ಕಡಿತಗೊಂಡ ಸೇವಾ ಸಿಂಧು ಆನ್ ಲೈನ್ ಸೇವೆಗಳು: ಸಂಕಷ್ಟದಲ್ಲಿ CSC ಸೇವಾ ಸಿಂಧು ಆಪರೇಟರ್ಸ್…!

ಸರ್ಕಾರ ಜಾರಿಗೆ ತರುವ ಯೋಜನಾ ಸವಲತ್ತುಗಳನ್ನು ಪಡೆಯಲು ಆನ್ ಲೈನ್ ಮುಖಾಂತರ ನೋಂದಣಿ ಮಾಡುವುದು ಕಡ್ಡಾಯವಾಗಿದೆ. ಆದ್ದರಿಂದ ಸಿ ಎಸ್ ಸಿ ಸೇವಾಸಿಂಧು, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಸೇರಿದಂತೆ ವಿವಿಧ ಪೋರ್ಟ್ ಲ್ ಗಳನ್ನು ಅಸ್ತಿತ್ವಕ್ಕೆ ತರಲಾಗಿದೆ.

ಮೊದಲು ಎಲ್ಲಾ ಯೋಜನೆಗಳ ಸೌಲಭ್ಯ ಪಡೆಯಲು ಸೇವಾ ಸಿಂಧು ಪೋರ್ಟ್ ಲ್ ಮೂಲಕ ಅರ್ಜಿ ಹಾಕಲು ಅವಕಾಶ ಮಾಡಿಕೊಡಲಾಗಿತ್ತು. ಈಗ ದಿಢೀರನೆ ಸೇವಾ ಸಿಂಧು ಪೋರ್ಟ್ ಲನ್ನು ಪ್ರತ್ಯೇಕಿಸಿ ಕೇವಲ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಗೆ ನೀಡಿರುವುದು ಸೇವಾ ಸಿಂಧು ಮುಖೇನ ಅರ್ಜಿ ಸಲ್ಲಿಸುವ ಹಾಗು ಸಿ ಎಸ್ ಸಿ ಸೆಂಟರ್ ನಡೆಸುವ ಮಾಲೀಕರು ಸಂಕಷ್ಟದಲ್ಲಿದ್ದಾರೆ.

ಈ ಕುರಿತು ಬಿಎಸ್ ಎನ್ ಎಲ್ ಕಚೇರಿ ಸಮೀಪವಿರುವ ಸೈಬರ್ ಸೆಂಟರ್ ಮಾಲೀಕ‌ ಹಾಗೂ ಸಿಎಸ್ ಸಿ ಸೇವಾ ಸಿಂಧು ಆಪರೇಟರ್ ರವಿಚಂದ್ರ ಮಾತನಾಡಿ, ಕಳೆದ 10 ವರ್ಷಗಳಿಂದ ಕಾಮನ್ ಸರ್ವಿಸಸ್ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸುತ್ತಿದ್ದೇವೆ. ಆಧಾರ್ ತಿದ್ದುಪಡಿ, ಪಡಿತರ ತಿದ್ದುಪಡಿ, ವೋಟರ್ ಐಡಿ ತಿದ್ದುಪಡಿ, ಬ್ಯಾಂಕ್ ಅಕೌಂಟ್, ಉದ್ಯಮ್ ನೋಂದಣಿ, ಪವರ್ ಲೂಮ್ ಸಬ್ಸಿಡಿ, ವಿದ್ಯಾರ್ಥಿ ವೇತನ, ಜಿಎಸ್ ಟಿ ನೋಂದಣಿ, ಎಲ್ ಎಲ್ ಮತ್ತು ಡಿಎಲ್, ಹಿರಿಯ ನಾಗರಿಕರ ಗುರುತಿನ ಚೀಟಿ, ಪೊಲೀಸ್ ವೆರಿಫಿಕೇಶನ್ ಪ್ರಮಾಣ ಪತ್ರ, ಇ ಶ್ರಮ ಕಾರ್ಡ್, ವಿದ್ಯಾರ್ಥಿಗಳ ಬಸ್ ಪಾಸ್, ವಿದ್ಯಾರ್ಥಿ ವೇತನ ಹಾಗು ಹಾಗು ಹಲವು ಸರ್ಕಾರಿ ಸೌಲಭ್ಯಗಳ ಅರ್ಜಿಗಳನ್ನು ಸೇವಸಿಂಧು ಪೋರ್ಟಲ್ ನ ಮುಖಾಂತರ ಸಲ್ಲಿಸುತ್ತಿದ್ದೆವು ಆದರೆ ಇತ್ತೀಚಿನ ಕೆಲವು ಗ್ಯಾರೆಂಟಿ ಯೋಜನೆಗಳು ಒಂದೊಂದಾಗಿ ಪ್ರತ್ಯೇಕಿಸಿ ಆ ಯೋಜನೆಗಳ ಅರ್ಜಿಗಳನ್ನು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಗೆ ನೀಡಿರುವುದು, ಸಿ ಎಸ್ ಸಿ ಸೆಂಟರ್ ಗಳನ್ನು ನಡೆಸಿ ಇಷ್ಟು ವರ್ಷಗಳಿಂದ ಜನ ಸೇವೆ ನೀಡಿ ಅದನ್ನೇ ಬದುಕಿಗೆ ಆಧಾರವಾಗಿ ನಂಬಿದ ನಮಗೆ ತುಂಬಾ ನಷ್ಟವಾಗುತ್ತಿದೆ ಎಂದರಲ್ಲದೇ ನಾವು ಸರ್ಕಾರದ ಮಾನದಂಡಗಳನ್ನು ಅನುಸರಿಸಿಯೇ ಅನ್ ಲೈನ್ ಸೇವೆಗಳನ್ನ ಸಾರ್ವಜನಿಕರಿಗೆ ನೀಡುತ್ತಿದ್ದೇವೆ ಆದರೂ ಸೇವಾ ಸಿಂಧುವಿನ ಕೆಲವು ಸೇವೆಗಳನ್ನು ಕಡಿತಗೊಳಿಸಿರುವುದರಿಂದ ನಮಗೆ ಅನ್ಯಾಯವಾಗಿದೆ ಎಂದು ತಮ್ಮ ಅಳಲನ್ನ ತೋಡಿಕೊಂಡರು.

