ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಇಒ ಎನ್.ಕೃಷ್ಣಪ್ಪ ವರ್ಗಾವಣೆ: ನೂತನ ಇಒ ಆಗಿ ಡಿ.ನಾಗರಾಜ್ ನೇಮಕ

ಶ್ರೀಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ‌ನಿರ್ವಾಹಕ ಅಧಿಕಾರಿ ಎನ್.ಕೃಷ್ಣಪ್ಪ ಅವರನ್ನು ಎತ್ತಂಗಡಿ‌ ಮಾಡಿ ಧಾರ್ಮಿಕ‌ ದತ್ತಿ ಇಲಾಖೆ ಆದೇಶ ಹೊರಡಿಸಿದೆ.

ಕುಣಿಗಲ್ ತಾಲೂಕಿ‌ನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ಯ‌ನಿರ್ವಹಿಸುತ್ತಿದ್ದ ಡಿ.ನಾಗರಾಜ್ ಅವರನ್ನು ಘಾಟಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ನಾಗರಾಜ್ ಅವರು ಈ ಹಿಂದೆ ಘಾಟಿ ಸುಕ್ಷೇತದಲ್ಲೇ ಕಾರ್ಯ‌ನಿರ್ವಹಿಸಿದ್ದರು. ಎನ್.ಕೃಷ್ಣಪ್ಪ ಅವರನ್ನು ಯಡಿಯೂರಿಗೆ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆ ವರ್ಗಾವಣೆ‌ ಮಾಡಲಾಗಿದೆ.

Leave a Reply

Your email address will not be published. Required fields are marked *