ಮುಗುಚಿ ಬಿದ್ದ ಕಾರು: ‘ಜೈಲು ಜೀವಗಳು’ ಪುಸ್ತಕದ ಲೇಖಕ ಜಿ.ಯಲ್ಲಪ್ಪ ನಿಧನ

ದೊಡ್ಡಬಳ್ಳಾಪುರ ತಾಲೂಕಿನ ‘ಜೈಲು ಜೀವಗಳು’ ಎಂಬ ಪುಸ್ತಕದ ಲೇಖಕ ಜಿ.ಯಲ್ಲಪ್ಪ (45) ಅವರು ಇಂದು ತಾಲೂಕಿನ ಲಿಂಗನಹಳ್ಳಿ ಬಳಿ ನಡೆದ ಕಾರು ಅಪಘಾತದಲ್ಲಿ ನಿಧನರಾಗಿದ್ದಾರೆ.

ಮೃತರ ಅಂತ್ಯಕ್ರಿಯೆ ಇಂದು ನಡೆಯಲಿದ್ದು, ಇದಕ್ಕೂ ಮುನ್ನಾ ಮೃತರ ಅಂತಿಮ ದರ್ಶನಕ್ಕೆ ನಗರದ ರಂಗಪ್ಪ ವೃತ್ತದ ಸಮೀಪದ ಅವರ ಮನೆ ಬಳಿ ಬೆಳಿಗ್ಗೆ 10 ನಂತರ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇಂದು ಬೆಳಗಿನ ಜಾವದಲ್ಲಿ ಲಿಂಗನಹಳ್ಳಿ ಬಳಿ ಚಾಲಕನ ನಿಯಂತ್ರಣ ತಪ್ಪಿ ಮುಗುಚಿ‌ ಬಿದ್ದ ಕಾರು. ಇದರ ಪರಿಣಾಮ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

Leave a Reply

Your email address will not be published. Required fields are marked *