ಆಕಾಸ ಏರ್‌ ವಿಮಾನ ಸಂಸ್ಥೆಯಿಂದ ವಿಶೇಷ ಔತಣ ಕೊಡುಗೆ ಘೋಷಣೆ

ಬೆಂಗಳೂರು: ಆಕಾಸ ಏರ್‌ ವಿಮಾನ ಸಂಸ್ಥೆಯು ಪ್ರಯಾಣಿಕರಿಗೆ ವಿಶೇಷ ಔತಣದ ಮೇಲೆ ಕೊಡುಗೆ ಘೋಷಣೆ ಮಾಡಿದೆ.

ವಿಮಾನದಲ್ಲಿ ವಿಶೇಷ ಭೋಜನ ಮಾಡಲು ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ, ಕೆಲವೊಮ್ಮೆ ನಮಗೆ ಹೊಂದಿಕೆಯಾಗದ ಆಹಾರ ಇರುವ ಕಾರಣ ಭೋಜನ ಸೇವಿಸದೇ ಪ್ರಯಾಣ ಮಾಡಿರುತ್ತೇವೆ. ಅದಕ್ಕಾಗಿಯೇ ಆಕಾಸ ಏರ್‌, ವಿಶೇಷ ಔತಣದ ಕೊಡುಗೆ ನೀಡಿದೆ.

ಈ ವಿಶೇಷ ಔತಣದಲ್ಲಿ ಆಲೂ ಟಿಕ್ಕಿ ಹಾಗೂ ಖಾರದ ರಗ್ಡಾ, ನಮಕ್ ಪಾರಾ ಮತ್ತು ಕಾಜು ಕಟ್ಲಿ ಸಿಹಿ ತಿಂಡಿ ಹಾಗೂ ಪ್ರಯಾಣಿಕರ ಆಯ್ಕೆಯ ಪಾನೀಯವನ್ನು ಒದಗಿಸಲಾಗುತ್ತದೆ. ಈ ಕೊಡುಗೆಯು ನವೆಂಬರ್ 30 ರ ವರೆಗೆ ಆಕಾಸ ಏರ್‌ ನೆಟ್‌ವರ್ಕ್‌ನಲ್ಲಿ ಒದಗಿಸಲಾಗುತ್ತದೆ. ಈ ಸ್ಪೆಷಲ್ ಔತಣವನ್ನು ಆಕಾಸ ಏರ್ ವೆಬ್‌ಸೈಟ್ www.akasaair.com ಹಾಗೂ ಮೊಬೈಲ್ ಆಪ್‌ನಲ್ಲಿ ಪ್ರೀ ಬುಕ್ ಮಾಡಬಹುದಾಗಿದೆ.

2022 ಆಗಸ್ಟ್‌ನಲ್ಲಿ ಬಿಡುಗಡೆ ಮಾಡಿದಾಗಿನಿಂದಲೂ ಆಕಾಸ ಏರ್‌ ವಿಶೇಷವಾಗಿ ಕ್ಯುರೇಟ್ ಮಾಡಿದ ಊಟದ ಆಯ್ಕೆಗಳನ್ನು ಒದಗಿಸುತ್ತಿದ್ದು, ಆಚರಣೆಗಳಿಗೆ ಸೂಕ್ತವಾದ ಪ್ರಾದೇಶಿಕ ವಿಶೇಷತೆಯನ್ನೂ ಇದು ಪ್ರತಿನಿಧಿಸಯತ್ತದೆ. ಮಕರ ಸಂಕ್ರಾಂತಿಯಿಂದ ವ್ಯಾಲಂಟೈನ್ಸ್‌ ಡೇ, ಹೋಳಿ, ಈದ್, ತಾಯಂದಿರ ದಿನ, ಅಂತಾರಾಷ್ಟ್ರೀಯ ಯೋಗ ದಿನ, ಮಾನ್ಸೂನ್‌ ಸೀಸನ್‌, ನವ್‌ರೋಝ್‌, ಓಣಮ್, ಗಣೇಶ ಚತುರ್ಥಿ, ದಸರಾ, ದೀಪಾವಳಿ ಮತ್ತು ಕ್ರಿಸ್‌ಮಸ್‌ ಸಮಯದಲ್ಲಿ ಈ ವಿಶೇಷ ಊಟವನ್ನು ಒದಗಿಸುತ್ತದೆ. ಹಬ್ಬದ ಊಟಗಳ ಜೊತೆಗೆ ಹಾರಾಟದ ಅನುಭವವನ್ನೂ ಉತ್ತಮವಾಗಿ ಒದಗಿಸುವುದನ್ನು ಕೆಫೆ ಆಕಾಸ ಮುಂದುವರಿಸಲಿದೆ. ರೆಗ್ಯುಲರ್ ಮೆನುವಿನಲ್ಲಿ ಕೇಕ್‌ಗಳ ಪ್ರೀ ಸೆಲೆಕ್ಷನ್ ಅನ್ನೂ ಇದು ಒದಗಿಸುತ್ತಿದ್ದು, ತಮ್ಮ ಪ್ರೀತಿ ಪಾತ್ರರ ಜನ್ಮ ದಿನಾಚರಣೆಗಳನ್ನು ಆಕಾಶದಲ್ಲೇ ಆಚರಣೆ ಮಾಡಲು ಅನುವು ಮಾಡಿಕೊಡುತ್ತದೆ.