ನಾವು ಸೈಬರ್ ನಡೆಸಿ ಜೀವನ ಮಾಡಬೇಕು, ಸೇವಾ ಸಿಂಧು ಪೋರ್ಟ್ ಲ್ ಪ್ರತ್ಯೇಕಿಸಿರುವುದರಿಂದ ಅಂಗಡಿ ಬಾಡಿಗೆ, ವಿದ್ಯುತ್ ಬಿಲ್, ಸಿಬ್ಬಂದಿಗೆ ವೇತನ ನೀಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ. ದಯಮಾಡಿ ಕರ್ನಾಟಕ, ಬೆಂಗಳೂರು, ಗ್ರಾಮ ಒನ್ ಗೆ ನೀಡಿರುವ ಆನ್ ಲೈನ್ ಸೇವೆಗಳನ್ನ ಸೇವಾ ಸಿಂಧು ಪೋರ್ಟ್ ಲ್ ಗೂ ನೀಡಿ ಎಂದು ಒತ್ತಾಯಿಸಿದರು.

Ramesh Babu

Journalist

View Comments

  • SIR I AM CSC CENTAR MAN NAU 4 VARSHAGALIND CSC NADESUTIDDENE SEVA SHINDU PORTALLINALLI BAHALA APPLEACATION TEGEDU HAKI NAMMA HOTTEMELE BARE HAKIDANTAGIDE ADDARIND ADHIKARIGALALLI KELIKOLLUVUDENENDARE GRAMA ONE, KARNATAKA ONE GE NIDID SAVALATTIU GALANNU CSC GU KODI ENDU ADIKARIGALLI KALAKALIEND KELIKOLLUTTENE

Recent Posts

18 ದೇವಸ್ಥಾನಗಳಿಗೆ ಕನ್ನ ಹಾಕಿದ್ದ ಖದೀಮರ ಬಂಧನ: ಲಕ್ಷಾಂತರ ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು, ಗುಂಡುಗಳು ವಶ

  18 ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು‌ ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ರೂ.1,50,000/-ಮೌಲ್ಯದ ಬಂಗಾರದ ತಾಳಿ ಬೊಟ್ಟುಗಳು,…

4 hours ago

ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯಕ್ಕೆ ಎಂಬಿಎ ವಿದ್ಯಾರ್ಥಿ ಸಾವು

ದೊಡ್ಡಬಳ್ಳಾಪುರ: ಮುಂದೆ ಸಾಗುತ್ತಿದ್ದ ಲಾರಿ ಚಾಲಕನ ನಿರ್ಲಕ್ಷ್ಯದಿಂದ ಹಿಂಬದಿಯಲ್ಲಿ ಬರುತ್ತಿದ್ದ ಕಾರು ಭೀಕರ ಅಪಘಾತಕ್ಕೆ ಒಳಗಾಗಿ ಎಂಬಿಎ ವಿದ್ಯಾರ್ಥಿ ಸಾವನಪ್ಪಿರುವ…

5 hours ago

ಮೊಬೈಲ್ ನೋಡುತ್ತಾ ಕುಳಿತಿದ್ದ 21 ವರ್ಷದ ಯುವಕನಿಗೆ ಚಾಕು ಇರಿತ: ಚಾಕು ಇರಿತ ವಿಡಿಯೋ ಸಿಸಿಟಿವಿಯಲ್ಲಿ ಸೆರೆ

ತನ್ನ ಪಾಡಿಗೆ ತಾನು ಮೊಬೈಲ್ ನೋಡುತ್ತಾ ಕುಳಿತಿದ್ದ ಯುವಕನಿಗೆ ಚಾಕು ಇರಿದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲ್ಲೂಕಿನ…

8 hours ago

ರಾಹುಲ್ ಗಾಂಧಿ ಸೈದ್ಧಾಂತಿಕ ಬದ್ಧತೆಯಿರುವ ವ್ಯಕ್ತಿ….

ರಾಹುಲ್ ಗಾಂಧಿ...... ಬಿಹಾರ ಚುನಾವಣೆಯಲ್ಲಿ, ಸೀಟುಗಳ ಲೆಕ್ಕದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ನಂತರ ಶ್ರೀ ರಾಹುಲ್ ಗಾಂಧಿಯವರ ನಾಯಕತ್ವದ ಸಾಮರ್ಥ್ಯದ…

10 hours ago

ಇಬ್ಬರು ಏರೋಸ್ಪೇಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಾಲೇಜಲ್ಲಿ ಶೋಕಿ ಮಾಡೋ ಖಯಾಲಿ: ಆದ್ರೆ ಜೇಬಲ್ಲಿ ಕಾಂಚಾಣ ಇಲ್ಲ: ಕಾಸಿಗಾಗಿ ಏನು ಮಾಡಿದ್ರು ಗೊತ್ತಾ……

ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…

23 hours ago

ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹೀಲಿನ್ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಸಣಾ ಶಿಬಿರ

ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…

24 hours ago