KSRTC: ಶಕ್ತಿ ಯೋಜನೆ ಎಫೆಕ್ಟ್: ಚಿಕ್ಕಬಳ್ಳಾಪುರ ಬಸ್ ಘಟಕಕ್ಕೆ ಭರ್ಜರಿ ಲಾಭಾಂಶ: ಪ್ರತಿದಿನ ಸರಾಸರಿ 12-15 ಲಕ್ಷ ರೂ. ಲಾಭ: ಜೂ.11ರಿಂದ ಜು.11ರ ತಿಂಗಳ ಅವಧಿಯಲ್ಲಿ 27.96 ಲಕ್ಷ ಮಹಿಳೆಯರ ಪ್ರಯಾಣ: 9.11 ಕೋಟಿ ರೂ. ಮೌಲ್ಯದ ಟಿಕೆಟ್ ವಿತರಣೆ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲ್ಲೂಕು ಒಳಗೊಂಡ ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ಬಸ್ ಡಿಪೋ ವಿಭಾಗಕ್ಕೆ ಭರ್ಜರಿ ಪ್ರತಿಕ್ರಿಯೆ ಬಂದಿದೆ.

ಯೋಜನೆ ಆರಂಭವಾಗಿ (ಜು.11) ಒಂದು ತಿಂಗಳು ಪೂರ್ಣವಾಗಿದ್ದು, ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಸುಮಾರು 27.96 ಲಕ್ಷ ಮಹಿಳೆಯರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಪಾಸ್ ಮೂಲಕ ಸಂಚರಿಸುತ್ತಿದ್ದ ವಿದ್ಯಾರ್ಥಿನಿಯರು, ಮಹಿಳಾ ಉದ್ಯೋಗಿಗಳಿಗೂ ಯೋಜನೆಯಿಂದ ಲಾಭವಾಗಿದೆ. ಈ ಮಧ್ಯೆ ಮೊದಲೇ ನಷ್ಟದಲ್ಲಿದ್ದ ಖಾಸಗಿ ಬಸ್ ಮಾಲೀಕರು ಮಾತ್ರ ಈಗ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಶೇ.30 ರಷ್ಟು ಮಹಿಳಾ ಪ್ರಯಾಣಿಕರು ಹೆಚ್ಚಳ:

ಮಹಿಳೆಯರಿಗೆ ಉಚಿತ ಪ್ರಯಾಣ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆ ಬರೋಬ್ಬರಿ ಶೇ.30ರಷ್ಟು ಏರಿಕೆಯಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಆಟೋ, ಟೆಂಪೋ, ಇತರ ವಾಹನಗಳ ಪ್ರಯಾಣಕ್ಕೆ ಗುಡ್ ಬೈ ಹೇಳಿ, ಕೆಎಸ್ಆರ್ ಟಿಸಿ ಬಸ್ ನತ್ತ ಹೆಜ್ಜೆ ಇಟ್ಡಿದ್ದಾರೆ. ಇದರಿಂದ ಸಹಜವಾಗಿ ಮಹಿಳೆಯರ, ಪತಿ, ಮಕ್ಕಳು ಬಸ್ ನಲ್ಲಿ ಓಡಾಟ ಗಣನೀಯವಾಗಿ ಹೆಚ್ಚಿದೆ. ತಿಂಗಳಲ್ಲಿ 27.96 ಲಕ್ಷ ಮಹಿಳೆಯರು ಪ್ರಯಾಣಿಸಿ ಚಿಕ್ಕಬಳ್ಳಾಪುರ ಬಸ್ ಘಟಕ್ಕೆ ಮಹಿಳೆಯರು ಶಕ್ತಿ ತುಂಬಿದ್ದಾರೆ ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ್‌ ನಾಯ್ಡು ತಿಳಿಸಿದರು.

ಪ್ರತಿದಿನ ಸರಾಸರಿ 12-15 ಲಕ್ಷ ಲಾಭ:

ಶಕ್ತಿ ಯೋಜನೆ ಬಳಿಕ ಚಿಕ್ಕಬಳ್ಳಾಪುರ ಬಸ್ ಡಿಪೋ ವಿಭಾಗಕ್ಕೆ ನಿರೀಕ್ಷೆ ಮೀರಿ ಲಾಭವಾಗಿದೆ. ನಿರ್ವಹಣೆಯ ವೆಚ್ಚ ಸರಿದೂಗಿಸುವುದೇ ಕಷ್ಟಕರವಾಗಿದ್ದ ಚಿಕ್ಕಬಳ್ಳಾಪುರ ಕೆಎಸ್ಆರ್ ಟಿಸಿ ವಿಭಾಗಕ್ಕೆ ಶಕ್ತಿ ಯೋಜನೆ ಭರಪೂರ ಲಾಭ ತಂದಿದೆ. ಈ ಹಿಂದೆ ಪ್ರತಿದಿನ ಇದ್ದ 70 ಲಕ್ಷ ರೂ. ಇದೀಗ ಸುಮಾರು 12 ರಿಂದ 15 ಲಕ್ಷ ರೂ. ಏರಿಕೆಯಾಗಿ 85 ಲಕ್ಷ ರೂ.ವರಗೆ ವಹಿವಾಟು ನಡೆಸುತ್ತಿದೆ. ಒಟ್ಟಾರೆ ಒಂದು ತಿಂಗಳ ಅವಧಿಯಲ್ಲಿ 9.11 ಕೋಟಿ ರೂ. ವಹಿವಾಟು ನಡೆಸಿ, ಶೇ.32 ರಷ್ಟು ಹೆಚ್ಚಿನ ಲಾಭಂಶವನ್ನು ಕಂಡಿದೆ.

