್ದು, ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ…

1 day ago