ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತೀರಾ..? ಹಾಗಾದರೆ ಹುಷಾರ್… ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡ ಕಾಲೇಜು ವಿದ್ಯಾರ್ಥಿ

ತಾಲೂಕಿನ ಕಾಲೇಜೊಂದರಲ್ಲಿ ಅಂತಿಮ‌ ವರ್ಷದ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಡ್ರೀಮ್ 11 ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡಿದ್ದಾನೆ.

ಈ ವಿದ್ಯಾರ್ಥಿ ಮೊದಲಿನಿಂದಲೂ ಡ್ರೀಮ್ 11 ನಲ್ಲಿ ಬೆಟ್ಟಿಂಗ್ ಆಡುತ್ತಿರುತ್ತಾನೆ. ಇನ್‌ಸ್ಟಾಗ್ರಾಮ್ ಅನ್ನು ಬಳಸುತ್ತಿದ್ದಾಗ, ಅದರಲ್ಲಿ ಒಂದು ಟೆಲಿಗ್ರಾಮ್ ಲಿಂಕ್ ಅನ್ನು ಕೊಟ್ಟಿದ್ದು, ನೀವು ಸೇರಿಕೊಂಡರೆ ನಾವು ನಿಮಗೆ 7 ಕ್ರಿಕೆಟ್ ತಂಡಗಳನ್ನು ನೀಡುತ್ತೇವೆ ಅವುಗಳನ್ನು ತೆಗೆದುಕೊಂಡು ಡ್ರೀಮ್ 11 ರಲ್ಲಿ ತಂಡವನ್ನು ರಚಿಸಿದರೆ, ನೀವು 1 ಕೋಟಿ ಹಣವನ್ನು ಗೆಲ್ಲಬಹುದು ಎಂದು ತಿಳಿಸುತ್ತಾರೆ. ನೀವು ಈ ಗುಂಪಿಗೆ ಸೇರಲು ಬಯಸಿದರೆ, ನೀವು ಹಣ ಕಟ್ಟಬೇಕೆಂದು ಹೇಳಿ ಜೂ.20 ರಂದು ಬೆಳಿಗ್ಗೆ 9.09 ಗಂಟೆಗೆ QR ಕೋಡ್ ಕಳುಹಿಸಲಾಗಿದ್ದು, ಇದಕ್ಕಾಗಿ ಈ ಯುವಕ ಫೋನ್ ಪೇ‌ ಮೂಲಕ 1,999, 14,999, 21,999, 49,999 ಸೇರಿ ಒಟ್ಟು 88,996 ರೂ. ಹಣ ಪಾವತಿಸಿ ರಾಮ್ ಚೌಧರಿ ಎಂಬ ಹೆಸರಿನ ಟೆಲಿಗ್ರಾಮ್ ಗುಂಪಿಗೆ ಸೇರುತ್ತಾನೆ.

ಆ ದಿನವೇ ಭಾರತ vs ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯವಿದ್ದು, ಟೆಲಿಗ್ರಾಮ್ ನಲ್ಲಿ 7 ಪಂದ್ಯಗಳನ್ನು ಕಳುಹಿಸುತ್ತಾರೆ.  ಈ 7 ಪಂದ್ಯಗಳ ಪೈಕಿ ಡ್ರೀಮ್ 11 ರಲ್ಲಿ ಪಂದ್ಯಗಳನ್ನು ಆಯ್ಕೆ ಮಾಡುವಷ್ಟರಲ್ಲಿ ಸಮಯ ಆಗಿದ್ದರಿಂದ ಕೇವಲ 3 ಪಂದ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದಾನೆ. ಪಂದ್ಯ ಮುಗಿದ ನಂತರ ಅವರು ಕಳುಹಿಸಿದ 7 ತಂಡಗಳಲ್ಲಿ ಕೊನೆಯ ತಂಡವು ಗೆದ್ದಿದ್ದು, ಆತನಿಗೆ ಹಣ ಸಿಗಲಿಲ್ಲ.ಆಗ ಆತ ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ನಿಮ್ಮ ಹಣವನ್ನು ವಾಪಸ್ ಕೊಡುವುದಿಲ್ಲ. ನಿಮ್ಮ ಡೀಮ್ 11 ಐಡಿ ಮತ್ತೆ ಕ್ರಿಕೆಟ್ ಪಂದ್ಯದಲ್ಲಿ ತಂಡಗಳನ್ನು ಕಳುಹಿಸಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ವಾಲೆಟ್ ಗೆ ಹಣ ಬರುತ್ತದೆ ಎಂದು ತಿಳಿಸುತ್ತಾರೆ.