ಏರಿಕೆ ಕಂಡ ಗ್ರಾಮಾಂತರ ಸಾರಿಗೆ ಲಾಭ:

ಶಕ್ತಿ ಯೋಜನೆಗೂ ಮೊದಲು ಲಾಂಗ್ ರೂಟ್ ನಲ್ಲಿ ಉತ್ತಮ ಆದಾಯ ಗಳಿಸುತ್ತಿದ್ದ ಘಟಕಕ್ಕೆ. ಗ್ರಾಮಾಂತರ, ಹಳ್ಳಿಗಳ ರೂಟ್ ಗಳಲ್ಲಿ ನಿರೀಕ್ಷಿತ ಆದಾಯ ಬರುತ್ತಿರಲಿಲ್ಲ, ಶಕ್ತಿ ಯೋಜನೆ ಜಾರಿಯಾದಗಿನಿಂದ ಗ್ರಾಮಾಂತರ ಸಾರಿಗೆಗೆ ಹಳ್ಳಿಗಳಿಂದ ಬೇಡಿಕೆ ಹೆಚ್ಚಾಗಿದ್ದು, ಪ್ರತಿ ಮಾರ್ಗದಲ್ಲಿ ಇಪಿಕೆಎಂ( ಅರ್ನಿಂಗ್ ಪರ್ ಅವರ್) 15-20 ರೂ. ಇದ್ದದ್ದು, ಇದೀಗ 30-40 ರೂ.ರವರೆಗೆ ಏರಿಕೆಯಾಗಿದೆ. ಅಂದರೆ ಪ್ರತಿದಿನ ಕನಿಷ್ಟ 8 ಸಾವಿರ ರೂ. ಕಲೆಕ್ಷನ್ ಆಗುತ್ತಿದ್ದ ಜಾಗದಲ್ಲಿ ಈಗ 10-12 ಸಾವಿರ ರೂ. ಕಲೆಕ್ಷನ್‌ ಆಗುತ್ತಿದೆ. ಇನ್ನೂ ಲಾಂಗ್ ರೂಟ್ ಗಳಲ್ಲಿ 40 ರೂ. ಅರ್ನಿಂಗ್ ಪರ್ ಕಿ.ಮೀ ಬರುತ್ತಿತ್ತು. ಈಗ ಇಪಿಕೆಎಂ 40% ಹೆಚ್ಚಾಗಿ 72ರೂ. ಬರುತ್ತಿದೆ.

ಹೆಚ್ಚಿದ ಅಂತಾರಾಜ್ಯ ಪ್ರಯಾಣಿಕರ ಸಂಖ್ಯೆ:

ಚಿಕ್ಕಬಳ್ಳಾಪುರ ವಿಭಾಗದಿಂದ ತುಮಕೂರು, ಬೆಂಗಳೂರು, ಕೋಲಾರ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಅಷ್ಟೇ ಅಲ್ಲದೆ ಪಕ್ಕದ ಆಂಧ್ರ ಪ್ರದೇಶದ ಹಿಂದೂಪುರ, ಅನಂತಪುರ, ಮಂತ್ರಾಲಯ, ಗೋರಂಟ್ಲಾ, ಕದಿರಿ, ಪುಟ್ಟಪರ್ತಿಗೆ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿರುವುದರಿಂದ ಪ್ರಯಾಣಿಕರ ಸಂಖ್ಯೆ ಅಧಿಕವಾಗಿ ಲಾಭವು ಹೆಚ್ಚಿದೆ.

ಡಿಪೋವಾರು ಮಹಿಳೆಯರ ಸಂಚಾರ:

