ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತೀರಾ..? ಹಾಗಾದರೆ ಹುಷಾರ್… ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡ ಕಾಲೇಜು ವಿದ್ಯಾರ್ಥಿ

ತಾಲೂಕಿನ ಕಾಲೇಜೊಂದರಲ್ಲಿ ಅಂತಿಮ‌ ವರ್ಷದ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಡ್ರೀಮ್ 11 ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡಿದ್ದಾನೆ.

ಈ ವಿದ್ಯಾರ್ಥಿ ಮೊದಲಿನಿಂದಲೂ ಡ್ರೀಮ್ 11 ನಲ್ಲಿ ಬೆಟ್ಟಿಂಗ್ ಆಡುತ್ತಿರುತ್ತಾನೆ. ಇನ್‌ಸ್ಟಾಗ್ರಾಮ್ ಅನ್ನು ಬಳಸುತ್ತಿದ್ದಾಗ, ಅದರಲ್ಲಿ ಒಂದು ಟೆಲಿಗ್ರಾಮ್ ಲಿಂಕ್ ಅನ್ನು ಕೊಟ್ಟಿದ್ದು, ನೀವು ಸೇರಿಕೊಂಡರೆ ನಾವು ನಿಮಗೆ 7 ಕ್ರಿಕೆಟ್ ತಂಡಗಳನ್ನು ನೀಡುತ್ತೇವೆ ಅವುಗಳನ್ನು ತೆಗೆದುಕೊಂಡು ಡ್ರೀಮ್ 11 ರಲ್ಲಿ ತಂಡವನ್ನು ರಚಿಸಿದರೆ, ನೀವು 1 ಕೋಟಿ ಹಣವನ್ನು ಗೆಲ್ಲಬಹುದು ಎಂದು ತಿಳಿಸುತ್ತಾರೆ. ನೀವು ಈ ಗುಂಪಿಗೆ ಸೇರಲು ಬಯಸಿದರೆ, ನೀವು ಹಣ ಕಟ್ಟಬೇಕೆಂದು ಹೇಳಿ ಜೂ.20 ರಂದು ಬೆಳಿಗ್ಗೆ 9.09 ಗಂಟೆಗೆ QR ಕೋಡ್ ಕಳುಹಿಸಲಾಗಿದ್ದು, ಇದಕ್ಕಾಗಿ ಈ ಯುವಕ ಫೋನ್ ಪೇ‌ ಮೂಲಕ 1,999, 14,999, 21,999, 49,999 ಸೇರಿ ಒಟ್ಟು 88,996 ರೂ. ಹಣ ಪಾವತಿಸಿ ರಾಮ್ ಚೌಧರಿ ಎಂಬ ಹೆಸರಿನ ಟೆಲಿಗ್ರಾಮ್ ಗುಂಪಿಗೆ ಸೇರುತ್ತಾನೆ.

ಆ ದಿನವೇ ಭಾರತ vs ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯವಿದ್ದು, ಟೆಲಿಗ್ರಾಮ್ ನಲ್ಲಿ 7 ಪಂದ್ಯಗಳನ್ನು ಕಳುಹಿಸುತ್ತಾರೆ.  ಈ 7 ಪಂದ್ಯಗಳ ಪೈಕಿ ಡ್ರೀಮ್ 11 ರಲ್ಲಿ ಪಂದ್ಯಗಳನ್ನು ಆಯ್ಕೆ ಮಾಡುವಷ್ಟರಲ್ಲಿ ಸಮಯ ಆಗಿದ್ದರಿಂದ ಕೇವಲ 3 ಪಂದ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದಾನೆ. ಪಂದ್ಯ ಮುಗಿದ ನಂತರ ಅವರು ಕಳುಹಿಸಿದ 7 ತಂಡಗಳಲ್ಲಿ ಕೊನೆಯ ತಂಡವು ಗೆದ್ದಿದ್ದು, ಆತನಿಗೆ ಹಣ ಸಿಗಲಿಲ್ಲ.ಆಗ ಆತ ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ನಿಮ್ಮ ಹಣವನ್ನು ವಾಪಸ್ ಕೊಡುವುದಿಲ್ಲ. ನಿಮ್ಮ ಡೀಮ್ 11 ಐಡಿ ಮತ್ತೆ ಕ್ರಿಕೆಟ್ ಪಂದ್ಯದಲ್ಲಿ ತಂಡಗಳನ್ನು ಕಳುಹಿಸಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ವಾಲೆಟ್ ಗೆ ಹಣ ಬರುತ್ತದೆ ಎಂದು ತಿಳಿಸುತ್ತಾರೆ.