ಕೆಫೆ ಆಕಾಸ ಆಗಾಗ್ಗೆ ತನ್ನ ಮೆನುವನ್ನು ರಿಫ್ರೆಶ್ ಮಾಡುತ್ತಿರುತ್ತದೆ. ವಿವಿಧ ಗುರ್ಮೆ ಊಟಗಳು, ತಿಂಡಿ ತಿನಿಸುಗಳನ್ನು ಹಾಗೂ ರಿಫ್ರೆಶ್ ಮಾಡುವ ಪಾನೀಯಗಳನ್ನೂ ಇದರಲ್ಲಿ ಸೇರಿಸುತ್ತದೆ. ಎಲ್ಲ ವಿಧದ ಆಹಾರ ಪದ್ಧತಿಯವರಿಗೂ ಸೂಕ್ತವಾಗುವಂತೆ ಇದು ಇರುತ್ತದೆ. ಮೆನುವಿನಲ್ಲಿ 45 ಕ್ಕೂ ಹೆಚ್ಚು ಊಟದ ಆಯ್ಕೆಗಳಿವೆ. ಫ್ಯೂಷನ್ ಮೀಲ್ಸ್, ಆಪಟೈಸರ್ಸ್‌ ಜೊತೆಗೆ ಪ್ರಾದೇಶಿಕ ವೈವಿಧ್ಯತೆ, ರುಚಿಕರ ಡೆಸರ್ಟ್‌ಗಳು ಮತ್ತು ಜನಪ್ರಿಯ ಶೆಫ್‌ಗಳು ವಿಶೇಷವಾಗಿ ಕ್ಯುರೇಟ್ ಮಾಡಿದ ತಿನಿಸುಗಳು ಕೂಡಾ ಇದರಲ್ಲಿ ಇರಲಿದೆ.

Ramesh Babu

Journalist

Recent Posts

ವರಮಹಾಲಕ್ಷ್ಮಿ ಹಬ್ಬ…..

ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…

58 minutes ago

ಸುಮಾರು 500 ಕೋಟಿ ಮೌಲ್ಯದ ಜಮೀನು ಖಾತೆ ಬದಲಾವಣೆ ಆರೋಪ: ದೊಡ್ಡಬಳ್ಳಾಪುರ ಉಪವಿಭಾಗದ ಹಿಂದಿನ ಎಸಿ ದುರ್ಗಾಶ್ರೀ ಹಾಗೂ ಕಚೇರಿ ಸಿಬ್ಬಂದಿ ವಿರುದ್ದ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲು

ದೇವನಹಳ್ಳಿ ತಾಲೂಕಿನ ಸಣ್ಣ ಅಮಾನಿಕೆರೆ, ಬೈಚಾಪುರ ಹಾಗೂ ಪ್ರಸನ್ನಹಳ್ಳಿ ಗ್ರಾಮಗಳ 62.20 ಎಕರೆ ಖಾಸಗಿ ಜಮೀನಿನ ಖಾತೆ ಬದಲಾವಣೆಯಲ್ಲಿ ಅಕ್ರಮ…

13 hours ago

ಹೂ ಕೀಳುವಾಗ ಹಾವು ಕಚ್ಚಿ ಮಹಿಳೆ ಸಾವು

ದೊಡ್ಡಬಳ್ಳಾಪುರ: ತೋಟದಲ್ಲಿ ಸುಗಂಧರಾಜ ಹೂ ಕೀಳುವಾಗ ಹಾವು ಕಚ್ಚಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಹೊಸಹಳ್ಳಿ ಸಮೀಪದ ಪಚ್ಚಾರ್ಲಳ್ಳಿ…

13 hours ago

ದೇವರಾಜ ಅರಸು ಅವರ ಆಶಯಗಳಿಗೆ ಧ್ವನಿಯಾಗೋಣ-ಡಿಸಿ ಡಾ. ಕೆ.ಎನ್ ಅನುರಾಧ

ಕರ್ನಾಟಕ ಕಂಡ ಧೀಮಂತ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಜನಪರ ಯೋಜನೆಗಳು, ಆಶೋತ್ತರಗಳಿಗೆ ನಾವೆಲ್ಲರೂ ಧ್ವನಿಯಾಗಿ ಮುಂದಿನ…

15 hours ago

ಅಂಗನವಾಡಿ ಕಟ್ಟಡ ಅರ್ಧಕ್ಕೆ; ಬಾಡಿಗೆ ಮನೆಯಲ್ಲಿ 30 ಕಂದಮ್ಮಗಳ ಪರದಾಟ: 17.50 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಳಿಸದೆ ನಿರ್ಲಕ್ಷ್ಯ ಆರೋಪ

ಮನೆಯಲ್ಲಿ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಪುಟ್ಟ ಕಂದಮ್ಮಗಳನ್ನು ಪೋಷಕರು ಉತ್ತಮ ಶಿಕ್ಷಣ ದೊರೆಯಲಿ ಎಂಬ ಆಶಯದಿಂದ ಅಂಗನವಾಡಿ ಕೇಂದ್ರಕ್ಕೆ ಕಳುಹಿಸುತ್ತಿದ್ದಾರೆ.…

15 hours ago

ಮೀಸಲಾತಿ ಘೋಷಣೆ ಬೆನ್ನಲ್ಲೇ ಗ್ರಾಮಾಂತರದಲ್ಲಿ ಚುನಾವಣಾ ಕಾವು: ಹಳ್ಳಿಗಳಲ್ಲಿ ಚುರುಕಾದ ರಾಜಕೀಯ ಚಟುವಟಿಕೆ: ಆಕಾಂಕ್ಷಿಗಳಿಂದ ಲೆಕ್ಕಾಚಾರ ಆರಂಭ

  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ಚುನಾವಣೆಗೆ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಯಾವ…

22 hours ago