ಆನ್ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಡುತ್ತೀರಾ..? ಹಾಗಾದರೆ ಹುಷಾರ್… ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡ ಕಾಲೇಜು ವಿದ್ಯಾರ್ಥಿ

ತಾಲೂಕಿನ ಕಾಲೇಜೊಂದರಲ್ಲಿ ಅಂತಿಮ‌ ವರ್ಷದ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಡ್ರೀಮ್ 11 ನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಆಡಲು ಹೋಗಿ ಬರೋಬ್ಬರಿ 2,38,995 ರೂ. ಕಳೆದುಕೊಂಡಿದ್ದಾನೆ.

ಈ ವಿದ್ಯಾರ್ಥಿ ಮೊದಲಿನಿಂದಲೂ ಡ್ರೀಮ್ 11 ನಲ್ಲಿ ಬೆಟ್ಟಿಂಗ್ ಆಡುತ್ತಿರುತ್ತಾನೆ. ಇನ್‌ಸ್ಟಾಗ್ರಾಮ್ ಅನ್ನು ಬಳಸುತ್ತಿದ್ದಾಗ, ಅದರಲ್ಲಿ ಒಂದು ಟೆಲಿಗ್ರಾಮ್ ಲಿಂಕ್ ಅನ್ನು ಕೊಟ್ಟಿದ್ದು, ನೀವು ಸೇರಿಕೊಂಡರೆ ನಾವು ನಿಮಗೆ 7 ಕ್ರಿಕೆಟ್ ತಂಡಗಳನ್ನು ನೀಡುತ್ತೇವೆ ಅವುಗಳನ್ನು ತೆಗೆದುಕೊಂಡು ಡ್ರೀಮ್ 11 ರಲ್ಲಿ ತಂಡವನ್ನು ರಚಿಸಿದರೆ, ನೀವು 1 ಕೋಟಿ ಹಣವನ್ನು ಗೆಲ್ಲಬಹುದು ಎಂದು ತಿಳಿಸುತ್ತಾರೆ. ನೀವು ಈ ಗುಂಪಿಗೆ ಸೇರಲು ಬಯಸಿದರೆ, ನೀವು ಹಣ ಕಟ್ಟಬೇಕೆಂದು ಹೇಳಿ ಜೂ.20 ರಂದು ಬೆಳಿಗ್ಗೆ 9.09 ಗಂಟೆಗೆ QR ಕೋಡ್ ಕಳುಹಿಸಲಾಗಿದ್ದು, ಇದಕ್ಕಾಗಿ ಈ ಯುವಕ ಫೋನ್ ಪೇ‌ ಮೂಲಕ 1,999, 14,999, 21,999, 49,999 ಸೇರಿ ಒಟ್ಟು 88,996 ರೂ. ಹಣ ಪಾವತಿಸಿ ರಾಮ್ ಚೌಧರಿ ಎಂಬ ಹೆಸರಿನ ಟೆಲಿಗ್ರಾಮ್ ಗುಂಪಿಗೆ ಸೇರುತ್ತಾನೆ.

ಆ ದಿನವೇ ಭಾರತ vs ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯವಿದ್ದು, ಟೆಲಿಗ್ರಾಮ್ ನಲ್ಲಿ 7 ಪಂದ್ಯಗಳನ್ನು ಕಳುಹಿಸುತ್ತಾರೆ.  ಈ 7 ಪಂದ್ಯಗಳ ಪೈಕಿ ಡ್ರೀಮ್ 11 ರಲ್ಲಿ ಪಂದ್ಯಗಳನ್ನು ಆಯ್ಕೆ ಮಾಡುವಷ್ಟರಲ್ಲಿ ಸಮಯ ಆಗಿದ್ದರಿಂದ ಕೇವಲ 3 ಪಂದ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದಾನೆ. ಪಂದ್ಯ ಮುಗಿದ ನಂತರ ಅವರು ಕಳುಹಿಸಿದ 7 ತಂಡಗಳಲ್ಲಿ ಕೊನೆಯ ತಂಡವು ಗೆದ್ದಿದ್ದು, ಆತನಿಗೆ ಹಣ ಸಿಗಲಿಲ್ಲ.ಆಗ ಆತ ನನ್ನ ಹಣ ವಾಪಸ್ ಕೊಡಿ ಎಂದು ಕೇಳಿದ್ದಕ್ಕೆ ನಿಮ್ಮ ಹಣವನ್ನು ವಾಪಸ್ ಕೊಡುವುದಿಲ್ಲ. ನಿಮ್ಮ ಡೀಮ್ 11 ಐಡಿ ಮತ್ತೆ ಕ್ರಿಕೆಟ್ ಪಂದ್ಯದಲ್ಲಿ ತಂಡಗಳನ್ನು ಕಳುಹಿಸಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ವಾಲೆಟ್ ಗೆ ಹಣ ಬರುತ್ತದೆ ಎಂದು ತಿಳಿಸುತ್ತಾರೆ.

