ಉಳುಮೆ ಮಾಡುವಾಗ ಪುರಾತನ ವಿಗ್ರಹ ಪತ್ತೆ: ವೀರಭದ್ರೇಶ್ವರ ಅಥವಾ ಚೆನ್ನಕೇಶವ ದೇವರ ವಿಗ್ರಹವೆಂಬ ಶಂಕೆ

ಗೌರಿಬಿದನೂರು ತಾಲೂಕಿನ ಮೇಳ್ಯಾ ಗ್ರಾಮದ ರೈತ ರಾಜು ಅವರ ತೋಟದಲ್ಲಿ ಪುರಾತನ ವಿಗ್ರಹವು ಬೆಳಕಿಗೆ ಬಂದಿದೆ.

ಗ್ರಾಮದ ರೈತ ರಾಜು ಟ್ರಾಕ್ಟರ್ ಮೂಲಕ ಉಳುಮೆ ಮಾಡುವಾಗ ಈ ವಿಗ್ರಹ ಪತ್ತೆಯಾಗಿದ್ದು, ಮೊದಲಿಗೆ ಈ ವಿಗ್ರಹವನ್ನು ವೀರಭದ್ರೇಶ್ವರ ಅಥವಾ ಚೆನ್ನಕೇಶವ ದೇವರ ವಿಗ್ರಹವೆಂಬ ಶಂಕೆ ವ್ಯಕ್ತಪಡಿಸಲಾಗಿತ್ತು.

ಗ್ರಾಮಸ್ಥರ ಪ್ರಕಾರ, ಈ ವಿಗ್ರಹವು ವಿಜಯನಗರ, ಚೋಳ ಅಥವಾ ಗಂಗರ ಸಾಮ್ರಾಜ್ಯದ ಕಾಲದ ಛಾಯೆಯನ್ನು ಹೊಂದಿದೆ ಎಂದು ಅಂದಾಜಿಸಲಾಗುತ್ತಿದೆ.

ಕಲ್ಲಿನಿಂದ ನಿರ್ಮಿತವಾಗಿರುವ ಈ ಪುರಾತನ ವಿಗ್ರಹವನ್ನು ನೋಡಿದಾಗ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ. ರಾಜು ಅವರು ತೋಟದಲ್ಲಿ ಕೃಷಿ ಕಾರ್ಯನಿಮಿತ್ತ ಉಳುಮೆ ಮಾಡುವ ವೇಳೆ ಕಲ್ಲಿನ ಭಾಗದಂತೆ ಒಂದು ವಿಗ್ರಹದ ಭಾಗ ಕಾಣಿಸಿಕೊಂಡಿದೆ. ನಂತರ ಗ್ರಾಮಸ್ಥರು ಇದು ಪುರಾತನ ಕಾಲದ ವಿಗ್ರಹ ಎಂದು ಊಹಿಸಿದ್ದಾರೆ.

ತಕ್ಷಣವೇ ಅಧಿಕಾರಿಗಳಿಗೆ ವಿಗ್ರಹ ಪತ್ತೆಯ ಬಗ್ಗೆ ಮಾಹಿತಿ ನೀಡಲಾಗಿದೆ.

ಇನ್ನೂ ಈ ವಿಗ್ರಹದ ಕುರಿತು ಪುರತತ್ವ ವಿಜ್ಙಾನಿ ನರಸಿಂಹಮೂರ್ತಿ ಮಾತನಾಡಿ, ಈ ವಿಗ್ರಹ ನಳಂದ ಹಾಗೂ ಗಂಗರ ಕಾಳದ ವಿಗ್ರಹ ಎಂದು ತಿಳಿಯುತ್ತಿದ್ದು, ಇದು ಸೂರ್ಯ ದೇವರ ವಿಗ್ರಹ ಎಂದು ಗುರುತ್ತಿಸಿದ್ದಾರೆ.

