ಅಪಾರ ಮೌಲ್ಯದ ಎಚ್ ಎಫ್ ಸೀಮೆ ಹಸು ಹಾಗೂ ಜರ್ಸಿ ಹಸುಗಳನ್ನು ಕದ್ದೊಯ್ದ ಕಳ್ಳರು: ಸಂಕಷ್ಟದಲ್ಲಿ ರೈತ

ಮನೆ ಪಕ್ಕದ ಶೆಡ್ ನಲ್ಲಿ ಬಿಟ್ಟಿದ್ದ ಅಪಾರ ಮೌಲ್ಯದ ಎಚ್ ಎಫ್ ಸೀಮೆ ಹಸು ಹಾಗೂ ಜರ್ಸಿ ಹಸುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

ಈ ಘಟನೆ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದಲ್ಲಿ ಸೆ.14ರ ರಾತ್ರಿ ನಡೆದಿದೆ. ಈ ಕುರಿತು ಅ.04ರಂದು ದೊಡ್ಡಬೆಳವಂಗಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ನಾನು ಹೈನುಗಾರಿಕೆ ಮತ್ತು ವ್ಯವಸಾಯ ಮಾಡಿಕೊಂಡು ಜೀವನ ಮಾಡುತ್ತಿರುತ್ತೇನೆ. ನಾನು ಜೀವನೋಪಾಯಕ್ಕಾಗಿ ಒಂದು HF ಸೀಮೆ ಹಸು ಮತ್ತು ಜರ್ಸಿ ಹಸುಗಳನ್ನು ಸಾಕಿಕೊಂಡಿರುತ್ತೇನೆ. ನಮ್ಮ ಮನೆ ಪಕ್ಕದಲ್ಲಿರುವ ಹಸುಗಳನ್ನು ಕಟ್ಟಿ ಹಾಕುವ ಶೆಡ್ ನಲ್ಲಿ ಎಚ್ ಎಫ್ ಸೀಮೆ ಹಸು ಹಾಗೂ ಜರ್ಸಿ ಹಸುಗಳನ್ನು ಕಟ್ಟಿ ಹಾಕಿ ಮನೆಗೆ ಬರಲಾಗಿತ್ತು. ದಿನಾಂಕ 14/09/2024 ರಂದು ಬೆಳಗಿನ ಜಾವ 2-00 ಗಂಟೆ ಸಮಯದಲ್ಲಿ ನಾನು ದನದ ಶೆಡ್ಡಿಗೆ ಹೋಗಿ ನೋಡಿದಾಗ ನಮ್ಮ ಹಸುಗಳು ಶೆಡ್ಡಿನಲ್ಲಿ ಇರಲಿಲ್ಲ, ಯಾರೋ ಕಳ್ಳರು ನಾವು ಶೆಡ್ ನ ಬೀಗ ಹಾಕದೇ ಇರುವುದನ್ನು ಗಮನಿಸಿ ಶೆಡ್ ಗೆ ನುಗ್ಗಿ, ಶೆಡ್ ನಲ್ಲಿದ್ದ 80 ಸಾವಿರ ರೂ. ಮೌಲ್ಯದ HF ಸೀಮೆ ಹಸು ಮತ್ತು 60 ಸಾವಿರ‌ ರೂ. ಮೌಲ್ಯದ ಜೆರ್ಸಿ ಸೀಮೆ ಹಸುಗಳು ಕಾಣೆಯಾಗಿರುವುದು ಕಂಡುಬಂದಿದೆ. ಎರಡು ಹಸುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಾವು ಎಲ್ಲ ಕಡೆ ಹುಡುಕಾಡಿದ್ದರೂ ಸಿಗದ ಕಾರಣ ಅ.4ರಂದು ದೊಡ್ಡಬೆಳವಂಗಲ ಠಾಣೆಗೆ ದೂರು ನೀಡಲಾಗಿದೆ ಎಂದು ಹಸುಗಳ ಮಾಲೀಕರು ತಿಳಿಸಿದ್ದಾರೆ.

