ಆಕಾಸ ಏರ್‌ ವಿಮಾನ ಸಂಸ್ಥೆಯಿಂದ ವಿಶೇಷ ಔತಣ ಕೊಡುಗೆ ಘೋಷಣೆ

ಬೆಂಗಳೂರು: ಆಕಾಸ ಏರ್‌ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ವಿಶೇಷ ಔತಣದ ಮೇಲೆ ಕೊಡುಗೆ ಘೋಷಣೆ ಮಾಡಿದೆ.

ವಿಮಾನದಲ್ಲಿ ವಿಶೇಷ ಭೋಜನ ಮಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಕೆಲವೊಮ್ಮೆ ನಮಗೆ ಹೊಂದಿಕೆಯಾಗದ ಆಹಾರ ಇರುವ ಕಾರಣ ಭೋಜನ ಸೇವಿಸದೇ ಪ್ರಯಾಣ ಮಾಡಿರುತ್ತೇವೆ. ಅದಕ್ಕಾಗಿಯೇ ಆಕಾಸ ಏರ್‌, ವಿಶೇಷ ಔತಣದ ಕೊಡುಗೆ ನೀಡಿದೆ.

ಈ ವಿಶೇಷ ಔತಣದಲ್ಲಿ ಆಲೂ ಟಿಕ್ಕಿ ಹಾಗೂ ಖಾರದ ರಗ್ಡಾ, ನಮಕ್ ಪಾರಾ ಮತ್ತು ಕಾಜು ಕಟ್ಲಿ ಸಿಹಿ ತಿಂಡಿ ಹಾಗೂ ಪ್ರಯಾಣಿಕರ ಆಯ್ಕೆಯ ಪಾನೀಯವನ್ನು ಒದಗಿಸಲಾಗುತ್ತದೆ. ಈ ಕೊಡುಗೆಯು ನವೆಂಬರ್ 30 ರ ವರೆಗೆ ಆಕಾಸ ಏರ್‌ ನೆಟ್‌ವರ್ಕ್‌ನಲ್ಲಿ ಒದಗಿಸಲಾಗುತ್ತದೆ. ಈ ಸ್ಪೆಷಲ್ ಔತಣವನ್ನು ಆಕಾಸ ಏರ್ ವೆಬ್‌ಸೈಟ್ www.akasaair.com ಹಾಗೂ ಮೊಬೈಲ್ ಆಪ್‌ನಲ್ಲಿ ಪ್ರೀ ಬುಕ್ ಮಾಡಬಹುದಾಗಿದೆ.

2022 ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದಾಗಿನಿಂದಲೂ ಆಕಾಸ ಏರ್‌ ವಿಶೇಷವಾಗಿ ಕ್ಯುರೇಟ್ ಮಾಡಿದ ಊಟದ ಆಯ್ಕೆಗಳನ್ನು ಒದಗಿಸುತ್ತಿದ್ದು, ಆಚರಣೆಗಳಿಗೆ ಸೂಕ್ತವಾದ ಪ್ರಾದೇಶಿಕ ವಿಶೇಷತೆಯನ್ನೂ ಇದು ಪ್ರತಿನಿಧಿಸಯತ್ತದೆ. ಮಕರ ಸಂಕ್ರಾಂತಿಯಿಂದ ವ್ಯಾಲಂಟೈನ್ಸ್‌ ಡೇ, ಹೋಳಿ, ಈದ್, ತಾಯಂದಿರ ದಿನ, ಅಂತಾರಾಷ್ಟ್ರೀಯ ಯೋಗ ದಿನ, ಮಾನ್ಸೂನ್‌ ಸೀಸನ್‌, ನವ್‌ರೋಝ್‌, ಓಣಮ್, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ ಸಮಯದಲ್ಲಿ ಈ ವಿಶೇಷ ಊಟವನ್ನು ಒದಗಿಸುತ್ತದೆ. ಹಬ್ಬದ ಊಟಗಳ ಜೊತೆಗೆ ಹಾರಾಟದ ಅನುಭವವನ್ನೂ ಉತ್ತಮವಾಗಿ ಒದಗಿಸುವುದನ್ನು ಕೆಫೆ ಆಕಾಸ ಮುಂದುವರಿಸಲಿದೆ. ರೆಗ್ಯುಲರ್ ಮೆನುವಿನಲ್ಲಿ ಕೇಕ್‌ಗಳ ಪ್ರೀ ಸೆಲೆಕ್ಷನ್ ಅನ್ನೂ ಇದು ಒದಗಿಸುತ್ತಿದ್ದು, ತಮ್ಮ ಪ್ರೀತಿ ಪಾತ್ರರ ಜನ್ಮ ದಿನಾಚರಣೆಗಳನ್ನು ಆಕಾಶದಲ್ಲೇ ಆಚರಣೆ ಮಾಡಲು ಅನುವು ಮಾಡಿಕೊಡುತ್ತದೆ.

