ತಾಲೂಕಿನ ತೂಬಗೆರೆಯಲ್ಲಿರುವ ಶನಿಮಹಾತ್ಮ ದೇವಾಲಯದಲ್ಲಿ ರಾತ್ರೋರಾತ್ರಿ ಹುಂಡಿ ಕದ್ದೊಯ್ದ ಕಳ್ಳರು. ಇದರ ಜೊತೆಗೆ ದೇವಸ್ಥಾನ ಪಕ್ಕದಲ್ಲೇ ಇರುವ ಖಾಸಗಿ ಶಾಲೆಯಲ್ಲೂ ಸಹ ಕಳ್ಳತನ ನಡೆದಿದೆ.
ರಾತ್ರಿ ಯಾರೂ ಇಲ್ಲದ ಸಮಯದಲ್ಲಿ ದೇವಾಲಯದ ಬಾಗಿಲಿನ ಬೀಗ ಹೊಡೆದು ಭಕ್ತರು ಹಾಕಿರುವ ಕಾಣಿಕೆ ಹಣಕ್ಕಾಗಿ ಆಸೆಪಟ್ಟು ಹುಂಡಿಯನ್ನು ಎಸ್ಕೇಪ್ ಮಾಡಿರುವ ಕಳ್ಳರು.
ಅದೇರೀತಿ ಎಸ್ ಎಲ್ ಆರ್ ಎಸ್ ಶಾಲೆಯ ಪ್ರಾಂಶುಪಾಲರ ಕೊಠಡಿ ಮತ್ತು ಕಚೇರಿಗೆ ಕಳ್ಳರು ನುಗ್ಗಿದ್ದಾರೆ. ಕೊಠಡಿಯಲ್ಲಿದ್ದ ಕಪಾಟುಗಳನ್ನು ದೋಚಿದ ಕಳ್ಳರು ಕಡತಗಳನ್ನು ಎಸೆದಿದ್ದಾರೆ. ಉಪ ಪ್ರಾಂಶುಪಾಲರ ಕೊಠಡಿಯಿಂದ ಸುಮಾರು 15 ಸಾವಿರ ರೂ. ಹಾಗೂ ಮತ್ತೊಂದು ಕೊಠಡಿಯಲ್ಲಿದ್ದ ಸುಮಾರು 6 ಸಾವಿರ ರೂ. ಸೇರಿದಂತೆ ಸಿಸಿಟಿವಿ ಕ್ಯಾಮೆರಾ ರೆಕಾರ್ಡಿಂಗ್ಗಳನ್ನು ಸಂಗ್ರಹಿಸಿಟ್ಟಿದ್ದ ಡಿವಿಆರ್ ಬಾಕ್ಸ್ನೊಂದಿಗೆ ಪರಾರಿಯಾಗಿದ್ದಾರೆ.
ಇತ್ತೀಚೆಗೆ ತೂಬಗೆರೆ ಹೋಬಳಿಯ ಸುತ್ತಾಮುತ್ತ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ದೂರಿನ ಮೇರೆಗೆ ಗ್ರಾಮಾಂತರ ಠಾಣಾ ಪೊಲೀಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.