ಇನ್ನೂ ಈಗಾಗಲೇ ಈ ಭಾಗದಲ್ಲಿ ತನಿಖೆಯನ್ನು ನಡೆಸಿದ ವೇಳೆ ಇಲ್ಲಿ ಕಾಲಭೈರವನ ದೇವಸ್ಥಾನ ಇತ್ತು ಎಂದು ತಿಳಿದು ಬಂದಿತ್ತು. ಆದರೆ ಈಗ ಸಾವಿರ ವರ್ಷಗಳ ಇತಿಹಾಸವಿರುವ ವಿಗ್ರಹ ಪತ್ತೆಯಾಗಿದ್ದು ಸಂಶೋದನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

Ramesh Babu

Journalist

Recent Posts

ಮೂರನೇ ಮಹಡಿ ಮೇಲಿಂದ ತಳ್ಳಿ ತಾಯಿಯ ಜೀವ ತೆಗೆದ ಪಾಪಿ ಮಗ

ಮಗನಿಂದಲೇ ತಾಯಿ ಕೊಲೆಯಾಗಿರುವ ಘಟನೆ‌ ಇಂದು ಮಧ್ಯಾಹ್ನ ಬೆಂಗಳೂರಿನ ಆರ್ ಆರ್ ನಗರದ ಬೆಮಲ್ ಲೇಔಟ್ ನಲ್ಲಿ ನಡೆದಿದೆ... ಮೂರನೇ…

5 hours ago

ಕುಡಿಯುವ ನೀರು ಸಮಸ್ಯೆಗೆ ಸಹಾಯವಾಣಿ ಆರಂಭ: ದೂರವಾಣಿ ಸಂಖ್ಯೆ ಇಲ್ಲಿದೆ ನೋಡಿ

ಬೇಸಿಗೆ ಹಿನ್ನೆಲೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸಾರ್ವಜನಿಕರು ಸಹಾಯವಾಣಿಗೆ…

7 hours ago

ರಸಗೊಬ್ಬರ ಖರೀದಿಗೆ ಎಫ್ಐಡಿ ಕಡ್ಡಾಯ-‌ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕಿ ಕಲಾವತಿ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ರೈತರು ಯೂರಿಯಾ ರಸಗೊಬ್ಬರ ಖರೀದಿಸಲು ಇನ್ನು ಮುಂದೆ ಫಾರ್ಮರ್ ಐಡಿ (ಎಫ್ಐಡಿ) ಸಂಖ್ಯೆ ಹೊಂದಿರುವುದು ಕಡ್ಡಾಯ…

7 hours ago

ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿ ಪ್ರವೇಶಾತಿಗೆ ಅರ್ಜಿ ಆಹ್ವಾನ

2026-27ನೇ ಸಾಲಿಗೆ ಜಿಲ್ಲೆಯ ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ(ಆಂಗ್ಲ ಮಾಧ್ಯಮ) ಸೇರ ಬಯಸುವ ಪರಿಶಿಷ್ಟ ಜಾತಿಯ ಪ್ರತಿಭಾವಂತ ವಿದ್ಯಾರ್ಥಿಗಳಿಂದ ಆನ್ಲೈನ್…

9 hours ago

ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ: ಮಾದಿಗ ಮಹಾಸಭಾ ವತಿಯಿಂದ ಬೈಕ್ ರ್ಯಾಲಿ, ಬಾಬಾ ಸಾಹೇಬರಿಗೆ ಮಾಲಾರ್ಪಣೆ

ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್‌ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ…

11 hours ago

ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ: ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವು

ಕ್ಯಾಂಟರ್ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿ ಸ್ನೇಹಿತರ ಜೊತೆಯಲ್ಲಿ ದೇವಾಲಯಕ್ಕೆ ಹೊರಟಿದ್ದ ಯುವಕ ಸಾವನ್ನಪ್ಪಿದ್ದಾನೆ. ಹನುಮಂತ (17) ಮೃತ…

13 hours ago