ಕಡಿತಗೊಂಡ ಸೇವಾ ಸಿಂಧು ಆನ್ ಲೈನ್ ಸೇವೆಗಳು: ಸಂಕಷ್ಟದಲ್ಲಿ CSC ಸೇವಾ ಸಿಂಧು ಆಪರೇಟರ್ಸ್…!

ಸರ್ಕಾರ ಜಾರಿಗೆ ತರುವ ಯೋಜನಾ ಸವಲತ್ತುಗಳನ್ನು ಪಡೆಯಲು ಆನ್ ಲೈನ್ ಮುಖಾಂತರ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಸಿ ಎಸ್ ಸಿ ಸೇವಾಸಿಂಧು, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ವಿವಿಧ ಪೋರ್ಟ್ ಲ್ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಮೊದಲು ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟ್ ಲ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿತ್ತು. ಈಗ ದಿಢೀರನೆ ಸೇವಾ ಸಿಂಧು ಪೋರ್ಟ್ ಲನ್ನು ಪ್ರತ್ಯೇಕಿಸಿ ಕೇವಲ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಗೆ ನೀಡಿರುವುದು ಸೇವಾ ಸಿಂಧು ಮುಖೇನ ಅರ್ಜಿ ಸಲ್ಲಿಸುವ ಹಾಗು ಸಿ ಎಸ್ ಸಿ ಸೆಂಟರ್ ನಡೆಸುವ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ಈ ಕುರಿತು ಬಿಎಸ್ ಎನ್ ಎಲ್ ಕಚೇರಿ ಸಮೀಪವಿರುವ ಸೈಬರ್ ಸೆಂಟರ್ ಮಾಲೀಕ‌ ಹಾಗೂ ಸಿಎಸ್ ಸಿ ಸೇವಾ ಸಿಂಧು ಆಪರೇಟರ್ ರವಿಚಂದ್ರ ಮಾತನಾಡಿ, ಕಳೆದ 10 ವರ್ಷಗಳಿಂದ ಕಾಮನ್ ಸರ್ವಿಸಸ್ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೇವೆ. ಆಧಾರ್ ತಿದ್ದುಪಡಿ, ಪಡಿತರ ತಿದ್ದುಪಡಿ, ವೋಟರ್ ಐಡಿ ತಿದ್ದುಪಡಿ, ಬ್ಯಾಂಕ್ ಅಕೌಂಟ್, ಉದ್ಯಮ್ ನೋಂದಣಿ, ಪವರ್ ಲೂಮ್ ಸಬ್ಸಿಡಿ, ವಿದ್ಯಾರ್ಥಿ ವೇತನ, ಜಿಎಸ್ ಟಿ ನೋಂದಣಿ, ಎಲ್ ಎಲ್ ಮತ್ತು ಡಿಎಲ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪೊಲೀಸ್ ವೆರಿಫಿಕೇಶನ್ ಪ್ರಮಾಣ ಪತ್ರ, ಇ ಶ್ರಮ ಕಾರ್ಡ್, ವಿದ್ಯಾರ್ಥಿಗಳ ಬಸ್ ಪಾಸ್, ವಿದ್ಯಾರ್ಥಿ ವೇತನ ಹಾಗು ಹಾಗು ಹಲವು ಸರ್ಕಾರಿ ಸೌಲಭ್ಯಗಳ ಅರ್ಜಿಗಳನ್ನು ಸೇವಸಿಂಧು ಪೋರ್ಟಲ್ ನ ಮುಖಾಂತರ ಸಲ್ಲಿಸುತ್ತಿದ್ದೆವು ಆದರೆ ಇತ್ತೀಚಿನ ಕೆಲವು ಗ್ಯಾರೆಂಟಿ ಯೋಜನೆಗಳು ಒಂದೊಂದಾಗಿ ಪ್ರತ್ಯೇಕಿಸಿ ಆ ಯೋಜನೆಗಳ ಅರ್ಜಿಗಳನ್ನು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಗೆ ನೀಡಿರುವುದು, ಸಿ ಎಸ್ ಸಿ ಸೆಂಟರ್ ಗಳನ್ನು ನಡೆಸಿ ಇಷ್ಟು ವರ್ಷಗಳಿಂದ ಜನ ಸೇವೆ ನೀಡಿ ಅದನ್ನೇ ಬದುಕಿಗೆ ಆಧಾರವಾಗಿ ನಂಬಿದ ನಮಗೆ ತುಂಬಾ ನಷ್ಟವಾಗುತ್ತಿದೆ ಎಂದರಲ್ಲದೇ ನಾವು ಸರ್ಕಾರದ ಮಾನದಂಡಗಳನ್ನು ಅನುಸರಿಸಿಯೇ ಅನ್ ಲೈನ್ ಸೇವೆಗಳನ್ನ ಸಾರ್ವಜನಿಕರಿಗೆ ನೀಡುತ್ತಿದ್ದೇವೆ ಆದರೂ ಸೇವಾ ಸಿಂಧುವಿನ ಕೆಲವು ಸೇವೆಗಳನ್ನು ಕಡಿತಗೊಳಿಸಿರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡರು.

