ಆಣೆ ಪ್ರಮಾಣ ರಾಜಕೀಯ ವಿಚಾರ: ಶಾಸಕ ಧೀರಜ್ ಮುನಿರಾಜ್ ಪ್ರತಿಕ್ರಿಯೆ: ನಾನೇನು ನಿತ್ಯಾನಂದ ಸ್ವಾಮಿ ಅಲ್ಲ- ಅವರ ರೀತಿ ಹೊಸ ದೇಶ ಕಟ್ಟಿ, ಹೊಸ ಕರೆನ್ಸಿ ಜಾರಿ ಮಾಡಿ, ಕೈಲಾಸ ಸೃಷ್ಟಿ ಮಾಡೋದಕ್ಕೆ ಆಗಲ್ಲ- ನಾನು ದೊಡ್ಡಬಳ್ಳಾಪುರ ಅಭಿವೃದ್ಧಿ ಮಾಡುತ್ತೇನೆ- ಶಾಸಕ ಧೀರಜ್ ಮುನಿರಾಜ್

ತಾಲ್ಲೂಕಿನ ರಾಜಕಾರಣದ ಇತಿಹಾಸದಲ್ಲಿ ಸಿದ್ದಲಿಂಗಯ್ಯ, ರಾಮೇಗೌಡ, ಆರ್.ಎಲ್ ಜಾಲಪ್ಪ, ನರಸಿಂಹಸ್ವಾಮಿ ಸೇರಿದಂತೆ ಘಟಾನುಘಟಿ ನಾಯಕರ ರಾಜಕಾರಣದಲ್ಲಿ ಈವರೆಗೆ ರಾಜಕೀಯದ ಎಲ್ಲೆ ಮೀರಿ ಮಾತನಾಡಿದ್ದಾಗಲಿ.. ಆಣೆ ಪ್ರಮಾಣ ರಾಜಕೀಯಗಳಾಗಲಿ.. ವೈಯಕ್ತಿಯ ಆರೋಪ – ಪ್ರತ್ಯಾರೋಪಗಳಾಗಿ ನಡೆದಿರಲಿಲ್ಲ. ಇದೀಗ ಬದಲಾದ ರಾಜಕಾರಣದಲ್ಲಿ ಹಾಲಿ ಶಾಸಕ ಧೀರಜ್ ಮುನಿರಾಜು ಮತ್ತು ಮಾಜಿ ಶಾಸಕ ವೆಂಕಟರಮಣಯ್ಯ ಮಧ್ಯೆ ವೈಯಕ್ತಿಯ ಆರೋಪ-ಪ್ರತ್ಯಾರೋಪಗಳು ಆರಂಭವಾಗಿದ್ದು, ಸವಾಲು – ಎದಿರು ಸವಾಲುಗಳು ನಡೆಯುತ್ತಿವೆ. ಮಾಜಿ ಶಾಸಕರ ವೆಂಕಟರಮಣಯ್ಯ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ಅನುದಾನ ವಿಚಾರಗಳಿಗೆ ಸರ್ಕಾರದಲ್ಲಿ ಪರೋಕ್ಷವಾಗಿ ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕ ಧೀರಜ್ ಮುನಿರಾಜು ನೇರವಾಗಿ ದೂರುತ್ತಿದ್ದಾರೆ. ಇತ್ತ ಮಾಜಿ ಶಾಸಕ ವೆಂಕಟರಮಣಯ್ಯ ನಾನು ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಪಡಿಸಿಲ್ಲ. ಕುಣಿಯಲಾರದೆ ನೆಲ ಡೋಂಕು ಎನ್ನುತ್ತಿದ್ದಾರೆ. ಪ್ರಬುದ್ಧತೆಯೇ ಇಲ್ಲ, ಬೇಕಾದರೆ ಧರ್ಮಸ್ಥಳದ ಮಂಜುನಾಥಸ್ವಾಮಿ ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡಿ ಹೇಳುತ್ತೇನೆ. ನೀನು ಬಂದು ಪ್ರಮಾಣ ಮಾಡು ಎಂದು ಶಾಸಕ ಧೀರಜ್ ಮುನಿರಾಜುಗೆ ಸವಾಲು ಹಾಕಿದ್ದರು. ಇದಕ್ಕೆ ಶಾಸಕ ಧೀರಜ್ ಮುನಿರಾಜ್ ಇಂದು ಪ್ರತಿಕ್ರಿಯಿಸಿ, ಐದು ವರ್ಷ ಕ್ಷೇತ್ರದ ಕೆಲಸ ಮಾಡೋದಕ್ಕೆ ಜನ ವೋಟ್ ಹಾಕಿ ಗೆಲ್ಲಿಸಿದ್ದಾರೆ. ಅದೇ ಜನ ಈ ಹಿಂದೆ ಮಾಜಿ ಶಾಸಕ ಟಿ ವೆಂಕಟರಮಣಯ್ಯ ನವರಿಗೆ 10 ವರ್ಷ ಅವಕಾಶ ಮಾಡಿಕೊಟ್ಟಿದ್ದರು. ಯಾವುದೇ ಮಾಜಿ ಶಾಸಕರ ಬಗ್ಗೆ ಧೀರಜ್ ಮುನಿರಾಜ್ ಮಾತಾಡೋದಿಲ್ಲ ಎಂದರು.