1) ದೊಡ್ಡಬಳ್ಳಾಪುರ ಡಿಪೋ
ಪ್ರಯಾಣಿಕರು: 4,07,121.
ಟಿಕೆಟ್ ಮೌಲ್ಯ(ರೂ): 1,14,97,578

2) ಚಿಕ್ಕಬಳ್ಳಾಪುರ ಡಿಪೋ
ಪ್ರಯಾಣಿಕರು: 6,92,094.
ಟಿಕೆಟ್ ಮೌಲ್ಯ(ರೂ): 2,26,59,62

3) ಚಿಂತಾಮಣಿ ಡಿಪೋ
ಪ್ರಯಾಣಿಕರು 5,58,822.
ಟಿಕೆಟ್ ಮೌಲ್ಯ(ರೂ): 2,09,15,819

4) ಬಾಗೇಪಲ್ಲಿ ಡಿಪೋ
ಪ್ರಯಾಣಿಕರು 4,06,171.
ಟಿಕೆಟ್ ಮೌಲ್ಯ(ರೂ):1,46,30,810

5) ಗೌರಿಬಿದನೂರು ಡಿಪೋ
ಪ್ರಯಾಣಿಕರು: 5,19,427.
ಟಿಕೆಟ್ ಮೌಲ್ಯ(ರೂ): 1,54, 87,683

6) ಶಿಡ್ಲಘಟ್ಟ ಡಿಪೋ
ಪ್ರಯಾಣಿಕರು: 2,12,627.
ಟಿಕೆಟ್ ಮೌಲ್ಯ(ರೂ): 59, 71,816.

ಒಟ್ಟು
ಪ್ರಯಾಣಿಕರು: 27,96,312.
ಟಿಕೆಟ್ ಮೌಲ್ಯ(ರೂ): 9,11,62,768

ಸುರಕ್ಷಿತ ಪ್ರಯಾಣಕ್ಕೆ ಮೊದಲ ಆದ್ಯತೆ

ನಮ್ಮ ಮೊದಲ ಆದ್ಯತೆ ಪ್ರಯಾಣಿಕ ಸುರಕ್ಷತೆ. ಇಡೀ ಭಾರತ ದೇಶದಲ್ಲೇ ಕಡಿಮೆ ಅಪಘಾತ ಪ್ರಕರಣಗಳು ಇರೋದು ಕೆಎಸ್ ಆರ್ ಟಿಸಿಯಲ್ಲಿ. ಬಸ್ ಗುಣಮಟ್ಟ, ಪ್ರಯಾಣಿಕರ ಜೊತೆ ಚಾಲಕ, ನಿರ್ವಾಹಕರು ಧನಾತ್ಮಕವಾಗಿ ವರ್ತನೆ ಮಾಡುತ್ತಾರೆ. ಆದಾಯ ಜೊತೆಗೆ ಉಳಿತಾಯ ಮಾಡುವುದರಲ್ಲಿ ಮೊದಲ ಸ್ಥಾನ, ಡೀಸಲ್ ಉಳಿತಾಯ ಮಾಡುವುದರಲ್ಲಿ ಮೊದಲ ಸ್ಥಾನದಲ್ಲಿದ್ದೇವೆ ಹೀಗೆ ಹಲವಾರು ಸಾಧನೆಗಳೊಂದಿಗೆ ಕರ್ನಾಟಕ ಸಾರಿಗೆ ಇಲಾಖೆ ಮುನ್ನಡೆಯುತ್ತಿದೆ ಎಂದು ಚಿಕ್ಕಬಳ್ಳಾಪುರ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಹಿಮವರ್ಧನ್‌ ನಾಯ್ಡು ತಿಳಿಸಿದರು.

ಇತ್ತೀಚೆಗೆ ದೊಡ್ಡಬಳ್ಳಾಪುರ ಘಟಕಕ್ಕೆ ಹೊಸ ಬಸ್ ಗಳ ಸೇರ್ಪಡೆ ಆಗಲಿಲ್ಲ, ಸರ್ಕಾರ ಹೊಸ ಬಸ್ ಗಳ ಖರೀದಿ ಮಾಡಿ ನೀಡಲಾಗುವುದು ಎಂದು ತಿಳಿಸಿದೆ. ಅದೇರೀತಿ ಸಿಬ್ಬಂದಿ ನೇಮಕಾತಿ ಆಗದೇ ಇರೋದು ಬಸ್ ಸಮಸ್ಯೆ ಉಲ್ಬಣವಾಗಿದೆ. ಸಿಬ್ಬಂದಿ ಕೊರತೆ ನೀಗಿಸಲು ಹೊರ ಗುತ್ತಿಗೆ ಆಧಾರದಲ್ಲಿ ಹಾಗೂ ನಿವೃತ್ತಿ ಸಿಬ್ಬಂದಿ ನೇಮಕ ಮಾಡಿಕೊಂಡು ಬಸ್ ಸೇವೆ ಕಲ್ಪಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದರು.

Ramesh Babu

Journalist

Recent Posts

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

4 hours ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

17 hours ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

20 hours ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

21 hours ago

ಸ್ವಾತಂತ್ರ್ಯ ದಿನಾಚರಣೆಯಲ್ಲಿ ಆರೋಗ್ಯ ಕಾಳಜಿ; ಹೀಲಿನ್ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ

80ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.…

24 hours ago

ವಿಬಿ ಜಿ ರಾಮ್ ಜಿ: ಆ.15 ರಿಂದ ಜಾಬ್ ಕಾರ್ಡ್ ಮೇಳ

ಗ್ರಾಮೀಣರಿಗೆ ಸ್ಥಳೀಯವಾಗಿ ಉದ್ಯೋಗ ಒದಗಿಸುವ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ) ಯೋಜನೆಯಡಿ (ವಿಬಿ…

2 days ago