ಕೆಫೆ ಆಕಾಸ ಆಗಾಗ್ಗೆ ತನ್ನ ಮೆನುವನ್ನು ರಿಫ್ರೆಶ್ ಮಾಡುತ್ತಿರುತ್ತದೆ. ವಿವಿಧ ಗುರ್ಮೆ ಊಟಗಳು, ತಿಂಡಿ ತಿನಿಸುಗಳನ್ನು ಹಾಗೂ ರಿಫ್ರೆಶ್ ಮಾಡುವ ಪಾನೀಯಗಳನ್ನೂ ಇದರಲ್ಲಿ ಸೇರಿಸುತ್ತದೆ. ಎಲ್ಲ ವಿಧದ ಆಹಾರ ಪದ್ಧತಿಯವರಿಗೂ ಸೂಕ್ತವಾಗುವಂತೆ ಇದು ಇರುತ್ತದೆ. ಮೆನುವಿನಲ್ಲಿ 45 ಕ್ಕೂ ಹೆಚ್ಚು ಊಟದ ಆಯ್ಕೆಗಳಿವೆ. ಫ್ಯೂಷನ್ ಮೀಲ್ಸ್, ಆಪಟೈಸರ್ಸ್‌ ಜೊತೆಗೆ ಪ್ರಾದೇಶಿಕ ವೈವಿಧ್ಯತೆ, ರುಚಿಕರ ಡೆಸರ್ಟ್‌ಗಳು ಮತ್ತು ಜನಪ್ರಿಯ ಶೆಫ್‌ಗಳು ವಿಶೇಷವಾಗಿ ಕ್ಯುರೇಟ್ ಮಾಡಿದ ತಿನಿಸುಗಳು ಕೂಡಾ ಇದರಲ್ಲಿ ಇರಲಿದೆ.

Ramesh Babu

Journalist

Recent Posts

NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ನಗದು-ಚಿನ್ನ ಪತ್ತೆ‌..!

ದಾವಣಗೆರೆ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮೂವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ…

7 hours ago

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: MLC ಚುನಾವಣೆ, ಎಸ್‌ಐಆರ್ ಕುರಿತ ಚರ್ಚೆ

ಬಿಡದಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು, ಮುಂಬರುವ ವಿಧಾನ…

8 hours ago

ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಲಾರಿ ಚಾಲಕನ ಅಜಾಗರೂಕತೆಯಿಂದ ಅನಾಹುತ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ–648ರಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ…

13 hours ago

ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ: ಎಕರೆಗೆ ತಿಂಗಳಿಗೆ ಒಂದು ಬ್ಯಾಗ್ ವಿತರಣೆ

ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ…

22 hours ago

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

1 day ago

ಬೈಕ್‌ಗೆ ಟಿಟಿ ವಾಹನ ಡಿಕ್ಕಿ ಪ್ರಕರಣ: ಇಬ್ಬರು ಯುವತಿಯರ ದುರ್ಮರಣ – ಮೃತರ ಕಣ್ಣು ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬಸ್ಥರು

ದೊಡ್ಡಬಳ್ಳಾಪುರ: ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಓಬದೇನಹಳ್ಳಿ ರಸ್ತೆಯ ಕಾಂತಿ ಸ್ವೀಟ್ಸ್ ಮುಂಭಾಗ ಸೋಮವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ…

1 day ago