ಆಯತಪ್ಪಿ ಚರಂಡಿಗೆ ಬಿದ್ದ ಹಸು: ಸುರಕ್ಷಿತವಾಗಿ ಮೇಲೆ ತೆಗೆದ ಅಗ್ನಿಶಾಮಕ‌ ಸಿಬ್ಬಂದಿ

ಮನೆಯ‌ ಮುಂದೆ‌ ನೀರು ಕುಡಿಯಲು ಹೋದ ಹಸುವೊಂದು ಆಯತಪ್ಪಿ ಚರಂಡಿಗೆ ಬಿದ್ದ ಘಟನೆ ನಗರದ ರೈಲ್ವೆ ನಿಲ್ದಾಣದ ಎಂ.ಎ.ಪ್ರಕಾಶ್ ಲೇಔಟ್ 1ನೇ ಮುಖ್ಯರಸ್ತೆಯಲ್ಲಿ‌ ನಡೆದಿದೆ.

ಇಲ್ಲಿನ‌ ವೆಂಕಟೇಶ್ ಎಂಬುವರ ಹಸು ಚರಂಡಿಗೆ ಬಿದ್ದು ಸಿಕ್ಕಿಹಾಕಿಕೊಂಡಿತ್ತು. ಚರಂಡಿ‌ ಕಿರಿದಾಗಿದ್ದ ಕಾರಣ ಹಸು‌ ಮೇಲೆಳಲು ಸಾಧ್ಯವಾಗಲಿಲ್ಲ. ಕೂಡಲೇ ಸ್ಥಳೀಯರು ಅಗ್ನಿಶಾಮಕ‌ ದಳದ ಸಿಬ್ಬಂದಿಗೆ ಕರೆ‌ಮಾಡಿ‌ ಮಾಹಿತಿ‌ ನೀಡಿದರು.

ಸ್ಥಳಕ್ಕೆ ಬಂದ ಅಗ್ನಿಶಾಮಕ‌ ಸಿಬ್ಬಂದಿ ಹಗ್ಗ ಹಾಗೂ ಓಸ್ ಪೈಪ್ ಗಳ ಮೂಲಕ ಹಸುವನ್ನು ಸುರಕ್ಷಿತವಾಗಿ ಮೇಲೆ ತೆಗೆದರು. ರಕ್ಷಣಾ ಕಾರ್ಯಾಚರಣೆ ವೇಳೆ ಹಸುವಿಗೆ ಸಣ್ಣಪುಟ್ಟ ಗಾಯಗಳಾದವು. ಪಶುವೈದ್ಯರನ್ನು ಕರೆಸಿ‌ ಚಿಕಿತ್ಸೆ ಕೊಡಿಸಲಾಯಿತು.

ಚರಂಡಿಗಳ ಮೇಲೆ‌ ಸ್ಲ್ಯಾಬ್ ಅಳವಡಿಸಿದ ಕಾರಣ ಈ ರೀತಿಯ ಘಟನೆಗಳು ಸಂಭವಿಸುತ್ತಿವೆ. ಕೂಡಲೇ ನಗರಸಭೆಯವರು ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.

Leave a Reply

Your email address will not be published. Required fields are marked *