ಎಎಸ್ ಐ ಆಗಿ ಮುಂಬಡ್ತಿ ಪಡೆದ ರಂಗಸ್ವಾಮಿಯವರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕಾರ ಸ್ವೀಕರಿಸಿದರು, ದಲಿತ ಸರ್ವ ಸಮಾಜ ಸಂಘರ್ಘ ಸಮಿತಿ ರಂಗಸ್ವಾಮಿಯವರನ್ನ ಸನ್ಮಾನಿಸುವ ಮೂಲಕ ಅಭಿನಂದಿಸಿದರು.
ಪೊಲೀಸ್ ಕಾನ್ಸ್ ಟೇಬಲ್ ಆಗಿ ರಂಗಸ್ವಾಮಿಯವರು ದೊಡ್ಡಬಳ್ಳಾಪುರ ಪೊಲೀಸ್ ವಿಭಾಗದಲ್ಲಿ 25 ವರ್ಷ ಸೇವೆ ಸಲ್ಲಿಸಿತ್ತು ಬಂದಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ, ದೊಡ್ಡಬೆಳವಂಗಲ, ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಜನ ಮನ್ನಣೆ ಗಳಿಸಿದ್ದರು.
ಇದೀಗ ASIಯಾಗಿ ಮುಂಬಡ್ತಿ ಪಡೆದಿರುವ ರಂಗಸ್ವಾಮಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಬಂದಿದ್ದಾರೆ.
ಇದೇ ವೇಳೆ ದಲಿತ ಸರ್ವ ಸಮಾಜ ಸಂಘರ್ಷ ಸಮಿತಿ ಮುಖಂಡರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್ಸ್ ಪೇಕ್ಟರ್ ಮುನಿಕೃಷ್ಣರವನ್ನು ಸನ್ಮಾನಿಸಿ ಗೌರವಿಸಲಾಯಿತು.
ದಲಿತ ಸರ್ವ ಸಮಾಜ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಬರಗೂರು ಗಂಗಾಂಜಿನಪ್ಪ, ವಾಲ್ಮೀಕಿ ಯುವಪಡೆ ರಾಜ್ಯಾಧ್ಯಕ್ಷರಾದ ಕೆ.ಸುಬ್ರಮಣಿ, ರಾಜ್ಯ ಕಾರ್ಯದರ್ಶಿ ಟಿ.ಡಿ.ಮುನಿಯಪ್ಪ, ದಲಿತ ಸರ್ವ ಸಮಾಜ ಸಂಘರ್ಷ ಸಮಿತಿ ಸದಸ್ಯರಾದ ರಾಜಣ್ಣ, ನರಸಿಂಹಮೂರ್ತಿ ಮಡೇಶ್ವರ, ನರಸಿಂಹಗೌಡ ಸಾಸಲು, ಲಕ್ಷಣ ಪಾಲನಜೋಗಹಳ್ಳಿ ಸೇರಿದಂತೆ ಹಾಜರಿದ್ದರು.