HF ಹಸು ಬಿಳಿ ಮತ್ತು ಕಪ್ಪು ಬಣ್ಣದಾಗಿದ್ದು, ಜೆರ್ಸಿ ಹಸು ಕಪ್ಪು ಬಣ್ಣದಾಗಿರುತ್ತೆ ಎಂದು ಹೇಳಿದ್ದಾರೆ.

Ramesh Babu

Journalist

Recent Posts

ರೈತಪರ ಯೋಜನೆ : ವಿಬಿ-ಜಿ ರಾಮ್ ಜಿ ಯೋಜನೆ

ಚಿಕ್ಕನಾಯಕನಹಳ್ಳಿ: ರೈತರಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಜುಲೈ.1 ರಿಂದ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ)…

23 minutes ago

ಮೂರು ತಾಲೂಕು ಬರದ ಪಟ್ಟಿಗೆ; ದೊಡ್ಡಬಳ್ಳಾಪುರಕ್ಕೆ ವಿನಾಯಿತಿ

ಬೆಂಗಳೂರು ಗ್ರಾಮಾಂತರ: ಮುಂಗಾರು ಮಳೆ ಕೊರತೆಯಿಂದ ರಾಜ್ಯದ 101 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ…

5 hours ago

ನೇಪಾಳ ದುರಂತ: ನಾಪತ್ತೆಯಾದ ಕನ್ನಡಿಗರ ಮಾಹಿತಿ ನೀಡಲು ಸರ್ಕಾರ ಮನವಿ

ನೇಪಾಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಹಾಗೂ ದಿಢೀರ್ ಪ್ರವಾಹ (ಫ್ಲ್ಯಾಶ್ ಫ್ಲಡ್ಸ್) ದುರಂತಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಮೂಲದ ಪ್ರವಾಸಿಗರು ಅಥವಾ…

9 hours ago

ಸ್ಥಳೀಯ ಸಂಸ್ಥೆಗಳಲ್ಲಿ ಚುರುಕಾಗಬೇಕಿದೆ ಬಿಎಂಸಿ: ಕೆರೆ, ಕುಂಟೆ, ಗೋಮಾಳ, ಅರಣ್ಯ ಸಂರಕ್ಷಣೆಗೆ ನಿರ್ಲಕ್ಷ್ಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ನೈಸರ್ಗಿಕ ಸಂಪನ್ಮೂಲ ಹಾಗೂ ಜೀವ ವೈವಿಧ್ಯ ಸಂರಕ್ಷಣೆಗಾಗಿ ರಚಿಸಲಾಗಿರುವ ಜೀವ ವೈವಿಧ್ಯ…

1 day ago

ಅಪರೂಪದ ದುಬಾರಿ ಖಾಯಿಲೆಗಳು…….

ಇದಕ್ಕೊಂದು ಪರಿಹಾರ ರೂಪಿಸಬಹುದೇ...... ಅಪರೂಪದ ದುಬಾರಿ ಖಾಯಿಲೆಗಳು.......... ಆಗಾಗ ಬದುಕು ಬಟ್ಟೆ ಒಗೆಯುವಂತೆ ಎತ್ತೆತ್ತಿ ಒಗೆಯುತ್ತದೆ. ಅನಿರೀಕ್ಷಿತಗಳು ಸಂಭವಿಸಿ ತುಂಬಾ…

2 days ago

ಮತದಾರರ ಪಟ್ಟಿ ಪರಿಷ್ಕರಣೆ ಚುರುಕು: 7.96 ಲಕ್ಷ ಮತದಾರರ ಹೆಸರು ಅಂತಿಮ ಹಂತಕ್ಕೆ

ಬೆಂಗಳೂರು ಗ್ರಾಮಾಂತರ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಸೋಮವಾರ ಕರಡು ಮತದಾರರ ಪಟ್ಟಿ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ…

3 days ago