ಆಗ ಜೂ.22ರಂದು ರಾತ್ರಿ 9.30ಕ್ಕೆ ಭಾರತ ಮತ್ತು ಬಾಂಗ್ಲಾದೇಶ ಪಂದ್ಯಗಳು ಇದ್ದಾಗ ಟೆಲಿಗ್ರಾಮ್‌ನಲ್ಲಿ ವಿದ್ಯಾರ್ಥಿಗೆ ನಿಮ್ಮ ಡ್ರೀಮ್ 11 ID ಅನ್ನು ಕಳುಹಿಸಿ ನಾವೇ ಟೀಮ್ ನ್ನು ಕಟ್ಟಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ಹಣವನ್ನು ನಿಮಗೆ ಬರುವಂತೆ ಮಾಡುತ್ತೇವೆಂದು ಹೇಳಿ ಡ್ರೀಮ್ 11ಗೆ ಸೇರಿಸಲು ಹಣ ಕಟ್ಟಬೇಕೆಂದು ಹೇಳಿ 50 ಸಾವಿರ ರೂ.ಗಳನ್ನು ಫೋನ್ ಪೇ ಮಾಡಿಸಿಕೊಳ್ಳುತ್ತಾರೆ.

ಪಂದ್ಯ ಮುಗಿದ ನಂತರ, ನೀವು ಡ್ರೀಮ್ 11 ಪಂದ್ಯದಲ್ಲಿ 1.5 ಕೋಟಿ ಗೆದ್ದಿದ್ದೀರಾ ಎಂದು ಹೇಳಿ ಫೈನಲ್ ಪ್ರೋಸೆಸ್ ಗೆ ಹಣ ಬೇಕೆಂದು ಒಂದು ಬಾರಿ ರೂ. 54,999/- ಮತ್ತು ಇನ್ನೊಂದು ಬಾರಿ ರೂ. 45,000/-ಗಳನ್ನು ಫೋನ್ ಪೇ ಮೂಲಕ ಪಾವತಿ ಮಾಡಿಸಿಕೊಂಡಿರುತ್ತಾರೆ.

ನಂತರ ಆ ಯುವಕ ಹಣ ಕೇಳಿದರೆ ಮತ್ತೆ 25,000/- ಹಾಕಿದರೆ ನಿಮ್ಮ ಹಣ ನಿಮ್ಮ ವಾಲೆಟ್ ಗೆ ಹಾಕುತ್ತೇವೆ ಎನ್ನುತ್ತಾರೆ. ಹೀಗೆ ಮೋಸ ಮಾಡಿ ವಿದ್ಯಾರ್ಥಿಯ ಫೋನ್ ಪೇಯಿಂದ ಒಟ್ಟು ರೂ.2,38,995 ಪಾವತಿ ಮಾಡಿಸಿಕೊಂಡಿದ್ದಾರೆ.

ಮೋಸ ಹೋದ ನಂತರ ವಿದ್ಯಾರ್ಥಿ‌ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ, ಠೇವಣಿ ಮಾಡಿದ ರಾಮ್ ಚೌಧರಿ ಟೆಲಿಗ್ರಾಮ್ ಗ್ರೂಪ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ramesh Babu

Journalist

Recent Posts

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್…

32 minutes ago

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

6 hours ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

18 hours ago

ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಶೇ.78ರಷ್ಟು ಮತದಾನ: ನಕಲಿ ಮತದಾನಕ್ಕೆ ಯತ್ನಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು: ಕುಡಿದು ಚುನಾವಣೆ ಕೆಲಸಕ್ಕೆ ಬಂದ ಶಿಕ್ಷಕ

ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…

18 hours ago

ಒಂಟಿ ಮನೆ ಸುತ್ತಾ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳು: ಗಾಬರಿಗೊಂಡ ಮಹಿಳೆ: ಗ್ರಾಮಸ್ಥರ ಕೈಗೆ ಸಿಕ್ಕ ಆಸಾಮಿಗಳು, ಸದ್ಯ ವಶಕ್ಕೆ ಪಡೆದ ಪೊಲೀಸರು

ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…

19 hours ago

ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಎಸಿ ಗೋವಿಂದಪ್ಪ ಅವಿರೋಧ ಆಯ್ಕೆ

ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…

19 hours ago