ಸಿದ್ದಲಿಂಗಪ್ಪ, ರಾಮೇಗೌಡ, ಜಾಲಪ್ಪ, ಗಂಟಿಗಾನಹಳ್ಳಿ ಕೃಷ್ಣಪ್ಪ, ಆರ್ ಜಿ ವೆಂಕಟಾಚಲಯ್ಯ, ನರಸಿಂಹಸ್ವಾಮಿ ಕಾಲದಿಂದ ಮಾಜಿ ಶಾಸಕ ಟಿ ವೆಂಕಟರಮಣಯ್ಯ ಕಾಲದವರೆಗೆ ಕೆಲಸ ಆಗಿದೆ. ಅದೇ ಕೆಲಸವನ್ನ ಶಾಸಕನಾಗಿ ನಾನು ಮುಂದುವರಿಸಿಕೊಂಡು ಹೋಗಬೇಕು. ನಾನೇನು ನಿತ್ಯಾನಂದ ಸ್ವಾಮಿ ಅಲ್ಲ. ಅವರ ರೀತಿ ಹೊಸ ದೇಶ ಕಟ್ಟಿ, ಹೊಸ ಕರೆನ್ಸಿ ಜಾರಿ ಮಾಡಿ, ಕೈಲಾಸ ಸೃಷ್ಟಿ ಮಾಡೋದಕ್ಕೆ ಆಗಲ್ಲ. ನಾನು ದೊಡ್ಡಬಳ್ಳಾಪುರ ಅಭಿವೃದ್ಧಿ ಮಾಡುತ್ತೇನೆ. ನಾನು ದೊಡ್ಡಬಳ್ಳಾಪುರವನ್ನೇ ಅಭಿವೃದ್ಧಿ ಮಾಡಬೇಕು. ಅದರಲ್ಲಿ ಏನು ಬೇಕೋ ಅದನ್ನ ಮಾಡ್ತೀನಿ. ಮಾಜಿ ಶಾಸಕರ ಬಗ್ಗೆ ಮಾತನಾಡೋದಿಲ್ಲ ಎಂದು ಹೇಳಿದರು.

ಏನಾದರೂ ಅವರು ಅಂದರೆ ಮಾಜಿ ಶಾಸಕ ಟಿ.ವೆಂಕಟರಮಣಯ್ಯನವರು ನನ್ನ ಪ್ರತಿ ಸ್ಪರ್ಧಿಯಾಗಿ ಟಿಕೆಟ್ ತಂದರೆ ನಡೆಯುವಂತಹ ವಿಚಾರಗಳು ಬೇರೆ ಇರುತ್ತವೆ. ಸಾರ್ವಜನಿಕವಾಗಿ ನಾನು ಅವರ ಬಗ್ಗೆ ಮಾತಾಡಲ್ಲ. ಅವರ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವನಾಗಿಲ್ಲ. ಅವರು ಹತ್ತು ವರ್ಷಗಳ ಕಾಲ ಶಾಸಕರಾಗಿ ಕೆಲಸ ಮಾಡಿರುವುದು ಹಾಗೂ ನಾನು ಮಾಡಿರುವ ಕೆಲಸಗಳ ರಿಪೋರ್ಟ್ ಕಾರ್ಡ್ ಇಟ್ಟುಕೊಂಡು ಚುನಾವಣೆಗೆ ಬರುತ್ತೇನೆ. ಆಣೆ ಪ್ರಮಾಣ ವಿಚಾರವನ್ನು ರಾಜಕೀಯದಲ್ಲಿ ನಾನು ತರಲು ನಾನು ಇಷ್ಟಪಡುವುದಿಲ್ಲ. ದೇವರ ಮೇಲೆ ಆಣೆ ಪ್ರಮಾಣ ಮಾಡಿದರೆ ಬರುವಂತಹ ಕಷ್ಟಗಳು ಅಷ್ಟಿಷ್ಟಲ್ಲ. ನಮ್ಮ ಆತ್ಮಸಾಕ್ಷಿಗಿಂತ ದೊಡ್ಡ ದೇವರಿಲ್ಲ. ನಾನು ಇಡೀ ಜಗತ್ತಿಗೆ ಮೋಸ ಮಾಡಬಹುದು, ನನ್ನ ಆತ್ಮಸಾಕ್ಷಿಗೆ ನಾನು ಮೋಸ ಮಾಡಿಕೊಳ್ಳುವುದಿಲ್ಲ. ಅವರು ಟಿಕೆಟ್ ತರಲಿ, ಟಿಕೆಟ್ ತಂದಾಗ ಮಾತನಾಡುತ್ತೇನೆ. ಟಿಕೆಟ್ ತರುವ ಕಡೆ ಗಮನಹರಿಸಲಿ ಎಂದು ತಿಳಿಸಿದರು.

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

1 hour ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

3 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

3 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

3 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

8 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

9 hours ago