ನಾವು ಸೈಬರ್ ನಡೆಸಿ ಜೀವನ ಮಾಡಬೇಕು, ಸೇವಾ ಸಿಂಧು ಪೋರ್ಟ್ ಲ್ ಪ್ರತ್ಯೇಕಿಸಿರುವುದರಿಂದ ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ದಯಮಾಡಿ ಕರ್ನಾಟಕ, ಬೆಂಗಳೂರು, ಗ್ರಾಮ ಒನ್ ಗೆ ನೀಡಿರುವ ಆನ್ ಲೈನ್ ಸೇವೆಗಳನ್ನ ಸೇವಾ ಸಿಂಧು ಪೋರ್ಟ್ ಲ್ ಗೂ ನೀಡಿ ಎಂದು ಒತ್ತಾಯಿಸಿದರು.

Ramesh Babu

Journalist

View Comments

  • SIR I AM CSC CENTAR MAN NAU 4 VARSHAGALIND CSC NADESUTIDDENE SEVA SHINDU PORTALLINALLI BAHALA APPLEACATION TEGEDU HAKI NAMMA HOTTEMELE BARE HAKIDANTAGIDE ADDARIND ADHIKARIGALALLI KELIKOLLUVUDENENDARE GRAMA ONE, KARNATAKA ONE GE NIDID SAVALATTIU GALANNU CSC GU KODI ENDU ADIKARIGALLI KALAKALIEND KELIKOLLUTTENE

Recent Posts

ಹಳಿ ತಪ್ಪಿದಂತಿರುವ ಭಾರತದ ವಿದೇಶಾಂಗ ನೀತಿ……..

ಭಾರತದ ವಿದೇಶಾಂಗ ನೀತಿ ವ್ಯಾವಹಾರಿಕವೇ ?ಮೌಲ್ಯಯುತವೇ ? ಸೈದ್ದಾಂತಿಕವೇ ? ಅವಕಾಶವಾದಿತನವೇ ? ವ್ಯಕ್ತಿಗತವೇ ? ಸಾಂದರ್ಭಿಕ ತೀರ್ಮಾನಗಳೇ ?…

39 minutes ago

ಅರಸೇಶ್ವರಿ ದೇವಿಯ ಜಾಗ ಖಾಸಗಿ ವ್ಯಕ್ತಿಗೆ ಖಾತೆ:ಸರ್ಕಾರಿ ಜಮೀನು ಒತ್ತುವರಿ ತೆರವು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟ‌ನೆ

ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಅರಸೇಶ್ವರಿ ದೇಗುಲದ ಇನಾಮ್ತಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ…

1 hour ago

ಕೇಬಲ್ ಕಾರ್ಖಾನೆಗೆ ಬೆಂಕಿ: ಧಗಧಗ ಉರಿಯುತ್ತಿರುವ ಕಾರ್ಖಾನೆ

ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕೇಬಲ್ ಕಾರ್ಖಾನೆಗೆ ಬೆಂಕಿ ತಗುಲಿದ್ದು, ಧಗಧಗನೆ ಕಾರ್ಖಾನೆ ಉರಿಯುತ್ತಿದೆ. ಈ ಘಟನೆ ಇಂದು ಸಂಜೆ ಸುಮಾರು…

13 hours ago

ಮೆಳೇಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟ ಕದ್ದೊಯ್ದ ಐನಾತಿಗಳು

ಮುಜರಾಯಿ ಇಲಾಖೆಗೆ ಒಳಪಡುವ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮ ಲಕ್ಷ್ಮಣರಿಗೆ ಅಳವಡಿಸಿದ್ದ ಬೆಳ್ಳಿ ಕಿರೀಟವನ್ನು ಕಳ್ಳರು ಕದ್ದೊಯ್ದಿರುವ ಘಟನೆ ಕಳೆದ…

16 hours ago

ಮಾರಮ್ಮ ದೇವಿಯ ಮೂರು ಚಿನ್ನದ ತಾಳಿ, ನಾಲ್ಕು ಗುಂಡುಗಳನ್ನ ಕದ್ದ ಖದೀಮರು

ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುದೇವನಹಳ್ಳಿ ಮಾರಮ್ಮ ದೇವಿ ದೇವಸ್ಥಾನದಲ್ಲಿ ಕಳೆದ ರಾತ್ರಿ ಕಳ್ಳತನ‌ ನಡೆದಿದೆ.. ಕಲ್ಲುದೇವನಹಳ್ಳಿ ಗ್ರಾಮದ ಮಧ್ಯ ಭಾಗದಲ್ಲಿರುವ ಮಾರಮ್ಮ…

17 hours ago

T20 World Cup: ವಿಶ್ವ ವಿಜೇತ ಟೀಂ ಇಂಡಿಯಾಗೆ ದಾಖಲೆಯ ಮೂರನೇ T20 ವಿಶ್ವಕಪ್ ಕಿರೀಟ

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಅದ್ಭುತವಾದ…

1 day ago