ಆಗ ಜೂ.22ರಂದು ರಾತ್ರಿ 9.30ಕ್ಕೆ ಭಾರತ ಮತ್ತು ಬಾಂಗ್ಲಾದೇಶ ಪಂದ್ಯಗಳು ಇದ್ದಾಗ ಟೆಲಿಗ್ರಾಮ್‌ನಲ್ಲಿ ವಿದ್ಯಾರ್ಥಿಗೆ ನಿಮ್ಮ ಡ್ರೀಮ್ 11 ID ಅನ್ನು ಕಳುಹಿಸಿ ನಾವೇ ಟೀಮ್ ನ್ನು ಕಟ್ಟಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ಹಣವನ್ನು ನಿಮಗೆ ಬರುವಂತೆ ಮಾಡುತ್ತೇವೆಂದು ಹೇಳಿ ಡ್ರೀಮ್ 11ಗೆ ಸೇರಿಸಲು ಹಣ ಕಟ್ಟಬೇಕೆಂದು ಹೇಳಿ 50 ಸಾವಿರ ರೂ.ಗಳನ್ನು ಫೋನ್ ಪೇ ಮಾಡಿಸಿಕೊಳ್ಳುತ್ತಾರೆ.

ಪಂದ್ಯ ಮುಗಿದ ನಂತರ, ನೀವು ಡ್ರೀಮ್ 11 ಪಂದ್ಯದಲ್ಲಿ 1.5 ಕೋಟಿ ಗೆದ್ದಿದ್ದೀರಾ ಎಂದು ಹೇಳಿ ಫೈನಲ್ ಪ್ರೋಸೆಸ್ ಗೆ ಹಣ ಬೇಕೆಂದು ಒಂದು ಬಾರಿ ರೂ. 54,999/- ಮತ್ತು ಇನ್ನೊಂದು ಬಾರಿ ರೂ. 45,000/-ಗಳನ್ನು ಫೋನ್ ಪೇ ಮೂಲಕ ಪಾವತಿ ಮಾಡಿಸಿಕೊಂಡಿರುತ್ತಾರೆ.

ನಂತರ ಆ ಯುವಕ ಹಣ ಕೇಳಿದರೆ ಮತ್ತೆ 25,000/- ಹಾಕಿದರೆ ನಿಮ್ಮ ಹಣ ನಿಮ್ಮ ವಾಲೆಟ್ ಗೆ ಹಾಕುತ್ತೇವೆ ಎನ್ನುತ್ತಾರೆ. ಹೀಗೆ ಮೋಸ ಮಾಡಿ ವಿದ್ಯಾರ್ಥಿಯ ಫೋನ್ ಪೇಯಿಂದ ಒಟ್ಟು ರೂ.2,38,995 ಪಾವತಿ ಮಾಡಿಸಿಕೊಂಡಿದ್ದಾರೆ.

ಮೋಸ ಹೋದ ನಂತರ ವಿದ್ಯಾರ್ಥಿ‌ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ, ಠೇವಣಿ ಮಾಡಿದ ರಾಮ್ ಚೌಧರಿ ಟೆಲಿಗ್ರಾಮ್ ಗ್ರೂಪ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ramesh Babu

Journalist

Recent Posts

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

14 hours ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

21 hours ago

ಹಣ ಕೇಂದ್ರೀಕೃತ ಸಮಾಜಕ್ಕೆ ಬದಲಾಗಿ ಮನುಷ್ಯತ್ವ ಕೇಂದ್ರಿತ ಸಮಾಜ ನಿರ್ಮಾಣವಾಗಲಿ…..

ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…

24 hours ago

ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆದ ನಟ ದರ್ಶನ್

ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…

1 day ago

ಭೀಮನ ಅಮವಾಸ್ಯೆ ದಿನದಂದು ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…

1 day ago

ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ಬೆಳೆ ವಿಮೆಗೆ ನೊಂದಾಯಿಸಿ

ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…

1 day ago