ಬೆಂಗಳೂರು, ಜುಲೈ 2026: ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಸರ್ಜರಿ ದಿನಾಚರಣೆ-2026ರ ಅಂಗವಾಗಿ, ಬೆಂಗಳೂರಿನ ಆರ್.ಆರ್. ನಗರದ ಸ್ಪರ್ಶ್ ಆಸ್ಪತ್ರೆ ಸಂಕೀರ್ಣ ಪುನರ್ನಿರ್ಮಾಣ, ಕಾರ್ಯಾತ್ಮಕ ಹಾಗೂ ಸೌಂದರ್ಯವರ್ಧಕ ಚಿಕಿತ್ಸೆಗಳ ಅಗತ್ಯವಿರುವ ರೋಗಿಗಳಿಗೆ ಸಮಗ್ರ ಹಾಗೂ ರೋಗಿಕೇಂದ್ರಿತ ಸೇವೆ ಒದಗಿಸುವ ಉದ್ದೇಶದಿಂದ ಐದು ಮಲ್ಟಿಡಿಸಿಪ್ಲಿನರಿ ಪ್ಲಾಸ್ಟಿಕ್ ಸರ್ಜರಿ ಕ್ಲಿನಿಕ್ಸ್ ಆಫ್ ಎಕ್ಸಲೆನ್ಸ್ ಅನ್ನು ಆರಂಭಿಸಿದೆ.
ರೋಗಿಗಳಿಗೆ ಒಂದೇ ಸೂರಿನಡಿ ವಿವಿಧ ತಜ್ಞ ವೈದ್ಯರಿಂದ ಸಮಗ್ರ ಚಿಕಿತ್ಸೆ, ನಿಖರ ರೋಗನಿರ್ಣಯ ಹಾಗೂ ವೈಯಕ್ತಿಕ ಚಿಕಿತ್ಸಾ ಯೋಜನೆಗಳನ್ನು ಒದಗಿಸುವ ಉದ್ದೇಶದಿಂದ ಈ ವಿಶೇಷ ಕ್ಲಿನಿಕ್ಗಳನ್ನು ಸ್ಥಾಪಿಸಲಾಗಿದೆ. ಪ್ಲಾಸ್ಟಿಕ್ ಸರ್ಜರಿ, ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಚಿಕಿತ್ಸೆಯಲ್ಲಿ ಗುಣಮಟ್ಟದ ಸೇವೆ ನೀಡುವತ್ತ ಆಸ್ಪತ್ರೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
ಹೊಸದಾಗಿ ಆರಂಭಿಸಲಾದ ಕ್ಲಿನಿಕ್ಗಳಲ್ಲಿ ಅಡ್ವಾನ್ಸ್ಡ್ ವೂಂಡ್ ಹೀಲಿಂಗ್ ಮತ್ತು ಲಿಂಬ್ ಸಾಲ್ವೇಜ್ ಕ್ಲಿನಿಕ್, ಅಡ್ವಾನ್ಸ್ಡ್ ಫೇಶಿಯಲ್ ಎಸ್ಥೆಟಿಕ್ಸ್ ಮತ್ತು ಕ್ರೇನಿಯೊ-ಮ್ಯಾಕ್ಸಿಲೋಫೇಶಿಯಲ್ ರಿಸ್ಟೋರೇಷನ್ ಕ್ಲಿನಿಕ್, ಅಡ್ವಾನ್ಸ್ಡ್ ಹ್ಯಾಂಡ್, ನರ್ವ್ ಮತ್ತು ಅಪರ್ ಲಿಂಬ್ ಕ್ಲಿನಿಕ್, ಬ್ರೆಸ್ಟ್ ಕ್ಲಿನಿಕ್ ಆಫ್ ಎಕ್ಸಲೆನ್ಸ್ ಹಾಗೂ ಸ್ಕಾರ್ ಕ್ಲಿನಿಕ್ ಆಫ್ ಎಕ್ಸಲೆನ್ಸ್ ಸೇರಿವೆ.
ಈ ಕ್ಲಿನಿಕ್ಗಳಲ್ಲಿ ಅನುಭವಿ ಪ್ಲಾಸ್ಟಿಕ್ ಸರ್ಜನ್ಗಳು ಹಾಗೂ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರು ಒಟ್ಟಾಗಿ ಸೇವೆ ನೀಡಲಿದ್ದಾರೆ. ಸಂಕೀರ್ಣ ಗಾಯಗಳ ಚಿಕಿತ್ಸೆ, ಗಾಯಗಳು ಶೀಘ್ರ ಗುಣಮುಖವಾಗುವಂತೆ ಮಾಡುವ ಚಿಕಿತ್ಸಾ ವಿಧಾನಗಳು, ಅಂಗಗಳನ್ನು ಉಳಿಸಿಕೊಳ್ಳುವ ಚಿಕಿತ್ಸೆಗಳು, ಕೈ ಮತ್ತು ನರಗಳ ಕಾರ್ಯಕ್ಷಮತೆಯ ಪುನಃಸ್ಥಾಪನೆ, ಸ್ತನ ಸಂಬಂಧಿತ ಆರೋಗ್ಯ ಸಮಸ್ಯೆಗಳು, ಗಾಯದ ಗುರುತುಗಳ ನಿರ್ವಹಣೆ ಹಾಗೂ ಮುಖದ ಪುನರ್ನಿರ್ಮಾಣ ಚಿಕಿತ್ಸೆಗೆ ವಿಶೇಷ ಆದ್ಯತೆ ನೀಡಲಾಗುತ್ತದೆ.