ಆಗ ಜೂ.22ರಂದು ರಾತ್ರಿ 9.30ಕ್ಕೆ ಭಾರತ ಮತ್ತು ಬಾಂಗ್ಲಾದೇಶ ಪಂದ್ಯಗಳು ಇದ್ದಾಗ ಟೆಲಿಗ್ರಾಮ್‌ನಲ್ಲಿ ವಿದ್ಯಾರ್ಥಿಗೆ ನಿಮ್ಮ ಡ್ರೀಮ್ 11 ID ಅನ್ನು ಕಳುಹಿಸಿ ನಾವೇ ಟೀಮ್ ನ್ನು ಕಟ್ಟಿ ನಿಮ್ಮನ್ನು ಗೆಲ್ಲಿಸಿ ನಿಮ್ಮ ಹಣವನ್ನು ನಿಮಗೆ ಬರುವಂತೆ ಮಾಡುತ್ತೇವೆಂದು ಹೇಳಿ ಡ್ರೀಮ್ 11ಗೆ ಸೇರಿಸಲು ಹಣ ಕಟ್ಟಬೇಕೆಂದು ಹೇಳಿ 50 ಸಾವಿರ ರೂ.ಗಳನ್ನು ಫೋನ್ ಪೇ ಮಾಡಿಸಿಕೊಳ್ಳುತ್ತಾರೆ.

ಪಂದ್ಯ ಮುಗಿದ ನಂತರ, ನೀವು ಡ್ರೀಮ್ 11 ಪಂದ್ಯದಲ್ಲಿ 1.5 ಕೋಟಿ ಗೆದ್ದಿದ್ದೀರಾ ಎಂದು ಹೇಳಿ ಫೈನಲ್ ಪ್ರೋಸೆಸ್ ಗೆ ಹಣ ಬೇಕೆಂದು ಒಂದು ಬಾರಿ ರೂ. 54,999/- ಮತ್ತು ಇನ್ನೊಂದು ಬಾರಿ ರೂ. 45,000/-ಗಳನ್ನು ಫೋನ್ ಪೇ ಮೂಲಕ ಪಾವತಿ ಮಾಡಿಸಿಕೊಂಡಿರುತ್ತಾರೆ.

ನಂತರ ಆ ಯುವಕ ಹಣ ಕೇಳಿದರೆ ಮತ್ತೆ 25,000/- ಹಾಕಿದರೆ ನಿಮ್ಮ ಹಣ ನಿಮ್ಮ ವಾಲೆಟ್ ಗೆ ಹಾಕುತ್ತೇವೆ ಎನ್ನುತ್ತಾರೆ. ಹೀಗೆ ಮೋಸ ಮಾಡಿ ವಿದ್ಯಾರ್ಥಿಯ ಫೋನ್ ಪೇಯಿಂದ ಒಟ್ಟು ರೂ.2,38,995 ಪಾವತಿ ಮಾಡಿಸಿಕೊಂಡಿದ್ದಾರೆ.

ಮೋಸ ಹೋದ ನಂತರ ವಿದ್ಯಾರ್ಥಿ‌ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿ, ಠೇವಣಿ ಮಾಡಿದ ರಾಮ್ ಚೌಧರಿ ಟೆಲಿಗ್ರಾಮ್ ಗ್ರೂಪ್ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾನೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ramesh Babu

Journalist

Recent Posts

ಪ್ರಧಾನಿ ನರೇಂದ್ರ ಮೋದಿಯನ್ನ ಭೇಟಿಯಾದ ಸಿಎಂ ಸಿದ್ದರಾಮಯ್ಯ:ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ: ಬೇಡಿಕೆ ಯಾವುದು….?

ದೆಹಲಿಯಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರಾಜ್ಯಕ್ಕೆ ಸಂಬಂಧಿಸಿದಂತೆ ಬಹುದಿನಗಳಿಂದ ಬಾಕಿಯಿರುವ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಪತ್ರವನ್ನು…

2 hours ago

ಕಡೇ ಕಾರ್ತೀಕ ಸೋಮವಾರ: ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ದೂಡ್ಡಬಳ್ಳಾಪುರದ ಮೀನಾಕ್ಷಿ ಸಮೇತ ಸ್ವಯಂ ಭುವನೇಶ್ವರ ಸ್ವಾಮಿಯವರ ದೇವಾಲಯದಲ್ಲಿ ಕಡೇ ಕಾರ್ತೀಕ ಸೋಮವಾರ ಪ್ರಯುಕ್ತ ಈ ದಿನ ಬೆಳಿಗ್ಗೆ ಗಣಪತಿ…

4 hours ago

ನಾಳೆ (ನ.18) ತಾಲೂಕಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ವಿದ್ಯುತ್ ಅಡಚಣೆಯಾಗುವ ಪ್ರದೇಶಗಳ ಪಟ್ಟಿ ಇಲ್ಲಿದೆ ನೋಡಿ….

ದೊಡ್ಡಬಳ್ಳಾಪುರ: ನಾಳೆ (ನ.18) ನಗರದ ಹೊರವಲಯದಲ್ಲಿರುವ 66/11ಕಿವಿ ಡಿ.ಕ್ರಾಸ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ತಾಲೂಕಿನ ಹಲವೆಡೆ ವಿದ್ಯುತ್‌…

4 hours ago

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

11 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

11 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

14 hours ago