ಸಾಯುವ ಕೊನೆ ಕ್ಷಣದಲ್ಲಿ ವಿಡಿಯೋ ಮಾಡಿ ಅಂತ್ಯಕ್ರಿಯೆಗೆ ಬರುವಂತೆ ತನ್ನ ಪ್ರಿಯತಮೆಗೆ ಆಹ್ವಾನ ನೀಡಿ, ಹುಟ್ಟೋ ಮಗುವಿಗೆ ನನ್ನ ಹೆಸರಿಡು ಎಂದು ಪ್ರಾಣಬಿಟ್ಟ ಪ್ರಿಯಕರ

ನೆಲಮಂಗಲ: ಆತನಿಗೆ ಇನ್ನೂ 22 ವರ್ಷ. ಚಿಕ್ಕ ವಯಸ್ಸಿನಲ್ಲೇ ರೇಬಿಸ್ ಕಾಯಿಲೆ ಒಕ್ಕರಿಸಿತ್ತು, ರೋಗ ಉಲ್ಬಣಗೊಂಡು ಸಾಯೋ ಸ್ಥಿತಿಗೆ ತಂದಿತ್ತು. ರೋಗ ವಾಸಿ‌ ಮಾಡಿಕೊಳ್ಳಲು ಆಸ್ಪತ್ರೆಗೆ ಸೇರಿದ್ದ ಆದರೆ ಚಿಕಿತ್ಸೆ ಫಲಿಸಲಿಲ್ಲ. ತಾನು ಸಾವನ್ನಪ್ಪುತ್ತಿದ್ದೇನೆ ಎಂದು ತಿಳಿದಾತ ಕೊನೆ ಬಾರಿ ಕರಳು ಹಿಂಡುವ ವಿಡಿಯೋ ಒಂದನ್ನು ಮಾಡಿಸುತ್ತಾನೆ. ಆ ವಿಡಿಯೋ ತನ್ನ ಪ್ರಿಯತಮೆಗೆ ಮಹತ್ತರವಾದ ಸಂದೇಶ ಕಳಿಸುವುದಾಗಿರುತ್ತದೆ.

ಆ ವಿಡಿಯೋ ಮಾಡಿದಾತ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ 22ವರ್ಷದ ಯುವಕ ಕಿರಣ್. ಆಗಸ್ಟ್ 9 ರಂದು ವಿಡಿಯೋದಲ್ಲಿ ಮಾತನಾಡುತ್ತಾ ಪ್ರಿಯತಮೆಗೆ ಏನೂ ಹೇಳಬೇಕೋ ಅದನ್ನು ಹೇಳಿ ಸಾವನ್ನಪ್ಪುತ್ತಾನೆ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಯೆಸ್ ಕಿರಣ್ ಗೆ ತನ್ನ ಸಾವಿನ ಕ್ಷಣಗಳ ಅರಿವಾಗಿತ್ತು. ತಾನು ಪ್ರೀತಿಸಿದ ಹುಡುಗಿಯ ನೆನಪಾಗಿ ಸಾಯುವ ಕೊನೆಯ ಕ್ಷಣದಲ್ಲಿ ಲೈವ್ ವಿಡಿಯೋ ಮಾಡಿದ್ದಾನೆ, ಅದು ಏನಂದರೆ “ಹಾಯ್ ಬಂಗಾರಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ ಕಣೆ, ನಿಮ್ಮ ಅಪ್ಪ ಹೇಳಿದ ಹಾಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಆಗು. ನಿನಗೆ ಹುಟ್ಟುವ ಮಗುವಿಗೆ ನನ್ನ ಹೆಸರಿಡಬೇಕು. ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು. ಜೊತೆಗೆ ಯಮುನಾ ಮತ್ತು ನಿನ್ನ ತಾಯಿಯನ್ನೂ ಕರೆದುಕೊಂಡು ಬಾ. ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ…….” ಹೀಗೆ ಚನ್ನಾಗಿರಿ ಎಂದು ಕಿರಣ್ ಲೈವ್​​ ವಿಡಿಯೋ ಮಾಡುತ್ತಲೇ ಕೈ ಮುಗಿದು ಆಸ್ಪತ್ರೆಯ ಬೆಡ್ ಮೇಲೆಯೇ ನಗುನಗುತಾ ಉಸಿರು ಚೆಲ್ಲಿದ್ದಾನೆ.

ಈ ಕರಳು ಹಿಂಡುವ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಕಣ್ಣಲ್ಲಿ ನೀರು ಬರುವುದು ಖಚಿತ.

Leave a Reply

Your email address will not be published. Required fields are marked *