ವಿಶೇಷ ಉಪಕ್ರಮವಾಗಿ ಜುಲೈ 2026ರ ಅವಧಿಯಲ್ಲಿ ಈ ಐದು ಕ್ಲಿನಿಕ್ಸ್ ಆಫ್ ಎಕ್ಸಲೆನ್ಸ್ಗಳಲ್ಲಿ ಉಚಿತ ಮಲ್ಟಿಡಿಸಿಪ್ಲಿನರಿ ಮೌಲ್ಯಮಾಪನ ಸೌಲಭ್ಯವನ್ನು ಆಸ್ಪತ್ರೆ ಕಲ್ಪಿಸಿದೆ. ಜುಲೈ ನಂತರವೂ ಈ ಸೇವೆ ರಿಯಾಯಿತಿ ದರದಲ್ಲಿ ಲಭ್ಯವಿರಲಿದ್ದು, ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡದಿಂದ ರೋಗಿಗಳು ಸಮಗ್ರ ಆರೋಗ್ಯ ಮೌಲ್ಯಮಾಪನ ಹಾಗೂ ವೈಯಕ್ತಿಕ ಚಿಕಿತ್ಸಾ ಸಲಹೆ ಪಡೆಯಬಹುದಾಗಿದೆ..
ಈ ಹೊಸ ಸೇವೆಗಳ ಆರಂಭದೊಂದಿಗೆ ಸುಧಾರಿತ ಪ್ಲಾಸ್ಟಿಕ್ ಹಾಗೂ ರೀಕನ್ಸ್ಟ್ರಕ್ಟಿವ್ ಸರ್ಜರಿ ಕ್ಷೇತ್ರದಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿರುವ ಸ್ಪರ್ಶ್ ಆಸ್ಪತ್ರೆ, ರೋಗಿಗಳಿಗೆ ವೈಯಕ್ತಿಕ ಅಗತ್ಯಗಳಿಗೆ ತಕ್ಕ ಚಿಕಿತ್ಸೆ, ದೇಹದ ಕಾರ್ಯಕ್ಷಮತೆಯ ಪುನಃಸ್ಥಾಪನೆ ಹಾಗೂ ಉತ್ತಮ ಜೀವನಮಟ್ಟ ಕಲ್ಪಿಸುವತ್ತ ತನ್ನ ಬದ್ಧತೆಯನ್ನು ಪುನರುಚ್ಚರಿಸಿದೆ.
ಅಪಾಯಿಂಟ್ಮೆಂಟ್ ಹಾಗೂ ಉಚಿತ ಮೌಲ್ಯಮಾಪನಕ್ಕಾಗಿ 080 6122 2000 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ.
ದೊಡ್ಡಬಳ್ಳಾಪುರ: ಕಡಿದಾದ ತಿರುವಿನಲ್ಲಿ ಸಿಮೆಂಟ್ ಮೂಟೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ…
ದೊಡ್ಡಬಳ್ಳಾಪುರ: ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್ಗಳು ಪದೇ ಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.…
ಭಾರತದ ನೆಲದಲ್ಲಿ, ತಮ್ಮ ವ್ಯಕ್ತಿತ್ವದ ರೂಪದಲ್ಲಿ ಅತ್ಯಂತ ಹೆಚ್ಚು ಪರಿಣಾಮ ಬೀರಿದ ನಾಲ್ಕು ಪಾತ್ರಗಳೆಂದರೆ ಕೃಷ್ಣ, ರಾಮ, ಗಾಂಧಿ, ಮತ್ತು…
ಚಿಕ್ಕನಾಯಕನಹಳ್ಳಿ: ಅರ್ಹ ರೈತರು ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…
ಚಿಕ್ಕನಾಯಕನಹಳ್ಳಿ: ರೈತರ ವಿಕಸನಕ್ಕೆಂದೇ ಸರ್ಕಾರದ ಮಹಾತ್ವಾಕಾಂಶಿ ಯೋಜನೆಯಾದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್…
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಪ್ರಯಾಣಿಕರ ಅನುಭವವನ್ನು ಇನ್ನಷ್ಟು ಸುಗಮ, ಅನುಕೂಲಕರ ಮತ್ತು ವೈಯಕ್ತಿಕ ಅಗತ್ಯಗಳಿಗೆ ಹೊಂದುವಂತೆ…