Categories: ಪರಿಸರ

(World Snakes Day) ಹಾವಿದ್ದರೆ ನಾವು…..

ಹಾವು ಎಂದರೆ ಮೊದಲು ಮನಸಿನಲ್ಲಿ ಹುಟ್ಟುವ ಭಾವನೆ ಭಯ ಮತ್ತು ಆತಂಕ. ಇಂತ ಭಯವನ್ನು ಹೋಗಲಾಡಿಸಿ ಹಾವುಗಳ ಬಗ್ಗೆ ಕಾಳಜಿ ಬೆಳೆಯುವಂತೆ ಅರಿವು ಮೂಡಿಸಲು ವಿಶ್ವ ಹಾವು ದಿನವನ್ನು ಆಚರಿಸಲಾಗುತ್ತದೆ.

ಹಾವುಗಳ ಬಗ್ಗೆ ಇರುವ ತಪ್ಪು ನಂಬಿಕೆಗಳನ್ನು ಮುರಿಯೋಣ. ಹಾವು ನಮಗೆ ಅರ್ಥವಾದಷ್ಟು ಹತ್ತಿರವಾಗುತ್ತದೆ. ಹಾಲು ಹಾವಿನ ಆಹಾರ ಅಲ್ಲ. ಹಾವು ದ್ವೇಷ ಸಾದಿಸುವುದಿಲ್ಲ. ಹಾವಿನ ದೇಹದಲ್ಲಿ ನಾಗಮಣಿ ಇಲ್ಲ. ಹಾವಿಗೆ ಕೂದಲು ಬೆಳೆಯುವುದಿಲ್ಲ. ಹಾವಿಗೆ ಹೊರ ಕಿವಿ ಇಲ್ಲದ ಕಾರಣ ಪುಂಗಿಯ ನಾದ ಅಥವ ಯಾವುದೆ ಶಬ್ದ ಕೇಳಿಸುವುದಿಲ್ಲ. ಹಾವು ಕಂಪನಗಳನ್ನಷ್ಟೇ ಗ್ರಹಿಸಬಲ್ಲದು. ಹಾವಿನ ಉಸಿರು, ಬಾಲ ತಾಗಿದರೆ ಏನೂ ಆಗುವುದಿಲ್ಲ. ಕೆಲವೊಮ್ಮೆ ರಸ್ತೆ ಹೊಲಗಳಲ್ಲಿ ಎರಡು ಹಾವುಗಳು ಸುತ್ತುವರಿದಿರುವುದು ಸಂಭೋಗವಲ್ಲ. ಅದು ಎರಡು ಗಂಡು ಹಾವುಗಳು ಹೆಣ್ಣಿಗಾಗಿ ನಡೆಸುವ ಜೀವಹಾನಿಯಾಗದ ಬಲಪ್ರದರ್ಶನ.

ಮನುಷ್ಯರಲ್ಲಿ ಸಯಾಮಿಯ ತೊಂದರೆಯಂತೆ ಹಾವಿನಲ್ಲಿ ಎರಡು ತಲೆ ಇರುವುದು ಒಂದು ಕಾಯಿಲೆ ಮತ್ತು ಅದು ಹೆಚ್ಚು ದಿನ ಬದುಕುವುದಿಲ್ಲ. ಬಲದ ಭಾಗದಲ್ಲಿ ತಲೆ ಇರುವುದಿಲ್ಲ. ಚಿತ್ರಗಳಲ್ಲಿ ನೋಡುವಂತೆ 3, 5, 7 ತಲೆ ಇರುವುದಿಲ್ಲ.

ಅನುಕೂಲಗಳು-

ಹವುಗಳು ಆಹಾರ ಸರಪಳಿಯ ಭಾಗ. ಹಾವು ರೈತ ಸ್ನೇಹಿ – ಇಲಿಗಳನ್ನು ಬಿಳದೊಳಗೆ ಹೊಕ್ಕು ಹಿಡಿಯುತ್ತದೆ. ಹಾವಿನ ಆಕಾರದಿಂದ ಪ್ರೆರೇಪಿತಗೊಂಡು ಸೃಷ್ಟಿಸಿರುವ ರೋಬೋಟ್ಗಳು ಭೂಕಂಪದ ವೇಳೆ ಬಿದ್ದ ಕಟ್ಟಡಗಳ ಒಳಗೆ ಸುಲಭವಾಗಿ ಹೋಗಿ ಮಾಹಿತಿ ನೀಡುತ್ತವೆ.

ಪರೋಕ್ಷವಾಗಿ ಬೀಜ ಪ್ರಸರಣವೂ ಮಾಡುತ್ತವೆ. ಹಾವಿನ ವಿಷದಿಂದ, ಹಾವು ಕಡಿತಕ್ಕೆ ಔಷಧಿ ಮತ್ತು ಹಲವಾರು ಕಾಯಿಲೆಗಳಿಗೆ ಔಷಧಿ ಕಂಡುಹಿಡಿಯಲಾಗಿದೆ ಹಾಗೂ ಇನ್ನೂ ಹಲವಾರು ಸಂಶೋಧನೆಗಳು ಮಾನವನ ಜೀವ ಉಳಿಸುವ ಔಷಧಿಗಳಿಗಾಗಿ ನಡೆಯುತ್ತಿದೆ ಎಂದು ಡಬ್ಲ್ಯೂ ಎಫ್ ಇಂಡಿಯಾ ಸಂಸ್ಥೆಯ ಲೋಹಿತ್ ವೈ ಟಿ ತಿಳಿಸಿದ್ದಾರೆ.

Ramesh Babu

Journalist

Recent Posts

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆ: ಮಕ್ಕಳು, ಶಿಕ್ಷಕ ಭಾವುಕ

ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…

38 minutes ago

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ.‌ ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…

9 hours ago

ಚುನಾವಣಾ ಫಲಿತಾಂಶದ ವಿಶ್ಲೇಷಣೆ…..

ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…

11 hours ago

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್: ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆ

ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…

21 hours ago

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ- ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ- ಶಾಸಕ ಧೀರಜ್‌ ಮುನಿರಾಜ್

ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್‌…

1 day ago

ಹೊಲಿಗೆ ಯಂತ್ರ ಪಡೆಯಲು ಅರ್ಜಿ ಆಹ್ವಾನ

ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…

1 day ago